Advertisement

Tag: Vinayaka Aralasurali

ಉಳಿದ ಗೋಡೆ…: ವಿನಾಯಕ ಅರಳಸುರಳಿ ಅಂಕಣ

ಒಂದು ಕಾಲಕ್ಕೆ ಅತ್ಯಾಧುನಿಕ ರೂಪ-ವಿನ್ಯಾಸವೇ ಆಗಿದ್ದು, ಪ್ರಸ್ತುತವಾಗಿ ನಿಂತಿದ್ದ ಈ ಕಟ್ಟಡ ಆ ಹೊತ್ತಿನ ಪ್ರಮುಖ ಮಳಿಗೆಯೇ ಆಗಿದ್ದಿರಬಹುದು. ಇಲ್ಲೂ ಆ ಹೊತ್ತಿನ ನಗರ ಜೀವನಕ್ಕೆ ಅತ್ಯವಶ್ಯಕವಾಗಿದ್ದ ಯಾವುದೋ ವ್ಯವಹಾರವೊಂದು ನಡೆದಿದ್ದಿರಬಹುದು. ತಿರುಗುವ ಫ್ಯಾನಿನ ಕೆಳಗೆ ರಸೀತಿ ಬರೆಯುತ್ತ ಇದರ ಮಾಲಿಕ ಕುಳಿತಿದ್ದಿರಬಹುದು. ಹರಿದು ಹರಿದು ರಸೀತಿಯ ಪುಸ್ತಕ ಮುಗಿದಂತೆ ಇವರ ಕಾಲವೂ ಅದ್ಯಾವಾಗ ಮುಗಿಯಿತೋ? ಬದಲಾದ ವೈಖರಿಯಲ್ಲಿ ಅಪ್ರಸ್ತುತವಾದ ಈ ಕಟ್ಟಡ ಪೂರ್ತಿ ಕೆಡವುವವರೂ ಇಲ್ಲವಾಗಿ, 2026ರ ಡೈರಿಯ ನಡುವೆ ಸೇರಿಕೊಂಡ 1990ರದೊಂದು ಹಾಳೆಯಂತೆ ನಿಂತುಬಿಟ್ಟಿದೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಶ್ರೀರಂಗನಾಯಕ ರಾಜೀವ ಲೋಚನ ರಮಣ…: ವಿನಾಯಕ ಅರಳಸುರಳಿ ಅಂಕಣ

ಕೋಣೆ ಹಾಗೂ ಅದರ ಹಾಸಿಗೆಗಷ್ಟೇ ಸೀಮಿತವಾಗಿ ಹೋದ ಅಜ್ಜನಿಗೆ ಇಡೀ ಮನೆಯಲ್ಲಿ ಸ್ವಲ್ಪವಾದರೂ ಮನೋರಂಜನೆಗೆ ಒದಗುತ್ತಿದ್ದವನು ನಾನೊಬ್ಬನೇ. ಯಾವ್ಯಾವುದೋ ಸಿನಿಮಾ, ಭೂತ, ಪ್ರೇತದ ಕಥೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಅಂಗಳದಲ್ಲಿ ಡಿಶೂಂ ಡಿಶೂಂ ಎಂದು ಗಾಳಿಯೊಡನೆ ಗುದ್ದಾಡುತ್ತ ಸುಳಿದಾಡುತ್ತಿದ್ದ ನನ್ನನ್ನು ಗಣೇಶಾ ಎಂದು ಕರೆಯುತ್ತಿದ್ದ ಅಜ್ಜ ‘ಇಲ್ಲಿ ಜಗುಲೀಲಿ, ನನ್ನ ಎದುರೇ ಆಡು ಗಣೇಶಾ’ ಎಂದು ಗೋಗರೆಯುತ್ತಿದ್ದರು.‌
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ರಕುತದಿ ಬರೆದೆನು ಇದ ನಾನು…: ವಿನಾಯಕ ಅರಳಸುರಳಿ ಅಂಕಣ

ಪತ್ರ ಕೇವಲ ಸಾಮಾನ್ಯ ಜನರ ಅಂತರಾಳವನ್ನು ಹಾಗೂ ಕಷ್ಟ-ಕಾರ್ಪಣ್ಯಗಳಷ್ಟನ್ನೇ ಹಂಚಿಕೊಳ್ಳುವ ಮಾಧ್ಯಮವಷ್ಟೇ ಆಗಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು ಚಿಂತಕರ ತನಕ ಎಷ್ಟೋ ಪ್ರಖರ ವ್ಯಕ್ತಿಗಳು ತಮ್ಮ ಹೋರಾಟಗಳನ್ನೂ, ಚಿಂತನೆಗಳನ್ನೂ ಬೇರೆಯವರಿಗೆ ದಾಟಿಸಲು ಆಯ್ದುಕೊಂಡ ಮಾರ್ಗಗಳ ಪೈಕಿ ಪತ್ರವೂ ಒಂದು. ಸೆರೆಯಲ್ಲಿದ್ದಾಗ, ಭೇಟಿ ಸಾಧ್ಯವಿಲ್ಲದಾಗ ತಮ್ಮ ಸಹಚರರಿಗೆ, ಅನುಯಾಯಿಗಳಿಗೆ ಸೂಚನೆಗಳನ್ನು ನೀಡಲೆಂದು ಕಳುಹಿಸಿದ ರಹಸ್ಯ ಓಲೆಯ ನಡುವೆ ಬರೆದ “ಸ್ವಾತಂತ್ರ್ಯ ಸುಮ್ಮನೆ ಬರುವುದಿಲ್ಲ ಗೆಳೆಯಾ.”
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಮತ್ತೊಂದು ಬರಹ ನಿಮ್ಮ ಓದಿಗೆ

Read More

ಅದೇ ದಾರಿ… ಅದೇ ತಿರುವು…:  ವಿನಾಯಕ ಅರಳಸುರಳಿ ಅಂಕಣ

ರಾತ್ರಿಯಾದರೆ ಸಾಕು, ಒಂದೊಂದು ಮನೆಯೂ ಒಂದೊಂದು ಬೆಳಕಿನ ಡಬ್ಬಿ. ಒಂದೊಂದು ಕಿಟಕಿಯಲ್ಲಿ ಕತ್ತಲು, ಇನ್ನೊಂದರಲ್ಲಿ ಬೆಳಕು. ಆ ಬೆಳಕಿನ ಪರದೆಯ ಹಿಂದೆಯೇ ಕಪ್ಪು ನೆರಳಾಗಿ ಕದಲುವ ಮನುಷ್ಯರು. ವಾಹನಗಳ ಭರಾಟೆ ತಗ್ಗಿರುವ ರಾತ್ರಿ ಹತ್ತರ ನೀರವದಲ್ಲಿ ಸಮೀಪದಲ್ಲೇ ಕೇಳಿಸುವ ರೈಲಿನ ಕೇಕೆ. ಅರೆರೇ, ರೈಲಿನ ಹಳಿ ಇಷ್ಟು ಹತ್ತಿರದಲ್ಲೇ ಇದೆಯೇ? ಈ ಕ್ಷಣಕ್ಕೆ ಕೇಳಿಸಿದ ಕೇಕೆಯಲ್ಲೇ ಅದು ಹಾದು ಹೋಗಲಿರುವ ನದಿ-ಬೆಟ್ಟ-ಸುರಂಗ-ಕಾಡುಗಳ ಸುಂದರ ಪ್ರಯಾಣದ ಕಲ್ಪನೆಯಾಗಿ ಮನಸ್ಸಿನಲ್ಲೇನೋ ಖುಷಿಯ ಭಾವ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಬದಲಾಗಿದ್ದು ಕ್ಯಾಲೆಂಡರ್ ಮಾತ್ರವೇನಾ?:  ವಿನಾಯಕ ಅರಳಸುರಳಿ ಅಂಕಣ

ಫಸ್ಟ್ ಬರುವ ನಿರೀಕ್ಷೆಯಲ್ಲಿ ಶಾಲೆ-ಕಾಲೇಜುಗಳೇ ಮುಗಿದವು. ಏಳು, ಎಂಟಕ್ಕೆ ಏಳೇಳುತ್ತ ಹಗಲುಗಳೇ ಸವೆದವು. ಕೊನೆಯ ಬೆಂಚಿನ ಹುಡುಗಿಯ ಬದುಕಿನಲ್ಲಿ ಹೊಸ ವರ್ಷ, ಗಂಡ, ಮಕ್ಕಳೂ ಬಂದಿದ್ದಾಯಿತು. ಬೈಸಿಕೊಳ್ಳುತ್ತಲೇ ಅಮ್ಮ ಎದ್ದು ಹೋದಳು. ಕೆಲಸ ಮಾಡಿಸಿಕೊಳ್ಳದೆಯೇ ಅಪ್ಪ ಹೊರಟು ಹೋದ. ಬಂಕ್ ಮಾಡುತ್ತಿರುವಾಗಲೇ ಕಾಲೇಜಿನ ಕೊನೆಯ ದಿನ ತಲುಪಿದೆವು. ಹೊಸ ಕ್ಯಾಲೆಂಡರಿನ ಮೊದಲ ಪುಟ ತಿರುವುವ ಮೊದಲೇ ಗಂಡ/ಹೆಂಡತಿಯ ಜೊತೆ ಆಗಲೇ ಮೂರು ಬಾರಿ ಜಗಳವಾಡಿಯಾಗಿದೆ. ಅದೇ ಸೋಮಾರಿತನ, ಅದೇ ಅಶ್ರದ್ಧೆ, ಅದೇ ಸುಮ್ಮನೆ ವ್ಯಯವಾಗುವ ಮುನ್ನೂರರವತೈದು ದಿನಗಳ ಮತ್ತೊಂದು ಆವರಣಕ್ಕೆ ‘ಹೊಸ ವರ್ಷ’ ಎನ್ನುವ ಹೆಸರು ಕೊಟ್ಟು ಕುಣಿಯುತ್ತ, ಕುಡಿಯುತ್ತ, ಕೇಕೆ ಹಾಕುತ್ತ ಪ್ರವೇಶಿಸಿದೆವು!
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ