Advertisement

ಸರಣಿ

ಚಿಲೆ ದೇಶದ ಕವಿ ಎಲಿಕುರಾ ಚಿವಾಯ್‌ಲಾಫ಼್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಚಿಲೆ ದೇಶದ ಕವಿ ಎಲಿಕುರಾ ಚಿವಾಯ್‌ಲಾಫ಼್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಚಿವಾಯ್‌ಲಾಫ಼್ ಅವರ ಅನೇಕ ಕವಿತೆಗಳು ಆ ಭೂಮಿಯಲ್ಲಿ ರೂಪಕಾತ್ಮಕವಾಗಿ ವಾಸಿಸುವ ತುರ್ತು ಬಯಕೆಗೆ ಸಾಕ್ಷಿಯಾಗಿವೆ. ಅವರ ಬುಡಕಟ್ಟಿನ ಪೂರ್ವಜರ ಮರೆತುಹೋದ ಅಥವಾ ನಿಗ್ರಹಿಸಲ್ಪಟ್ಟ ಉಪಸ್ಥಿತಿಯನ್ನು ಮಾತ್ರವಲ್ಲದೆ, ‘ಮಾಪುಚೆ’ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾದ ಮತ್ತು ಸಾಂಪ್ರದಾಯಿಕ ಮಾಪುಚೆ ಭೂಮಿಯಲ್ಲಿ ಕೈಗಾರಿಕಾ ಯೋಜನೆಗಳಿಂದ ಹೆಚ್ಚಾಗಿ ಬೆದರಿಕೆಗೆ ಒಳಗಾಗುವ ಪ್ರಕೃತಿಯ ಧ್ವನಿಯನ್ನು ಸಹ ಅವರು ಮರಳಿ ಪಡೆಯುವ ಗುರಿಯನ್ನು ಹೊಂದಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಚಿಲೆ (Chile) ದೇಶದ ಮಾಪುಚೆ ಬುಡಕಟ್ಟಿಗೆ ಸೇರಿದ ಮಾಪುಜುಗುನ್‌ (Mapuzugun) ಭಾಷಾ ಕವಿ ಎಲಿಕುರಾ ಚಿವಾಯ್‌ಲಾಫ಼್-ರವರ (Elicura Chihuailaf, 1953) ಕಾವ್ಯದ ಕುರಿತ ಬರಹ

read more
ಕೋಗಿಲೆ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೋಗಿಲೆ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಯಾವುದೇ ಗೂಡು ಕಟ್ಟುವ ಗೋಜಿಲ್ಲದೆ, ಮೊಟ್ಟೆಗಳಿಗೆ ಕಾವು, ಗುಟುಕು ನೀಡದೇ, ಬೂದುಕಾಗೆ ಮತ್ತು ಕಪ್ಪುಕಾಗೆಗಳ ಗೂಡಿನಲ್ಲಿ ತಮ್ಮ ಮೊಟ್ಟೆಯನಿಟ್ಟು ಕೈತೊಳೆದುಕೊಳ್ಳುವ ಪಕ್ಷಿಗಳು. ಸಾಧಾರಣವಾಗಿ ಹೆಣ್ಣು ಕೋಗಿಲೆ ಒಂದೇ ಮೊಟ್ಟೆಯನ್ನು ಇಡುತ್ತದೆ. ಹಾಗಾಗಿ ಇವುಗಳನ್ನು ಪರಪುಟ್ಟ ಎಂದೂ ಕರೆಯುತ್ತಾರೆ! ಕಾಗೆಯದೇ ಮೊಟ್ಟೆಯ ಆಕಾರ, ಬಣ್ಣ ಆದರೆ, ತುಸು ಸಣ್ಣ ಗಾತ್ರವಿರುವ ಮೊಟ್ಟೆಗಳನ್ನು ತಾನೂ ಇಡುತ್ತದೆ. ಈ ಮೊಟ್ಟೆ, ಕಾಗೆಯ ಮೊಟ್ಟೆಯಂತೆಯೇ ತಿಳಿಹಸಿರು ಬಣ್ಣದ, ಕಂದು ಬಣ್ಣದ ಗೀರುಗಳು ಮತ್ತು ಮಚ್ಚೆಗಳಿರುತ್ತದೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೋಗಿಲೆಯ ಕುರಿತ ಬರಹ ಇಲ್ಲಿದೆ

read more
ರಾಮಮನೋಹರ ಲೋಹಿಯಾ ಮತ್ತು ರಾಮ ಕೃಷ್ಣ ಶಿವ: ಚಿತ್ರಾ ವೆಂಕಟರಾಜು ಸರಣಿ

ರಾಮಮನೋಹರ ಲೋಹಿಯಾ ಮತ್ತು ರಾಮ ಕೃಷ್ಣ ಶಿವ: ಚಿತ್ರಾ ವೆಂಕಟರಾಜು ಸರಣಿ

ಪ್ರಬಂಧದಲ್ಲಿ ರಾಮಮನೋಹರ ಲೋಹಿಯಾ ಅವರು ರಾಮ, ಕೃಷ್ಣ, ಶಿವ ಮೂವರಲ್ಲಿ ಒಂದೊಂದು ವ್ಯಕ್ತಿತ್ವವನ್ನು ಗುರುತಿಸಿದ್ದಾರೆ. ಆ ಮೂರೂ ವ್ಯಕ್ತಿತ್ವಗಳೂ ಭಾರತಕ್ಕೆ ಹೇಗೆ ಮತ್ತು ಯಾಕೆ ಬೇಕು ಎನ್ನುವುದೇ ಲೇಖನದ ಆಶಯ. ರಾಮನಲ್ಲಿನ ಸೀಮಿತ ವ್ಯಕ್ತಿತ್ವ, ಕೃಷ್ಣ ನ ಸಮೃದ್ಧ ವ್ಯಕ್ತಿತ್ಚ ಮತ್ತು ಶಿವ ನ ಪ್ರಮಾಣಾತೀತ ವ್ಯಕ್ತಿತ್ವ. ಈ ವ್ಯಕ್ತಿತ್ವಗಳನ್ನು ಆ ಪಾತ್ರಗಳ ಘಟನೆಗಳ ಮೂಲಕವೇ ನಿರೂಪಿಸುತ್ತಾರೆ. ರಾಮನೊಳಗೆ ಕೃಷ್ಣ ನ ಸಮೃದ್ಧ ವ್ಯಕ್ತಿತ್ವವೂ, ಕೃಷ್ಣನೊಳಗೆ ರಾಮನ ಸೀಮಿತತೆಯೂ ಬಂದುಬಿಡುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

read more
ಸಂದರ್ಶನಕ್ಕೆಂದು ಚೆನ್ನೈ ತಲುಪಿದ ಕುತೂಹಲಕಾರಿ ಅನುಭವ…: ಬಸವನಗೌಡ ಹೆಬ್ಬಳಗೆರೆ ಸರಣಿ

ಸಂದರ್ಶನಕ್ಕೆಂದು ಚೆನ್ನೈ ತಲುಪಿದ ಕುತೂಹಲಕಾರಿ ಅನುಭವ…: ಬಸವನಗೌಡ ಹೆಬ್ಬಳಗೆರೆ ಸರಣಿ

ಹಣ ಅಡ್ಜಸ್ಟ್ ಆದರೆ ಮಾತ್ರ ಹೋದರಾಯ್ತು ಎಂದುಕೊಂಡು ಮಾಡೋ ಪ್ರಯತ್ನವನ್ನೆಲ್ಲ ಮಾಡಿ ಸುಮ್ಮನಾದೆ. ಇನ್ನೇನು ಇವತ್ತು ರಾತ್ರಿ ಚೆನ್ನೈಗೆ ಹೋಗಬೇಕು ಎಂದು ಅವರು ಕೊಟ್ಟಿದ್ದ ಸಂದರ್ಶನದ ದಿನ ನಾಳೆಯೇ ಆಗಿತ್ತು ಎಂಬ ದಿನದವರೆಗೂ ಪ್ರಯತ್ನ ಮಾಡಿ ಸುಮ್ಮನಾಗಿದ್ದೆ. ಕಡೇ ದಿನ ಎಂದೂ ಕೇಳದ ನಮ್ಮ ಮನೆ ಓನರ್ ಅಂಕಲ್ ಬಳಿ ಕೇಳಿದೆ. ಅದಕ್ಕವರು ಒಂದೂ ಮಾತಾಡದೇ ತುಂಬಾ ಖುಷಿಯಿಂದಲೇ ಹಣ ಕೊಟ್ಟರಲ್ಲದೇ ಸಂದರ್ಶನಕ್ಕೆ ಹಾಜರಾಗುವ ಟಿಪ್ಸ್‌ಗಳನ್ನೂ ತಿಳಿಸಿದರು, ತುಂಬಾ ಖುಷಿಯಾಗಿ ನಾನು ಬೆಂಗಳೂರಿನ ರೈಲನ್ನು ಆ ದಿನ ಬೆಳಗ್ಗೆಯೇ ಹತ್ತಿ ಬೆಂಗಳೂರಿಗೆ ಸಂಜೆಯಷ್ಟರಲ್ಲಿ ಹೋಗಿ ತಲುಪಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೇಳನೆಯ ಕಂತು ನಿಮ್ಮ ಓದಿಗೆ

read more
ಕಾರ್ಯಕ್ರಮ ನಮ್ಮದು, ಗೊಂದಲ ದೇವರದು!: ಎಚ್. ಗೋಪಾಲಕೃಷ್ಣ ಸರಣಿ

ಕಾರ್ಯಕ್ರಮ ನಮ್ಮದು, ಗೊಂದಲ ದೇವರದು!: ಎಚ್. ಗೋಪಾಲಕೃಷ್ಣ ಸರಣಿ

ಆಗ ಇನ್ನೂ ವಿಕಿಪೀಡಿಯ, ಗೂಗಲ್ ಮಾವ, ಜೆಮಿನಿ ಅತ್ತೆ, ಚಾಟ್ ಪಟ್ ಅಂಕಲ್ ಮುಂತಾದ AI ಗಳೇ ಆಗಲಿ ಉಳಿದ ಜ್ಞಾನಕೋಶಗಳು ಮೊದಲಾದವು ಹುಟ್ಟಿರಲಿಲ್ಲ. ಎನ್ಸೈಕ್ಲೋಪೀಡಿಯಾ ಆಫ್ ಬ್ರಿಟಾನಿಕಾ ಇತ್ತು, ಆದರೆ ಅದು ನನ್ನಂತಹವರ ಮನೆಯಲ್ಲಿ ಇರಲಿಲ್ಲ. ಅಷ್ಟು ದೊಡ್ಡ ದೊಡ್ಡ ಪುಸ್ತಕ ಇಟ್ಟುಕೊಳ್ಳುವಷ್ಟು ಜಾಗ ನನ್ನಂತಹವರ ಐದೂವರೆ ಚದರದ ಮನೇಲಿ ಇರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅಷ್ಟು ಪುಸ್ತಕ ಕೊಳ್ಳಬೇಕು ಅಂದರೆ ಎರಡು ಮೂರು ವರ್ಷದ ಸಂಬಳ ಅದಕ್ಕೇ ಆಗಿ ಬಿಡೋದು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೯ನೇ ಬರಹ ನಿಮ್ಮ ಓದಿಗೆ

read more
ಸುಂದರ ಕಾಡಿನ ರೋಚಕ ಕಥೆಗಳು-೯: ರೂಪಾ ರವೀಂದ್ರ ಜೋಶಿ ಸರಣಿ

ಸುಂದರ ಕಾಡಿನ ರೋಚಕ ಕಥೆಗಳು-೯: ರೂಪಾ ರವೀಂದ್ರ ಜೋಶಿ ಸರಣಿ

ಇನ್ನು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು, ಮರವನ್ನು ಗುಟ್ಟಾಗಿ ಕಡಿದು ಸಾಗಿಸುತ್ತಿದ್ದರು. ಅರಣ್ಯಾಧಿಕಾರಿಗಳ ಕಣ್ಣುತಪ್ಪಿಸಲು, ದಟ್ಟ ಕಾಡಿನ ನಡುವೆ, ರಾತ್ರಿಯ ಬೆಳದಿಂಗಳ ಬೆಳಕಲ್ಲೇ ಸ್ಥಳೀಯರ ಸಹಾಯದಿಂದ ಈ ಕೆಲಸ ಮುಗಿಸಿ, ಗಪ್ ಚಿಪ್ ಆಗಿ ದಿಮ್ಮಿ ಸಾಗಿಸಿ ಬಿಡುವ ನಿಪುಣರಿವರು. ಆಗೆಲ್ಲ ಹಳ್ಳಿಯಲ್ಲಿ ಕಾಲು ದಾರಿಗಳು ಮಾತ್ರ. ವಾಹನ ಸಂಚಾರಕ್ಕೆ ಅಲ್ಲೊಂದು ಇಲ್ಲೊಂದು ಮಣ್ಣು ರಸ್ತೆ. ಅದು ಬೇಸಿಗೆಗಷ್ಟೇ. ಮಳೆಗಾಲದಲ್ಲಿ ಆ ರಸ್ತೆಯಲ್ಲಿ ನಡೆದರೆ, ಮೊಣಕಾಲು ತನಕ ಹೂತು ಹೋಗುತ್ತಿತ್ತು. ಇನ್ನು ವಾಹನ ಸಂಚಾರ ನೆನೆಸುವುದೂ ಕಷ್ಟ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

read more
ಗೋಡೆಯ ಮೊದಲ ಇಟ್ಟಿಗೆ!: ಸುವರ್ಣ ಚೆಳ್ಳೂರು ಸರಣಿ

ಗೋಡೆಯ ಮೊದಲ ಇಟ್ಟಿಗೆ!: ಸುವರ್ಣ ಚೆಳ್ಳೂರು ಸರಣಿ

ಅವ್ವ ಅತ್ತಿ ಹೇಳಿದ ಮಾತು, ಮೈನೆರೆದ ಮ್ಯಾಗ ಎಲ್ಲಾರೂ ನನ್ನ ಮಾತಾಡಿಸಿದ ರೀತಿ, ನನಗೆ ನನ್ನಲ್ಲಾದ ಬದಲಾವಣೆ, ಇಲ್ಲಿವರೆಗೂ ಇದ್ದ ಶಿವಮ್ಮ ಇಗಿರೊ ಶಿವಮ್ಮ ಬೇರೆನಾ? ಅಂತನ್ನಿಸಿ, ಒಮ್ಮೆಲೆ ನಾಕು ದಿಕ್ಕಿಂದಾನೂ ಒಂದೊಂದಾಗಿ ಇಟ್ಟಿಗೆ ಇಟ್ಟು ಅದ್ಯಾವುದೊ ಗೋಡೆ ನಿಧಾನವಾಗಿ ಕಟ್ಟಾಕತಾರ ಅಂಬಂಗಾತು, ಕಾಣದೆ ಇರೊ ಹಗ್ಗಾನ ನಿಧಾನವಾಗಿ ಹೂವಿಂದ ಸುತ್ತಿ, ಬಾಯಿಗೆ ಬೆನ್ನಿಗೆ ಕೈ ಕಾಲಿಗೆ ಗಟ್ಟಿಯಾಗಿ ಬಿಗದು, ಅದರ ಮ್ಯಾಲೆಲ್ಲ ‘ನೀ ಹೆಣ್ಣು, ನೀ ದೊಡ್ಡಾಕಿ, ನೀ ಹೆಣ್ಣು, ನೀ ಹಿಂಗಿರಬೇಕು, ನೀ ದೊಡ್ಡಾಕಿ’ ಅಂತ ಸೂಕ್ಷ್ಮ ಕುಸುರಿ ಕಲೆ ಮಾಡಿ, ಆ ನಾಲ್ಕು ಗ್ವಾಡಿಯೊಳಗ ಬಂಧಿಸಿದಂಗಾತು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಐದನೆಯ ಬರಹ

read more
ಕಳ್ಳಿ ಪೀರ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕಳ್ಳಿ ಪೀರ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಹಲವು ಕಳ್ಳಿಪೀರಗಳು ಸೇರಿ ಹರ್ಷದಿಂದ ಟ್ರೀ…ಟ್ರೀ.. ಎಂದು ಕೂಗುತ್ತವೆ. ಮಣ್ಣಿನ ಧೂಳಿನಲ್ಲಿ ಸ್ನಾನ ಮಾಡುವುದೆಂದರೆ ಇವುಗಳಿಗೆ ಬಹಳ ಆಸಕ್ತಿ. ಇದು ಅವುಗಳ ದೇಹದ ಹೆಚ್ಚುವರಿ ತೈಲಾಂಶವನ್ನು ತೆಗೆಯುವುದಲ್ಲದೆ, ರೋಗಕಾರಕ ಕೀಟಗಳನ್ನೂ ದೂರ ಮಾಡುವುದು. ಸಂಜೆಯಾದೊಡನೆ, ಗುಂಪಿನಲ್ಲಿ ಮರದ ಎಲೆಗಳ ನಡುವೆ ತಂಗುತ್ತವೆ. ಆದರೆ ಬೆಳಿಗ್ಗೆ ಏಳಲು ಸೋಮಾರಿ. ಮುಂಜಾನೆ ಸೂರ್ಯೋದಯವಾದರೆ ಸಾಲದು. ಬಿಸಿಲೇರಬೇಕು! ಏಕೆಂದರೆ, ಜೇನ್ನೊಣಗಳೂ ತಮ್ಮ ಕಾರ್ಯವನ್ನು ಶುರು ಮಾಡಬೇಕಲ್ಲ?
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕಳ್ಳಿ ಪೀರ ಹಕ್ಕಿಯ ಕುರಿತ ಬರಹ ಇಲ್ಲಿದೆ

read more
ಬಯಸುವುದು ಒಂದು ಸಿಗುವುದು ಮತ್ತೊಂದು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಬಯಸುವುದು ಒಂದು ಸಿಗುವುದು ಮತ್ತೊಂದು!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಿಲ್ದಾಣಕ್ಕೆ ನಡೆಯುವಾಗ ಆಗಾಗ್ಗೆ ಎದ್ದು ಬರುತ್ತಿದ್ದ ಶೂಗಳು ನನ್ನ ನಡಿಗೆಯ ವೇಗವನ್ನು ಕುಂಠಿತಗೊಳಿಸಿದ್ದವು. ನಾನು ತಡವಾಗುತ್ತದೆಯೆಂದು ಭಾವಿಸಿ ಶೂಗಳನ್ನು ಕೈಯಲ್ಲಿ ಹಿಡಿದು ರೈಲ್ವೇ ನಿಲ್ದಾಣ ಸಿಗುವವರೆಗೆ ಓಡಿದೆ. ನನ್ನ ಅದೃಷ್ಟಕ್ಕೆ ರೈಲು ಇನ್ನೂ ಹೋಗಿರಲಿಲ್ಲ. ಟಿಕೇಟ್ ತೆಗೆದುಕೊಂಡು ರೈಲನ್ನು ಹತ್ತಿ ಕುಳಿತೆ. ಇದೇ ಮೊದಲ ಬಾರಿಗೆ ನಾನು ಧಾರವಾಡಕ್ಕೆ ಹೋಗುತ್ತಿದ್ದೆ. ನನ್ನ ಎದುರಿಗೆ ಕುಳಿತಿದ್ದವರ ಬಳಿ ಹೇಗೆ ಹೋಗಬೇಕೆಂದು ಕೇಳಿದಾಗ ಅವರು ಮಾಹಿತಿ ತಿಳಿಸಿದರಲ್ಲದೇ ನನ್ನ ಬಗ್ಗೆ ಕನಿಕರ ತೋರಿ “ನಿಮಗೆ ಕೆಲಸ ಸಿಗದಿದ್ದರೆ ನನಗೆ ಕರೆ ಮಾಡಿ ನಾನು ನಿಮಗೆ ಬೇರೊಂದು ಕೆಲಸ ಕೊಡಿಸುತ್ತೇನೆ” ಎಂದು ಅವರ ನಂಬರ್ ಕೊಟ್ಟು ಹೋದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ