Advertisement

ಅಂಕಣ

2023 ವಿಶ್ವ ಕಪ್‌ನ ಪಕ್ಷಿನೋಟ: ಇ.ಆರ್. ರಾಮಚಂದ್ರನ್ ಅಂಕಣ

2023 ವಿಶ್ವ ಕಪ್‌ನ ಪಕ್ಷಿನೋಟ: ಇ.ಆರ್. ರಾಮಚಂದ್ರನ್ ಅಂಕಣ

ಕ್ರಿಕೆಟ್‌ನಲ್ಲಿ ಅನೇಕ ಪವಾಡಗಳನ್ನು ಪ್ರೇಕ್ಷಕರು ವೀಕ್ಷಿಸಿದ್ದಾರೆ. ಆದರೆ ಇಂತಹ ಆಟವನ್ನು ವಾಂಖೇಡೆ ಮೈದಾನದಲ್ಲಿ ಯಾರೂ ನೋಡಿರಲಿಲ್ಲ. ಲಕ್ಷಾಂತರ ಜನ ಟಿವಿಯಲ್ಲಿ ಇಂತಹ ದೃಶ್ಯವನ್ನು ವೀಕ್ಷಿಸಿರಲಿಲ್ಲ. ಪವಾಡಗಳು ಸಾಮಾನ್ಯವಾಗಿ ಕೇಳಿರುವುದು ಸಹಜ. ಯಾವುದೋ ಕಾಲದಲ್ಲಿ ಹೀಗಾಯಿತು, ಹೀಗೆ ಮಾಡಿದರು ಎನ್ನುವುದನ್ನು ಓದಿರುತ್ತೇವೆ, ಕೇಳಿರುತ್ತೇವೆ.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಹೊಸ ಬರಹ ನಿಮ್ಮ ಓದಿಗೆ

read more
ಯಾವುದರಲ್ಲಿದೆ ಸುಖ?: ಎಸ್. ನಾಗಶ್ರೀ ಅಜಯ್ ಅಂಕಣ

ಯಾವುದರಲ್ಲಿದೆ ಸುಖ?: ಎಸ್. ನಾಗಶ್ರೀ ಅಜಯ್ ಅಂಕಣ

ನಿರಂತರ ದುಡಿಮೆ ಹಾಗೂ ಹಣಗಳಿಕೆಯ ಓಟಕ್ಕೆ ಬಿದ್ದು, ಸ್ವಂತ ಸುಖವನ್ನೇ ಕಡೆಗಣಿಸುವುದು, ಅರ್ಥವಿಲ್ಲದ ತ್ಯಾಗದ ಹೊರೆಯನ್ನು ಹೊತ್ತು ಮನೆಯವರ ಹೊಟ್ಟೆ ಉರಿಸುವುದು ಯಾವ ಪುರುಷಾರ್ಥಕ್ಕಾಗಿ? ಸದಾ ತನ್ನ ಸುಖದ ಹುಡುಕಾಟದಲ್ಲೇ ಉಳಿದು ಬೇರೆಯವರ ಭಾವನೆಗಳನ್ನು ನಿರ್ಲಕ್ಷಿಸುವುದು ಎಷ್ಟು ಸರಿ? ಹಣವೊಂದೇ ಕಾಡುವ ಬಗೆಯಲ್ಲಿ ಎಷ್ಟೊಂದು ವೈವಿಧ್ಯವಿದೆ ಅಲ್ಲವೇ?
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

read more
ಸ್ಪಿನ್ ಮಾಂತ್ರಿಕ ಬಿಷನ್ ಸಿಂಘ್ ಬೇಡಿ: ಇ.ಆರ್. ರಾಮಚಂದ್ರನ್ ಅಂಕಣ

ಸ್ಪಿನ್ ಮಾಂತ್ರಿಕ ಬಿಷನ್ ಸಿಂಘ್ ಬೇಡಿ: ಇ.ಆರ್. ರಾಮಚಂದ್ರನ್ ಅಂಕಣ

ಬೇಡಿಯವರ ಬೋಲಿಂಗ್‌ನಲ್ಲಿ ಬ್ಯಾಟ್ಸ್‌ಮನ್‌ರನ್ನು ಕಟ್ಟಿಹಾಕುವ ಸಾಮರ್ಥ್ಯವಿತ್ತು. ಬ್ಯಾಟ್ಸ್‌ಮನ್‌ನ ಹಿಂದೆ ಮುಂದೆ ಓಡಾಡುವ ಹಾಗೆ ಮಾಡಿ ಕೊನೆಗೆ ಅವನು ಬೋಲ್ಡ್ ಆಗುವ ಹಾಗೆ, ಅಥವ, ಎಲ್.ಬಿ. ಆಗುವ ಹಾಗೆ ಮಾಡುತ್ತಿದ್ದರು, ಅವರ ಬೋಲಿಂಗ್ ಅರ್ಥವಾಗದೆ ವಿಕೆಟ್ ಹತ್ತಿರ ಕ್ಯಾಚ್ ಕೊಟ್ಟು ಔಟಾದವರೇ ಜಾಸ್ತಿ. ಏಕನಾಥ್ ಸೋಲ್ಕರ್, ವೆಂಕಟರಾಘವನ್, ಅಜಿತ್ ವಾಡೇಕರ್ ಬ್ಯಾಟ್ ಹತ್ತಿರ ಸಿಲ್ಲಿ ಮಿಡಾನ್, ಗಲ್ಲಿ, ಸ್ಲಿಪ್‌ನಲ್ಲಿ ಕ್ಯಾಚ್‌ಗಳನ್ನು ಹಿಡಿದು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುತ್ತಿದ್ದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ

read more
ಶಮನವಾಗಬೇಕಿದೆ ಶತಮಾನಗಳ ನೋವು: ವಿನತೆ ಶರ್ಮ ಅಂಕಣ

ಶಮನವಾಗಬೇಕಿದೆ ಶತಮಾನಗಳ ನೋವು: ವಿನತೆ ಶರ್ಮ ಅಂಕಣ

ಕಳೆದ ಶನಿವಾರ ಅಕ್ಟೋಬರ್ ೧೪ ರ ಸಂಜೆ ಸೋಲೆಂಬುದು ಬಹುಬೇಗ ಬಂತು. ಅದೇನೋ ಅವಸರವಿದೆ ಎನ್ನುವ ರೀತಿ ಧಾವಿಸಿ ಬಂದಂತೆ, ಇಗೋ ತಗೊಳ್ಳಿ ಎಂಬಂತೆ ಇಡೀ ದೇಶವನ್ನೇ ಆವರಿಸಿ ಮಂಕು ಹಿಡಿಸಿಬಿಟ್ಟಿತು. ಇದೇನಿದು ಮತ ಎಣಿಕೆ ಈಗಷ್ಟೇ ಆರಂಭವಾಯ್ತಲ್ಲ ಎನ್ನುವ ಮಾತು ಗಾಳಿಯಲ್ಲಿ ಇನ್ನೂ ತೇಲಾಡುತ್ತಿರುವಾಗಲೇ ‘ನೋ ವೋಟ್’ ಹೆಚ್ಚಾಗಿ, ನಾನು ಟಿವಿ ಮುಂದೆ ಹಾಗೆಯೇ ಸ್ಥಬ್ಧಳಾಗಿದ್ದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

read more
ವಿಶ್ವಕಪ್‌ನಲ್ಲಿ ಮಿಂಚಿದ ಭಾರತದ ರತ್ನಗಳು:  ಇ.ಆರ್. ರಾಮಚಂದ್ರನ್ ಅಂಕಣ

ವಿಶ್ವಕಪ್‌ನಲ್ಲಿ ಮಿಂಚಿದ ಭಾರತದ ರತ್ನಗಳು: ಇ.ಆರ್. ರಾಮಚಂದ್ರನ್ ಅಂಕಣ

ಗಂಭೀರ್ ವಿಷಯವಾಗಿ ಒಂದೆರೆಡು ಮಾತು ಇಲ್ಲಿ ಹೇಳಬೇಕು. ಯಾರಿಗಾದರೂ ಫೈನಲ್ಸ್ ಆಡುವಾಗ ಎಷ್ಟೋಸರ್ತಿ ಧೈರ್ಯವಿರುವುದಿಲ್ಲ. ಕೈ ಕಾಲಿನಲ್ಲಿ ನಡುಕ ಹುಟ್ಟುವುದು ಸಹಜವೇ! ಆದರೆ ಗಂಭೀರ್ ಹಾಗಲ್ಲ. ಅವರಿಗೆ ಫೈನಲ್ಸ್‌ನಲ್ಲಿ ಜೋರು ಹುರುಪು, ಆತ್ಮ ವಿಶ್ವಾಸ, ಛಲ ಇದೆಲ್ಲವೂ ಅವರಲ್ಲಿ ಹೇರಳವಾಗಿ ಇರುತ್ತೆ. ಜೊತೆಗೆ ಯಾರಾದರೂ ಅವರನ್ನು ಕೆಣಕಿದರೆ ಬ್ಯಾಟು ಎತ್ತಿ ಅಲ್ಲೇ ಆ ಸಂಗತಿಯನ್ನು ಮುಗಿಸಲು ಹೋಗುತ್ತಾರೆ!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ನಿಮ್ಮ ಓದಿಗೆ

read more
ಅನುಭವದಲ್ಲಿ ಅಮೃತ ಇದೆ: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಅನುಭವದಲ್ಲಿ ಅಮೃತ ಇದೆ: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಹಳ್ಳಿಗಳಲ್ಲಿ ಸಮಸ್ಯೆಗಳು ಇದ್ದೇ ಇವೆ. ಪಟ್ಟಣಗಳಲ್ಲಿ ಇಲ್ಲವೇ?! ಆದರೆ ಅಲ್ಲೊಂದು ಬದಲಾವಣೆ ತರಬೇಕು ಅಂದರೆ ಅಲ್ಲಿನ ಸಂಸ್ಕೃತಿ ಹಾಳಾಗದಂತೆ ಪಟ್ಟಣದ ಕೆಲವು ಸವಲತ್ತುಗಳು ಬರಬೇಕು. ತಂತ್ರಜ್ಞಾನವನ್ನು ಹಳ್ಳಿಗರು ಈಗಾಗಲೇ ಒಪ್ಪಿಕೊಂಡಿದ್ದಾರೆ. UPI ಬಳಕೆ ಕೂಡ ಹಳ್ಳಿಗಳಲ್ಲಿ ಈಗ ಸಾಮಾನ್ಯ ಅನಿಸುವಷ್ಟು ಆವರಿಸುತ್ತಿದೆ. ಮೊಬೈಲ್ ಬಳಕೆ ದಿನದಿನಕ್ಕೆ ಹೆಚ್ಚುತ್ತಿದೆ. ಅದರ ಮೂಲಕವೇ ನಾವು ಅವರನ್ನು ತಲುಪಬೇಕು. ಹೊಸದೇನೋ ಇದೆ ಅಂತ ತಿಳಿಸುವುದು ಈಗ ತುಂಬಾ ಸುಲಭ. ಒಂ
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ

read more
ಮನಸ್ಸಿನಂತೆ ಮಹದೇವ: ಎಸ್.‌ ನಾಗಶ್ರೀ ಅಜಯ್‌ ಅಂಕಣ

ಮನಸ್ಸಿನಂತೆ ಮಹದೇವ: ಎಸ್.‌ ನಾಗಶ್ರೀ ಅಜಯ್‌ ಅಂಕಣ

ಸ್ವಲ್ಪ ಯಾಮಾರಿದರೂ, ಯಾರನ್ನಾದರೂ ನಿರಾಶೆ, ನಕಾರಾತ್ಮಕ ಮನಃಸ್ಥಿತಿಯ ಕುಳಿಯೊಳಗೆ ಸೆಳೆಯುವ ತಾಕತ್ತು ಅವರಿಗಿರುತ್ತದೆ. ಕೆಟ್ಟವರಲ್ಲ. ಬೇರೆಯವರಿಗೆ ಕೆಟ್ಟದ್ದನ್ನು ಹಾರೈಸುವುದಿಲ್ಲ. ಪರೋಪಕಾರಿಗಳಾಗಿಯೇ ಕಾಣುತ್ತಾರೆ. ಆದರೆ ನಿರಂತರ ನಿರಾಶೆ, ನೋವು, ದುಃಖದ ಕಥೆಗಳನ್ನೇ ನೆನಪು ಮಾಡಿಕೊಳ್ಳುತ್ತಾ, ಒಳ್ಳೆಯ ಬದಲಾವಣೆಯ ಸಾಧ್ಯತೆಯನ್ನೇ ಅಲ್ಲಗೆಳೆಯುತ್ತಾ ಬದುಕುವವರ ನಡುವೆ ಸಂತೋಷಪರ ವ್ಯಕ್ತಿಗಳು ಹೆಚ್ಚುಕಾಲ ಉಳಿಯಲಾಗುವುದಿಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

read more
ಬಣ್ಣ, ರುಚಿ ಮತ್ತು ಪರಿಮಳ: ಮಾಲತಿ ಶಶಿಧರ್‌ ಅಂಕಣ

ಬಣ್ಣ, ರುಚಿ ಮತ್ತು ಪರಿಮಳ: ಮಾಲತಿ ಶಶಿಧರ್‌ ಅಂಕಣ

ಅಷ್ಟು ಹೊತ್ತು ಎರಡು ದೇಹ ಒಂದೇ ಪ್ರಾಣದಂತೆ ಕೆಲಸ ಮಾಡಿ ಮುಗಿಸಿದ ನಾವಿಬ್ಬರು ಕದ್ದ ಮಾವು ಹಂಚಿಕೊಳ್ಳುವಾಗ ಪರಮ ದ್ವೇಷಿಗಳಾಗಿಬಿಡುತ್ತಿದ್ದೆವು. ಇದ್ದ ನಾಲ್ಕು ಹಣ್ಣನ್ನು ಭಾಗ ಮಾಡಿಕೊಳ್ಳಲು ಯುದ್ಧ ನಡೆಸುತ್ತಿದ್ದೆವು. ಅವುಗಳ ಬಣ್ಣ ರುಚಿ ಪರಿಮಳಕ್ಕಾಗಿ ಕಿತ್ತಾಟ. ನಾನು ಕಷ್ಟ ಪಟ್ಟು ಕದ್ದೆ ನನಗೆ ಜಾಸ್ತಿ ಎಂದು ನಾನಂದರೆ ದೊಡ್ಡಮ್ಮನನ್ನು ಎಷ್ಟು ಕಷ್ಟ ಪಟ್ಟು ಅತ್ತ ಬರದಂತೆ ತಡೆದೆ? ನನಗೆ ಹೆಚ್ಚು ಎನ್ನುತ್ತಿದ್ದ ಅಣ್ಣ. ಹೀಗೆ ಕಿತ್ತಾಡುತ್ತಲೇ ಹೇಗೋ ತಿಂದು ಮುಗಿಸಿ ಮಾಡಿದ ಸರ್ಕಸ್ ನೆನೆಸಿಕೊಂಡು ಪಕಪಕ ನಗುತ್ತಿದ್ದೆವು.
“ಹೊಳೆವ ನದಿ” ಅಂಕಣದಲ್ಲಿ ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ

read more
ಸಾಮರಸ್ಯ, ಸಮನ್ವತೆಗಾಗಿ ಈ ಮತ!: ವಿನತೆ ಶರ್ಮ ಅಂಕಣ

ಸಾಮರಸ್ಯ, ಸಮನ್ವತೆಗಾಗಿ ಈ ಮತ!: ವಿನತೆ ಶರ್ಮ ಅಂಕಣ

ಸಂವಿಧಾನದ ರಚನೆಯಾಗಿ ೧೨೨ ವರ್ಷಗಳಾದರೂ ಈ ನೆಲದ ಮೂಲವಾಸಿಗಳು ದೇಶದ ಸಂವಿಧಾನದಲ್ಲಿ ಸೇರಿಲ್ಲ. ಅಂದರೆ ಸಂವಿಧಾನದ ಪ್ರಕಾರ ಅವರಿಗೆ ಅಸ್ಮಿತೆಯೂ ಇಲ್ಲ. ಅವರಿಗೆ ಸೇರಿದ ಎಲ್ಲಾ ವಿಷಯಗಳನ್ನೂ ನಿರ್ಧರಿಸುವುದು ಕೇಂದ್ರ ಸರಕಾರಕ್ಕೆ ಸೇರಿದ್ದು. ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರು ಈ ಬಿಟ್ಟುಬಿಡುವಿಕೆಯನ್ನು ಅಥವಾ ತಮ್ಮನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಬಹಳ ವರ್ಷಗಳಿಂದ ‘ಈ ಪರಿಸ್ಥಿತಿ ಬದಲಾಗಬೇಕು, ತಮ್ಮನ್ನು ಸಂವಿಧಾನದಲ್ಲಿ ಈ ದೇಶದ ಮೂಲಜನರೆಂದು ಗುರುತಿಸಬೇಕು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ