Advertisement

ಸರಣಿ

ನಂಬಿ ಕೆಟ್ಟವರಿಲ್ಲವೋ ಮನುಜ….: ಬಸವನಗೌಡ ಹೆಬ್ಬಳಗೆರೆ ಸರಣಿ

ನಂಬಿ ಕೆಟ್ಟವರಿಲ್ಲವೋ ಮನುಜ….: ಬಸವನಗೌಡ ಹೆಬ್ಬಳಗೆರೆ ಸರಣಿ

ಅವನ ಮಾತು ಕೇಳಿದ ಮನಸ್ಸು ಇನ್ನೊಂದು ರೀತಿ ಯೋಚನೆ ಮಾಡಲು ಶುರು ಮಾಡ್ತು. ಸುಮ್ಮನೇ ಕೆಲಸಕ್ಕೆ ಸೇರದೇ ಮೆಡಿಕಲ್ ರೆಪ್ ಕೆಲಸದಲ್ಲಿ ಮುಂದುವರೆದರೆ ಹೇಗೆ? ಎಂದು ಯೋಚಿಸಿದೆ. ಇದಕ್ಕೆ ಪೂರಕವಾಗಿ ಹಲವಾರು ನನ್ನ ಮೆಡಿಕಲ್ ರೆಪ್ ಗೆಳೆಯರು ಅಲ್ಲಿ ಪೆನ್ಶನ್ ಇಲ್ವಂತೆ. ಸುಮ್ನೇ ಇಲ್ಲೇ ಇದ್ಬಿಡು ಎಂದರು. ನಾನು ಇದೇ ರೀತಿ ಮಾಡಬೇಕು ಎಂದುಕೊಂಡರೆ ನಮ್ಮ ಸಂಬಂಧಿಕರು ಇದಕ್ಕೆ ಒಪ್ಪಲಿಲ್ಲ. ಸರ್ಕಾರಿ ಕೆಲಸ ಸಿಗೋಕೂ ಪುಣ್ಯ ಮಾಡಿರಬೇಕು ಈ ರೀತಿ ಮಾಡಿ ತಿನ್ನೋ ಅನ್ನದಾಗೆ ಕಲ್ಲು ಹಾಕಿಕೊಳ್ಳಬೇಡ ಎಂದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೆರಡನೆಯ ಕಂತು ನಿಮ್ಮ ಓದಿಗೆ

read more
ಅರಾ ಮಿತ್ರರನ್ನು ಅರಸಿ…: ಎಚ್. ಗೋಪಾಲಕೃಷ್ಣ ಸರಣಿ

ಅರಾ ಮಿತ್ರರನ್ನು ಅರಸಿ…: ಎಚ್. ಗೋಪಾಲಕೃಷ್ಣ ಸರಣಿ

ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಡಿಪಾರ್ಟ್ಮೆಂಟ್ ಇರುತ್ತೆ ಅಂತ ಮೊದಲೇ ತಿಳಿದುಕೊಳ್ಳದ ನನ್ನ ಬುದ್ಧಿಗೆ ಎಕ್ಕಡದಲ್ಲಿ ಬಾರಿಸಬೇಕು ಎಂದುಕೊಂಡು ನೇರ ನಡೆದೆ. ಎಡಕ್ಕೆ ತಿರುಗಿದೆ. ಅಲ್ಲಿ ಕನ್ನಡ ವಿಭಾಗ ಅಂತ ಬೋರ್ಡ್ ಕಾಣಿಸಲಿಲ್ಲ. ತೆರೆದ ಬಾಗಿಲು, ಒಳಗಡೆಯಿಂದ ನಗುವಿನ ಪ್ರವಾಹ ಹರಿದು ಬರುತ್ತಿತ್ತು, ಜತೆಗೆ ಕನ್ನಡದಲ್ಲಿ ಮಾತು ಮಾತು. ರೂಮಿನ ಒಳಗೆ ನಡೆದೆ. ಮೂರು ಜನ ಟೇಬಲ್ಲಿನ ಆಕಡೆ ಇಬ್ಬರು ಈಕಡೆ ಒಬ್ಬರು ಕೂತಿದ್ದರು. ಮೂರೂ ಜನ ಸೂಟು ಟೈ ಧಾರಿಗಳು! ಅದರಿಂದ ಗುಂಪಿನಲ್ಲಿ ಮಿತ್ರ ಸಾರ್ ಇಲ್ಲ ಎನ್ನುವುದು ಖಚಿತ ಆಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೬ನೇ ಬರಹ ನಿಮ್ಮ ಓದಿಗೆ

read more
ಒಡಪು ಗೌರಮ್ಮ ಮತ್ತು ಆಕಿ: ಸುವರ್ಣ ಚೆಳ್ಳೂರು ಸರಣಿ

ಒಡಪು ಗೌರಮ್ಮ ಮತ್ತು ಆಕಿ: ಸುವರ್ಣ ಚೆಳ್ಳೂರು ಸರಣಿ

ಆ ದಾರಿಯೊಳಾಗ ನಡಕೊಂತ ಹೋಗೊದಂದ್ರ ಅದೊಂಥರಾ ಸಮಾಧಾನ ಅನ್ಸೋದು, ಆಕಡೆ ಈಕಡಿಗೆ ಹಸರು, ಗಿಡಗಳು ಅದರಾಗೂ ಹುಂಚಿ ಹೂವು ಬಿಟ್ಟಾಗ ಅದನ್ನ ಹರದು ತಿನ್ನಾಕ ಇನ್ನಷ್ಟು ಖುಷಿ ಆಗ್ತಿತ್ತು. ಆ ದಾರಿ ನಡಕ ಹೋದಾಗೆಲ್ಲಾ ಆ ಒಡಪಿನ ಕಟ್ಟಿ ಕಾಣ್ತಿತ್ತು. ಊರು ಬಿಟ್ಟು ದೂರ ಇದ್ದ ಆ ಕಟ್ಟಿ ಹತ್ರ ಗೌರಮ್ಮಜ್ಜಿ ಯಾವಾಗಲೂ ಇರ್ತಿದ್ಲು. ಆಕಿಗೆ ಗೊತ್ತಿರುವಷ್ಟು ಒಡಪುಗಳು ಆ ಊರಿನ್ಯಾಗ ಯಾರಿಗೂ ಗೊತ್ತಿರ್ಲಿಲ್ಲ, ಊರಾಗ ಯಾವ್ದನ ಮದುವಿ ಆದ್ರ ಅಕಿನ ಎಲ್ಲಾರೂ ಕರಿತಿದ್ರು, ಹಂಗಾಗಿ ಆಕಿ ಒಡಪು ಗೌರಮ್ಮ ಅಂತ ಕರಿತಿದ್ರು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಹನ್ನೊಂದನೆಯ ಬರಹ

read more
ಕೆಂದಲೆ ಗಿಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೆಂದಲೆ ಗಿಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಗಿಳಿಗಳು ಗೂಡುಗಳನ್ನು ನಿರ್ಮಿಸುವುದಿಲ್ಲ, ಮರದ ಒಣ ಕಾಂಡಗಳಲ್ಲಿ ಅಥವಾ ಹಳೆಯ ಗೋಡೆಗಳಲ್ಲಿ, ಕೊರೆದ ತೂತುಗಳೊಳಗೆ ಗುಂಪಾಗಿ ಗೂಡು ಕಟ್ಟುತ್ತವೆ. ಸಂತಾನೋತ್ಪತ್ತಿ ಮತ್ತು ವಾಸ, ಎರಡನ್ನೂ ಗಿಳಿಗಳು ಮರದ ಪೊಟರೆಯಲ್ಲಿಯೆ ನಡೆಸುತ್ತವೆ. ಈ ಅವಧಿಯಲ್ಲಿ, ಹೆಣ್ಣು ಗಿಳಿಗಳು 2-8 ಅಚ್ಚ ಬಿಳಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗೆ 17-20 ದಿನಗಳ ಕಾಲ, ಕಾವು ಕೊಡುವ ಇಡೀ ಕೆಲಸವನ್ನು ಹೆಣ್ಣು ಹಕ್ಕಿಯೇ ನಿರ್ವಹಿಸುತ್ತದೆ. ಆ ಸಮಯದಲ್ಲಿ ಗಂಡು ತನ್ನ ಸಂಗಾತಿಗೆ ಆಹಾರ ತಂದೊದಗಿಸುವುದು.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೆಂದಲೆ ಗಿಳಿ ಕುರಿತ ಬರಹ ಇಲ್ಲಿದೆ

read more
ಆಡೂ ಆಟ ಆಡೂ…: ಬಸವನಗೌಡ ಹೆಬ್ಬಳಗೆರೆ ಸರಣಿ

ಆಡೂ ಆಟ ಆಡೂ…: ಬಸವನಗೌಡ ಹೆಬ್ಬಳಗೆರೆ ಸರಣಿ

ಒಳಾಂಗಣ ಆಟವಾಗಿ ಹುಣಸೇ ಬೀಜಗಳನ್ನು ಗೆಲ್ಲುವ ಆಟವಾಡಿ ಬೀಜಗಳನ್ನು ಆಡುತ್ತಿದ್ದೆವು. ಆಗ ಹುಣಸೇಬೀಜಗಳನ್ನು ಕೊಂಡುಕೊಳ್ಳುವವರು ಮನೆ ಮನೆಗೆ ಬರುತ್ತಿದ್ದರಿಂದ ಅವರು ಕೊಡುತ್ತಿದ್ದರಿಂದ ಚಿಲ್ಲರೆ ಕಾಸಿಗೆ ಆಸೆಪಟ್ಟು ಹುಣಸೇಬೀಜಗಳನ್ನು ಗೆಲ್ಲುವುದನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತಿದ್ದೆವು. ಆದರೆ ಗೋಲಿಯಾಟ ಆಡಿ ಗೋಲಿಗಳನ್ನು ಗೆಲ್ಲುವುದೂ ಸಹ ಪ್ರತಿಷ್ಟೆಯ ವಿಷಯ ಎನಿಸಿಕೊಳ್ಳುತ್ತಿತ್ತಾದರೂ ಗೆದ್ದ ಗೋಲಿಗಳಿಂದ ಒಂದು ರೂಪಾಯಿಯೂ ಲಾಭವಿರಲಿಲ್ಲ. ಚೌಕಾಬಾರ ಆಡಲು ಕವಡೆಗಳನ್ನು ಕೆಲವರು ಬಳಸುತ್ತಿದ್ದರಾದರೂ ನಾವು ಹುಣಸೆಬೀಜಗಳನ್ನು ತೇದುಕೊಂಡೇ ಅವನ್ನೇ ಬಳಸಿಕೊಂಡು ಆಡುತ್ತಿದ್ದೆವು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೊಂದನೆಯ ಕಂತು ನಿಮ್ಮ ಓದಿಗೆ

read more
ಹಾಸ್ಯೋತ್ಸವದ ಚಾಲನೆ…: ಎಚ್. ಗೋಪಾಲಕೃಷ್ಣ ಸರಣಿ

ಹಾಸ್ಯೋತ್ಸವದ ಚಾಲನೆ…: ಎಚ್. ಗೋಪಾಲಕೃಷ್ಣ ಸರಣಿ

ಮಿಡಲ್ ಬರಹಗಾರರ ಗುಂಪು ಒಂದು ಶುರು ಮಾಡುವ ಐಡಿಯಾ ನಮ್ಮಲ್ಲಿ ಬಿತ್ತಿದರು. ಇದು ನಂತರ ಮಿಡಲ್ ಬದಲಿಗೆ ಹಾಸ್ಯಬರಹಗಾರರ ಸಂಘಟನೆ ಆಗಲಿ ಅಂತ ನಿರ್ಧಾರ ಆಯಿತು. ಹಿಂದೆ ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆ ಆರಂಭಿಸಿದಾಗ ಶ್ರೀ ಆನಂದರಾಮ ಶಾಸ್ತ್ರಿ ಅವರು ನೀತಿ ನಿಯಮ ರೂಪಿಸಿದ್ದರು ಅಂತ ಹೇಳಿದ್ದೆ. ಇದಕ್ಕೂ ಅವರೇ ಆರಂಭಿಕ ಪತ್ರಗಳು ಸಿದ್ಧ ಮಾಡಿದರು. ಇದಕ್ಕೆ ಬೇಕಾದ ನಮ್ಮ ಮೀಟಿಂಗ್‌ಗಳು ಬೆಂಗಳೂರಿನ ಸಂಗಮ್ ಟಾಕೀಸ್ ಮುಂದೆ ಸೇರಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೫ನೇ ಬರಹ ನಿಮ್ಮ ಓದಿಗೆ

read more
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು: ಸುವರ್ಣ ಚೆಳ್ಳೂರು ಸರಣಿ

ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು: ಸುವರ್ಣ ಚೆಳ್ಳೂರು ಸರಣಿ

ಆಕಾಶದಾಗಿನ ಸಾಲು ಚುಕ್ಕಿ ನೋಡಿ ನಾನು ನಿದ್ದಿಗೆ ಜಾರಿದೆ.‌ ಮುಂಜೆನೆದ್ದಾಗ ಹೊಲದಾಗ ಮಂಜುಮಂಜಾಗಿತ್ತು, ಬೆಳ್ಳಕ್ಕಿ ಅದಾಗಲೇ ಎದ್ದು ಹೊಲದಾಗ ಹಾರಾಡಿಕ್ಯಂತ ಹೊಲದಿಂದ ಹೊಲಕ್ಕ ಹೊಂಟಿದ್ವು. ನಾನು ಮತ್ತ ಲಕ್ಷ್ಮಮ್ಮತ್ತಿ ಎದ್ದು ಮನಿ ದಾರಿ ಹಿಡದ್ವಿ. ಬೆಳಗಾ ಮುಂಜೇಲೆ ಹೊಲದ ದಾರಿ ಅದೊಂಥರಾ ಯಾವುದೊ ಚಿತ್ರ ಕಂಡಂಗ ಕಾಣತಿತ್ತು, ಆಕಡೆ ಇಕಡೆ ಹಸರು, ಅಲ್ಲಲ್ಲಿ ಹೊಲದಾಗಿದ್ದ ಒಂಟಿಮರ ಅದಕ್ಕಿದ್ದ ಮುಳ್ಳುಗಳು, ಹೊಲದಗುಂಟ ಹರಿತಿದ್ದ ಸಣ್ಣ ಕಾಲುವೆ ಅದರ ದಂಡಿಗಿದ್ದ ಸಮುದ್ರ ಬಾಳೆ ಹೂವು, ಸರ್ಕಾರ್ ಕಳ್ಳಿ ಇವೆಲ್ಲಾ ಆ ಹೊಲದ ಹಾದಿಗೆ ಬಿಡಿಸಿರೊ ಚಿತ್ರಗಳಿದ್ದಂಗ ಇದ್ವು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

read more
ಕಾಡುಕೋಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕಾಡುಕೋಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಇನ್ನು ಈ ಕಾಡುಕೋಳಿಗಳನ್ನು ಸಾಕಿ ಬೆಳೆಸುವುದು ಅಸಾಧ್ಯ ಎನ್ನುವುದು ನಿಮಗೆ ತಿಳಿದೇ ಇದೆ. ಹಾಗಿರುವಾಗ ಕೋಳಿಗಳನ್ನು ಸಾಕಿ ಬೆಳೆಸುತ್ತಾರಲ್ಲ ಅದು ಹೇಗೆ ಎಂದು ನೀವು ಕೇಳಬಹುದು. ಗೂಡಿನಲ್ಲಿ ಸಾಕಿ ಬೆಳೆಸುವ ಕೋಳಿಗಳು, ಕೆಂಪು ಕಾಡುಕೋಳಿ ಎಂಬ ಮತ್ತೊಂದು ಪ್ರಭೇದದ ಪಕ್ಷಿ. ಕೆಂಪು ಕಾಡುಕೋಳಿಗಳು ಭಾರತದ ಉತ್ತರ ಮತ್ತು ಪೂರ್ವ ಭಾಗದಲ್ಲಿರುವ ರಾಜ್ಯಗಳ ಹಾಗೂ ಪೂರ್ವ ಏಶಿಯಾ ದೇಶಗಳ ಕಾಡುಗಳಲ್ಲಿ ಮಾತ್ರ ಕಂಡುಬರುವ ಹಕ್ಕಿಗಳು. ಸುಮಾರು 8-10 ಸಾವಿರ ವರ್ಷಗಳಿಂದಲೂ, ಪ್ರಪಂಚದ ನೂರಾರು ದೇಶಗಳಲ್ಲಿ, ಮೊಟ್ಟೆ ಹಾಗೂ ಮಾಂಸಕ್ಕಾಗಿ ಸಾಕುತ್ತಿರುವುದು ಇದೇ ಕೆಂಪು ಕಾಡುಕೋಳಿಗಳನ್ನು ಎಂದರೆ ನಿಮಗೆ ಆಶ್ಚರ್ಯವಾಗಬಹುದು!
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ

read more
ಗಣೇಶ ಮೂರ್ತಿಯ ಗಿಫ್ಟ್ ಮಹಿಮೆ…: ಬಸವನಗೌಡ ಹೆಬ್ಬಳಗೆರೆ ಸರಣಿ

ಗಣೇಶ ಮೂರ್ತಿಯ ಗಿಫ್ಟ್ ಮಹಿಮೆ…: ಬಸವನಗೌಡ ಹೆಬ್ಬಳಗೆರೆ ಸರಣಿ

ಒಮ್ಮೆ ವೈದ್ಯರ ಬಳಿ ನಮ್ಮ ಕಂಪೆನಿಯ ಬಗ್ಗೆ ಹೆಚ್ಚಿಗೆ ಹೇಳಲು ಹೋಗಿ ಅವರಿಂದ ಉಗಿಸಿಕೊಂಡಿದ್ದೆ. ಚಿಕ್ಕವನಿದ್ದಾಗಿಂದಲೂ ನಾನು ಮತ್ತೊಬ್ಬರಿಂದ ಹೇಳಿಸಿಕೊಳ್ಳುವುದಾಗಲಿ, ಬಯ್ಯಿಸಿಕೊಳ್ಳುವ ಕೆಲಸ ಮಾಡಿರಲಿಲ್ಲ. ಒಂದೊಮ್ಮೆ ಈ ಕೆಲಸದಲ್ಲಿ ಯಾರಾದ್ರೂ ಏನಾದ್ರೂ ಅಂದರೆ ಕೆಲಸವನ್ನು ಬಿಟ್ಟು ಹೋಗುವಷ್ಟು ಸಿಟ್ಟು ಬರುತ್ತಿತ್ತು. ಆದರೆ ನನಗೆ ಜೀವನದಲ್ಲಿ ಸೆಟ್ಲ್ ಆಗಬೇಕೆಂಬ ಮನೋಭಿಲಾಶೆ ಇದ್ದುದರಿಂದ ಎಷ್ಟೇ ಒತ್ತಡ ಬಂದರೂ ನಾನು ಸಹಿಸಿಕೊಳ್ಳುತ್ತಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತನೆಯ ಕಂತು ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ