Advertisement

ಅಂಕಣ

ಬದುಕಿನ ರಾಗದ ಅವರೋಹಣ – ವೃದ್ಧಾಪ್ಯವೆಂಬ ಜೀವನಪದವಿ!: ಡಾ. ಎಲ್.ಜಿ. ಮೀರಾ ಅಂಕಣ

ಬದುಕಿನ ರಾಗದ ಅವರೋಹಣ – ವೃದ್ಧಾಪ್ಯವೆಂಬ ಜೀವನಪದವಿ!: ಡಾ. ಎಲ್.ಜಿ. ಮೀರಾ ಅಂಕಣ

ಸಾಮಾನ್ಯವಾಗಿ, ಬದುಕಿನ ಈ ಹಂತದ ಸಕಾರಾತ್ಮಕ ಚಿತ್ರಣವು ಅದೃಶ್ಯವಾಗಿರುತ್ತೆ ಅಥವಾ ನಕಾರಾತ್ಮಕವಾಗಿರುತ್ತೆ. ಇದರಿಂದಾಗಿ ಈ ಜೀವನದ ಬಗ್ಗೆ ಯೋಜನೆ, ಯೋಚನೆ, ಪೂರ್ವಚಿಂತನೆಗಳು ಸರಿಯಾಗಿ ನಡೆಯುವುದಿಲ್ಲ. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿ ಆದ ಅದ್ಭುತ ಮುನ್ನಡೆಗಳಿಂದಾಗಿ ಮಾರಾಣಾಂತಿಕ ರೋಗಗಳಿಂದ ಮನುಕುಲವು ಮುಕ್ತಿ ಪಡೆದುಕೊಂಡು, ಮನುಷ್ಯನ ಸರಾಸರಿ ಆಯುಸ್ಸು ಹೆಚ್ಚಿ, ತಮ್ಮ 60ನೇ ವಯಸ್ಸಿನಲ್ಲಿ ವೃತ್ತಿಯಿಂದ ನಿವೃತ್ತಿಗೊಂಡ ಮೇಲೂ ಜನರು ಸುಮಾರು 20ರಿಂದ 40 ವರ್ಷಗಳ ತನಕ ಬದುಕುತ್ತಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತನೆಯ ಬರಹ

read more
ಕನ್ನಡ ಸಿನಿಮಾದ ನಿಜವಾದ ‘ಹೊಸ ಹೆಣ್ಣು’ ಹುಟ್ಟಿದ್ದು ತ್ರಿವೇಣಿಯ ‘ಬೆಳ್ಳಿಮೋಡ’ದಲ್ಲಿ: ಸುಕನ್ಯಾ ಕನಾರಳ್ಳಿ ಅಂಕಣ

ಕನ್ನಡ ಸಿನಿಮಾದ ನಿಜವಾದ ‘ಹೊಸ ಹೆಣ್ಣು’ ಹುಟ್ಟಿದ್ದು ತ್ರಿವೇಣಿಯ ‘ಬೆಳ್ಳಿಮೋಡ’ದಲ್ಲಿ: ಸುಕನ್ಯಾ ಕನಾರಳ್ಳಿ ಅಂಕಣ

ಲೀಲಾಳ ಅಣ್ಣ ಈಗ ಮಧ್ಯ ಪ್ರವೇಶಿಸಿ ಕುಟುಂಬವೆಂಬ ಸಂಸ್ಥೆಯ ‘ಸಹಜತೆ’ಯನ್ನು ಮರಳಿಸುವ ಪ್ರಯತ್ನ ಮಾಡುತ್ತಾನೆ. ಎಲ್ಲದಕ್ಕೂ ತನ್ನ ಅಪ್ಪನೇ ಕಾರಣ ಎಂದು ದೂರುತ್ತಾನೆ. ಸಾಯುವ ಮುನ್ನ ಲೀಲಾ ತನ್ನ ತಾಯಿಯನ್ನು ಕಾಣುವ ಹಂಬಲದಲ್ಲಿ ಕೊರಗುತ್ತಾಳೆ. ಅಪ್ಪ ತಾನು ಮಾಡಿದ ತಪ್ಪಿನ ಅರಿವಾಗಿ ಹುಚ್ಚು ಹಿಡಿದು ಬೀದಿ ಬೀದಿ ಅಲೆಯುತ್ತಾ ಕೊನೆಯ ಉಸಿರೆಳೆಯುತ್ತಾನೆ. ಲೀಲಾಳ ಅಣ್ಣ ಅತ್ತಿಗೆ ಮಕ್ಕಳೆಲ್ಲರೂ ‘ಒಳ್ಳೆಯ’ ಕುಟುಂಬದಲ್ಲಿ ಬದುಕಬೇಕು ಎಂದು ನೀತಿಪಾಠ ಹೇಳುವುದರೊಂದಿಗೆ ಚಿತ್ರ ಮುಗಿಯುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೊಂದನೆ ಬರಹ

read more
ಎಲ್.ಎನ್.‌ ಮುಕುಂದರಾಜ್‌ ಕವಿತೆ ಮತ್ತು ಸಮಾಜ: ಜಯಲಕ್ಷ್ಮಿ ಪಾಟೀಲ್ ಅಂಕಣ

ಎಲ್.ಎನ್.‌ ಮುಕುಂದರಾಜ್‌ ಕವಿತೆ ಮತ್ತು ಸಮಾಜ: ಜಯಲಕ್ಷ್ಮಿ ಪಾಟೀಲ್ ಅಂಕಣ

ಮುಕುಂದರಾಜ್ ಅವರು ಈ ಕವನವನ್ನು ಬರೆದು ದಶಕಗಳೇ ಕಳೆದಿರಬಹುದು. ಆದರೆ ಸಮಾಜ, ಮನುಷ್ಯನ ಬುದ್ಧಿ, ಸ್ವಭಾವ ಮಾತ್ರ ಅವತ್ತಿಗೂ ಇವತ್ತಿಗೂ ಯಾವತ್ತಿಗೂ ಬದಲಾಗದು ಎನ್ನುವುದನ್ನು ‘ದಾರಿಯುದ್ದಕ್ಕು’ ಕವನ ತುಂಬಾ ಸಮರ್ಥವಾಗಿ ಬಿಂಬಿಸುತ್ತದೆ. ಈ ಕವಿತೆಯನ್ನು ಓದಿದ ಕೂಡಲೇ ಮುಂದಿನ ಕವಿತೆ ಓದುತ್ತೇನೆ ಎಂದರೆ ಅದು ಸಾಧ್ಯವಾಗದು. ಇದರೊಳಗೆ ಅಡಗಿದ ಅಸಹಾಯಕತೆ, ಮಾರ್ಮಿಕತೆ ಮತ್ತೆ ಮತ್ತೆ ಓದುವಂತೆ ಮಾಡುತ್ತದೆ. ಇಡೀ ಕವಿತೆ ಸರ್ರಿಯಲಿಸಂನ ಜೊತೆಗೆ ತುಸು ಗಜಲ್ ಛಾಯೆಯನ್ನೂ ಹೊತ್ತಿರುವುದು ವಿಶೇಷ. ಅಸ್ತಿತ್ವವಾದದ ನೆಲೆಯಲ್ಲಿ ನಾನು ಈ ನವ್ಯ ಕವನವನ್ನು ನೋಡುತ್ತಿದ್ದೇನೆ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

read more
ಒಳಗೆ-ಹೊರಗೆ: ಸುಕನ್ಯಾ ಕನಾರಳ್ಳಿ ಅಂಕಣ

ಒಳಗೆ-ಹೊರಗೆ: ಸುಕನ್ಯಾ ಕನಾರಳ್ಳಿ ಅಂಕಣ

ಮೇಲೆ ಹತ್ತುವ ಪ್ರಯತ್ನದಲ್ಲಿಯೇ ಅದೇನನ್ನು ಹತ್ತಿ ಮೀರಿದರೋ, ಅಂತೂ ಎಲ್ಲ ಕೈದಿಗಳೂ ಕೆಳಗಿಳಿದು ಬಂದರು! ಕೆಳಗಿದ್ದ ಪೊಲೀಸರು ಅಷ್ಟೊತ್ತಿಗೆ ಕಾಫಿ, ನೀರು, ಜ್ಯೂಸ್, ಸಿಗರೇಟು ಇತ್ಯಾದಿಗಳಿಗೆ ಅಲ್ಲಿಲ್ಲಿ ಚೆದುರಿದ್ದರು. ಕೊನೆಗೆ ಕೈದಿಗಳೇ ಹೋಗಿ ಅಲ್ಲಿಲ್ಲಿ ಹುಡುಕಿ ಎಲ್ಲ ಪೊಲೀಸರನ್ನೂ ಕರೆದುತಂದರಂತೆ! ತಪ್ಪಿಸಿಕೊಳ್ಳುವುದಲ್ಲ, ನಮಗೆ ಬಿಡುಗಡೆ ಆದೇಶ ಬಂದಿದ್ದರೂ ಬೇಸರವಾಗುತ್ತಿತ್ತು. ಇನ್ನೆರಡು ದಿನದಲ್ಲಿ ನಮ್ಮ ನಾಟಕದ ಪ್ರದರ್ಶನವಿತ್ತು, ಎಂದು ಆ ಕೈದಿ ಕಥೆಯನ್ನು ಮುಗಿಸಿದರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತನೆ ಬರಹ

read more
ಎಂಜಿ ರೋಡಿನಲ್ಲೊಂದು ಸುತ್ತು: ವಿನಾಯಕ ಅರಳಸುರಳಿ ಅಂಕಣ

ಎಂಜಿ ರೋಡಿನಲ್ಲೊಂದು ಸುತ್ತು: ವಿನಾಯಕ ಅರಳಸುರಳಿ ಅಂಕಣ

ಅದೇನೂ ಭಾರೀ ದೊಡ್ಡ ಪಬ್ಬಲ್ಲದಿದ್ದರೂ ಅಲ್ಲಿ ವೈಭವಗಳಿಗೇನೂ ಕಮ್ಮಿಯಿರಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ಆ ಪಬ್ಬು ಮುಚ್ಚಲ್ಪಟ್ಟು, ಮುಂದೊಮ್ಮೆ ಆ ರಸ್ತೆಯಲ್ಲಿ ಹೋಗುವಾಗ ಮತ್ಯಾವುದೋ ಹೆಸರಿನ ಕಂಪನಿಯೊಂದು ಬೋರ್ಡು ತೊಟ್ಟುಕೊಂಡು ನಿಂತಿರುವುದು ಕಣ್ಣಿಗೆ ಬಿದ್ದಿತ್ತು. ಈ ಮಹಾನಗರಿಯ ಚಂಚಲತೆಯೇ ಅಂಥದ್ದು‌. ನೆನ್ನೆ ಹಳಕಲು-ಪೊದೆಗಳಿದ್ದ ಜಾಗದಲ್ಲಿ ಬೆಳಗಾಗುವಷ್ಟರಲ್ಲಿ ರಂಗ್ ಬಿರಂಗೀ ಕಟ್ಟವೊಂದು ತಲೆಯೆತ್ತಿಬಿಡುತ್ತದೆ. ಮನೆಯಂತೆ ಕಾಣುವ ಬಿಲ್ಡಿಂಗ್ ನೊಳಗೆ ನೂರಿನ್ನೂರು ಉದ್ಯೋಗಿಗಳಿರುವ ಕಂಪನಿಯೇ ಅಡಗಿಕೊಂಡಿರುತ್ತದೆ. ನೆನ್ನೆಯಷ್ಟೇ ಪ್ರಾರ್ಥನಾ ಮಂದಿರವಾಗಿದ್ದು, ಹತ್ತಾರು ಜನರ ಓಂಕಾರದಿಂದ ತುಂಬಿಹೋಗಿದ್ದ ಸಮುಚ್ಚಯವೊಂದು ನಾಳೆಯಾಗುವಷ್ಟರಲ್ಲಿ ಹತ್ತಾರು ಬಾಡಿಬಿಲ್ಡರ್‌ಗಳ ಕಸರತ್ತು ಶಾಲೆಯಾಗಿ ಬದಲಾಗಿಬಿಡುತ್ತದೆ!
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

read more
ಆಸ್ಟ್ರೇಲಿಯಾ-ಭಾರತೀಯರ ಕತೆಗಳ ಜುಗಲ್ ಬಂದಿ: ಡಾ. ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾ-ಭಾರತೀಯರ ಕತೆಗಳ ಜುಗಲ್ ಬಂದಿ: ಡಾ. ವಿನತೆ ಶರ್ಮ ಅಂಕಣ

ಒಮ್ಮೊಮ್ಮೆ ಇಲ್ಲಿ ಬಂದು ಸಂದ ಮೇಲೆ ಅಲ್ಲಿನ ತವರಿಗೆ ಭೇಟಿ ಕೊಟ್ಟಾಗ ಅಲ್ಲೂ ಇಲ್ಲ ಇಲ್ಲೂ ಇಲ್ಲ ಅನ್ನೋ ಎಡಬಿಡಂಗಿತನ ಧುತ್ತನೆ ಎದುರು ನಿಲ್ಲುತ್ತದೆ. ಆದರೆ ಆ ಎಡಬಿಡಂಗಿತನದಲ್ಲಿದೆ ಒಂದಷ್ಟು ನಗು, ಹರ್ಷ, ಉಲ್ಲಾಸ, ಪರಸ್ಪರತೆ, ಜೊತೆಯಾಗುವುದು. ಕುತೂಹಲ ಮೂಡಿಸುವುದು ಕಿರಿವಯಸ್ಸಿನ ಕತೆಗಾರರ ಅನುಭವ ಮೂಸೆಯಲ್ಲಿ ಪರಿಮೂಡುವ ಆಸ್ಟ್ರೇಲಿಯನ್-ಭಾರತೀಯತೆ ಕಲ್ಪನೆ ಮತ್ತು ಹೊಂದಾಣಿಕೆ. ಇವಷ್ಟೇ ಅಲ್ಲ. ಮಧ್ಯಮ ಮತ್ತು ಹಿರಿವಯಸ್ಸಿನ ಕತೆಗಾರರ ದನಿಯಲ್ಲಿ ಚಿತ್ರಿತವಾಗುವ ಹೊಸದೇಶ, ಅಪರಿಚಿತ ಸಮಾಜದ, ಅಲ್ಲಿನ ವ್ಯವಸ್ಥೆಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನಗಳು, ಅವಲ್ಲಿರುವ ಸಾಹಸಗಳು, ಸೋಲು-ಗೆಲುವು, ಆಂತರಿಕ ಒಳನೋಟಗಳು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಕಮಲಾದಾಸ್, ಅನುವಾದ ಹಾಗೂ ಬರಹವೆಂಬ ಬಿಡುಗಡೆ….: ಡಾ. ಎಲ್.ಜಿ. ಮೀರಾ ಅಂಕಣ

ಕಮಲಾದಾಸ್, ಅನುವಾದ ಹಾಗೂ ಬರಹವೆಂಬ ಬಿಡುಗಡೆ….: ಡಾ. ಎಲ್.ಜಿ. ಮೀರಾ ಅಂಕಣ

ಆಧುನಿಕ ಭಾರತೀಯ ಸಾಹಿತ್ಯಚರಿತ್ರೆಯ ಲೇಖಕಿಯರ ಪಟ್ಟಿಯೆಂಬ ಆಕಾಶಗಂಗೆಯಲ್ಲಿ ಎದ್ದು ಕಾಣುವ ಒಂದು ವಿಭಿನ್ನ ನಕ್ಷತ್ರವೆಂದರೆ ಅದು ಕಮಲಾದಾಸ್. ಕೇರಳದ ಮಗಳಾದ ಈ ಹೆಣ್ಣುಮಗಳು ಲೋಕವನ್ನು ಕುರಿತ ತನ್ನ ಸೂಕ್ಷ್ಮ ಗ್ರಹಿಕೆಯಿಂದ ಬೇರೆ ಲೇಖಕ, ಲೇಖಕಿಯರು ಹೋಗಲು ಹೆದರುವ ಭಾವಲೋಕಗಳಿಗೆ ದಿಟ್ಟವಾಗಿ ಕಾಲಿಟ್ಟರು. ಪ್ರೀತಿ, ಮದುವೆ, ಜೀವನ, ಸಂಬಂಧಗಳು ಇವೆಲ್ಲವನ್ನೂ ಪುರುಷ ಪ್ರಧಾನ ಜಗತ್ತಿನಲ್ಲಿ ಹುಟ್ಟಿದ್ದರೂ ಅದರ ಬಂಗಾರದ ಸರಪಳಿಗಳಲ್ಲಿ ಬಂಧಿಯಾಗಲೊಪ್ಪದ ಧೈರ್ಯದ ಹೆಣ್ಣಿನ ಕಣ್ಣಿಂದ ನೋಡಿದರು, ಬರೆದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೊಂಭತ್ತನೆಯ ಬರಹ

read more
ಊರು ಕೇರಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಊರು ಕೇರಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಒಮ್ಮೊಮ್ಮೆ ಈ ನೆಲದ ಋಣದ ಕುರಿತು ಯೋಚಿಸುತ್ತೇನೆ. ಅಷ್ಟು ಗಾಢವಾದ ಋಣವೇ ಅದು? ಎಲ್ಲಿದ್ದರೂ ಊರಿನತ್ತ ಕೈಬೀಸಿ ಕರೆಯುವ ಮೋಹನ ಮುರಳಿಯ ಸೆಳೆತ ನಿಜವಾಗಿಯೂ ತೀವ್ರವಾದದ್ದೇ ಹೌದು. ಅದಲ್ಲದಿದ್ದರೆ ಹೋಗುವ ಯಾವುದೇ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ ಮನೆಗೆ ಹೋಗ್ಬೇಕು, ನನ್ನನ್ನು ಊರಿಗೆ ಬಿಟ್ಟು ಬಾ ಅಂತ ಮತ್ತೆ ಮತ್ತೆ ಅಪ್ಪ ಹೇಳುತ್ತಿರಲಿಲ್ಲ. ನನಗಂತೂ ಬಾಲ್ಯಕ್ಕೆ ಜಿಗಿಯಬೇಕು ಅಂತ ಅನ್ನಿಸಿದ ಕೂಡಲೇ ನನ್ನೆಲ್ಲಾ ಕೆಲಸವನ್ನು ಬಿಟ್ಟು ಇಲ್ಲಿಗೆ ಬಂಡುಬಿಡುವುದು ಇತ್ತೀಚಿನ ನನ್ನಿಷ್ಟದ ಕೆಲಸಗಳಲ್ಲಿ ಒಂದಾಗಿ ಹೋಗಿದೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”

read more
ಬಿಡುಗಣ್ಣಿನ ಎರಡು ಬಿಡಿನೋಟಗಳು: ಸುಕನ್ಯಾ ಕನಾರಳ್ಳಿ ಅಂಕಣ

ಬಿಡುಗಣ್ಣಿನ ಎರಡು ಬಿಡಿನೋಟಗಳು: ಸುಕನ್ಯಾ ಕನಾರಳ್ಳಿ ಅಂಕಣ

ಉತ್ಪಾದನೆ ಯಾರು ಮಾಡ್ತಾರೋ ಅವರಿಗೆ ಅದರ ಮೇಲೆ ಅಧಿಕಾರ ಇರಬೇಕು ಅಂತ ಒಪ್ಪಿಕೊಂಡಿರೋ ವ್ಯವಸ್ಥೆ ಒಳಗೇ ಇದ್ದುಕೊಂಡು ತಾನು ಹೊತ್ತು, ಹೆತ್ತು, ಬೆಳೆಸಿದ ಮಕ್ಕಳ ಅಧಿಕಾರವನ್ನ ವ್ಯವಸ್ಥೆಗೆ ಬಿಟ್ಟುಕೊಡಬೇಕಾದ ಅಸಹಾಯಕತೆಯಲ್ಲಿಯೂ ಸಹ ಹೆಣ್ಣು ಬದುಕಿ ಉಳಿತಾಳೆ. ವ್ಯವಸ್ಥೆ ತಮ್ಮ ತಮ್ಮ ಹುಚ್ಚಾಟಗಳಿಗೆ ಆ ಮಕ್ಕಳನ್ನ ಯುದ್ಧಕ್ಕೆ ಕಳುಹಿಸಿ ಅವಳ ಕಣ್ಣೆದುರೇ ಅವು ಹೊಸಕಿ ಹೋದರೂ ಸಹ ಮತ್ತೆ ಮತ್ತೆ ಯಾವುದೋ ನಂಬಿಕೆಯಲ್ಲಿ ಮಕ್ಕಳನ್ನ ಹುಟ್ಟಿಸಿ ಬೆಳೆಸುತ್ತಲೇ ಹೋಗುತ್ತಾಳಲ್ಲ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ