ಆಶಾ ಜಗದೀಶ್ ಹೊಸ ಅಂಕಣ “ಆಶಾ ಲಹರಿ” ಇಂದಿನಿಂದ…
ಪ್ರೀತಿ ಮಾತ್ರ ಪೂರ್ಣ ಸತ್ಯ. ಮೋಸ ಎಂಬುದು ಅರ್ಧ ಸತ್ಯ. ನಾವು ಯಾರನ್ನೂ ಮೋಸಗೊಳಿಸಲು ಸಾಧ್ಯವಿಲ್ಲ. ನಮ್ಮಿಂದ ನಾವೇ ಪದೇ ಪದೇ ಮೋಸಹೋಗುತ್ತೇವೆ. ಅದೂ ಹೃದಯವಿದ್ರಾವಕವಾಗಿ. ನಮ್ಮನ್ನು ನಾವೇ ನೋಯಿಸಿಕೊಂಡು ಇತರರನ್ನು ದೂರುತ್ತೇವೆ… ನಿನ್ನನ್ನು ಪ್ರೀತಿಸದಿರಲು ಸಾಧ್ಯವಾಗುವುದಾ…
ಆಶಾ ಜಗದೀಶ್ ಬರೆಯುವ ಬದುಕೆಂಬ ಭಾವಗೀತೆಯ ಕುರಿತ ಹೊಸ ಅಂಕಣ “ಆಶಾ ಲಹರಿ” ಇಂದಿನಿಂದ ಮಂಗಳವಾರಗಳಂದು ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ
ಬೇಸಿಗೆ ರಜೆಯೆಂದರೆ …: ವಿನತೆ ಶರ್ಮ ಅಂಕಣ
ಆಸ್ಟ್ರೇಲಿಯಾದ ಬೇಸಿಗೆಯ ಕಡುಬಿಸಿಯನ್ನು ತಪ್ಪಿಸಿಕೊಳ್ಳಲು ಕೆಲವರು ತಂಪು ಪ್ರದೇಶಗಳನ್ನು ಆಯ್ದುಕೊಳ್ಳುತ್ತಾರೆ. ಆದರೆ ಮುಂಚಿತವಾಗಿಯೇ ಬೇಸಿಗೆಯ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡೇ ಅನೇಕ ಆಸ್ಟ್ರೇಲಿಯನ್ ಸಂಸ್ಥೆಗಳು, ಸರಕಾರದ ಪ್ರವಾಸೀ ಇಲಾಖೆಗಳು ದೇಶದ ಉದ್ದಗಲಕ್ಕೂ ಹಾಸಿ ಹರಡಿರುವ ನೂರಾರು ಪ್ರವಾಸಸ್ಥಳಗಳ ಬಗ್ಗೆ ಆಕರ್ಷಕ ಜಾಹಿರಾತುಗಳನ್ನು ಕೊಡುತ್ತಾ, ಹಲವಾರು ತರಹದ ರಿಯಾಯ್ತಿಗಳು, ಸೌಲಭ್ಯಗಳ ಆಮಿಷವೊಡ್ಡುತ್ತಾರೆ. ಇವು ಮಧ್ಯಮ ವರಮಾನದ ಕುಟುಂಬಗಳನ್ನು ಕೈಬೀಸಿ ಕರೆಯುತ್ತವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಡೌನ್ ಅಂಡರ್ ಕ್ರಿಸ್ಮಸ್ ಕಲಾಪಗಳು: ವಿನತೆ ಶರ್ಮ ಅಂಕಣ
ಪ್ರತಿವರ್ಷ ಅಕ್ಟೋಬರ್ ಕಡೆಗೆ ಅಥವಾ ನವೆಂಬರ್ ಶುರುವಿನಲ್ಲಿ ಆಯಾ ಸ್ಥಳೀಯ ನಗರಪಾಲಿಕೆಗಳು ಸಾರ್ವಜನಿಕ ಉದ್ಯಾನವನಗಳಲ್ಲಿರುವ ನೀರಿನ ಕಾರಂಜಿಗಳು, ಮರಗಳು, ಕಮಾನುಗಳು, ಸೇತುವೆಗಳು, ರಸ್ತೆಗಳ ಕಮಾನುಗಳು ಇತ್ಯಾದಿಗಳಿಗೆ ಈ ರೀತಿ ಅಲಂಕಾರಗಳನ್ನು ತೊಡಿಸುತ್ತಾರೆ. ಹೊಸವರ್ಷದ ಆರಂಭದಲ್ಲಿ ತೆಗೆದು ಪುನಃ ಪೆಟ್ಟಿಗೆಗೆ ಸೇರಿಸಿ ಭದ್ರಪಡಿಸುತ್ತಾರೆ. ಕತ್ತಲಾಗುತ್ತಿರುವಂತೆ ಈ ಚಿತ್ತಾಕರ್ಷಕ ಅಲಂಕಾರಗಳನ್ನು ನೋಡಲು ಜನರು ಹೊರಡುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ನಮ್ಮ ಆಹಾರ ನಮ್ಮ ಸಮುದಾಯದ ಹಸಿರುಕಣ್ಣು!: ವಿನತೆ ಶರ್ಮ ಅಂಕಣ
ಎಲ್ಲರ ಜಗಳದಲ್ಲಿ ಬಡವಾಗಿರುವುದು ನಾವೇ ನಾವು, ಸಾಮಾನ್ಯರು. ಏಕೆಂದರೆ ನಾವು ಪ್ರಕೃತಿಯ ಭಾಗವಲ್ಲವೇ! ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ಬೆಳೆಯುವ ಮಣ್ಣಿಗೆ ಅನಾರೋಗ್ಯವುಂಟಾದರೆ ನಮ್ಮ ಆರೋಗ್ಯವೂ ಕೆಡುತ್ತದೆ ಎಂದು ಕಳೆದ ‘ಆಸ್ಟ್ರೇಲಿಯಾ ಪತ್ರ’ದಲ್ಲಿ ಬರೆದಿದ್ದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ವಿಶ್ವ ಕಪ್ 2023ನ ಕೊನೆಯ ಹಂತ: ಇ.ಆರ್. ರಾಮಚಂದ್ರನ್ ಅಂಕಣ
ಭಾರತದ ಇನಿಂಗ್ಸ್ ಚೆನ್ನಾಗಿಯೇ ಶುರುವಾಯಿತು. ಎಂದಿನಂತೆ ರೋಹಿತ್ ಶರ್ಮ ರಭಸದ ಹೊಡೆತದಿಂದ ಶುರು ಮಾಡಿದರು. ಒಂದು ಸಿಕ್ಸರ್ ಮತ್ತು ಬೌಂಡರಿ ಹೊಡೆದ ಮೇಲೆ ಮತ್ತೆ ಸಿಕ್ಸರ್ ಹೊಡೆಯಲು ಯತ್ನಿಸಿದಾಗ ಬಾಲ್ ಸ್ವಲ್ಪ ಸ್ಪಿನ್ ಆದ ಕಾರಣ ಅದು ಬೌಂಡರಿಗೆ ಹೋಗಲಿಲ್ಲ. ಅದನ್ನು ಬೆನ್ನಟ್ಟಿಕೊಂಡು ಹೋದ ಟ್ರಾವಿಸ್ ಹೆಡ್ ಅತ್ಯಂತ ಕಠಿಣವಾದ ಕ್ಯಾಚನ್ನು ಕೆಳಗೆ ಬೀಳುತ್ತಲೇ ಹಿಡಿದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ
ಭೂಮಿಯ ಆರೋಗ್ಯ ನಮ್ಮ ಆರೋಗ್ಯವೆಂದ ಮಕ್ಕಳು : ಡಾ. ವಿನತೆ ಶರ್ಮ ಅಂಕಣ
ಈ ಪತ್ರವನ್ನು ಬರೆಯುತ್ತಿರುವಾಗ ಬಂದ ಸುದ್ದಿ ಪ್ರಕಾರ ಗೋಲ್ಡ್ ಕೋಸ್ಟ್ ಪ್ರದೇಶದಲ್ಲಿ ಕೋಲ್ಮಿಂಚಿನ ಭಾರಿ ಮಳೆ ಬಿದ್ದು ಮುಷ್ಟಿಗಾತ್ರದ ಆಲಿಕಲ್ಲು ಸುರಿದಿದೆ. ಭಾರಿಮಳೆ ಸೂಚನೆ ಸಿಕ್ಕಿದ ಕೂಡಲೇ ಹವಾಮಾನ ಸಿಬ್ಬಂದಿ ಅದನ್ನು ಸಾರ್ವಜನಿಕರಿಗೆ ತಿಳಿಸಿದರೂ ಅನೇಕರು ಮಳೆಗೆ ಸಿಲುಕಿ ಪರಿಸ್ಥಿತಿ ಏರುಪೇರಾಗಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
2023 ವಿಶ್ವ ಕಪ್ನ ಪಕ್ಷಿನೋಟ: ಇ.ಆರ್. ರಾಮಚಂದ್ರನ್ ಅಂಕಣ
ಕ್ರಿಕೆಟ್ನಲ್ಲಿ ಅನೇಕ ಪವಾಡಗಳನ್ನು ಪ್ರೇಕ್ಷಕರು ವೀಕ್ಷಿಸಿದ್ದಾರೆ. ಆದರೆ ಇಂತಹ ಆಟವನ್ನು ವಾಂಖೇಡೆ ಮೈದಾನದಲ್ಲಿ ಯಾರೂ ನೋಡಿರಲಿಲ್ಲ. ಲಕ್ಷಾಂತರ ಜನ ಟಿವಿಯಲ್ಲಿ ಇಂತಹ ದೃಶ್ಯವನ್ನು ವೀಕ್ಷಿಸಿರಲಿಲ್ಲ. ಪವಾಡಗಳು ಸಾಮಾನ್ಯವಾಗಿ ಕೇಳಿರುವುದು ಸಹಜ. ಯಾವುದೋ ಕಾಲದಲ್ಲಿ ಹೀಗಾಯಿತು, ಹೀಗೆ ಮಾಡಿದರು ಎನ್ನುವುದನ್ನು ಓದಿರುತ್ತೇವೆ, ಕೇಳಿರುತ್ತೇವೆ.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಹೊಸ ಬರಹ ನಿಮ್ಮ ಓದಿಗೆ
ಯಾವುದರಲ್ಲಿದೆ ಸುಖ?: ಎಸ್. ನಾಗಶ್ರೀ ಅಜಯ್ ಅಂಕಣ
ನಿರಂತರ ದುಡಿಮೆ ಹಾಗೂ ಹಣಗಳಿಕೆಯ ಓಟಕ್ಕೆ ಬಿದ್ದು, ಸ್ವಂತ ಸುಖವನ್ನೇ ಕಡೆಗಣಿಸುವುದು, ಅರ್ಥವಿಲ್ಲದ ತ್ಯಾಗದ ಹೊರೆಯನ್ನು ಹೊತ್ತು ಮನೆಯವರ ಹೊಟ್ಟೆ ಉರಿಸುವುದು ಯಾವ ಪುರುಷಾರ್ಥಕ್ಕಾಗಿ? ಸದಾ ತನ್ನ ಸುಖದ ಹುಡುಕಾಟದಲ್ಲೇ ಉಳಿದು ಬೇರೆಯವರ ಭಾವನೆಗಳನ್ನು ನಿರ್ಲಕ್ಷಿಸುವುದು ಎಷ್ಟು ಸರಿ? ಹಣವೊಂದೇ ಕಾಡುವ ಬಗೆಯಲ್ಲಿ ಎಷ್ಟೊಂದು ವೈವಿಧ್ಯವಿದೆ ಅಲ್ಲವೇ?
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ
ಸ್ಪಿನ್ ಮಾಂತ್ರಿಕ ಬಿಷನ್ ಸಿಂಘ್ ಬೇಡಿ: ಇ.ಆರ್. ರಾಮಚಂದ್ರನ್ ಅಂಕಣ
ಬೇಡಿಯವರ ಬೋಲಿಂಗ್ನಲ್ಲಿ ಬ್ಯಾಟ್ಸ್ಮನ್ರನ್ನು ಕಟ್ಟಿಹಾಕುವ ಸಾಮರ್ಥ್ಯವಿತ್ತು. ಬ್ಯಾಟ್ಸ್ಮನ್ನ ಹಿಂದೆ ಮುಂದೆ ಓಡಾಡುವ ಹಾಗೆ ಮಾಡಿ ಕೊನೆಗೆ ಅವನು ಬೋಲ್ಡ್ ಆಗುವ ಹಾಗೆ, ಅಥವ, ಎಲ್.ಬಿ. ಆಗುವ ಹಾಗೆ ಮಾಡುತ್ತಿದ್ದರು, ಅವರ ಬೋಲಿಂಗ್ ಅರ್ಥವಾಗದೆ ವಿಕೆಟ್ ಹತ್ತಿರ ಕ್ಯಾಚ್ ಕೊಟ್ಟು ಔಟಾದವರೇ ಜಾಸ್ತಿ. ಏಕನಾಥ್ ಸೋಲ್ಕರ್, ವೆಂಕಟರಾಘವನ್, ಅಜಿತ್ ವಾಡೇಕರ್ ಬ್ಯಾಟ್ ಹತ್ತಿರ ಸಿಲ್ಲಿ ಮಿಡಾನ್, ಗಲ್ಲಿ, ಸ್ಲಿಪ್ನಲ್ಲಿ ಕ್ಯಾಚ್ಗಳನ್ನು ಹಿಡಿದು ಬ್ಯಾಟ್ಸ್ಮನ್ಗಳನ್ನು ಔಟ್ ಮಾಡುತ್ತಿದ್ದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ










