Advertisement

ಸಾಹಿತ್ಯ

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಇದು ಪಂಚಾಯಿತಿ ಚುನಾವಣೆಯಂತಲ್ಲ ಹಾಗಾಗಿ ಜನರು ಬುದ್ಧಿವಂತರಾಗಿದ್ದರು(?) ಹೆಚ್ಚು ಕೇಳುತ್ತಿದ್ದರು. ಆದರೂ ಒಂದೆರಡು ಕೈ ಬದಲಾಗಿ ಹಣ ಸಿಗುವಾಗ ಬಹಳ ಹೆಚ್ಚಿಗೇನೂ ಸಿಗುತ್ತಿರಲಿಲ್ಲ. ಈ ವಿಷಯದಲ್ಲಿ ಉತ್ತಮ್ ಈಗ ಸಾಕಷ್ಟು ಪಳಗಿದ್ದ. ಹೆಚ್ಚಿನ ಜನರನ್ನು ಸೇರಿಸುತ್ತಿದ್ದ. ಅದಕ್ಕಿಂತ ಹೆಚ್ಚು ತೋರಿಸುತ್ತಿದ್ದ. ಬೇರೆ ಮೂಲಗಳಿಂದ ಹಣ ಪೀಕುತ್ತಿದ್ದ. ಬೇರೆ ಮನೆಯಲ್ಲಿದ್ದರೂ ರಾಮ್, ಲಕ್ಷ್ಮಣ್ ಭಾವನ ಜೊತೆಗೆ ಕೈಜೋಡಿಸಿ ಚುನಾವಣೆಗೆ ದುಡಿಯುತ್ತಿದ್ದರು..
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಚದುರಂಗ”

read more
ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”

ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”

ಸೀತಮ್ಮನ ಗೊಣಗಾಟ ನಿಲ್ಲುವ ಲಕ್ಷಣ ಕಾಣಲಿಲ್ಲ. ಒಂದೊಮ್ಮೆ ಈಕೆ ಸತ್ತು ಹೋಗಬಾರದಿತ್ತ ಎಂಬಷ್ಟು ರೂಪೇಶ್ ಜಿಗುಪ್ಸೆ ಪಟ್ಟುಕೊಂಡ. ನಂದಿನಿ ಒಂದು ನಾಟಕದ ವರ್ಕ್‌ಷಾಪಿಗೆ ರಿಸೋರ್ಸ್‌ ಪರ್ಸನ್ ಆಗಿ ಮುಂಬಯಿಗೆ ಹೋದವಳು ವಾಪಸ್ ಬರಲಿಲ್ಲ! ಕೇಳಿದರೆ ಅವಳು ಏನು ಹೇಳ್ತಾಳೆ ಅಂತ ರೂಪೇಶ್‌ಗೆ ಗೊತ್ತು. ಅಮ್ಮನಿಗೆ ಖುಷಿಯಾಗಿರಬೇಕು. ಈಕೆ ಒಮ್ಮೆ ಸಾಯಬಾರದಾ ಅಂತ ಅವನು ಮತ್ತೆ ಮತ್ತೆ ಸ್ವಗತದಂತೆ ಹೇಳಿಕೊಂಡ.
ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ” ನಿಮ್ಮ ಓದಿಗೆ

read more
ಚಂದ್ರಶೇಖರ್ ಡಿ. ಆರ್. ಬರೆದ ಈ ಭಾನುವಾರದ ಕತೆ

ಚಂದ್ರಶೇಖರ್ ಡಿ. ಆರ್. ಬರೆದ ಈ ಭಾನುವಾರದ ಕತೆ

ಅಮ್ಮ ಹೋಗಿ ಎರಡು ತಿಂಗಳಾಗಿದೆ. ಕ್ಯಾನ್ಸರ್ ಟ್ರೀಟ್‌ಮೆಂಟ್ ಅವಳನ್ನು ಆರೇಳು ತಿಂಗಳು ಬಹುವಾಗೆ ಕಾಡಿಸಿತ್ತು. ಅವಳು ಹೋದಮೇಲೆ ಅಪ್ಪ ಬಹು ಕೃಶವಾಗಿದ್ದಾನೆ. ಅವಳು ಹೋದಮೇಲೆ ಎಷ್ಟೋ ಮಾತುಗಳು ಅವಳಿಗೆ ನಾ ಹೇಳಿಲ್ಲ ಎನಿಸಿ ನೊಂದುಕೊಳ್ಳುತ್ತೇನೆ. ಅವಳಿಂದ ಕೇಳುವುದು ತುಂಬಾ ಇದೆ ಎನಿಸಿ ನಿದ್ದೆ ಬರದೇ ಬೆಳಕಾಕೋವರೆಗು ಒದ್ದಾಡಿದ್ದು ಇದೆ.
ಚಂದ್ರಶೇಖರ್ ಡಿ ಆರ್ ಬರೆದ ಈ ಭಾನುವಾರದ ಕತೆ “ಹಲೋ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜು ಹೆಗಡೆ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜು ಹೆಗಡೆ ಕತೆ

ಸಂಜೆಯಾಗುತ್ತಿದ್ದಂತೆ, ಹೆಂಡತಿಗೆ ಅದು ಕಾಡತೊಡಗಿತು. ಸಾವಿರಾರು ರೂಪಾಯಿಯ ಮುಖ ನೋಡಿ ಅವಳ ಬಯಕೆಯನ್ನು ಇಲ್ಲ ಮಾಡದೆವಲ್ಲ, ನಾವೇನು ಅಷ್ಟು ದುಡ್ಡಿನಿಂದ ಹಂಚು ಹಾಕುವುದು ಅಷ್ಟರಲ್ಲೆ ಇದೆ ಎಂದೆಲ್ಲ ಗೊಣಗೊಣ ಮಾಡತ್ತಿದ್ದಳು. ನನಗೂ ಹಾಗೇ ಅನಿಸುತ್ತಿತ್ತು. ಆದರೆ ಅದು ಮುಗಿದ ಕತೆ ಎಂದು ನನಗೆ ನಾನೇ ಹೇಳಿಕೊಂಡು ಮರೆಯಲು ಯತ್ನಿಸುತ್ತಿದ್ದೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜು ಹೆಗಡೆ ಕತೆ “ಫ್ರಿಜ್ಜು”

read more
ಬೆರಳ ಹಿಡಿದು ಮುನ್ನಡೆಸು ಬುದ್ಧ..: ಅನುಸೂಯ ಯತೀಶ್ ಬರಹ

ಬೆರಳ ಹಿಡಿದು ಮುನ್ನಡೆಸು ಬುದ್ಧ..: ಅನುಸೂಯ ಯತೀಶ್ ಬರಹ

ಇಲ್ಲಿ ಕವಿಯು ಮಾನವನ ಸಹಜ ಗುಣಗಳನ್ನು ಬುದ್ಧನಿಗೆ ಹೋಲಿಸುತ್ತಾ ವಿಡಂಬನಾತ್ಮಕ ರೂಪದಲ್ಲಿ ಈ ಕವಿತೆಗೆ ಜೀವ ತುಂಬಿದ್ದಾರೆ. ಬುದ್ಧನ ನಡೆನುಡಿಗಳೆ ಕವಿತೆಯ ಜೀವಾಳವಾಗಿವೆ. ಇಲ್ಲಿ ವಸ್ತುನಿಷ್ಠೆಗಿಂತ ವ್ಯಕ್ತಿತ್ವದ ಅನಾವರಣಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ರೂಪಕಗಳ ಪ್ರಯೋಗದಲ್ಲಿ ಸಿದ್ಧಹಸ್ತರಾಗಿರುವ ಕವಿ ಅವುಗಳ ಜೊತೆಗೆ ವಾಸ್ತವಿಕತೆಯನ್ನು, ಸಹಜ ಸರಳವಾದ ಸಾಲುಗಳಲ್ಲಿ ಸಶಕ್ತವಾಗಿ ಬಂಧಿಸಿದ್ದಾರೆ.
ಜಬೀವುಲ್ಲಾ ಎಮ್. ಅಸದ್ ಬರೆದ ಬುದ್ಧನ ಕುರಿತು ಕವಿತೆಯ ಕುರಿತು ಅನುಸೂಯ ಯತೀಶ್‌ ಬರಹ

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವಗೌಡ ಎಂ.ಜೆ. ಮೇಲೂರು ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವಗೌಡ ಎಂ.ಜೆ. ಮೇಲೂರು ಕತೆ

ಹೆಜ್ಜೆಯಿಡಲೂ ಎಲ್ಲರೂ ಭಯಬೀಳುತ್ತಿದ್ದ ಕಾಡಿನ ಆ ಅಭೇಧ್ಯ ಕಣಿವೆಗೆ ಅವನು ಹೊಸದೇ ಆದ ಒಂದುದಾರಿ ಮಾಡಿಕೊಂಡು ಬಂದಾಗ, ಅಲ್ಲಿ ಕೆನೆಗಟ್ಟಿದ್ದ ಸೌಂದರ್ಯಕ್ಕೆ ಮಾರುಹೋಗಿದ್ದ. ಅಲ್ಲೇನಿದೆ ಕೇವಲ ಮರ, ಗಿಡ, ಬಳ್ಳಿ, ವಿಷಜಂತುಗಳು, ಕ್ರೂರಪ್ರಾಣಿಗಳು, ರಕ್ತ ಹೀರುವ ಜಿಗಣಿಗಳು ಎನ್ನುತ್ತಿದ್ದವರ ಮಧ್ಯದಲ್ಲಿದ್ದಾಗ ಇಂತಹಕಡೆ ಸೌಂದರ್ಯ ಕಾಣಲು ಬೇರೆಯದೇ ಆದ ಕಣ್ಣಗಳಿರಬೇಕು. ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವಗೌಡ ಎಂ.ಜೆ. ಮೇಲೂರು ಕತೆ “ಸ್ವೇದಗಂಧಿ”

read more
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಕೆಂಪು ಬಣ್ಣದ ರೇಷ್ಮೆ ಸೀರೆಯನ್ನು ಹಿಂದಿನೆರಡು ಬಟ್ಟೆ ತುಂಡುಗಳ ಜೊತೆಗೆ ಜೋಡಿಸುತ್ತಿದ್ದ ಶಂಕ್ರಜ್ಜಿಗೆ ಮದುವೆಯ ನೆನಪು ಬಂದರೂ ಅದು ಮನಸ್ಸಿಗೆ ಖುಷಿ ಕೊಡಲಿಲ್ಲ. ಹಸಿರು, ಹಳದಿ, ಕೆಂಪು ಬಣ್ಣಗಳಿಂದ ತಯಾರಾಗುತ್ತಿದ್ದ ಕೌದಿಗೆ ಸೇರಿಸಲು ಇನ್ನೊಂದೆರಡು ಬಟ್ಟೆಗಳಷ್ಟೇ ಬೇಕಿದ್ದದ್ದು. ಅವಳ ಮಡಿಲ ಬುಡದಲ್ಲಿಯೇ ಇತ್ತು ನೀಲಿ ಬಣ್ಣದ ಫ್ಯಾನ್ಸಿ ಸೀರೆ. ಅದನ್ನು ಎತ್ತಿಕೊಂಡು ಉಳಿದವುಗಳ ಜೊತೆಗೆ ಸೇರಿಸಿ ಹೊಲಿಯಲಾರಂಭಿಸಿದಳು.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಕೌದಿ” ನಿಮ್ಮ ಓದಿಗೆ

read more
ಲತಾ ಶ್ರೀನಿವಾಸ್‌ ಬರೆದ ಈ ಭಾನುವಾರದ ಕತೆ

ಲತಾ ಶ್ರೀನಿವಾಸ್‌ ಬರೆದ ಈ ಭಾನುವಾರದ ಕತೆ

ಆ ದಿನ ರಾತ್ರಿ ಎಂಟಕ್ಕೆ ಮನೆಗೆ ಬಂದ ಇವರ ಕೆನ್ನೆಯ ಮೇಲೆ ಸ್ಪಷ್ಟವಾಗಿ ಮೂಡಿದ ಲಿಪ್ಸ್ಟಿಕ್‌ನ ಗುರುತು ನನಗೆ ನೋಡಿ ಇಡೀ ಮೈಯೆಲ್ಲಾ ಕರೆಂಟು ಹೊಡೆದ ಅನುಭವ. ಹೃದಯ ಸ್ಥಂಭನವಾಗುವುದೊಂದು ಬಾಕಿ… ಕೆನ್ನೆಯ ಮೇಲೆ ಯಾರೋ ಕಿಸ್ ಮಾಡಿದ್ದಾರೆ. ನನ್ನ ಕಣ್ಣಿನಲ್ಲಿ ತಕ್ಷಣ ಧಾರಾಕಾರವಾಗಿ ಸುರಿಯುವ ಕಣ್ಣೀರಿನಲ್ಲಿ ನಮ್ಮ ದಾಂಪತ್ಯ ಕೊಚ್ಚಿ ಹೋಗುವ ಸೂಚನೆ. ಕೈಯಲ್ಲಿದ್ದ ಮೊಬೈಲ್‌ನಲ್ಲಿ ಅವರಿಗೆ ಅರಿವಾಗುವ ಮೊದಲೇ ಅವರ ಕೆನ್ನೆಯ ಮೇಲಿನ ಕಿಸ್‌ನ ಫೋಟೋ ತೆಗೆದುಕೊಂಡೆ.
ಲತಾ ಶ್ರೀನಿವಾಸ್‌ ಬರೆದ ಈ ಭಾನುವಾರದ ಕತೆ “ಒಂದು ಮುತ್ತಿನ ಕಥೆ”

read more
ರವಿ ಮಡೋಡಿ ಬರೆದ ಈ ಭಾನುವಾರದ ಕತೆ

ರವಿ ಮಡೋಡಿ ಬರೆದ ಈ ಭಾನುವಾರದ ಕತೆ

ಮುಂದೆ ಮುಂದೆ ಸಾಗಿದರೂ ಮನೆಗಳು ಮುಗಿಯುವ ಲಕ್ಷಣ ಕಾಣಿಸಿರಲಿಲ್ಲ. ರಮೇಶ ತಾನು ಈ ದಾರಿಯಲ್ಲಿ ಬರಲೇಬಾರದಿತ್ತು, ಬೇರೆಯೊಂದು ದಾರಿಯಲ್ಲಿ ಹೋಗಿದ್ದರೆ ಇಷ್ಟು ಹೊತ್ತಿಗಾಗಲೇ ತನ್ನ ಕೆಲಸವನ್ನು ಪೂರೈಸಿಕೊಳ್ಳಬಹುದಿತ್ತೋ ಏನೋ ಎಂದುಕೊಳ್ಳುತ್ತ ಹಳಿದುಕೊಂಡ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಯಾವಾಗಲೂ ಹೇಳಿಕೊಳ್ಳುತ್ತಿದ್ದ ಮಾತು ಸತ್ಯವೆನಿಸಿ ಯೋಚಿಸುವುದಕ್ಕೆ ತೊಡಗಿದ.
ರವಿ ಮಡೋಡಿ ಬರೆದ ಈ ಭಾನುವಾರದ ಕತೆ “ಜೀವದೊಳಗಿನ ಆಟ” ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ