Advertisement

Tag: ವಿನಾಯಕ ಅರಳಸುರಳಿ

ಉಳಿದ ಗೋಡೆ…: ವಿನಾಯಕ ಅರಳಸುರಳಿ ಅಂಕಣ

ಒಂದು ಕಾಲಕ್ಕೆ ಅತ್ಯಾಧುನಿಕ ರೂಪ-ವಿನ್ಯಾಸವೇ ಆಗಿದ್ದು, ಪ್ರಸ್ತುತವಾಗಿ ನಿಂತಿದ್ದ ಈ ಕಟ್ಟಡ ಆ ಹೊತ್ತಿನ ಪ್ರಮುಖ ಮಳಿಗೆಯೇ ಆಗಿದ್ದಿರಬಹುದು. ಇಲ್ಲೂ ಆ ಹೊತ್ತಿನ ನಗರ ಜೀವನಕ್ಕೆ ಅತ್ಯವಶ್ಯಕವಾಗಿದ್ದ ಯಾವುದೋ ವ್ಯವಹಾರವೊಂದು ನಡೆದಿದ್ದಿರಬಹುದು. ತಿರುಗುವ ಫ್ಯಾನಿನ ಕೆಳಗೆ ರಸೀತಿ ಬರೆಯುತ್ತ ಇದರ ಮಾಲಿಕ ಕುಳಿತಿದ್ದಿರಬಹುದು. ಹರಿದು ಹರಿದು ರಸೀತಿಯ ಪುಸ್ತಕ ಮುಗಿದಂತೆ ಇವರ ಕಾಲವೂ ಅದ್ಯಾವಾಗ ಮುಗಿಯಿತೋ? ಬದಲಾದ ವೈಖರಿಯಲ್ಲಿ ಅಪ್ರಸ್ತುತವಾದ ಈ ಕಟ್ಟಡ ಪೂರ್ತಿ ಕೆಡವುವವರೂ ಇಲ್ಲವಾಗಿ, 2026ರ ಡೈರಿಯ ನಡುವೆ ಸೇರಿಕೊಂಡ 1990ರದೊಂದು ಹಾಳೆಯಂತೆ ನಿಂತುಬಿಟ್ಟಿದೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಹಾಡೊಂದು ವಾಪಸ್ಸು ಕೈ ಬೀಸಿ ಕರೆದಿತ್ತು…: ವಿನಾಯಕ ಅರಳಸುರಳಿ ಕೃತಿಯ ಆಯ್ದ ಭಾಗ

ಡಾ. ಪುರುಷೋತ್ತಮ್ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡೆ. ಮೊಬೈಲನ್ನು ಆನ್ ಮಾಡಿ ಅಪ್ಪನ ಇಷ್ಟದ ಹಾಡುಗಳನ್ನು ಹಾಕಿ ಇಯರ್ ಫೋನನ್ನು ಅಪ್ಪನ ಕಿವಿಗೆ ತೊಡಿಸಿದೆ. ಒಂದಿಡೀ ಬದುಕಿನುದ್ದಕ್ಕೂ ಅವನ ಬೆಳಗು, ಮಧ್ಯಾಹ್ನ, ಸಂಜೆಗಳನ್ನು ಸಲಹಿದ, ‘ಇದೀಗ ಚಿತ್ರಗೀತೆಗಳು’ ಎಂಬ ಘೋಷಣೆಯ ಮೂಲಕ ಅವನ ಹೃದಯದಲ್ಲಿ ದೀಪ ಹಚ್ಚಿದ, ಅವನ ಬಾಲ್ಯ, ಪ್ರೀತಿ, ನೆನಪುಗಳ ಸರ್ವಸ್ವವೂ ಆದ ಹಾಡುಗಳನ್ನು ಒಂದೊಂದಾಗಿ ನೇರ ಅವನ ಹೃದಯಕ್ಕೇ ಕೇಳುವಂತೆ ಹಾಕಿದೆ…
ವಿನಾಯಕ ಅರಳಸುರಳಿ ಬರೆದ “ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ” ಹೊಸ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

Read More

ಶ್ರೀರಂಗನಾಯಕ ರಾಜೀವ ಲೋಚನ ರಮಣ…: ವಿನಾಯಕ ಅರಳಸುರಳಿ ಅಂಕಣ

ಕೋಣೆ ಹಾಗೂ ಅದರ ಹಾಸಿಗೆಗಷ್ಟೇ ಸೀಮಿತವಾಗಿ ಹೋದ ಅಜ್ಜನಿಗೆ ಇಡೀ ಮನೆಯಲ್ಲಿ ಸ್ವಲ್ಪವಾದರೂ ಮನೋರಂಜನೆಗೆ ಒದಗುತ್ತಿದ್ದವನು ನಾನೊಬ್ಬನೇ. ಯಾವ್ಯಾವುದೋ ಸಿನಿಮಾ, ಭೂತ, ಪ್ರೇತದ ಕಥೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಅಂಗಳದಲ್ಲಿ ಡಿಶೂಂ ಡಿಶೂಂ ಎಂದು ಗಾಳಿಯೊಡನೆ ಗುದ್ದಾಡುತ್ತ ಸುಳಿದಾಡುತ್ತಿದ್ದ ನನ್ನನ್ನು ಗಣೇಶಾ ಎಂದು ಕರೆಯುತ್ತಿದ್ದ ಅಜ್ಜ ‘ಇಲ್ಲಿ ಜಗುಲೀಲಿ, ನನ್ನ ಎದುರೇ ಆಡು ಗಣೇಶಾ’ ಎಂದು ಗೋಗರೆಯುತ್ತಿದ್ದರು.‌
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ರಕುತದಿ ಬರೆದೆನು ಇದ ನಾನು…: ವಿನಾಯಕ ಅರಳಸುರಳಿ ಅಂಕಣ

ಪತ್ರ ಕೇವಲ ಸಾಮಾನ್ಯ ಜನರ ಅಂತರಾಳವನ್ನು ಹಾಗೂ ಕಷ್ಟ-ಕಾರ್ಪಣ್ಯಗಳಷ್ಟನ್ನೇ ಹಂಚಿಕೊಳ್ಳುವ ಮಾಧ್ಯಮವಷ್ಟೇ ಆಗಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು ಚಿಂತಕರ ತನಕ ಎಷ್ಟೋ ಪ್ರಖರ ವ್ಯಕ್ತಿಗಳು ತಮ್ಮ ಹೋರಾಟಗಳನ್ನೂ, ಚಿಂತನೆಗಳನ್ನೂ ಬೇರೆಯವರಿಗೆ ದಾಟಿಸಲು ಆಯ್ದುಕೊಂಡ ಮಾರ್ಗಗಳ ಪೈಕಿ ಪತ್ರವೂ ಒಂದು. ಸೆರೆಯಲ್ಲಿದ್ದಾಗ, ಭೇಟಿ ಸಾಧ್ಯವಿಲ್ಲದಾಗ ತಮ್ಮ ಸಹಚರರಿಗೆ, ಅನುಯಾಯಿಗಳಿಗೆ ಸೂಚನೆಗಳನ್ನು ನೀಡಲೆಂದು ಕಳುಹಿಸಿದ ರಹಸ್ಯ ಓಲೆಯ ನಡುವೆ ಬರೆದ “ಸ್ವಾತಂತ್ರ್ಯ ಸುಮ್ಮನೆ ಬರುವುದಿಲ್ಲ ಗೆಳೆಯಾ.”
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಮತ್ತೊಂದು ಬರಹ ನಿಮ್ಮ ಓದಿಗೆ

Read More

ಮೊಬೈಲ್ ಬಂದುದು.‌..: ವಿನಾಯಕ ಅರಳಸುರಳಿ ಅಂಕಣ

ದೂರವಿದ್ದಷ್ಟೂ ನಕ್ಷತ್ರದ ಅಂದ ಜಾಸ್ತಿಯಂತೆ. ಪಕ್ಕದ ಮನೆಯಲ್ಲಿದ್ದಾಗ ಯಕ್ಷಲೋಕದ ಮಾಯಾಗೋಲದಂತೆ ಭಾಸವಾಗುತ್ತಿದ್ದ, ಮರದ ಕೊರಡಿನಲ್ಲಿ ಕೆತ್ತಿ ಆಡುವಂತೆ ಪ್ರೇರೇಪಿಸಿದ್ದ ಮೊಬೈಲು ತನ್ನದೇ ಅಂಗೈಗೆ ಬಂದ ಕೆಲವೇ ದಿನಗಳಲ್ಲಿ ಮರದ ಕೊರಡಿನಷ್ಟೇ ಸಾಮಾನ್ಯ ಸಂಗತಿಯಾಗಿಹೋಯಿತು. ಅದರಲ್ಲಿ ಬರುತ್ತಿದ್ದ ಮೆಸೇಜ್, ಕಾಲ್‌ಗಳ ಜೊತೆ ಆಚೆ ಬದಿಯಿಂದ ಅವನ್ನು ಕಳಿಸುತ್ತಿದ್ದ ವ್ಯಕ್ತಿಗಳೂ ಹಳಸಿಹೋಗಿದ್ದರಿಂದ ಮೊಬೈಲು ಹಳೆಯ ಹೆಂಡತಿ/ಹಳೆಯ ಗಂಡನಂತೆ ತನ್ನಲ್ಲಿನ ಹೊಸತನವನ್ನು ಕಳೆದುಕೊಂಡುಬಿಟ್ಟಿತು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ