Advertisement

Month: May 2024

ಧರ್ಮಯುದ್ಧ ಕಾದಂಬರಿಯ ಕೆಲವು ಪುಟಗಳು

ಸುಕ್ಕ ಯಾನೆ ಸುಕುಮಾರನಿಗೆ ಶೇಂದಿ ಶರಾಬು ಕುಡಿಯುವ ಅಭ್ಯಾಸ ಆ ದಿನಗಳಲ್ಲಿ ಇರಲಿಲ್ಲ. ಆದರೆ ಒಮ್ಮೆಲೇ ಕುಳಿತು ಎರಡು ಬಾಟ್ಲಿ ಬಿಯರ್ ಕುಡಿಯುವ ತಾಕತ್ತು ಅವನಲ್ಲಿತ್ತು. ಅವನಂಥವನನ್ನು ಜನ ‘ಕುಡುಕ’ ಎನ್ನುತ್ತಿರಲಿಲ್ಲ. ‘ದೊಡ್ಡವರು ಕುಡಿಯುವುದಿಲ್ಲವೇ ಆರೋಗ್ಯಕ್ಕೆ’ ಎನ್ನುತ್ತಿದ್ದರು. ಸುಕ್ಕನಿಗೆ ಇದು ಗೊತ್ತಿತ್ತು. ಕಂಟ್ರಿ ಜನಗಳ ಹಾಗೆ ಕುಡಿದರೆ ತಾನೂ ಅವರಲ್ಲೊಬ್ಬನಾಗುತ್ತೇನೆ. ತಾನು ಅವರ ಹಾಗೆ ಆಗಬಾರದು, ಜನರನ್ನೆಲ್ಲ ನಿಯಂತ್ರಿಸುವ ಜನಪ್ರತಿನಿಧಿಯಾಗಬೇಕು ಎಂದು ಆತ ಬಹಳ ದಿನಗಳಿಂದ ಯೋಚಿಸುತ್ತಿದ್ದ. ಆ ಯೋಚನೆ ಕಳೆದ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ಕಾರ್ಯಗತವಾಗಿತ್ತು.
ನಾ. ಮೊಗಸಾಲೆಯವರ ಹೊಸ ಕಾದಂಬರಿ ‘ಧರ್ಮಯುದ್ಧ’ದಿಂದ ಕೆಲವು ಪುಟಗಳು ನಿಮ್ಮ ಓದಿಗೆ

Read More

ಪ್ರದರ್ಶನ ಕಲೆಗಳಲ್ಲಿ ಸ್ತ್ರೀಯರ ಸ್ಥಾನ

ಯುಗಧರ್ಮದ ಮನಸ್ಥಿತಿಯು ಆ ಸಮಾಜ ಸೃಷ್ಟಿಸಿದ ಘಟಕಗಳಲ್ಲಿ ಅಂತರ್ಗತವಾಗಿಯೆ ಇರುತ್ತದೆ. ಉದಾಹರಣೆಯಾಗಿ ಯಕ್ಷಗಾನವನ್ನೆ ತೆಗೆದುಕೊಂಡರೆ, ಅದರ ಎಲ್ಲ ಅಂಗಗಳಲ್ಲಿ, ರೂಪ-ಸ್ವರೂಪ, ಹಿಮ್ಮೇಳ-ಮುಮ್ಮೇಳ, ಮೌಲ್ಯ-ಔಚಿತ್ಯ, ರಸ-ರುಚಿ, ಪಠ್ಯ-ಸಂಕಲನ, ಅಥವಾ ತಾಳಮದ್ದಲೆಯಲ್ಲಿ ಬೆಳೆದು ಬಂದ ವಾಗ್ವಾದದ, ತರ್ಕದ ಪರಂಪರೆ ಇವೆಲ್ಲದರಲ್ಲೂ ನಾವು ಈ ಆಲೋಚನೆಯ ಒಂದು ಎಳೆಯು ನಿರಂತರವಾಗಿರುವುದನ್ನು ಕಾಣಬಹುದು.
ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯ ಸ್ಥಾನದ ಕುರಿತು ‘ಯಕ್ಷಾರ್ಥ ಚಿಂತಾಮಣಿ’ಯಲ್ಲಿ ಕೃತಿ ಪುರಪ್ಪೇಮನೆ ಲೇಖನ

Read More

ಮದುವೆ, ಮಜಾ ಹಾಗೂ ಮೂವತ್ತು ದಾಟಿದ ಜವ್ವನಿಗರು

ಸಂತಿಯೇನೂ ತಾನು ಮದುವೆಯಾಗಲ್ಲ ಎಂದವನಲ್ಲ, ಆದರೆ ಕೇರಿಯೊಳಗೆ ಇನ್ನೇನು ನಾಳೆಯೋ ನಾಡಿದ್ದೋ ಬಿದ್ದು ಹೋಗುವುದೆಂಬಷ್ಟು ಹಳೆಯ ಮನೆಯೊಂದನ್ನು ಬಿಟ್ಟು ಯಾವುದೇ ಆಸ್ತಿಪಾಸ್ತಿ ಇಲ್ಲದ, ನೋಡಲು ತೊಳೆದ ಕೆಂಡದಂತೆ ಮುಟ್ಟಿದರೆ ಕೈಗೆ ಹತ್ತುವಷ್ಟು ಕಪ್ಪುಬಣ್ಣಕ್ಕಿದ್ದ. ಸಂತಿಗೆ ಸರಿಯಾದ ಕೆಲಸವೂ ಇರಲಿಲ್ಲವಲ್ಲಾ.. ಹೀಗೆ ಎಲ್ಲದರಲ್ಲೂ ನಪಾಸಾದ ಸಂತಿಯ ಕರ್ಮಕ್ಕೆ ಕಲಶವಿಟ್ಟಂತೆ ನಕ್ಕರೆ ಮುಂದಿದ್ದವರಿಗೆ ಚುಚ್ಚುವಷ್ಟು ಉಬ್ಬುಹಲ್ಲು ಬೇರೆ!
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

Read More

ಕವಿತಾ ಅಡೂರು ಬರೆದ ಈ ದಿನದ ಕವಿತೆ

“ನಿನ್ನ ಪುಟ್ಟ ಕಂಗಳಲ್ಲಿರುವ
ಆವೇಶದ ಸೊಡರನ್ನು ತಂಪಾಗಿಸು
ಪ್ರೀತಿ ಪ್ರಣತಿಯನು ಬೆಳಗು
ನೆತ್ತರಿಳಿಯುವ ದಾರಿಯಿಂದತ್ತ ಸರಿ”- ಕವಿತಾ ಅಡೂರು ಬರೆದ ಈ ದಿನದ ಕವಿತೆ

Read More

ಅಣಶಿ ಘಟ್ಟದ ಮೇಲಿನ ಹಾದಿ

ಈ ಘಟ್ಟದ ಮಾರ್ಗದಲ್ಲಿ ಸಾಗುತ್ತಿದ್ದರೆ ಯಾರೋ ಹಿಂಬದಿಯಿಂದ ನಮ್ಮನ್ನು ಗಮನಿಸುತ್ತ ಅನುಸರಿಸುತ್ತ ಬಂದ ಹಾಗೆ ಅನಿಸುತ್ತದೆ. ಪಡ್ಡೆ ಹುಡುಗರ ಹಾಗೆ ಸೀಟಿ ಹಾಕುತ್ತ ನಮ್ಮ ಬೆನ್ನ ಹಿಂದೆಯೇ ಯಾರೋ ಬಂದಂತೆ ಅನಿಸಿ, ತಿರುಗಿ ನೋಡಿದರೆ ಯಾರೂ ಕಾಣುವುದಿಲ್ಲ.  ಇದ್ದಕ್ಕಿದ್ದಂತೆ ಸೀಟಿಯ ಸದ್ದು ನಿಲ್ಲುತ್ತದೆ. ಹೀಗೆ ಕಾಡುವ ಪಡ್ಡೆ ಹುಡುಗನ ಹೆಸರು ‘ನೀಲಿ ಸಿಳ್ಳಾರ’.  ಈ ವಿಶಿಷ್ಟ ಹಕ್ಕಿರಾಯ ಕಾಡಿನ ಸೊಬಗು ಹೆಚ್ಚಿಸುವವ. -ಅಕ್ಷತಾ ಕೃಷ್ಣಮೂರ್ತಿ ಬರೆಯುವ ‘ಕಾಳಿಯಿಂದ ಕಡಲಿನವರೆಗೆ’ ಸರಣಿಯಲ್ಲಿ ಕಾಡಿನ ವಿಸ್ಮಯಗಳ ವಿವರ. 

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ