Advertisement

Tag: ಕೆಂಡಸಂಪಿಗೆ

ಆಚೆ ಕೇರಿಯ ಭಾಗ್ಯಮ್ಮ ಮತ್ತು ಈಚೆ ಕೇರಿಯ ದೇವಮ್ಮ

ಮಾರ್ಗೋಡನಹಳ್ಳಿಯ ಒಕ್ಕಲುಗೇರಿಯ ಭಾಗ್ಯಮ್ಮ ಬನ್ನೂರು ಬಸ್ಟಾಂಡಿನ ಬಳಿ ಸೊಪ್ಪು ಮಾರುತ್ತಿದ್ದವರು. ಸಮಯ ಸಿಕ್ಕಾಗ ದನದ ದಲ್ಲಾಳಿ ಕೆಲಸ, ಹೆಣ್ಣು ತೋರೋದು, ನಾಟಿ ಕೀಳೋದೂ ಇತ್ಯಾದಿಗಳನ್ನೂ ಮಾಡುತ್ತಿದ್ದರು. ಇವರ ಗೆಳತಿ ದಲಿತರ ಕೇರಿಯ ದೇವಮ್ಮನದು ಕೂಲಿಯ ಕೆಲಸ. ಸಮಯ ಒದಗಿ ಬಂದಾಗ ಭಾಗ್ಯಮ್ಮನ ಜೊತೆ ಸೊಲ್ಲು ಹೇಳಲು ಹೋಗುತ್ತಾರೆ. ಇವರಿಬ್ಬರು ಸೊಲ್ಲೆತ್ತಿ ಹಾಡಲು ತೊಡಗಿದರೆ ಇಬ್ಬರಲ್ಲಿ ಯಾರು ಹಿಂದು ಯಾರು ಮುಂದು, ಯಾರು ಜಾಣೆ ಯಾರು ಮುಗ್ಧೆ ಎಂಬುದು ಗೊತ್ತಾಗುವುದಿಲ್ಲ. ಕಳೆದ ಮಂಗಳವಾರ ಇರುಳು ತೀರಿಹೋದ ಭಾಗ್ಯಮ್ಮನವರ ನೆನಪಿನಲ್ಲಿ ಸೂರ್ಯಪುತ್ರ ಈ ಹಿಂದೆ ಬರೆದಿದ್ದ ಬರಹ

Read More

ಜಾತಿ-ಧರ್ಮಗಳ ನಡುವೆ ಭೇದವಿಲ್ಲದ ಕಾಲದಲ್ಲಿ….

ಅವರು ನನ್ನ ಹೆಸರು ಕೇಳಿದರು. ತಮ್ಮ ಬಗ್ಗೆ ತಿಳಿಸಿದರು. ಅವರು ಬೆಳಗಾವಿ ಕಡೆಯವರು. ಜಮೀನುದಾರರು. ನನ್ನ ಹೆಸರು ಕೇಳಿದರು. ನನ್ನ ‘ಜಾಣತನ’ಕ್ಕೆ ಅವರು ಮೆಚ್ಚಿಕೊಂಡಿದ್ದರು. ತಮಗೆ ಮಕ್ಕಳಿಲ್ಲವೆಂದೂ ನನಗೆ ದತ್ತು ತೆಗೆದುಕೊಳ್ಳುವುದಾಗಿಯೂ ತಿಳಿಸಿದರು. ನನ್ನ ಅಭಿಪ್ರಾಯ ಕೇಳಿದರು. ನಾನು ಒಪ್ಪಿದೆ. (ಅವರಿಗಾಗಲಿ ನನಗಾಗಲಿ ಹಿಂದೂ ಮುಸ್ಲಿಂ ಎಂಬ ಭಾವವೇ ಇರಲಿಲ್ಲ.) ಹಾಗಾದರೆ ನಿಮ್ಮ ಮನೆಯ ವಿಳಾಸ ಹೇಳು ಎಂದಾಗ ಹೇಳಿದೆ. ಅವರು ತಮ್ಮ ಪುಟ್ಟ ಡೈರಿಯಲ್ಲಿ ಬರೆದುಕೊಂಡರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆಯ ಸರಣಿ

Read More

ಸುಭಾಷ್ ಪಟ್ಟಾಜೆ ಬರೆದ ಈ ಭಾನುವಾರದ ಕಥೆ

ಇಲ್ಲ! ಅಪ್ಪ ಪೇಟೆಗೆ ಹೋದ ಸಮಯ ನೋಡಿ ಇಲ್ಲಿಗೆ ಓಡಿ ಬಂದು ಪುಟ್ಟ ಮಗುವಾಗಿದ್ದ ನನ್ನನ್ನು ಎತ್ತಿ ಮುದ್ದಾಡಿದ ವ್ಯಕ್ತಿ ಇವನಲ್ಲ. ಬಿಡುವಿಲ್ಲದ ಮನೆಗೆಲಸದ ವೇಳೆಯಲ್ಲೂ ‘ಎತ್ತಿಕೋ’ ಎಂದು ಅಮ್ಮನನ್ನು ಪೀಡಿಸುತ್ತಿದ್ದಾಗ “ಇತ್ತ ಕೊಡಿ. ನಾನು ನೋಡಿಕೊಳ್ತೇನೆ” ಎಂದು ನನ್ನನ್ನು ಎತ್ತಿಕೊಂಡು, ತೋಟದಲ್ಲೆಲ್ಲ ತಿರುಗಾಡಿ ಬಾಳೆಹೂವಿನ ಜೇನು ನೆಕ್ಕಿಸಿದವನೂ ಇವನಲ್ಲ ಎಂದುಕೊಳ್ಳುತ್ತಿದ್ದಂತೆ ಕತ್ತಲಲ್ಲಿ ಭೂಮಿಯನ್ನು ಥರಗುಟ್ಟಿಸುವ ಸದ್ದು ನಮ್ಮೆಲ್ಲರನ್ನೂ ಇಡಿಯಾಗಿ ಅಲುಗಾಡಿಸಿತು.
ಸುಭಾಷ್ ಪಟ್ಟಾಜೆ ಬರೆದ ಈ ಕಥೆ “ಗೋಡೆ”

Read More

ಇಸ್ಕೂಲಿನ ಬಿಡುಗಡೆ ಮತ್ತು ಗಣರಾಜ್ಯ ದಿನದ ಸಂಭ್ರಮ

ಆರನೆಯ ವರ್ಗದ ಕನ್ನಡ ವಿಷಯದಲ್ಲಿ ಇರುವ `ಮಲ್ಲಜ್ಜನ ಮಳಿಗೆ’ ಎಂಬ ಪಾಠದ ರೀತಿಯಲ್ಲಿ ಇರುವ ಅಂಗಡಿಯಂತೆ ಒಂದೇ ಒಂದು ಅಂಗಡಿ ಅಣಶಿಯಲ್ಲಿಯೂ ಇದೆ. ಅಲ್ಲಿ ತೋರಣ ಕಟ್ಟಲು ಬೇಕಾದ ಸುತ್ಲಿ ಬಳ್ಳಿಯೂ ಸಿಗುತ್ತದೆ. ಬಣ್ಣದ ಕಾಗದಗಳು ಸಿಗುತ್ತವೆ. ಎಲ್ಲ ಒಂದೇ ಅಂಗಡಿಯಲ್ಲಿ ಲಭ್ಯ. ಆ ರಾಮಚಂದ್ರ ಕಾಜೂಗಾರನ ಅಂಗಡಿ ಅಣಶಿಯಲ್ಲಿಯೇ ಫೇಮಸ್. ಅಲ್ಲಿ ಸಿಗುವ ಬಣ್ಣದ ಕಾಗದಗಳು ಕೂಡ ಮೂರೇ ಬಣ್ಣದಲ್ಲಿ ಸಿಕ್ಕಿ ಸುತ್ತಲೂ ಪರಪರೆ ಹಚ್ಚಲು ಸಾಕಾಗದೆ ಚೂರು ಬೇಜಾರಾಗಿದೆ. ಮಕ್ಕಳ ಬೇಜಾರಿಗೆ ರಾಧಕ್ಕೋರು ಒಂದು ಪರಿಹಾರ ಸೂಚಿಸಿದ್ದಾರೆ.
ನಾಳೆ ಅಕ್ಷತಾ ಕೃಷ್ಣಮೂರ್ತಿಯವರ “ಇಸ್ಕೂಲು” ಅಂಕಣ ಬರಹಗಳ ಸಂಕಲನ ಬಿಡುಗಡೆಯಾಗುತ್ತಿದೆ. ಈ ಹೊತ್ತಿನಲ್ಲಿ ಇಸ್ಕೂಲಿನ ಕುರಿತ ಅವರ ಮಾತುಗಳು ನಿಮ್ಮ ಓದಿಗೆ

Read More

ಮೌರ್ಯರ ಕಾಲದ ಆಡಳಿತ ಮತ್ತು ಮತ ಸ್ಥಾಪನೆಗಳು

ತನ್ನ ಸುವಿಶಾಲವಾದ ಸಾಮ್ರಾಜ್ಯವನ್ನು ಹರ್ಷನು ದಕ್ಷತೆಯಿಂದಲೂ, ಶ್ರದ್ಧೆಯಿಂದಲೂ ಪರಿಪಾಲಿಸುತ್ತಿದ್ದನು. ಹರ್ಷನು ಸ್ವತಃ ದೇಶದ ಪ್ರತಿಯೊಂದು ವಿಭಾಗವನ್ನು ಸಂದರ್ಶಿಸುತ್ತಿದ್ದನು. ರೈತರು ತಮ್ಮ ಆದಾಯದ ಅಂಶವನ್ನು ಕಂದಾಯ ರೂಪದಲ್ಲಿ ತೆರಬೇಕಾಗಿತ್ತು. ಕಠಿಣ ತೆರಿಗೆಯು ಹೇರಲ್ಪಡುತ್ತಿರಲಿಲ್ಲ. ರಾಜ್ಯದ ಆದಾಯದ ಕಾಲಂಶವನ್ನು ಸರಕಾರದ ಖರ್ಚಿಗೂ, ಇನ್ನೊಂದು ಅಂಶವನ್ನು ಅಧಿಕಾರಿಗಳ ವೇತನಕ್ಕೂ, ಮತ್ತೊಂದು ಅಂಶವನ್ನು ಸಾಹಿತ್ಯ, ಕಲೆಗಳ ಪ್ರೋತ್ಸಾಹಕ್ಕೂ, ಉಳಿದ ಅಂಶವನ್ನು ಧರ್ಮಗಳ ಪ್ರಸಾರಕ್ಕಾಗಿಯೂ ವಿನಿಯೋಗಿಸಲಾಗುತ್ತಿತ್ತು.
ಕೆ.ವಿ. ತಿರುಮಲೇಶ್ ಬರೆಯುವ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ