Advertisement

ಸಂಪಿಗೆ ಸ್ಪೆಷಲ್

ಪಟ್ಟಾಭಿ ಎಂಬ ಪಾಮರ: ಮೀನಾ ಮೈಸೂರು ಬರಹ

ಪಟ್ಟಾಭಿ ಎಂಬ ಪಾಮರ: ಮೀನಾ ಮೈಸೂರು ಬರಹ

ಕೇವಲ ಕಾಲೇಜಿನಲ್ಲಿ ಪಾಠ ಮಾಡುತ್ತಾ ತನ್ನ ವಿದ್ಯಾರ್ಥಿಗಳೊಂದಿಗೆ ಸಾಹಿತ್ಯಿಕ ಚರ್ಚೆ ನಡೆಸುತ್ತಾ, ಅವರುಗಳ ಭವಿಷ್ಯ ರೂಪಿಸುವತ್ತ ಒತ್ತು ನೀಡುತ್ತಾ, ನೂರಾರು ವಿದ್ಯಾರ್ಥಿಗಳ ಪ್ರೀತಿಯ ಸರ್ ಆಗಿರುವುದರಲ್ಲೆ ತೃಪ್ತಿ ಕಂಡುಕೊಂಡಿದ್ದಾರೆ. ಅವರಿಗೊಂದು ರೀತಿಯ ದಿಟ್ಟ ಆತ್ಮವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಯಾರಿಗೂ ತಲೆ ಬಾಗಿದವರಲ್ಲ. ಸಾಮಾಜಿಕ ಹೋರಾಟಗಾರ ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಪಟ್ಟಾಭಿರಾಮ ಸೋಮಯಾಜಿ ನಿಧನರಾಗಿದ್ದು, ಅವರೊಂದಿಗಿನ ಒಡನಾಟದ ಕುರಿತು ಅವರ ಸ್ನೇಹಿತೆ ಮೀನಾ ಮೈಸೂರು ಬರೆದಿದ್ದ ಬರಹವೊಂದು ಇಲ್ಲಿದೆ

read more
ಟೇಪ್‌ ರೆಕಾರ್ಡರ್ ವಿಥ್ ರೇಡಿಯೋ ಎಂಬ ಮಾಯಾಪೆಟ್ಟಿಗೆ: ಸುಧಾ ಆಡುಕಳ ಬರಹ

ಟೇಪ್‌ ರೆಕಾರ್ಡರ್ ವಿಥ್ ರೇಡಿಯೋ ಎಂಬ ಮಾಯಾಪೆಟ್ಟಿಗೆ: ಸುಧಾ ಆಡುಕಳ ಬರಹ

ಎಲ್ಲರ ಒಕ್ಕೊರಲ ಒತ್ತಾಯಕ್ಕೆ ಅಪ್ಪನೂ ಇಲ್ಲವೆನ್ನಲಾರದೇ ನಡುಅಂಗಳದಲ್ಲಿಯೇ ಚಾಪೆ ಹಾಸಿ, ಮದ್ದಲೆಯೊಂದಿಗೆ ಸಜ್ಜಾಗಿಯೇಬಿಟ್ಟರು. ಸುತ್ತ ಮುತ್ತಿದ ನೀರವ ಮೌನದ ನಡುವೆ ಅಪ್ಪ ಮದ್ದಲೆ ಬಡಿಯುತ್ತಾ, ದೊಡ್ಡ ದನಿಯಲ್ಲಿ “ವಿಘ್ನೇಶಾಯ ಸರಸ್ವತೈ ಪರ‍್ವತೈ ಗುರುವೇ ನಮಃ” ಎಂದು ಗಣಪತಿ ಪೂಜೆಯೊಂದಿಗೆ ಆರಂಭಿಸಿ, “ಸರಸಿಜಾಂಬಕಿಯರೇ ಕೇಳಿ” ಎಂಬ ಭೀಷ್ಮಪರ್ವದ ನಾಲ್ಕು ಹಾಡುಗಳನ್ನು ಹಾಡಿ ಇನ್ನು ಸಾಕು ಎಂಬಂತೆ ಕೈಸನ್ನೆ ಮಾಡಿದರು. ಇದನ್ನೇ ಕಾಯುತ್ತಿದ್ದ ಸಾಹೇಬರು ಟಕ್ ಎಂದು ರೆಕಾರ್ಡಿಂಗನ್ನು ಬಂದ್ ಮಾಡಿದರು.
ಸುಧಾ ಆಡುಕಳ ಬರಹ ನಿಮ್ಮ ಓದಿಗೆ

read more
ಕಳೆದುಹೋದವರನ್ನು ಹೇಗೆ ಹುಡುಕಲಿ?: ಅಮಿತಾ ರವಿಕಿರಣ್ ಬರಹ

ಕಳೆದುಹೋದವರನ್ನು ಹೇಗೆ ಹುಡುಕಲಿ?: ಅಮಿತಾ ರವಿಕಿರಣ್ ಬರಹ

ಇದನ್ನೆಲ್ಲಾ ನಾನೀಗ ಬರೆಯುವಾಗಲೂ ಇದೆಲ್ಲ ಕನಸೇ ಅನಿಸುತ್ತದೆ, ಕಂಡು ಕೇಳರಿಯದ ಊರಿನಿಂದ ಬಂದು, ನನ್ನೂರಿನಿಂದ ಹೋಗುವಾಗ ಅಣ್ಣಂದಿರಾಗಿ ಹೋಗಿದ್ದರು. ಹೋಳಿಗೆ ಬಣ್ಣ ಕಳಿಸುತ್ತಿದ್ದೆ, ದಶರೆಗೆ ಬನ್ನಿ, ರಕ್ಷಾಬಂಧನಕ್ಕೆ ರಾಖಿ, ಸಂಕ್ರಾಂತಿಗೆ ಎಳ್ಳು, ಪತ್ರಗಳಲ್ಲಿ ಒಣಗಿದ ಹೂವು ಎಲೆಗಳು. ಅದೊಂದು ಬೇರೆಯದೇ ಲೋಕವಾಗಿತ್ತು. ಮೂವರಲ್ಲಿ ಜಾಸ್ತಿ ಪತ್ರ ಬರೆಯುತ್ತಿದ್ದುದು ದೆಹಲಿಯ ಅಶೋಕ್ ಕುಮಾರ್ ಮತ್ತು ಅಕ್ಬರ್ ಖಾನ್ ಅವರು. ಜೀತೇಂದ್ರ ಪ್ರಸಾದ್ ಅವರ ಪತ್ರ ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಬರುತ್ತಿತ್ತು. ನಾನು, ತಂಗಿ ಪತ್ರ ಬರೆಯುತ್ತಿದ್ದೆವು.
ಅಮಿತಾ ರವಿಕಿರಣ್‌ ಬರಹ ನಿಮ್ಮ ಓದಿಗೆ

read more
ಮಂಜುನಾಯಕ ಚಳ್ಳೂರ ಕಥಾಲೋಕ…

ಮಂಜುನಾಯಕ ಚಳ್ಳೂರ ಕಥಾಲೋಕ…

“ಧಾರವಾಡದಲ್ಲಿ ಪಿಯುಸಿಯಲ್ಲಿದ್ದಾಗ ‘ಗಾಳಿಪಟ’ ಎಂಬ ಕತೆ ಬರೆದಿದ್ದೆ‌‌. ಅದಕ್ಕೂ ಮುನ್ನ ‘ಗೋಧಾವರಿ’ ಎಂಬ ಕತೆಯನ್ನು ಬರೆದು ಸ್ನೇಹಿತರ ಮುಂದೆ ಇಟ್ಟಾಗ, ಹಾಸ್ಟೇಲಿನ ದೋಸ್ತರೆಲ್ಲ ಅದನ್ನು ಓದಿ “ಚೊಲೋ ಬರ್ದಿ” ಎಂದು ಬೆನ್ನುತಟ್ಟಿದ್ದರು‌. ತುಷಾರ ಕಥಾ ಸ್ಪರ್ಧೆಗೆಂದು ಬರೆದಿದ್ದ ಕತೆ ಅದು. ಕೈಬರಹದಲ್ಲಿದ್ದ ಆ ಕತೆಯ ಪ್ರತಿಯನ್ನು, ಮತ್ತೊಮ್ಮೆ ಓದಿ ಕೊಡುವುದಾಗಿ ನನ್ನಿಂದು ಇಸಿದುಕೊಂಡು ಹೋದ ದೋಸ್ತ ಇನ್ನೂ ವಾಪಸ್ ಕೊಟ್ಟಿಲ್ಲ. ಮಂಜುನಾಯಕ ಚಳ್ಳೂರರ “ಫೂ” ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಿಕ್ಕಿದ್ದು ಇದೇ ಸಂದರ್ಭದಲ್ಲಿ ಅವರ ಕಥಾಲೋಕದ ಕುರಿತು ರೂಪಶ್ರೀ ಕಲ್ಲಿಗನೂರ್‌ ಬರಹ

read more
ರೇಟಿಂಗ್ ಬೆನ್ನೇರಿದ ಬದುಕು…: ಪೂರ್ಣಿಮಾ ಹೆಗಡೆ ಬರಹ

ರೇಟಿಂಗ್ ಬೆನ್ನೇರಿದ ಬದುಕು…: ಪೂರ್ಣಿಮಾ ಹೆಗಡೆ ಬರಹ

ಮಗಳ ಹೇರ್ ಕಟ್ ಮಾಡಿಸಲು ಇದೇ ಏರಿಯಾದಲ್ಲಿರುವ ಬ್ಯುಟಿ ಸಲೂನ್‌ಗೆ ಹೋದಾಗ ನಡೆದ ಘಟನೆಯು ಇದಕ್ಕೆ ಸಂಬಂಧಿಸಿದ್ದೆ ಆಗಿತ್ತು. ಯಾವಾಗಲೂ ನಗುತ್ತಾ ಎಲ್ಲ ಕೆಲಸಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದ ಅಂಶುಲ್ ತನ್ನ ಕೆಲಸವನ್ನು ಕಡಿಮೆ ರೇಟಿಂಗ್ ಹಾಗೂ ಒಂದೆರಡು ನೆಗೆಟಿವ್ ರಿವ್ಯು ಬಂತೆಂದು ಕೆಲಸ ಕಳೆದುಕೊಂಡಿದ್ದಳಂತೆ. ನಮ್ಮ ಏರಿಯಾದಲ್ಲಿರುವ ನನ್ನ ಹತ್ತು ಹನ್ನೆರಡು ಸ್ನೇಹಿತೆಯರ ಗುಂಪಿಗೆ ಅವಳು ಹಾಗೂ ಅವಳ ಕೆಲಸ ಅಚ್ಚುಮೆಚ್ಚಾಗಿತ್ತು. ಅವಳು ಕಡಿಮೆ ರೇಟಿಂಗ್ ಕಾರಣಕ್ಕಾಗಿ ಕೆಲಸ ಕಳೆದುಕೊಂಡಿದ್ದು ನಮಗೆಲ್ಲಾ ನಂಬಲು ಸಾಧ್ಯವಾಗಿರಲಿಲ್ಲ.
ರೇಟಿಂಗ್‌ ಕೊಡುವಿಕೆಯ ಕುರಿತ ಪೂರ್ಣಿಮಾ ಹೆಗಡೆ ಬರಹ ನಿಮ್ಮ ಓದಿಗೆ

read more
ಚಿಗರಿ ಬಸ್ಸಿನ ಗಂಧರ್ವ: ಲಿಂಗರಾಜ ಸೊಟ್ಟಪನವರ್‌ ಪ್ರಬಂಧ

ಚಿಗರಿ ಬಸ್ಸಿನ ಗಂಧರ್ವ: ಲಿಂಗರಾಜ ಸೊಟ್ಟಪನವರ್‌ ಪ್ರಬಂಧ

ನಾನು ಸರ್‌ಗೆ ಐದುನೂರು ಕೊಟ್ಟೆ.. ಅವರು ಮಡಚಿ ಇಟ್ಟುಕೊಂಡರು. ಆಯ್ತು ಎಂದರು.. ನಾನು ನಿಂತೇ ಇದ್ದೆ. ಯಾಕೋ ಅಂದರು.. ನಾನು ಮತ್ತೆ ಐದು ನೋಟು ಕೊಟ್ಟೆ. ಅವರು ಹೈರಾಣ. ಪ್ರಯೋಗ ಮಾಡಿದ್ದು ಅರ್ಥವಾಯಿತು. ಅವರು ಏನೊಂದು ಹೇಳದೆ ಮೌನವಾದರು. ಹೋಗಿ ಕುತ್ಕೋ ಅಂದರು ಡೆಸ್ಕ್‌ನಲಿ ಕೂತೆ. ಸ್ವಲ್ಪ ಹೊತ್ತು ಹಾಗೇ ನೋಡಿದರು. ಹೀಗೆಲ್ಲ ಮಾಡಬಾರದು.. ಎಂದರು ಅಷ್ಟೇ. ನಾನು ಹಾಗೆಲ್ಲ ಮಾಡಿಯೂ ಐದು ನೋಟುಗಳನ್ನು ಅವರಿಗೆ ಕೊಟ್ಟಿದ್ದೆ. ಅವರು ತಪ್ಪನ್ನು ಮಾತ್ರ ತಿದ್ದುವ ಪ್ರಯತ್ನ ಮಾಡಿದ್ದರು.
ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಪ್ರಬಂಧ ನಿಮ್ಮ ಓದಿಗೆ

read more

ಸರ್ಕಸ್ಸು ಮತ್ತು ತಪ್ಪಿದ ಎಂಟು ಲೆಕ್ಕಗಳು: ಕಾಸಿಂ ನದಾಫ್ ಬರಹ

ಆ ನಾಯಿಯ ಬೊಗಳುವಿಕೆಯ ಹಿನ್ನೆಲೆಯಲ್ಲಿಯೇ ನಮ್ಮ ಮನೆಯ ಇದುರಿಗಿದ್ದ, ಅಕ್ಕಪಕ್ಕದ ಎಂಟು ಮನೆಗಳ ದಾಟಿಕೊಂಡು ಮಲಗಿದ್ದ ಇಕ್ಕಟ್ಟಾದ ಬೀದಿಯ ಆ ಕಡೆ ತುದಿಯಲ್ಲಿ ಪ್ರತ್ಯಕ್ಷವಾದ ಎರಡು ಪ್ಯಾಂಟ್ ತೊಟ್ಟ ಆನೆಕಾಲುಗಳಂತವು ಮತ್ತು ಅವುಗಳ ಹಿಂದೆ ಬಾಡಿಗಾರ್ಡುಗಳಂತೆ ನಾಲ್ಕು ಚಡ್ಡಿ ತೊಟ್ಟುಕೊಂಡ ಎರಡೆರಡೆಂಬಂತೆ ಎಂಟು ಕುದುರೆ ಕಾಲುಗಳಂತವುಗಳು ಇತ್ತ ಬರುತ್ತಿದ್ದವು. ಆ ಕಾಲುಗಳ ವೇಗದಲ್ಲಿಯೇ ನೆಲಕ್ಕೆ ಕುಟ್ಟುತ್ತಾ ಬೆತ್ತವು ಒಂದು ಬರುತ್ತಿದ್ದುದನ್ನು ಕೆಳಗಿನಿಂದ ಮೇಲಕ್ಕೆ ಕಣ್ಣಾಡಿಸಿದಾಗ ನಾನು ಅಡಿಯಿಂದ ಮುಡಿಯವರೆಗೂ ನಡುಗುತ್ತಾ ಕ್ಷಣದಲ್ಲಿಯೇ ಬೆವೆತುಬಿಟ್ಟೆ.
ಕಾಸಿಂ ನದಾಫ್ ಭೈರಾಪುರ ಬರೆದ ಶಾಲಾ ದಿನಗಳ ಒಂದು ನೆನಪು ನಿಮ್ಮ ಓದಿಗೆ

read more
ನೀರಿನ ನೆರಳು:‌ ಪ್ರಕಾಶ್‌ ಪೊನ್ನಾಚಿ ಬರಹ

ನೀರಿನ ನೆರಳು:‌ ಪ್ರಕಾಶ್‌ ಪೊನ್ನಾಚಿ ಬರಹ

ಅಗಲಿಕೆ ಆರಂಭದಷ್ಟೇ ನೋವನ್ನು ಅಂತ್ಯಕ್ಕೂ ಉಳಿಸಿಕೊಳ್ಳುತ್ತದೆನ್ನುವ ಸೂತ್ರ ಅವಳಿಂದ ನನಗೀಗ ನಿಧಾನಕ್ಕೆ ಅರ್ಥವಾಗತೊಡಗಿತ್ತು. ಮತ್ತೆ ಮರುಜನ್ಮವಿದ್ದರೆ ನನ್ನಾಣೆ ನೀನೆ ನನಗೆ ಸಿಗಬೇಕು. ಈ ಮಡಿಲು ಸದಾ ನನ್ನ ತಲೆಗೆ ಜೋಪಡಿಯಾಗಬೇಕು. ನಿನ್ನ ಕುರುಚಲು ಗಡ್ಡದ ಕೂದಲು ಸದಾ ನನ್ನ ಕೆನ್ನೆಗೆ ಕಚಗುಳಿ ಇಡುತ್ತಿರಬೇಕು. ನನ್ನ ಎಲ್ಲಾ ಖುಷಿಗಳಿಗೂ ನೀನೇ ಕಾರಣಬೇಕು… ಏನೆಲ್ಲಾ ಹೇಳಿದ್ದಳು ಅವಳು. ಪ್ರೀತಿಸುವುದರಲ್ಲಿ ನಾನೇ ಹುಚ್ಚ ಎಂದುಕೊಂಡ ನನ್ನನ್ನೇ ಸೋಲಿಸಿ ಹುಚ್ಚಿಯಷ್ಟೇ ಪ್ರೀತಿಸುತ್ತಿದ್ದಳು.
ಪ್ರಕಾಶ್‌ ಪೊನ್ನಾಚಿ ಬರಹ ನಿಮ್ಮ ಓದಿಗೆ

read more
ಬಚ್ಚಲಿನ ಬಗೆಗೊಂದು ಭಾವಸ್ಫುರಣ: ವಿಶ್ವನಾಥ ಎನ್‌ ನೇರಳಕಟ್ಟೆ ಬರಹ

ಬಚ್ಚಲಿನ ಬಗೆಗೊಂದು ಭಾವಸ್ಫುರಣ: ವಿಶ್ವನಾಥ ಎನ್‌ ನೇರಳಕಟ್ಟೆ ಬರಹ

ಹಾಗೆ ನೋಡಿದರೆ ಮನೆಯ ಉಳಿದ ಎಲ್ಲಾ ಅಂಗಗಳಿಗಿಂತ ಮಿಗಿಲಾಗಿ ಬಚ್ಚಲುಮನೆ ರಾಜಮರ್ಯಾದೆಯನ್ನು ಪಡೆದುಕೊಳ್ಳುತ್ತದೆ. ಅಡುಗೆ ಕೋಣೆ ಎನ್ನುತ್ತೇವೆ. ಮಲಗುವ ಕೋಣೆ ಎನ್ನುತ್ತೇವೆ. ದೇವರ ಕೋಣೆ ಎನ್ನುತ್ತೇವೆ. ಆದರೆ ಬಚ್ಚಲನ್ನು ಬಚ್ಚಲು ಮನೆ ಎನ್ನುತ್ತೇವೆ. ಮನೆಯ ಒಂದು ಭಾಗವಾಗಿರುವ ಬಚ್ಚಲನ್ನು ಇನ್ನೊಂದು ಮನೆಯೇ ಎಂಬಂತೆ ಪರಿಗಣಿಸುತ್ತೇವೆ. ಮನೆಯ ಬೇರಾವ ಕೋಣೆಗಳಿಗೂ ಸಿಗದ ಪ್ರಾಶಸ್ತ್ಯ ಬಚ್ಚಲುಮನೆಗಿದೆ. ಉಳಿದ ಕೋಣೆಗಳು ಈ ತಾರತಮ್ಯವನ್ನು ಒಪ್ಪಿಕೊಳ್ಳದೆ ಪ್ರತಿಭಟಿಸದಿರುವುದೇ ಆಶ್ಚರ್ಯ!
ಬಚ್ಚಲಿನ ಕುರಿತ ಹಲವು ವಿಚಾರಗಳನ್ನು ಬರೆದಿದ್ದಾರೆ ವಿಶ್ವನಾಥ ಎನ್‌ ನೇರಳಕಟ್ಟೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ