Advertisement
ರೂಪಶ್ರೀ ಕಲ್ಲಿಗನೂರ್‌ ಬರೆದ ಎರಡು ಕವಿತೆಗಳು

ರೂಪಶ್ರೀ ಕಲ್ಲಿಗನೂರ್‌ ಬರೆದ ಎರಡು ಕವಿತೆಗಳು

ಬಾಲ್ಯದಲ್ಲಿ
ಅತಿ ಹಗೂರಾದ
ಹತ್ತಿಯ ಮೂಟೆಗಳಂತೆ ಕಾಣುತ್ತಿದ್ದ
ಮೋಡಗಳೀಗ
ಹಿಂದಿನಷ್ಟೇ
ಹಗುರವಾಗಿವೆ
ಎಂದೆನ್ನಿಸುತ್ತಿಲ್ಲ, ಏಕೆ?
ಅವೂ
ಜಗತ್ತಿನ ದುಃಖವನ್ನೆಲ್ಲ
ಹೀರೀ ಹೀರಿ….
ಭಾರವಾಗಿಬಿಟ್ಟಿವೆಯ?
ಅತ್ತು
ಹಗುರಾಗಲಾದರೂ ಹೇಳಬೇಕು
ಅವುಗಳ‌ ಹೆಗಲ‌ ಮೇಲೆ ಕೈಯಿಟ್ಟು
ಸುಡುಸುಡುತ್ತಿರುವ
ಜಗತ್ತು
ಒಂಚೂರಾದರೂ ತಂಪಾಗಬಹುದು

***

ಎದೆಯ
ಗಾಯಗಳಿಗೆ
ಹೊಲಿಗೆ ಹಾಕಲು
ಬರುವುದಿಲ್ಲವೆಂದೇ
ಮುಖದ ಮೇಲಿನ
ಕಲೆಗಳಿಗೆ
ಇನ್ನಷ್ಟು
ಗಾಢವಾಗಿ
ಬಣ್ಣ ಹಚ್ಚುತ್ತಾಳವಳು..‌.

 

About The Author

ರೂಪಶ್ರೀ ಕಲ್ಲಿಗನೂರ್

ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಕಾಡೊಳಗ ಕಳದಾವು ಮಕ್ಕಾಳು' ಮಕ್ಕಳ ನಾಟಕ . 'ಚಿತ್ತ ಭಿತ್ತಿ' ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ