Advertisement

Tag: kendasampige

ಸಹಪಾಠಿಗಳ ಸಾಧನೆ ಹಾಗೂ ಕೊಂಡಜ್ಜಿ ಕ್ಯಾಂಪ್: ಬಸವನಗೌಡ ಹೆಬ್ಬಳಗೆರೆ ಸರಣಿ

ಈ ಕ್ಯಾಂಪಿನಿಂದ ಬಂದು ವಾಪಸ್ಸು ಹೋದಾಗಲೇ ನನಗೆ ತಿಳಿದದ್ದು ಈ ಸಮಯದಲ್ಲಿ ಹಲವಾರು ಪಾಠಗಳನ್ನು ನಮ್ಮ ಮೇಷ್ಟ್ರು ಮುಗಿಸಿದ್ದಾರೆ ಎಂಬುದು. 8 ರಲ್ಲಿ ಮೂರನೇ ರ್ಯಾಂಕು, 9 ರಲ್ಲಿ ಎರಡನೇ ರ್ಯಾಂಕು ಬಂದಿದ್ದವನು 10 ನೇ ತರಗತಿಯಲ್ಲಿ ಮೊದಲ ರ್ಯಾಂಕನ್ನು ಗಳಿಸುತ್ತಾನೆ ಎಂಬ ಹಲವರ ನಿರೀಕ್ಷೆ ಸುಳ್ಳಾಗಲು ಇದೂ ಒಂದು ಕಾರಣವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಪಾಠದ ವಿಷಯದಲ್ಲಿ ನನಗೆ ರೀಟೇಕ್ ಆಗಲು ಸಾಧ್ಯವಾಗಲೇ ಇಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಕೆ. ಆರ್. ಸಂಧ್ಯಾರೆಡ್ಡಿ ಕತೆ

ಇಷ್ಟು ಸುಖ ಕೊಡುವ ಸಂಬಂಧ ನನ್ನ ಪಾಲಿಗೆ ಎಂದೆಂದಿಗೂ ಇಲ್ಲವಾಗುವುದು ಎಂಬ ಅರಿವಿನಿಂದ ನಾನು ತೀರಾ ವಿಹ್ವಲಳಾಗುತ್ತಿದ್ದೆ. ಆದರೆ ಅವನು? ಅವನ ಪಾಲಿಗೆ ಇದೇ ಕೊನೆಯಲ್ಲವಲ್ಲ? ಇಷ್ಟಾಗಿ ನನ್ನ ವೈಯಕ್ತಿಕ ನೋವುಗಳನ್ನು ಅವನೊಂದಿಗೆ ಹೇಳಿಕೊಳ್ಳುವುದಾಗಲೀ, ನನ್ನನ್ನೇ ಮದುವೆಯಾಗು ಎಂದು ಅತ್ತು ಕರೆಯುವುದಾಗಲೀ ನನಗೆ ಸಾಧ್ಯವಿರಲಿಲ್ಲ. ನಮ್ಮ ಸಂಬಂಧ ಎಲ್ಲ ಸಾಮಾನ್ಯ ಸಂಬಂಧಗಳಂತಾಗಿ ಬಿಡುವುದೂ ನನಗೆ ಬೇಕಾಗಿರಲಿಲ್ಲ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಕೆ. ಆರ್. ಸಂಧ್ಯಾರೆಡ್ಡಿ ಕತೆ “ಹೀಗೇ ಒಂದು ಪ್ರೇಮದ ಕಥೆ”

Read More

ಕೂರಾಪುರಾಣ ೬: ಪರಚುವ ಉಗುರುಗಳು ಮತ್ತು ಮೊಂಡು ನಾಯಿಗಳು

ನಾಯಿಗಳ ಸಲೂನಿನಲ್ಲಿ ಉಗುರುಗಳನ್ನು ಕತ್ತರಿಸುತ್ತಾರೆಂದು ಗೊತ್ತಾಗಿ ಅಲ್ಲಿಗೆ ಕರೆದುಕೊಂಡು ಹೋದೆವು. ಅಲ್ಲಿ ಅವನ ಯಾವ ತಂತ್ರಗಳು ನಡೆಯದೇ, ಆಕೆಗಿರುವ ಅನುಭವದಿಂದ ಉಗುರುಗಳನ್ನು ಕತ್ತರಿಸಿಯೇ ತೀರುತ್ತಾಳೆ ಎಂದು ನಾವು ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತ ಹೊರಗೆ ಕಾಯುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದ ಆಕೆಯನ್ನು ನೋಡಿ ಬೆಟ್ಟದ ಚಾಮುಂಡಿದೇವಿಯೇ ದರ್ಶನ ಕೊಟ್ಟಂತಾಯಿತು. ಆದರೆ.. ಅವಳು ಸಹ ತನಗೆ ಆಗಲಿಲ್ಲ ಎಂದು ಕೂರಾನನ್ನು ಕರೆತಂದು ಕೊಟ್ಟು ಬಿಟ್ಟಳು!
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಆರನೆಯ ಕಂತು

Read More

ನಮ್ಮೂರಿನ ಕತೆಗಳು: ಸುಮಾ ಸತೀಶ್ ಸರಣಿ

ಅವರ ಮನ್ಯಾಗೆ ಲೆಟ್ರಿನ್ ಇತ್ತು. ಇಲ್ಲಿ ಬಯಲಿಗೆ ಹೋಗೋಕೆ ಸುತ್ರಾಂ ಒಪ್ತಿಲ್ಲ. ಚೊಂಬು ಹಿಡಿಯಾಕಿಲ್ಲ ಅಂದ್ಲು. ಕೊನೀಗೆ ಸಣ್ಣ ಹುಡ್ಗಿ ಅಂತ ನನ್ನ ಅವಳ ಹಿಂದೆ ಚೊಂಬು ಹಿಡ್ಕೊಂಡು ಮೆರವಣಿಗೆ ಕಳಿಸಿದ್ರು. ಥೋ, ನಂಗೋ ಕೋಪ. ಅವಳ ಹಿಂದೆ ಹೋಗಿ, ಚೊಂಬು ಕೊಟ್ಟೆ. ಆ ನೀರು ಸಾಲಲಿಲ್ಲ ಅಂತ ಅಲ್ಲೇ ಕುಂತ್ಲು. ಇನ್ನೊಂದು ಚೊಂಬು ತರಾಣಿ ಅಂತ ಹೊಂಟ್ರೇ, ಚೊಂಬು ಸಾಲಾಕಿಲ್ಲ, ಬಿಂದಿಗೇಲಿ ತತ್ತಾ ಅಂತ‌ ಹಠ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮೂರಿನ ಕುರಿತ ಬರಹ

Read More

ತಿಳಿವಳಿಕೆಯ ಚಳುವಳಿಗಳಿಂದ ಅರಳಿನಿಂತ ಫ್ರಾನ್ಸ್: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ಫ್ರಾನ್ಸ್ ಕಲಾವಲಯದ ಕುರಿತ ವಿವರಣೆಯು ಪ್ಯಾಬ್ಲೋ ಪಿಕಾಸೊ ಅವರ ಪ್ರಸ್ತಾಪವಿಲ್ಲದೆ ಪೂರ್ಣವಾಗಲಾರದು. ಶಿಲ್ಪಕಲೆಯನ್ನು ಪ್ರಧಾನವಾಗಿಸಿಕೊಂಡು ಇತರ ಕಲೆಗಳಲ್ಲಿಯೂ ತೊಡಗಿಸಿಕೊಂಡ ಇವರು ಸ್ಪೇನ್ ಮೂಲದವರು. ಇಪ್ಪತ್ತನೇ ಶತಮಾನದ ಫ್ರಾನ್ಸ್ ಶಿಲ್ಪಕಲೆಯ ಮೊದಲ ಅರ್ಧಭಾಗ ಪಿಕಾಸೊ ಅವರಿಗೆ ಮೀಸಲಾಗಿದೆ. ‘ಮ್ಯಾನ್ ವಿದ್ ಅ ಲ್ಯಾಂಬ್’ ಎನ್ನುವ ಅವರ ಶಿಲ್ಪಕಲಾ ಕೆತ್ತನೆಯಲ್ಲಿ ಮಾನವೀಯತೆ ಅಭಿವ್ಯಕ್ತಗೊಂಡಿದ್ದರೆ, ‘ಡೆತ್ಸ್ ಹೆಡ್’ ಎನ್ನುವ ಕೆತ್ತನೆಯು ಯುದ್ಧದ ಭೀಕರತೆಯನ್ನು ಮನದಟ್ಟು ಮಾಡಿಕೊಡುವಂತಿದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ