Advertisement

Tag: kendasampige

ಹೊಸ ಮನೆ… ಹೊಸ ಏರಿಯಾ.. ಹೊಸ ಸಮಸ್ಯೆಗಳು…: ಎಚ್. ಗೋಪಾಲಕೃಷ್ಣ ಸರಣಿ

ಅವತ್ತು ಜೋರು ಮಳೆ. ಮಳೆ ಬಂದು ನಿಂತ ನಂತರ ನಮ್ಮ ಸೈಕಲ್ ಜಾಥಾ ಶುರು ಆಯಿತು. ರಾಮಚಂದ್ರಪುರದ ಕಿರು ರಸ್ತೆಗೆ ಬಂದೆವು. ಕತ್ತಲಿನಲ್ಲಿ ಒಬ್ಬ ಮಧ್ಯ ವಯಸ್ಕರು ಕೈಯಲ್ಲಿ ಒಂದು ಟಾರ್ಚ್ ಹಿಡಿದು ನಿಂತಿದ್ದರು. ಸ್ವಾಮೀ ನಿಲ್ಲಿ, ನಿಲ್ಲಿ ಸಾರ್ ಅಂತ ನಮ್ಮನ್ನು ತಡೆದರು. ಎಲೆಕ್ಟ್ರಿಕ್ ವೈರ್ ರಸ್ತೆ ಮೇಲೆ ಅಲ್ಲೆಲ್ಲಾ ಬಿದ್ದು ಕರೆಂಟ್ ಹರಿತಾ ಇದೆ. ಈ ರೋಡಿನಲ್ಲಿ ಹೋಗಬೇಡಿ ಅಂತ ಹೇಳಿ ಎಂ ಎಸ್ ಪಾಳ್ಯದ ಮೂಲಕ ಹೋಗಿ ಅಂತ ಸೂಚಿಸಿದರು. ಇದು ನಾಲ್ಕು ಕಿಮೀ ಹೆಚ್ಚು ದೂರ. ಆದರೂ ಜೀವ ನಮ್ಮದು ತಾನೇ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೦ನೇ ಬರಹ ನಿಮ್ಮ ಓದಿಗೆ

Read More

ಫ್ಲಾಪ್ ಆದ ಬಲೂನಿನ ಐಡಿಯಾ: ಬಸವನಗೌಡ ಹೆಬ್ಬಳಗೆರೆ ಸರಣಿ

ನನ್ನ ಐಡಿಯಾವನ್ನು ನನ್ನ ಗೆಳೆಯರು ಒಪ್ಪಿದರು. ಐಡಿಯಾವನ್ನು ಕಾರ್ಯಗತಗೊಳಿಸಲು ಅಣಿಯಾದೆವು. ಆದರೆ ನಾವೆಷ್ಟೇ ಪ್ರಯತ್ನಿಸಿದರೂ ಬಟ್ಟೆಯನ್ನು ಬಲೂನಿನೊಳಗೆ ತೂರಿಸಲು ಆಗಲಿಲ್ಲ! ಏನೇನೋ ಪ್ರಯತ್ನ ಪಟ್ಟು ಬಟ್ಟೆಯನ್ನು ಬಲೂನಿನೊಳಗೆ ಸೇರಿಸಿದೆವು. ಆದರೆ ಬಲೂನ್ ಒಡೆದ ಕೂಡಲೆ ಬಟ್ಟೆ ಮಡಿಚಿದ ಸ್ಥಿತಿಯಲ್ಲಿರುತ್ತಿತ್ತು! ಅಂದುಕೊಂಡಂತೆ ಅಕ್ಷರ ಕಾಣುತ್ತಲೇ ಇರಲಿಲ್ಲ! ಇದನ್ನು ಸರಿ ಮಾಡಲು ಬಹಳ ಪ್ರಯತ್ನಿಸುತ್ತಾ ಸಮಯ ಕಳೆದು ಹೋದದ್ದು ತಿಳಿಯಲೇ ಇಲ್ಲ. ಅದಾಗಲೇ ಬೆಳಗಿನ ಜಾವ ಮೂರಾಗಿತ್ತು!! ನಿದ್ದೆ ಮಂಪರು ಬೇರೆ, ನನ್ನ ಯೋಜನೆ ಕೈಗೊಡದಿದ್ದುದು ಬೇರೆ. ಯಾಕಾದ್ರೂ ಕಾರ್ಯದರ್ಶಿ ಆದೆನಪ್ಪಾ ಅನಿಸ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತಾರನೆಯ ಕಂತು ನಿಮ್ಮ ಓದಿಗೆ

Read More

ನವರಾತ್ರಿಯಲ್ಲಿ ನನಗೆ ಅಮ್ಮ ಸಿಕ್ಕಳು…: ಗಾಯತ್ರಿ ರಾಜ್ ಬರಹ

ಕಣ್ಣು ತೇವಗೊಂಡು, ಭಾವ ಗಂಟಲುಬ್ಬಿ ಬಂದು, ಆ ನವದುರ್ಗೆಯರಲ್ಲೂ, ನನ್ನಲ್ಲೂ, ನನ್ನ ಮಗಳಲ್ಲೂ ಅಮ್ಮನನ್ನೇ ಗುರುತಿಸುತ್ತಾ ಅವಳು ಕಲಿಸಿದ ದೇವರ ನಾಮ ಗುನುಗುತ್ತೇನೆ. ಅವಳನ್ನೇ ಮೈವೆತ್ತಂತೆ ಮತ್ತೆ ಮತ್ತೆ ಮೈದುಂಬಿ ಹಾಡುವಾಗ, ನನ್ನ ಮಗಳು ಕೂಡ ನನ್ನ ಜೊತೆ ಗುನುಗುತ್ತಾ ಮುಗುಳ್ನಗುತ್ತಾಳೆ. ತಲೆಮಾರುಗಳ ಸಂಯೋಜನೆಯೊಂದು ಸಜೀವವಾಗಿ ಕಣ್ಣೆದುರು ನಿಂತಂತಾಗುತ್ತದೆ. ನನ್ನೊಳಗಿನ ಅಮ್ಮ ಈಗ ಅವಳ ತುಟಿಯಲ್ಲಿ ಮೂಡುತ್ತಿದ್ದಳೆ. ಅವಳೂ ಕೂಡ ನಾಳೆ ನಾ ಅಮ್ಮನಿಂದ ಕಲಿತು, ಕಲಿಸಿದ ಹಾಡನ್ನೇ ತನ್ನದೇ ದನಿಯಲ್ಲಿ, ತನ್ನದೇ ಭಾವದಲ್ಲಿ ಪುನರ್ಜೀವಗೊಳಿಸುತ್ತಾಳೆ.
ನವರಾತ್ರಿ ಆಚರಣೆಯಲ್ಲಿ ಅಮ್ಮನ ನೆನಪುಗಳ ಕುರಿತು ಗಾಯತ್ರಿ ರಾಜ್ ಬರಹ

Read More

ವಾಣಿ ಭಂಡಾರಿ ಬರೆದ ಗಜಲ್

“ಏನೆಂದು ಹಾಡುವುದು ಕಹಿಯ ಗೂಡು ಕಟ್ಟೆ ಒಡೆದಿರುವಾಗ ಯಾರು ಕೇಳರು ಅಪಸ್ವರವನ್ನು
ಈ ನೆನಪುಗಳಿಗೇನು ಗೊತ್ತು ಮನ ಮಧುರವಾಗದೆ ಸಮಾಧಿಯಾಯಿತೆಂದು.

ಹಂಗು ತೊರೆದ ಮೇಲೆ ಬಂಧಗಳು ಬಳುವಳಿ ನೀಡಲಾರವು ಸಾಕಿ
ಆ ಭಾವನೆಗಳಿಗೇನು ಗೊತ್ತು
ಬಂಧುತ್ವ ಬರಡಾಗಿ ಜ್ವಾಲೆಯಾಯಿತೆಂದು”-ವಾಣಿ ಭಂಡಾರಿ ಬರೆದ ಗಜಲ್

Read More

ಆರ್. ಪವನ್‌ ಕುಮಾರ್ ಬರೆದ ಈ ಭಾನುವಾರದ ಕತೆ

ಈಗ ಮಾತಿಗೆ ಬರಗಾಲ ಬಂದಂತೆ ಪ್ರತಿ ಸಂತೆಯ ವಾತಾವರಣಗಳು ನಿರ್ಮಾಣವಾಗುತ್ತಿದ್ದವು. ಇದೇಕೆಂದು ಅವನಿಗೆ ಈ ಕ್ಷಣಕ್ಕೂ ಅರ್ಥವಾಗಿರಲಿಲ್ಲ. ಜನರೇಕೇ ತನ್ನನ್ನೂ ಆಗುಂತುಕನಂತೆ ಕಂಡು ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿರುವರೆಂದು ಆಗಾಗ ಯೋಚಿಸುತ್ತಿದ್ದನಾದರು ಅದಕ್ಕೆ ಪೂರಕವೆನಿಸುವ ಉತ್ತರಗಳು ಸಿಗುತ್ತಿರಲಿಲ್ಲ. ಸಂತೆ ಮುಗಿಸಿ ಬರುವಾಗ ಕಾಸೀಂ ಇವತ್ತು ವ್ಯಾಪಾರ ಅಂಥದ್ದು ಏನಿಲ್ಲವಾದರು, ತನಗೆ ಅಪಾರ ಮೀನು ತಿನ್ನುವ ಬಯಕೆಯಾಗಿದೆ. ತನ್ನ ಪೈಜಾಮಾದ ಕಳ್ಳ ಜೇಬಿನೊಳಗೆ ಮುದುರಿ ಮಡಿಸಿಟ್ಟಿದ್ದ ನೂರರ ಒಂದು ನೋಟು ತಗೆದು ಸಂಜೆಯಷ್ಟೇ ಹಿಡಿದು ರಸ್ತೆ ಬದಿಯಲ್ಲಿ ನಿಂತು ಮಾರುತ್ತಿದ್ದ ಜಿಲೇಬಿ ಮೀನುಗಳ ಜತೆ ಬಂದಿದ್ದ. ಈ ಮಾತುಕತೆಯಲ್ಲಿ ಇಬ್ಬರಿಗೂ ಅದರ ಕಡೆ ಗಮನವಿರಲಿಲ್ಲ.
ಆರ್. ಪವನ್‌ ಕುಮಾರ್ ಬರೆದ ಈ ಭಾನುವಾರದ ಕತೆ “ಕಾರ್ಮೋಡ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ