Advertisement

ಸಾಹಿತ್ಯ

ಪೂರ್ಣಿಮಾ ಭಟ್ಟ ಸಣ್ಣಕೇರಿ ಬರೆದ ಈ ಭಾನುವಾರದ ಕತೆ “ರಸಮಲಾಯಿ”

ಪೂರ್ಣಿಮಾ ಭಟ್ಟ ಸಣ್ಣಕೇರಿ ಬರೆದ ಈ ಭಾನುವಾರದ ಕತೆ “ರಸಮಲಾಯಿ”

ಅವನ ಮನೆಯಿಂದ ಹೊರಬಿದ್ದು ಆಫೀಸಿಗೆ ನುಗ್ಗಿ ಕಂದಸ್ವಾಮಿ ಸಾವ್ಕಾರ್ರನ್ನ ಭೇಟಿ ಮಾಡಲು ಕೇಳಿಕೊಂಡಳು. ಮ್ಯಾನೇಜರ್ ಸೀಟಿನಲ್ಲಿ ಕೂತ ಕಂದಸ್ವಾಮಿ ಎಲ್ಲವನ್ನೂ ಆಲಿಸಿದ. ಎರಡು ಬಾರಿ ಅನಿಮೇಶನಿಗೆ ಫೋನ್ ಮಾಡಿದರೂ ಅವನು ಫೋನ್ ಎತ್ತಲಿಲ್ಲ. ‘ನಿಂಗಾಗಿದ್ದು ಅನ್ಯಾಯ ಭಾಗಿ. ನಾನು ಇದನ್ನ ನ್ಯಾಯಯುತವಾಗೇ ಬಗೆಹರಿಸುತ್ತೇನೆ. ನಿನ್ನ ತಮ್ಮ ಬೇರೆ ಅನಾಹುತ ಕೆಲಸಗಾರ.
ಪೂರ್ಣಿಮಾ ಭಟ್ಟ ಸಣ್ಣಕೇರಿ ಬರೆದ ಈ ಭಾನುವಾರದ ಕತೆ “ರಸಮಲಾಯಿ” ನಿಮ್ಮ ಓದಿಗೆ

read more
ಚಂದ್ರಶೇಖರ್‌ ಡಿ. ಆರ್.‌ ಬರೆದ ಈ ಭಾನುವಾರದ ಕತೆ

ಚಂದ್ರಶೇಖರ್‌ ಡಿ. ಆರ್.‌ ಬರೆದ ಈ ಭಾನುವಾರದ ಕತೆ

“ಈ ಘಟನೆಯಲ್ಲಿ ತಪ್ಪು ಅಂತ ಏನಾದರೂ ಇದ್ರೆ ಅದು ಒಬ್ಬರ ಖಾಸಗಿತನದ ಪರಿಧಿ ದಾಟಿ ನುಗ್ಗಿ ವಿಡಿಯೋ ಮಾಡಿದವರದ್ದು. ಅದು ನೈತಿಕವಾಗಿ ಅಷ್ಟೆ ಅಲ್ಲ ಕಾನೂನಾತ್ಮಕವಾಗಿಯೂ ತಪ್ಪು ಹಾಗೂ ಅಪರಾಧ. ಹೀಗಿದ್ದೂ ತಪ್ಪು ಮಾಡದೇ ಇರವವರೊಬ್ಬರನ್ನ ಪಿಜಿಯಿಂದ ಹೊರಗೆ ಹಾಕ್ತಿವಿ ಅಂತ ಬೆಂಕಿಗೆ ದೂಡಿದ್ದು ಆ ವಾರ್ಡನ್ ತಪ್ಪು. ಆ್ಯಕ್ಚುಲಿ ನಿಜ ಹೇಳಬೇಕೆಂದರೆ ಇವರು ನಮ್ಮ ನಿಮ್ಮ ಕೋಪಕ್ಕೆ ಅರ್ಹರು.”
ಚಂದ್ರಶೇಖರ್‌ ಡಿ. ಆರ್.‌ ಬರೆದ ಈ ಭಾನುವಾರದ ಕತೆ “ಪ್ರೈವೆಸಿ” ನಿಮ್ಮ ಓದಿಗೆ

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮೀನಾ ಮೈಸೂರು ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮೀನಾ ಮೈಸೂರು ಕತೆ

ಅವನ ಮಾತುಗಳು ನನ್ನೋಳಗೆ ನಡುಕ ತಂದವು, ತಲೆ ಗಿಮ್ಮೆಂದಿತು. “ಇಲ್ಲ ಇಲ್ಲ…. ನನ್ನ ಮಗನನ್ನು ನಾನು ಕೊಲ್ಲುವುದಿಲ್ಲ” ನೆಲದಲ್ಲಿ ಬಿದ್ದು ಹೊರಳಡಿದೆ. “ರೀಟಾ ಸಮಾಧಾನ ಮಾಡಿಕೊ. ನೀನು ಹೀಗೆ ವೃಥಾ ಭಾವುಕಳಾದರೆ ನಾನೇನೂ ಮಾಡಲು ಸಾಧ್ಯವಿಲ್ಲ. ಆದರೆ… ಮುಂದಾಗಬಹುದಾದ ಭೀಕರ ಪರಿಣಾಮವನ್ನು ಎದುರಿಸಲು ಸಿದ್ಧಳಾಗು” “ಅವನ ಬದಲು ನಾನೇ ಸಾಯುತ್ತೇನೆ, ಅವನನ್ನು ಮಾತ್ರ ಕೊಲ್ಲುವುದಿಲ್ಲ” ಅತ್ತು ರಂಪ ಮಾಡಿದೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮೀನಾ ಮೈಸೂರು ಬರೆದ ಕತೆ “ಇತಿ ವೃತ್ತಾಂತ” ನಿಮ್ಮ ಓದಿಗೆ

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಯಕ ಚಳ್ಳೂರು ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಯಕ ಚಳ್ಳೂರು ಕತೆ

ಅಪ್ಪ ಒಂದುಕಟ್ಟು ಬೀಡಿ ಮುಗಿಸಿದ್ದ. ಆತ ಎದ್ದು ಇನ್ನೂ ಬಾರಕೋಲು ತಗೊಂಡಿರಲಿಲ್ಲ, ನಾನೂ, ಸಾಂತ ಕೀಲಿಕೊಟ್ಟ ಗೊಂಬೆಗಳಂತೆ ಹೊಯ್ಕೊಳ್ಳಕೆ ಶುರು ಮಾಡಿದೆವು. ಅಪ್ಪನ ಸಿಟ್ಟು ನಮ್ಮ ಮೇಲೆ ವರ್ಗಗೊಂಡಿತು. ಇಬ್ಬರ ಬೆನ್ನಿಗೊಂದೊಂದು ಜೋರಾಗಿ ಗುದ್ದುಕೊಟ್ಟ. ನನಗಂತು ಅಳಲಿಕ್ಕೆ ಉಸುರು ಇಲ್ಲದಂಗಾಗಿತ್ತು. ಅವ್ವ ಅವತ್ತು ಉದಗಳ್ಳಿ ತಗಂಡು ಬೀಸಿದಳು ಅಪ್ಪನಿಗೆ. ಆತನ ಮೊಣಕಾಲಿಗೊಂದು ಗಿಚ್ಚ ಕುಂತಿತು. ಧಾರಾಕಾರ ರಕ್ತ ಸುರಿಯತೊಡಗಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಯಕ ಚಳ್ಳೂರು ಬರೆದ ಕತೆ “ವಜ್ರಮುನಿ”

read more
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ರಾತ್ರಿ ಕಳೆದು ಬೆಳಗಾಯಿತು. ಸುದ್ದಿ ಇಲ್ಲ. ಶಾಲೆಗೆ ಮಾಲೀಕರು ಬಂದರು. ಸಿ ಈ ಓ, ಡ್ರೈವರ್, ಆಯಾಗಳ ಮೀಟಿಂಗ್ ನಡೆಯಿತು. ಹೆಚ್ಚಿನ ವಿಷಯ ತಿಳಿಯಲಿಲ್ಲ. ಆದರೆ ಎಲ್ಲರೂ “ಅವರಿಬ್ಬರ ನಡುವೆ ಏನೋ ನಡೆಯುತ್ತಿತ್ತು. ಅವಳು ಬಲೆ ಪಾಕಡ…” ಎಂದು, ಕೆಲವರು ‘ಮಹದೇವ ಗುಮ್ಮನ ಗುಸಕ.. ಸೈಲೆಂಟಾಗಿ ಇದ್ದು ಹಿಂಗ್ ಮಾಡ್ಬಿಟ್ಟ’ ಹೀಗೆ… ತರಹೇವಾರಿ ಮಾತುಗಳು.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ಇದು ಎಂಥಾ ಲೋಕವಯ್ಯ..” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

read more
ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಸಹಜೀವನ”

ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಸಹಜೀವನ”

ಮನಸ್ಸನ್ನು ಹಂಚಿಕೊಳ್ಳುವುದು, ಕನಸನ್ನು ಹಂಚಿಕೊಳ್ಳುವುದು, ಬದುಕನ್ನು ಹಂಚಿಕೊಳ್ಳುವುದು, ಬದುಕಿನ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು’- ಪ್ರಚೇತನನ ಪಾಲಿಗೆ ಅಪರಿಚಿತವಾಗಿದ್ದ ಈ ಚಿಂತನೆ ಆತನ ಚಿತ್ತಭಿತ್ತಿಯಲ್ಲಿ ಮತ್ತೆ ಮತ್ತೆ ಅನುರಣಿಸತೊಡಗಿತು. ಪ್ರಣತಿಯನ್ನು ಬಿಟ್ಟುಬರುವ ವಾರದಲ್ಲಿ ತಾನು ಅನಾರೋಗ್ಯಕ್ಕೀಡಾದಾಗ ಕಡಿದುಹೋಗುವ ಸಂಬಂಧ ತಮ್ಮದೆಂದು ಮನದಟ್ಟಾದ ಬಳಿಕವೂ ಆಕೆ ತನ್ನನ್ನು ಉಪಚರಿಸಿದ ರೀತಿ, ವಹಿಸಿದ ಅತೀವ ಕಾಳಜಿ ಪ್ರಚೇತನನಿಗೆ ಈಗ ನೆನಪಾಯಿತು.
ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಕತೆ “ಸಹಜೀವನ”

read more
ಪ್ರಶಾಂತ್ ಬೆಳತೂರು ಬರೆದ ಈ ಭಾನುವಾರದ ಕತೆ

ಪ್ರಶಾಂತ್ ಬೆಳತೂರು ಬರೆದ ಈ ಭಾನುವಾರದ ಕತೆ

ಲೋಲಿ ಮಾತ್ರ ತನ್ನ ಭಾವ ದೇವರೆಂದು ಅವನಿಲ್ಲದಿದ್ದರೆ ಈ ಮನೆ ಎಂದೋ ಸರ್ವನಾಶವಾಗಿ ಬಿಡುತ್ತಿತ್ತೆಂದೂ, ಮನೆಗೆ ಕೊಡಲಿ ಮಿತ್ತಾದ ಗಂಡನ ಹಾವಳಿಯಿಂದ ತಾನು ಪಟ್ಟ ಪರಿಪಾಟಲುಗಳನ್ನೆಲ್ಲಾ ಹೇಳುತ್ತಾ ಗಂಡ ತೀರಿ ಹೋದ ಮೇಲೆ ಹೆಣ್ಣೆಂಗಸು ಹೇಗೆ ತಾನೇ ಮನೆಯೊಗೆತನ ಮಾಡುತ್ತಾಳೆ?
ಪ್ರಶಾಂತ್‌ ಬೆಳತೂರು ಬರೆದ ಈ ಭಾನುವಾರದ ಕತೆ “ಹಂದಿಕಾಳನ ಸಿಂಗಿಯೂ..ಮತ್ತವನ ರಾಜಪರಿವಾರವೂ..!”

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ

ಹಸಿದ ಹೊಟ್ಟೆಗಳನ್ನು ಹೊತ್ತುಕೊಂಡು ಪಕ್ಕೂ ಮಾಡಿದ ರೇಜಿಗೆಯಿಂದ ದಿಗಿಲುಗೊಂಡವರು ಫುಟ್‌ಪಾತಿನ ಮೇಲೆ ಕೂರುತ್ತಿದ್ದಂತೆ ತಾವು ತಂದಿದ್ದ ರೊಟ್ಟಿ ಗಂಟುಗಳನ್ನು ಬಿಚ್ಚಿ ತಿನ್ನತೊಡಗಿದರು. ದಾಜಿ ಧೋಂಡಿಬಾನ ಅಂಗಡಿ ಪಕ್ಕದ ಮನೆಯಿಂದ ನೀರಿನ ವ್ಯವಸ್ಥೆ ಮಾಡಿದ. ಒಂದಿಷ್ಟು ಗಂಡಸರು ಊಟ ಒಲ್ಲದೆ ಸಿಗರೇಟು, ಎಲೆ ಅಡಿಕೆ ತಂಬಾಕುಗಳ ತಲುಬಿಗೆ ಶರಣೆಂದರು. ಸಣ್ಣ ಮಕ್ಕಳು ತಮ್ಮ ಅವ್ವ ಅಪ್ಪಂದಿರರಿಂದ ದುಡ್ಡು ಇಸಿದುಕೊಂಡು ಭೈಯ್ಯಾನ ಸ್ವೀಟ್ ದುಕಾನಿನಿಂದ ಸೇವು, ಉಂಡಿ, ಮೈಸೂರ ಪಾಕ್, ಭಜಿ, ಮೊದಲಾದ ತಿಂಡಿಗಳನ್ನು ಖರೀದಿಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ “ಒಂದು ಪಯಣ ಪ್ರಸಂಗ”

read more
ಅಶೋಕ ತಾರದಾಳೆ ಬರೆದ ಈ ಭಾನುವಾರದ ಕತೆ “ಓನ್ಯಾಸಿ”

ಅಶೋಕ ತಾರದಾಳೆ ಬರೆದ ಈ ಭಾನುವಾರದ ಕತೆ “ಓನ್ಯಾಸಿ”

ಮಗುವಿಗೆ ಒಂದು ವರ್ಷ ತುಂಬಿದಾಗ ಮಾತನಾಡಲು ಶುರುಮಾಡಿತು. ಅವಳು ತನ್ನ ಮಗು ಅಮ್ಮ ಎನ್ನಲಿ ಎಂದು ಕಾಯುತ್ತಿದ್ದಳು. ಆದರೆ ಅದು “ಓನ್ಯಾಸಿ” ಎನ್ನತೊಡಗಿತು. ಇದ್ಯಾವ ಶಬ್ದ, ಭಾಷೆ ಎಂದು ಅವಳಿಗೆ ತಕ್ಷಣ ಹೊಳೆಯಲಿಲ್ಲ. ತನ್ನ ನೆನಪುಗಳನ್ನು ಹರವಿ ಪರಿಶೀಲಿಸಿದಾಗ ಅದು ರಾಜೀವ್ 747 ಅವಳಿಗೆ ಹೇಳಿದ ಮೊದಲ ಪದವಾಗಿತ್ತು. ನಾನೇ ಹೆತ್ತು ಹೊತ್ತು ಸಾಕಿದರೂ ಅವನ ಭಾಷೆ ಮಾತನಾಡುತ್ತಿದೆಯಲ್ಲ ಎಂದು ಅವಳಿಗೆ ದುಃಖವಾಯಿತು, ಸಿಟ್ಟೂ ಬಂತು.
ಅಶೋಕ ತಾರದಾಳೆ ಬರೆದ ಈ ಭಾನುವಾರದ ಕತೆ “ಓನ್ಯಾಸಿ”

read more

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ