Advertisement

ಸರಣಿ

ಕಾಶ್ಮೀರ ಪ್ರವಾಸದ ನೆನಪುಗಳು…: ರಂಜಾನ್‌ ದರ್ಗಾ ಸರಣಿ

ಕಾಶ್ಮೀರ ಪ್ರವಾಸದ ನೆನಪುಗಳು…: ರಂಜಾನ್‌ ದರ್ಗಾ ಸರಣಿ

ಸೋನ್‌ ಮಾರ್ಗ ಪ್ರದೇಶದ ಕಡೆ ಹೋಗುವಾಗ ಭಾರಿ ಪ್ರಮಾಣದ ಹಿಮ ಬಿದ್ದ ಕಾರಣ ನಮ್ಮ ವಾಹನ ಮುಂದೆ ಸಾಗದ ಸ್ಥಿತಿಯುಂಟಾಯಿತು. ನಂತರ ಹಿಮದಲ್ಲಿ ಮುನ್ನುಗ್ಗುವ ಬೇರೆ ವಾಹನಗಳನ್ನು ಬಾಡಿಗೆ ಪಡೆಯಲಾಯಿತು. ಎತ್ತ ನೋಡಿದಡತ್ತ ಹಿಮ. ಸುತ್ತೆಲ್ಲ ಹಿಮ ಪರ್ವತಗಳು. ಆ ಪ್ರದೇಶದ ಕುರಿಗಾಯಿಗಳ ಪುಟ್ಟ ಪುಟ್ಟ ಮನೆಗಳೆಲ್ಲ ಹಿಮದ ರಾಶಿಯ ಹಾಗೆ ಕಾಣುತ್ತಿದ್ದವು. ಹಿಮ ಬೀಳುವ ಋತುವಿನಲ್ಲಿ ಆ ಕುರಿಗಾರರು ತಮ್ಮ ಕುರಿಗಳೊಂದಿಗೆ ಬೇರೆಡೆ ಹೋಗಿ ವಾಸಿಸುವರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

read more
ಸಂಗೀತ ವಿಶಾರದರ ನೆಲೆವೀಡು…: ಎಚ್. ಗೋಪಾಲಕೃಷ್ಣ ಸರಣಿ

ಸಂಗೀತ ವಿಶಾರದರ ನೆಲೆವೀಡು…: ಎಚ್. ಗೋಪಾಲಕೃಷ್ಣ ಸರಣಿ

ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತದ ಬಗ್ಗೆ ಅಷ್ಟು ಒಲವು ಇಲ್ಲದ್ದಿದ್ದ ಕಾಲದಲ್ಲಿ ಅದರ ನೆಲೆಗೆ ಒಂದು ಸಾಂಘಟಿಕ ಶಕ್ತಿ ಬೇಕಿತ್ತು. ಅಂತಹ ಶಕ್ತಿ ಒದಗಲು ದತ್ತಾತ್ರೇಯ ಗರುಡರು ಒಂದು ಪ್ರೇರಕ ವ್ಯಕ್ತಿ. ಬೆಂಗಳೂರಿನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ನೆಲೆನಿಲ್ಲಲು, ಶ್ರೀ ರಾಮರಾವ್ ನಾಯಕ್ ಮತ್ತು ಶ್ರೀ ಶೇಷಾದ್ರಿ ಗವಾಯಿ ಅವರೊಡನೆ ದತ್ತಾತ್ರೇಯ ಗರುಡರು ಶ್ರಮಿಸಿದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

read more
ಹೂವೆಂಬ ವಿಸ್ಮಯ:  ಚಂದ್ರಮತಿ ಸೋಂದಾ ಸರಣಿ

ಹೂವೆಂಬ ವಿಸ್ಮಯ: ಚಂದ್ರಮತಿ ಸೋಂದಾ ಸರಣಿ

ಅದು ಸಂಜೆಯಲ್ಲಿ ಬಿರಿಯುವ ಹೂವು. ಬೆಳಗ್ಗೆವರೆಗೆ ಬಿಟ್ಟರೆ ಪೂರ್ತಿಯಾಗಿ ಅರಳುತ್ತದೆ. ಅರಳಿದ ಮೇಲೆ ಕಟ್ಟಿದರೆ ಹೂವಿನ ಎಸಳು ಉದುರುತ್ತದೆ. ಹಾಗಾಗಿ, ರಾತ್ರಿ ಹೊತ್ತಿನಲ್ಲಿ ದೀಪದ ಬೆಳಕಿನಲ್ಲಿ ಕಟ್ಟಬೇಕಿತ್ತು. ಹೀಗೆ ಕಟ್ಟಿದ ಮಾಲೆಯನ್ನು ಮಾರನೆಯ ಬೆಳಗ್ಗೆ ಮುಡಿಯಬೇಕು/ದೇವರಿಗೆ ಅರ್ಪಿಸಬೇಕು ಇಲ್ಲವೆ ಬಿಸಿಲಿನಲ್ಲಿ ಬತ್ತದ ಹುಲ್ಲಿನ ಮೇಲೆ ಒಣಗಿಸಿ ಅದನ್ನು ಕಾಪಿಡಬೇಕು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

read more
ಇದು ರಾಜಕೀಯ ಕಾಲ: ಚೈತ್ರಾ ಶಿವಯೋಗಿಮಠ ಸರಣಿ

ಇದು ರಾಜಕೀಯ ಕಾಲ: ಚೈತ್ರಾ ಶಿವಯೋಗಿಮಠ ಸರಣಿ

ಶಿಂಬೋರ್ಸ್ಕಾರ ಜನಪ್ರಿಯತೆ ಮತ್ತು ಯಶಸ್ಸಿಗೆ ಕಾರಣವೇನು ಗೊತ್ತೇ? ವಿಶಿಷ್ಟ ಕಾವ್ಯ ಶೈಲಿ, ವಿಭಿನ್ನತೆ. ಯಾವುದೇ ಒಂದು ಕಾವ್ಯ ಶೈಲಿಗೆ ಜೋತು ಬೀಳದೆ, ತನ್ನದೇ ಆದ ನುಡಿಗಟ್ಟನ್ನು ಮತ್ತು ತನ್ನದೇ ಆದ ಭಾಷೆಯನ್ನು ಠಂಕಿಸಿದರು. ದೊಡ್ಡ ಐತಿಹಾಸಿಕ ಘಟನೆಗಳು, ಮಾನವ ಅಸ್ತಿತ್ವದ ಜೈವಿಕ ಸ್ಥಿತಿಗತಿ, ಕವಿಯ ಸಾಮಾಜಿಕ ಪಾತ್ರ ಮತ್ತು ತಾತ್ವಿಕ ವ್ಯವಸ್ಥೆಗಳು, ಸಿದ್ಧಾಂತಗಳಿಂದ ದೂರವೇ ಉಳಿಯಿತು ಅವರ ಕಾವ್ಯ.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿ

read more
ಮಕ್ಕಳ ಶಿಕ್ಷಣದಲ್ಲಿ ಕುಟುಂಬದ ಜವಾಬ್ದಾರಿ: ಅನುಸೂಯ ಯತೀಶ್  ಸರಣಿ

ಮಕ್ಕಳ ಶಿಕ್ಷಣದಲ್ಲಿ ಕುಟುಂಬದ ಜವಾಬ್ದಾರಿ: ಅನುಸೂಯ ಯತೀಶ್ ಸರಣಿ

ನೋಡಿ ಮೇಡಮ್ ನೀವು ಮೊದಲು ಅವನಿಗೆ ಟಿವಿ ನೋಡೋದು ಬಿಡಿಸಿ. ಶಾಲೆಯಿಂದ ಬಂದಾಗ ಟಿವಿ ಮುಂದೆ ಕೂತ್ರೆ ಅರ್ಧ ರಾತ್ರಿವರೆಗೂ ಒಂದಾದ ಮೇಲೆ ಒಂದರಂತೆ ಧಾರವಾಹಿ ನೋಡ್ತಾನೆ. ಮಲಗೋದು ಸರಿ ರಾತ್ರಿ ಆಗಿರುತ್ತೆ. ಬೆಳಗ್ಗೆ ಏಳಲು ತಲೆಸುತ್ತು ಅಂತಾನೆ. ನಿದ್ದೆ ಬರುತ್ತೆ ಅಂತ ಹತ್ತು ಗಂಟೆಯಾದರೂ ಮಲಕೊಂಡವ್ನೆ. ಅದಕ್ಕೆ ನಿಮ್ಮ ಮೇಲೆ ಕೋಪ ಬಂದಿದೆ. ನಿಮ್ಮ ಮೇಲೆ ಕೂಗಾಡಿದ್ದು ಇನ್ಯಾಕೆ ಅಂದುಕೊಂಡ್ರಿ ಅಂತ ಆಕೆಯ ಕಿರುಚಾಟ, ಹಾರಾಟದ ಹಿಂದಿನ ಸತ್ಯ ಬಾಯ್ಬಿಟ್ಟಳು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

read more
ಅಜ್ಜಿಯಂದಿರ ನೆನಪಿನ ದಿನಗಳು: ಮಾರುತಿ ಗೋಪಿಕುಂಟೆ ಸರಣಿ

ಅಜ್ಜಿಯಂದಿರ ನೆನಪಿನ ದಿನಗಳು: ಮಾರುತಿ ಗೋಪಿಕುಂಟೆ ಸರಣಿ

ಇನ್ನು ಉಳಿದಿದ್ದು ಸಣ್ಣಜ್ಜಿ. ಬಹಳ ಗಟ್ಟಿಗಿತ್ತಿ. ಬದುಕನ್ನು ಧೈರ್ಯದಿಂದ ಎದುರಿಸಿದ್ದಳು. ರಾತ್ರಿಯ ಸಮಯದಲ್ಲಿ ಅಂಗಳದಲ್ಲಿ ಮಲಗಿಕೊಂಡಿದ್ದಾಗ ಅನೇಕ ಕತೆಗಳನ್ನು ಹೇಳುತ್ತಿದ್ದಳು. ಅವೆಲ್ಲವೂ ರಾಜರ ಕತೆಗಳಾಗಿರುತ್ತಿದ್ದವು. ನನಗೀಗಲೂ ಆ ಕತೆಗಳು ನೆನಪಿವೆ. ಸಣ್ಣಜ್ಜಿಯೊಂದಿಗೆ ಒಡನಾಟ ಕಮ್ಮಿಯಾದರೂ ಅನೇಕ ನೆನಪುಗಳಿವೆ. ಸುಮಾರು ನಾಲ್ಕು ಸಾವಿರದಷ್ಟು ಹಾಡುಗಳನ್ನು ಗುಣಸಾಗರಿ ಜನಪದ ಮಹಿಳೆ ಕುರಿತು ಹಾಡುತ್ತಿದ್ದಳು ಎನ್ನುತ್ತಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

read more
ಕಿರುಚಿತ್ರದಂತಹ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿ

ಕಿರುಚಿತ್ರದಂತಹ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿ

ಅವರ ನಂತರದ ಕವನಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಕಾಣಬಹುದು. ಪ್ರತಿಮೆಗಳಿಂದ ತುಂಬಿದ ಸಂಕೀರ್ಣ ಕಾವ್ಯಧಾಟಿಯನ್ನು ತೊರೆದು ಸರಳವಾದ ಸಣ್ಣದಾದ ಕಿರುಚಿತ್ರದಂತಹ ಕವನಗಳನ್ನು ಬರೆಯತೊಡಗಿದರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಪೋಲಂಡ್ ದೇಶದ ಕವಿ ರಿಶಾರ್ಡ ಕ್ರಿನಿತ್‌ಸ್ಕಿ-ಯವರ (Ryszard Krynicki, 1943) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

read more
ದಿಗಂಬರ ಸತ್ಯ!: ಗುರುಪ್ರಸಾದ ಕುರ್ತಕೋಟಿ ಸರಣಿ

ದಿಗಂಬರ ಸತ್ಯ!: ಗುರುಪ್ರಸಾದ ಕುರ್ತಕೋಟಿ ಸರಣಿ

ಮೊದಲ ಸಲ ಹೋದಾಗ ಒಂದು ವಿಚಿತ್ರವನ್ನು ಗಮನಿಸಿ ದಂಗಾಗಿ ಹೋದೆ. ಒಳಗಡೆ ನೋಡಿದರೆ ಎಲ್ಲೆಲ್ಲೂ ದಿಗಂಬರರೆ! ಬಟ್ಟೆ ಬದಲಿಸಲು ಅಲ್ಲಿಗೆ ಬಂದಿದ್ದ ಯಾವ ಒಬ್ಬ ವಯಸ್ಕನೂ ಬಟ್ಟೆಯನ್ನೇ ತೊಟ್ಟಿರಲಿಲ್ಲ. ಒಂದು ತುಂಡು ಬಟ್ಟೆ ಕೂಡ ಹಾಕಿರದಿದ್ದ ಅವರು ಯಾವುದೇ ಮುಜುಗರ ಇಲ್ಲದೆ ಓಡಾಡುತ್ತಿದ್ದರು. ಅಲ್ಲಿದ್ದ ಶವರ್‌ಗಳೂ ಕೂಡ ಸಾಮೂಹಿಕವಾಗಿ ಸ್ನಾನ ಮಾಡುವ ತರಹವೇ ಇದ್ದವು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನೈದನೆಯ ಬರಹ

read more
ಬೇಲೂರು ದೇವಾಲಯದ ಮದನಿಕೆಯರ ಲೋಕ: ಸುಮಾವೀಣಾ ಸರಣಿ

ಬೇಲೂರು ದೇವಾಲಯದ ಮದನಿಕೆಯರ ಲೋಕ: ಸುಮಾವೀಣಾ ಸರಣಿ

ದೇವಾಲಯದ ನವರಂಗದ ಕಂಬಗಳ ಮೇಲೆ ಇರುವ ನಾಲ್ಕು ಮದನಿಕೆಯರಲ್ಲಿ ಆಗ್ನೇಯ ಕಂಬದವಳೇ ಶುಖಸಖಿ. ಎಡತೋಳ ಮೇಲೆ ಕೂಳಿತಗಿಳಿ ಅವಳ ಕಂಠೀಹಾರವನ್ನು ಹಿಡಿದಿದೆ. ಹಣ್ಣೊಂದರ ಆಸೆ ತೋರಿಸಿ ತನ್ನಾಭರಣ ಬಿಡಿಸಿಕೊಳ್ಳುತ್ತಿರುವ ಈಕೆಯ ಸೊಗಸು ಕೇಳಬಾರದು ನೋಡಲೇಬೇಕು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ