Advertisement

Tag: kendasampige

ನೀರ ಮೇಲಣ ಗುಳ್ಳೆ-ಡಾಟರ್ ಆಫ್ ಪರ್ಷಿಯ: ದೇವಿಕಾ ನಾಗೇಶ್ ಬರಹ

ಈಕೆ ತನ್ನ ನೆಲದ ಸ್ಥಿತಿವಂತರು ಇಲ್ಲದವರ ಜೀವನ ಮಟ್ಟ ಸುಧಾರಣೆಗೆ ಕೈಜೋಡಿಸಿದರೆ ಸಾಮಾಜಿಕ, ರಾಜಕೀಯ, ಆಡಳಿತಾತ್ಮಕ ಬದಲಾವಣೆಗಳನ್ನು ತರಲು ಸಾಧ್ಯವಿದೆ… ಎನ್ನುವ ನಂಬಿಕೆ ಇದ್ದವರಾಗಿದ್ದಳು. ಈ ಹಿನ್ನೆಲೆಯಲ್ಲಿ ಅದ್ಭುತ ಯೋಜನೆಗಳನ್ನು ಹಾಕಿಕೊಂಡಿದ್ದಳು.. ಆಗ ಸ್ಪಂದಿಸಿದ ಹಲವರು ಈ ಸಾಧ್ಯತೆಯ ಪರಿಧಿಗಳನ್ನು ವಿಸ್ತರಿಸಿಕೊಂಡು ಆ ದೆಸೆಯಲ್ಲಿ ಸಕ್ರಿಯವಾದರು… ಇವಳ ಯೋಜನೆಗೆ ಕೈಜೋಡಿಸಿದರು.
ಸಟ್ಟರೆಹ್ ಫಾರ್ಮನ್ ಫರ್ಮ ಆತ್ಮಕಥೆ “ಡಾಟರ್ ಆಫ್ ಪರ್ಷಿಯಾ” ಕುರಿತು ದೇವಿಕಾ ನಾಗೇಶ್‌ ಬರಹ

Read More

ವಾಸುಕಿ ಸಿ.ಜಿ. ಬರೆದ ಈ ಭಾನುವಾರದ ಕತೆ “ಕನಸಿನ ಕಾಗೆ”

ಕೊನೆಗೂ ನಾನು ನೀರಿಗೆ ಇಳಿದೆ. ನೆನ್ನೆ ಆ ಮನುಷ್ಯ ಮಾಡಿದ್ದನ್ನೇ ನಾನೂ ಮಾಡಿದೆ. ಎರಡು ಅಂಗೈಗಳಲ್ಲಿ ನೀರನ್ನು ತುಂಬಿಸಿಕೊಂಡು ತಲೆಯ ಮೇಲೆ ಸುರಿದುಕೊಂಡೆ. ಮೈಗೆ ನೀರು ತಾಗಿದ್ದೇ ತಡ, ಹೊಸ ಹುಮ್ಮಸ್ಸು ಬಂದಂತಾಯಿತು. ಆ ಕ್ಷಣದಲ್ಲಿ ನನ್ನೊಳಗೆ ಏನೋ ಒಂದು ಬದಲಾವಣೆ ಆಯಿತು; ಇಂತಹ ಸುಖವನ್ನು ನಾನು ಅದಕ್ಕೂ ಮುಂಚೆ ಯಾವತ್ತೂ ಕಂಡವನಲ್ಲ. ತಲೆಯಲ್ಲಿ ಓಡುತ್ತಿದ್ದ ನೂರಾರು ಯೋಚನೆಗಳು ಇದಕ್ಕೆ ಕಾರಣ ಇರಬಹುದು. ಯಾವುದೋ ಸಿಂಹದ ತೂಕದ ಹೊರೆ ಮೈಮೇಲಿಂದ ಇಳಿದು ಹೋದಂತೆ ಹಗುರ ಎನಿಸಿತು.
ವಾಸುಕಿ ಸಿ.ಜಿ. ಬರೆದ ಕತೆ “ಕನಸಿನ ಕಾಗೆ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಒಗ್ಗಟ್ಟು, ಒಡಕುಗಳ ವಿಚಲತೆ: ಡಾ. ವಿನತೆ ಶರ್ಮ ಬರೆಯುವ ಅಂಕಣ

ಆಂಗ್ಲೋ-ಆಸ್ಟ್ರೇಲಿಯನ್ ಅಂದರೆ ಬಿಳಿ-ವಸಾಹತುಶಾಹಿ-ಸೆಟ್ಟ್ಲರ್ ಸಮಾಜಕ್ಕೆ ಸೇರಿದ ಪೌಲಿನ್ ಹ್ಯಾನ್ಸನ್ ತನ್ನನ್ನು ಕಟ್ಟಾ ಆಸ್ಟ್ರೇಲಿಯನ್ ಎಂದು ಕರೆದುಕೊಳ್ಳುತ್ತಾರೆ. ಅಂದರೆ ಬ್ರಿಟಿಷರು ಹುಟ್ಟುಹಾಕಿದ ಬಿಳಿ ಆಸ್ಟ್ರೇಲಿಯಾ. ಆಸ್ಟ್ರೇಲಿಯಾದಲ್ಲಿ ಬದುಕುತ್ತಿರುವವರು ಕಡ್ಡಾಯವಾಗಿ ಆಸ್ಟ್ರೇಲಿಯನ್ ಸಂಸ್ಕೃತಿಯನ್ನು ಅಂದರೆ ಬಿಳಿಯರ ಸಂಸ್ಕೃತಿಯನ್ನು ಪಾಲಿಸಬೇಕು, ಇಲ್ಲವಾದರೆ ದೇಶ ತೊರೆದು ಹೋಗಬೇಕು, ಎನ್ನುತ್ತಾರೆ. ಹಿಂದೊಮ್ಮೆ ಇಲ್ಲಿನ ಮೂಲನಿವಾಸಿಗಳು ಆಸ್ಟ್ರೇಲಿಯನ್ನರಲ್ಲ ಎಂದು, ನಂತರ ಏಷ್ಯನ್ನರಿಗೆ ಈ ದೇಶದಲ್ಲಿ ಪ್ರವೇಶ ಇಲ್ಲ ಎಂದು ಹೇಳಿ ಎಲ್ಲರ ಗಮನ ಸೆಳೆದಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕನ್ನಡ ಅಧ್ಯಾಪಕರ ದಾರಿದೀಪಗಳು-`ಅನಾಜಿ` ಒಂದು ಸ್ಮರಣೆ: ಎಲ್.ಜಿ.ಮೀರಾ ಅಂಕಣ

ಅನಾಜಿಯವರು “ಅಲ್ಲಮ್ಮ, ಆಧುನಿಕ ಕನ್ನಡ ಕಥನ ಸಾಹಿತ್ಯ ಅಂದ್ರೆ ನವೋದಯದಿಂದ ಈ ಕಾಲದವರೆಗೆ ಸುದೀರ್ಘವಾಗಿದೆ. ನೀವು ಇಷ್ಟು ದೊಡ್ಡ ವ್ಯಾಪ್ತಿ ಇಟ್ಕೊಂಡ್ರೆ ಎಲ್ಲಿಂದ ಎಲ್ಲೀವರೆಗೆ ಅಂತ ಮಾಡ್ತೀರಿ!? ಆಧುನಿಕ ಕನ್ನಡ ಸಾಹಿತ್ಯದ ಪ್ರತಿ ಘಟ್ಟದಿಂದಲೂ ಕೆಲವು ಪ್ರಾತಿನಿಧಿಕ ಲೇಖಕ-ಲೇಖಕಿಯರನ್ನ ಇಟ್ಕೊಂಡ್ರೆ ಮಾತ್ರ ನೋಡಿ ನೀವು ಈ ಅಧ್ಯಯನಕ್ಕೆ ಸ್ವಲ್ಪಾನಾದ್ರೂ ನ್ಯಾಯ ಒದಗಿಸಕ್ಕೆ ಆಗೋದು” ಅಂದರು. ನನಗೆ `ಅರೆ, ಹೌದಲ್ಲ’ ಅನ್ನಿಸಿತು. ಮುಂದೆ ನಾನು ನನ್ನ ಮಾರ್ಗದರ್ಶಕರ ಹತ್ತಿರ ಈ ಬಗ್ಗೆ ಹೇಳಿದಾಗ ಅವರಿಗೂ ಈ ಮಾತು ಒಪ್ಪಿಗೆಯಾಗಿ, ನಂತರ ಹೀಗೆಯೇ ಘಟ್ಟಗಳ ಅನುಸಾರವಾಗಿ, ಪ್ರಾತಿನಿಧಿಕ ಆಧುನಿಕ ಕನ್ನಡ ಲೇಖಕ ಲೇಖಕಿಯರನ್ನು ಇಟ್ಟುಕೊಂಡು ನಾನು ಪಿ.ಎಚ್.ಡಿ. ಅಧ್ಯಯನವನ್ನು ಮುಂದುವರಿಸಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೆಂಟನೆಯ ಬರಹ

Read More

ಕಳ್ಳಿ ಪೀರ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಹಲವು ಕಳ್ಳಿಪೀರಗಳು ಸೇರಿ ಹರ್ಷದಿಂದ ಟ್ರೀ…ಟ್ರೀ.. ಎಂದು ಕೂಗುತ್ತವೆ. ಮಣ್ಣಿನ ಧೂಳಿನಲ್ಲಿ ಸ್ನಾನ ಮಾಡುವುದೆಂದರೆ ಇವುಗಳಿಗೆ ಬಹಳ ಆಸಕ್ತಿ. ಇದು ಅವುಗಳ ದೇಹದ ಹೆಚ್ಚುವರಿ ತೈಲಾಂಶವನ್ನು ತೆಗೆಯುವುದಲ್ಲದೆ, ರೋಗಕಾರಕ ಕೀಟಗಳನ್ನೂ ದೂರ ಮಾಡುವುದು. ಸಂಜೆಯಾದೊಡನೆ, ಗುಂಪಿನಲ್ಲಿ ಮರದ ಎಲೆಗಳ ನಡುವೆ ತಂಗುತ್ತವೆ. ಆದರೆ ಬೆಳಿಗ್ಗೆ ಏಳಲು ಸೋಮಾರಿ. ಮುಂಜಾನೆ ಸೂರ್ಯೋದಯವಾದರೆ ಸಾಲದು. ಬಿಸಿಲೇರಬೇಕು! ಏಕೆಂದರೆ, ಜೇನ್ನೊಣಗಳೂ ತಮ್ಮ ಕಾರ್ಯವನ್ನು ಶುರು ಮಾಡಬೇಕಲ್ಲ?
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕಳ್ಳಿ ಪೀರ ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ