Advertisement

ಅಂಕಣ

ಎಂ.ವಿ. ಶಶಿಭೂಷಣ ರಾಜು ಹೊಸ ಅಂಕಣ “ಅನೇಕ ಅಮೆರಿಕಾ” ಆರಂಭ

ಎಂ.ವಿ. ಶಶಿಭೂಷಣ ರಾಜು ಹೊಸ ಅಂಕಣ “ಅನೇಕ ಅಮೆರಿಕಾ” ಆರಂಭ

ಮೊದಮೊದಲು ಬಂದ ಜನ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಓದಲು ಬಂದವರಿಗಂತೂ ರಾತ್ರಿ ಯಾವುದು, ಹಗಲು ಯಾವುದು ಎನ್ನುವುದು ಗೊತ್ತಾಗುವುದಿಲ್ಲ. ಮುಂಜಾನೆ ಹೊರ ಹೊರಟರೆ ಮನೆಗೆ ಬರುವುದು ಮಧ್ಯರಾತ್ರಿ ನಂತರವೇ. ಯಾವುದಾದರೂ ಕೆಫೆಯಲ್ಲೋ, ಡೈನರ್‌ಗಳಲ್ಲೋ ಕೆಲಸಮಾಡಬೇಕಾಗುತ್ತದೆ.
ವಿದೇಶಿ ನೆಲದಲ್ಲಿ ವಲಸಿಗರ ಬದುಕಿನ ಹಾಡು-ಪಾಡು ಕುರಿತ ಎಂ.ವಿ. ಶಶಿಭೂಷಣ ರಾಜು ಹೊಸ ಅಂಕಣ “ಅನೇಕ ಅಮೆರಿಕಾ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

read more
ಅವನ ಸಂಗೀತದ ಸರಪಳಿಯಲ್ಲಿ…: ಆಶಾ ಜಗದೀಶ್ ಅಂಕಣ

ಅವನ ಸಂಗೀತದ ಸರಪಳಿಯಲ್ಲಿ…: ಆಶಾ ಜಗದೀಶ್ ಅಂಕಣ

ಒಂದು ತಾನ್ ನಿಂದ ಮತ್ತೊಂದಕ್ಕೆ ಸಂಚರಿಸುವಾಗ ಒಂದು ಸೆಕೆಂಡ್ ಮಾತ್ರದಲ್ಲಿ ನಿನ್ನ ಧ್ವನಿ ಹೊರಳುತ್ತದಲ್ಲ ಆ ನಾದ ಅದೆಷ್ಟು ಚಂದ… ಅದಕ್ಕೆ ಮುಲಾಮಿನ ಗುಣವಿದೆ. ಕ್ಷಣ ಮಾತ್ರದಲ್ಲಿ ಭಾರವಾದ ಎದೆಯನ್ನು ಹಾರಿ ನಲಿಯುವಂತೆ ಮಾಡಿಬಿಡಬಲ್ಲ ಶಕ್ತಿಯಿದೆ ಅಂತಲೇ ನನಗೆ ಬಲವಾಗಿ ಅನಿಸುತ್ತದೆ. ಆ ಕ್ಷಣ ನಾನು ಯಾರು ಎನ್ನುವುದು ನನಗೆ ಮರೆತು ಹೋಗುತ್ತದೆ. ಯಾವ ವಿಳಾಸ, ನಾಮಧೇಯವಿರದ ಶಕ್ತಿಯ ಸಣ್ಣದೊಂದು ಚೂರಿನಂತೆ ಹೊಳೆಯುತ್ತಿದ್ದೇನೆ ಎಂದು ಭಾಸವಾಗುತ್ತದೆ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

read more
ಮಹಿಳಾ ಸಾಮರ್ಥ್ಯ ಮತ್ತು ಸಬಲೀಕರಣ…: ವಿನತೆ ಶರ್ಮ ಅಂಕಣ

ಮಹಿಳಾ ಸಾಮರ್ಥ್ಯ ಮತ್ತು ಸಬಲೀಕರಣ…: ವಿನತೆ ಶರ್ಮ ಅಂಕಣ

ಜಸಿಂಡಾ ಆರ್ಡೆರ್ನ್ ತಮ್ಮ ಹೈಸ್ಕೂಲ್ ದಿನಗಳಿಂದ ಸ್ವಂತ ಸಾಮರ್ಥ್ಯ, ಬುದ್ಧಿವಂತಿಕೆ, ಕಠಿಣ ಶ್ರಮದಿಂದ ರಾಜಕೀಯ ವಲಯದಲ್ಲಿ ಬೆಳೆದವರು. ಮಗುವಿಗೆ ಜನ್ಮ ಕೊಟ್ಟು, ಬಾಣಂತಿಯಾಗಿದ್ದೂ ತಮ್ಮ ಕೆಲಸವನ್ನು ಶಿಸ್ತಿನಿಂದ ನಿರ್ವಹಿಸಿದ ಹೆಮ್ಮೆಯ ಹೆಣ್ಣು ಇವರು. ಹಾಗೆ ನೋಡಿದರೆ ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಮಹಿಳಾ ರಾಜಕೀಯ ನಾಯಕರು, ಪ್ರಧಾನಿಗಳು, ಅಧ್ಯಕ್ಷರು, ಚಾನ್ಸಲರ್ ಮುಂತಾದವರ ಉದಾಹರಣೆಗಳು ಇವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಕೆಂಪಾದವೋ ಎಲ್ಲ ಕೆಂಪಾದವೋ: ಸುಧಾ ಆಡುಕಳ ಅಂಕಣ

ಕೆಂಪಾದವೋ ಎಲ್ಲ ಕೆಂಪಾದವೋ: ಸುಧಾ ಆಡುಕಳ ಅಂಕಣ

ಆ ದಿನವೂ ಮಳೆಗೆ ಇನಿತೂ ಬಿಡುವಿಲ್ಲ. ಸಂಜೆಯಾಗುತ್ತಲೇ ರಾತ್ರಿಯಿಳಿದಂತ ಕತ್ತಲು. ನೀಲಿಯ ಅಮ್ಮ ಅಂಗಳಕ್ಕೆ ಇಣುಕಿ ಕ್ಷಣಕ್ಷಣವೂ ನೀಲಿ ಬಂದಳೆ? ಎಂದು ನಿರುಕಿಸುತ್ತಾಳೆ. ಈ ಹುಡುಗಿಗೆ ಯಾಕಿಷ್ಟು ಶಾಲೆಯ ಹುಚ್ಚೋ ಎಂದು ಮನದಲ್ಲಿಯೇ ಶಪಿಸುತ್ತಾಳೆ. ಹೊಳೆಯಂತೂ ಹುಚ್ಚುಹಿಡಿದು ಹರಿಯುತ್ತಿದೆ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ನಾಲ್ಕನೆಯ ಕಂತಿನಲ್ಲಿ ನೀಲಿಯ ಓದುವ ಹುಚ್ಚಿನ ಕತೆ

read more
ಉರಿದು ಮುಗಿದುಬಿಡುವುದಲ್ಲ ಪ್ರೀತಿ: ಎಸ್. ನಾಗಶ್ರೀ ಅಜಯ್ ಅಂಕಣ

ಉರಿದು ಮುಗಿದುಬಿಡುವುದಲ್ಲ ಪ್ರೀತಿ: ಎಸ್. ನಾಗಶ್ರೀ ಅಜಯ್ ಅಂಕಣ

ಓದಿ, ಬರೆದು, ಕಣ್ತೆರೆದು ಪ್ರಪಂಚ ನೋಡಿ, ತಿಳಿದು, ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ಪ್ರೇಮದ ಹೆಸರಿನಲ್ಲಿ ಹುಚ್ಚಾಟಗಳಿಗೆ ಪಕ್ಕಾಗಿ, ನಮ್ಮನ್ನೇ ನಿಭಾಯಿಸಿಕೊಳ್ಳಲು ಬಾರದ ವಯಸ್ಸಿನಲ್ಲಿ ಇನ್ನೊಂದು ಜೀವವನ್ನು ನಿಭಾಯಿಸುವ, ಸಂಬಂಧ ಬೆಸೆಯುವ ಸಾಹಸ ಬೇಕಿದೆಯೆ?
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

read more
ಗರತಿಯ ಹಾಡು ಮತ್ತು ಸ್ತ್ರೀ ದೃಷ್ಟಿಕೋನ: ಲಿಂಗರಾಜ ಸೊಟ್ಟಪ್ಪನವರ್‌ ಅಂಕಣ

ಗರತಿಯ ಹಾಡು ಮತ್ತು ಸ್ತ್ರೀ ದೃಷ್ಟಿಕೋನ: ಲಿಂಗರಾಜ ಸೊಟ್ಟಪ್ಪನವರ್‌ ಅಂಕಣ

ಜನಪದ ಎನ್ನುವದು ಸ್ತ್ರೀ ಕೇಂದ್ರಿತವಾದ ಭಾವುಕ ನೆಲೆ. ಅವಳ ಹಂಬಲ, ಹತಾಶೆ, ಸಡಗರ ಸಂಕಟಗಳು, ಹಾತೊರಿಕೆ, ಕನವರಿಕೆ ಹಾಗೂ ಪ್ರತಿರೋಧಗಳಿಗೆ ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಅದು ರೂಪಗೊಂಡಿರುವಂತದ್ದಾಗಿದೆ. ಜನಪದ ಧಾರೆಯುದ್ದಕ್ಕೂ ಹೆಣ್ಣನ್ನು ಉತ್ತಮರ ಮಗಳು ಆಗಿಸುವ ಅಭೀಪ್ಸೆ ಒಂದು ಪುರುಷ ಪ್ರಣೀತವಾದ ಅನುಕೂಲಸಿಂಧು ಗರತಿ ಧರ್ಮವನ್ನು ರೂಪಿಸಿದೆ ಮತ್ತೆ ಅದು ಒಂದು ಹೆಣ್ಣಿನ ಮೂಲಕವೆ ಇನ್ನೊಂದು ಹೆಣ್ಣಿಗೆ ಧಾರೆಯೆರೆಯುವಂತೆ ಸಂಯೋಜಿಸಲಾಗಿದೆ.
ಲಿಂಗರಾಜ ಸೊಟ್ಟಪ್ಪನವರ್‌ ಬರೆಯುವ “ಉತ್ತರದ ಕತೆಗಳು” ಅಂಕಣ

read more
ಯಾವುದು ಪ್ರೀತಿ?! ಯಾಕಾದರೂ ಈ ಪ್ರೀತಿ…: ಆಶಾ ಜಗದೀಶ್ ಅಂಕಣ

ಯಾವುದು ಪ್ರೀತಿ?! ಯಾಕಾದರೂ ಈ ಪ್ರೀತಿ…: ಆಶಾ ಜಗದೀಶ್ ಅಂಕಣ

ಕಲ್ಲೆಸೆಯುವ ಕೈಗಳಿಗೆ ಆತ್ಮಸಾಕ್ಷಿ ಏಕೆ ಕಾಡುವುದಿಲ್ಲ?! ಕೊಂದು ಬದುಕುವುದು ಮನುಷ್ಯತ್ವವೇ ಅಲ್ಲ ಎಂದ ಮೇಲೆ ನೋಯಿಸಿ ನಗುವ ಮನಃಸ್ಥಿತಿ ಹುಟ್ಟಿದ್ದು ಎಲ್ಲಿಂದ… ಎಲ್ಲ ಪಾಠಗಳನ್ನೂ ನಮ್ಮ ಬದುಕಿನಿಂದಲೇ ಕಲಿಯುವ ಅಗತ್ಯವಿಲ್ಲ. ನಮ್ಮವರ ಬದುಕಿನಿಂದಲೂ ಕಲಿಯಬಹುದು…ಇಲ್ಲಿ ಮಲ್ಲಿಗೆ ಬಳ್ಳಿಯಂತೆ ತಬ್ಬಿ ಹಬ್ಬಿ ಬೆಳೆಯುವ ಹೊತ್ತಿನಲ್ಲೇ ಗುಲಾಬಿಯಂತೆ ಮುಳ್ಳುಗಳ ನಡುವೆಯೇ ಜಾಗ್ರತೆಯಾಗಿ ಅರಳುವುದನ್ನೂ ಕಲಿಯಬೇಕು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಹೊಸ ಬರಹ

read more
ಬಹುಸಂಸ್ಕೃತಿಗಳ ಆಸ್ಟ್ರೇಲಿಯಾದಲ್ಲಿ ನೆರೆಹೊರೆ: ವಿನತೆ ಶರ್ಮ ಅಂಕಣ

ಬಹುಸಂಸ್ಕೃತಿಗಳ ಆಸ್ಟ್ರೇಲಿಯಾದಲ್ಲಿ ನೆರೆಹೊರೆ: ವಿನತೆ ಶರ್ಮ ಅಂಕಣ

ಹಾಗೆ ನೋಡಿದರೆ ಆಸ್ಟ್ರೇಲಿಯಾದ ನಗರಗಳಲ್ಲಿ ವಾಸಿಸುವ ಸಾಮಾನ್ಯ ಜನರು ಮತ್ತು ಅವರ ನೆರೆಹೊರೆಯವರು ಎನ್ನುವ ವಿಷಯಕ್ಕೆ ಪುನರ್ಜೀವ ಬಂದಿದೆ. ಇದಕ್ಕೆ ಇಂಬು ಕೊಟ್ಟಿರುವುದು ವಲಸಿಗರ ಸಂಖ್ಯೆ, ಅವರ ಮೇಲ್ಮಟ್ಟದ ಉದ್ಯೋಗಗಳು, ಸಂಬಳ, ವಸತಿ ಕೊಳ್ಳುವ ಸಾಮರ್ಥ್ಯ ಇತ್ಯಾದಿ. ಈ ಸಾಮರ್ಥ್ಯದಿಂದ ಅವರು ಸಮಾಜದ ಮೇಲಿನ ಸ್ತರಗಳಿಗೆ ಬಂದು ಹೆಸರು, ಖ್ಯಾತಿ, ಸ್ಥಾನಮಾನಗಳನ್ನು ಗಳಿಸಿ ಮಿಂಚುತ್ತಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಬೆಚ್ಚಿ ಬೀಳಿಸಿದ ದೆವ್ವಗಳ ಕಥೆಗಳು: ಸುಧಾ ಆಡುಕಳ ಅಂಕಣ

ಬೆಚ್ಚಿ ಬೀಳಿಸಿದ ದೆವ್ವಗಳ ಕಥೆಗಳು: ಸುಧಾ ಆಡುಕಳ ಅಂಕಣ

ಸುಮಾರು ಹೊತ್ತಿನಲ್ಲಿ ಮೊದಲು ಮಾತನಾಡಿಸಿದ ಹೆಂಗಸೇ ಹೊರಬಂದು, “ಬನ್ನಿ ಒಳಗೆ. ನಿಮಗೆ ಬಿಸಿ, ಬಿಸಿ ಚಾ ಕೊಡುವೆ.” ಎಂದಳಾದರೂ ಮಾತು ಮುಗಿಸುವಾಗ ಕಣ್ಣು ಕೆಂಡದಂತೆ ಹೊಳೆಯುತ್ತಿತ್ತು. ನಡುಮನೆಯಲ್ಲಿರುವ ಎರಡು ಕತ್ತಲೆಯ ಕೋಣೆಯನ್ನು ದಾಟಿ ಅಡುಗೆಮನೆಗೆ ಕಾಲಿಟ್ಟಿದ್ದೇ ಸೋಮಣ್ಣ ಬೆಚ್ಚಿಬಿದ್ದ! ಕಟ್ಟಿಗೆಯ ಒಲೆಯಲ್ಲಿ ಸೌದೆಯ ಬದಲು ತನ್ನ ಕಾಲನ್ನೇ ಒಟ್ಟಿ ಅಲ್ಲವಳ ಸೊಸೆ ಹಾಲು ಕಾಯಿಸುತ್ತಿದ್ದಳು!
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ