Advertisement

Tag: kendasampige

ಮೂಕ ವೇದನೆ…: ಗುರುಪ್ರಸಾದ ಕುರ್ತಕೋಟಿ ಸರಣಿ

ಅದು ಇದು ಮಾತಾಡುತ್ತ ತನ್ನ ಮಗ ಫಿಲಿಪ್ ಕೂಡ ತುಂಬಾ ಚೆನ್ನಾಗಿ ಸ್ನೂಕರ್ ಆಡುತ್ತಾನೆ ಇಲ್ಲಿದೆ ನೋಡಿ ಅಂತ ಒಂದು ವೀಡಿಯೊ ತೋರಿಸಿದ. ಅದರಲ್ಲಿ ಅವನ ಮಗ ಸ್ನೂಕರ್ ಹೊಡೆತಗಳನ್ನು ತುಂಬಾ ಚೆನ್ನಾಗಿಯೇ ಹೊಡೆಯುತ್ತಿದ್ದುದು ಗಮನಿಸಿದೆ. ಅದರ ಜೊತೆಗೆ ಇನ್ನೊಂದು ವಿಚಿತ್ರವನ್ನೂ ಆಲಿಸಿದೆ. ಆ ವೀಡಿಯೊದಲ್ಲಿ ಅವನ ಮಗ ನಿಚ್ಚಳವಾಗಿ ಮಾತಾಡುತ್ತಿದ್ದ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನಾಲ್ಕನೆಯ ಬರಹ

Read More

ಮಡಿಕೇರಿ ಟು ಬೇಲೂರು: ಸುಮಾವೀಣಾ ಸರಣಿ

ರಿಸಲ್ಟ್ ಮುಗಿದ ನಂತರ ಒಂದು ದಿನವೂ ಮಡಿಕೇರಿಯಲ್ಲಿ ಇರುತ್ತಿರಲಿಲ್ಲ. ಅಷ್ಟರಲ್ಲಿ ಬೇಲೂರಿನ ರಥೋತ್ಸವದ ಸಂದರ್ಭ ಸಂಭ್ರಮ ಎರಡೂ ಆಗಿರುತ್ತಿದ್ದ ಕಾರಣ ಬೇಲೂರಿಗೆ ಹೋಗುತ್ತಿದ್ದೆವು. ಹೋದ ನಂತರ ನಾವು ಯಾರ ಅಣತಿಯನ್ನೂ ಒಪ್ಪುತ್ತಿರಲಿಲ್ಲ. ಪೇರೋಲ್‌ನಿಂದ ಆಚೆ ಬಂದ ಖೈದಿಗಳಂತೆ ಆಡುತ್ತಿದ್ದೆವು. ಬೇಲೂರು ದೇವಸ್ಥಾನದಲ್ಲಿ ಘಂಟೆ ಬಾರಿಸಿದರೆ ನಮ್ಮಜ್ಜಿ ಮನೆಗೆ ಕೇಳಿಸುತ್ತಿತ್ತು. ಮಹಾಮಂಗಳಾರತಿ ಘಂಟೆ, ನೈವೇದ್ಯದ ಘಂಟೆಗಳು ಒಂದು ನಮೂನೆ ಅಲರಾಂ ಇದ್ದಂತೆ. ಬೇಸಗೆ ಎಂದರೆ ಎಲ್ಲ ಕಡೆ ನೀರಿಗೆ ತೊಂದರೆಯಿರುವಂತೆ ಬೇಲೂರಿನಲ್ಲಿಯೂ ಇತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ

Read More

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ಮಹಾನ್‌ ಬುದ್ಧರು ತೀರಿಹೋದ ಮೇಲೂ ಭಿಕ್ಷುಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸ್ತೂಪಗಳನ್ನು ವಿಸ್ತರಿಸುವುದಕ್ಕೆ, ಹೊಸದಾಗಿ ನಿರ್ಮಾಣ ಮಾಡುವುದಕ್ಕೆ, ಆಶ್ರಮ, ಉದ್ಯಾನವನಗಳನ್ನು ರೂಪಿಸುವುದಕ್ಕೆ, ವರ್ತಕರಲ್ಲಿ, ಸೇನಾಧಿಪತಿಗಳಲ್ಲಿ, ಚಕ್ರವರ್ತಿಗಳಲ್ಲಿ ಒಂದು ಸ್ಪರ್ಧೆಯೇ ಏರ್ಪಟ್ಟಂತಿತ್ತು. ಇದೆಲ್ಲವನ್ನೂ ನೋಡಿಕೊಳ್ಳುವುದಕ್ಕೆ ಆನಂದನೊಬ್ಬನಿಗೇ ಸಮಯವಿರುತ್ತಿರಲಿಲ್ಲ, ದಣಿವಾಗುತ್ತಿತ್ತು. ಜವಾಬ್ದಾರಿಯನ್ನು ಹಂಚಿಕೊಳ್ಳಲು ನಂಬುಗೆಯ ಜನರು ಸಮೀಪದಲ್ಲಿರಲಿಲ್ಲ.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ ‘ಸಾರಿಪುತ್ರನ ಸಂಸಾರ ಸಾಮ್ರಾಜ್ಯ’

Read More

ಸಿಡ್ನಿಯಲ್ಲಿ ಕದಡಿದ ಶಾಂತಿ, ಮಾನಸಿಕ ಆರೋಗ್ಯ: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದಲ್ಲಿ ಇಂತಹ ಸಮುದಾಯ ಶಾಂತಿ ಕದಡುವ ಘಟನೆಗಳು ನಡೆಯುವುದು ಅಪರೂಪ. ಕನಿಷ್ಟ ಶಿಕ್ಷಣ, ಮಧ್ಯಮ ವರ್ಗ ಸಮಾಜದ ಹೆಚ್ಚು ಜನರು ದುಡಿದು ಗಳಿಸಿ ಸಾಮಾನ್ಯ ಜೀವನ ನಡೆಸುವ ಮೌಲ್ಯವನ್ನಿಟ್ಟುಕೊಂಡು ಬದುಕುವವರು. ಒಂದು ರೀತಿಯಲ್ಲಿ ಹೇಳುವುದಾದರೆ ಏಕತಾನದಲ್ಲಿ ಚಲಿಸುವ ಸಮಾಜದ ಸ್ತರಕ್ಕೆ ಕುಂದು ಬಂದರೆ ಎಲ್ಲರಿಗೂ ತಬ್ಬಿಬ್ಬಾಗಿ ಬಿಡುತ್ತದೆ. ಸಿಡ್ನಿಯಲ್ಲಿ ನಡೆದ ಕಳೆದ ವಾರಾಂತ್ಯದ ಘಟನೆಯಿಂದ ಜನರು ವಿಚಲಿತರಾಗಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕೊಡು ಶಿವನೆ ಕುಡುಕನಲ್ಲದ ಗಂಡನ: ಸುಧಾ ಆಡುಕಳ ಅಂಕಣ

ಮಗುವನ್ನು ನೋಡಿದ ಮಾದೇವಿ ತನ್ನ ಬ್ಯಾಗಿನಲ್ಲಿದ್ದ ಅದೆಂಥದ್ದೋ ಪುಡಿಯನ್ನು ನೀರಿನಲ್ಲಿ ಕರಗಿಸಿ, ಇಷ್ಟಿಷ್ಟೇ ಮಗುವಿನ ಬಾಯಿಗೆ ಹಾಕುತ್ತ ಅವಳು ಎಚ್ಚರಗೊಳ್ಳುವಂತೆ ಮಾಡಿದ್ದಳು. ಅದೇನೋ ಮಾಯಕವಿತ್ತೋ ಆ ಬಿಳಿಯ ಪುಡಿಯಲ್ಲಿ! ಕಮಲಿಯ ಮಗನಿಗೆ ಇದ್ದಕ್ಕಿದ್ದಂತೆ ರಾತ್ರಿ ಜ್ವರ ಬಂದು ತಲೆಗೇರಿ ಏನೇನೋ ಬಡಬಡಾಯಿಸುತ್ತಿರುವಾಗಲೂ ಹಾಗೆ, ಅದೇನೋ ಮಾತ್ರೆಯ ತುಂಡೊಂದನ್ನು ಕುಡಿಸಿ, ರಾತ್ರಿಯಿಡೀ ತಲೆಗೆ ತಣ್ಣೀರ ಪಟ್ಟಿಯಿಟ್ಟು ಜ್ವರವನ್ನು ಓಡಿಸಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ