Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಕಲ್ಯಾಣಕ್ರಾಂತಿ: ಡಾ. ಲತಾ ಗುತ್ತಿ ಕಾದಂಬರಿಯ ಪುಟಗಳು

ಬೆಳಗಿನ ಜಾವ ಕಣ್ಣುಬಿಟ್ಟಾಗ ಎಲ್ಲೆಲ್ಲೂ ಜಾತ್ರೆಯದೇ ಆದ ಒಂದು ಬೆಡಗಿನ ಸೊಬಗು. ತಣ್ಣನೆಯ ಗಾಳಿ-ಪಕ್ಷಿಗಳ ಕಲರವ. ಸೂರ್ಯೋದಯ. ದೇವಸ್ಥಾನದ ಆವರಣದಿಂದ ಕೇಳಿಬರುವ ಶರಣರ ವಚನಗಳ ಹಾಡುಗಳು. ಸುತ್ತೆಲ್ಲ ಹಸಿರು ಗಿಡಮರಗಳಿಂದ ತುಂಬಿದ ತಂಪಾದ ಸ್ಥಳದಲ್ಲಿ ಚೆನ್ನಬಸವಣ್ಣನ ದೇವಸ್ಥಾನ ದೂರ ದಿಂದಲೇ ಕಂಗೊಳಿಸುತ್ತದೆ. ಎತ್ತರದ ಗೋಪುರದಲ್ಲಿ ಶಿವಶರಣರ ಶಿಲ್ಪ ಕೃತಿಗಳು. ಅವರವರ ವೃತ್ತಿಗೆ ತಕ್ಕಂತೆ ಕೆತ್ತನೆಗಳಿವೆ. ೧೨ನೆಯ ಶತಮಾನದ ಶರಣರೆಲ್ಲ ಕಣ್ಣಿಗೆ ಕಟ್ಟುವಂತೆ ಕಾಣುತ್ತಾರೆ. ದೇವಸ್ಥಾನ ತಳಿರು ತೋರಣಗಳಿಂದ ಶೋಭಿತಗೊಂಡಿದೆ.
ಡಾ. ಲತಾ ಗುತ್ತಿ ಹೊಸ ಕಾದಂಬರಿ “ಚದುರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ

Read More

ವಿಫಲಪ್ರೇಮಿಯ ತಪ್ಪೊಪ್ಪಿಗೆಗಳು: ರಹಮತ್ ತರೀಕೆರೆ

ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಕವಿತೆ ಬರೆಯುತ್ತಿದ್ದಳು. ಸರಳವಾದ ಪದದ ಅರ್ಥ-ಅದನ್ನು ತರಗತಿಯಲ್ಲೂ ಕೇಳಬಹುದಿತ್ತು- ಕೇಳಿಕೊಂಡು ಸ್ಟಾಫ್‌ರೂಮಿಗೆ ಬರುತ್ತಿದ್ದಳು. ಸಹೋದ್ಯೋಗಿಗಳು `ನೀನೇ ಹುಡುಗಿ ತರಹ ನಾಚ್ಕೊತೀ ಯಲ್ಲೋ’ ಎಂದು ಛೇಡಿಸುತ್ತಿದ್ದರು. ಬದುಕಿನ ಬಗ್ಗೆ ಭವಿಷ್ಯದ ಬಗ್ಗೆ ಚಿಂತನೆ ಹೊಣೆಗಾರಿಕೆ ಇಲ್ಲದೆ ಹುಟ್ಟಿದ ಎಳಸು ಆಕರ್ಷಣೆಗಳವು. ಆದರೂ ಒಬ್ಬಾಕೆಯ ದೊಡ್ಡ ಕಣ್ಣುಗಳ ಮುಖ ಚಿತ್ತದಲ್ಲಿ ಉಳಿದುಬಿಟ್ಟಿದೆ. ಚೆಲ್ಲು ವರ್ತನೆಯ ಆಕೆ, ಕನ್ನಡದಲ್ಲಿ ಭಯಂಕರ ಕಾಗುಣಿತ ತಪ್ಪು ಮಾಡುತ್ತಿದ್ದಳು. ಚೆಲುವನ್ನು ಕೊಟ್ಟು ಬುದ್ಧಿಯನ್ನು ಕೊಡದ ವಿಧಿಯನ್ನು ಬೈದುಕೊಂಡು, ಭಾಷಾ ದೋಷಗಳನ್ನು ಉದಾರವಾಗಿ ತಿದ್ದುತ್ತಿದ್ದೆ.
ಡಾ. ರಹಮತ್‌ ತರೀಕೆರೆಯವರ ಆತ್ಮಕಥನ “ಕುಲುಮೆ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

“ದೇಹಕೊಂದು ಹೆಸರಿದೆ, ಆಕಾರವೂ ಇದೆ
ಆದರೆ, ಅಂತರಾಳದಲಿ‌ರುವ ಲಕ್ಷ ಕೋಟಿ ಜೀವಾತ್ಮಗಳಿಗೆ ಹೆಸರಿಲ್ಲದಿದ್ದರೂ ಅಸ್ತಿತ್ವವಿದೆ
ಅಗಣಿತ ಅಣುರೇಣುಗಳಿಗೆ ಜಗವನಾಳುವ ಛಾತಿಯಿದೆ
ಸೂರ್ಯರಶ್ಮಿಯ ಪ್ರಖರತೆಗೆ ಮಗ್ಗುಲು ಬದಲಿಸುವ ನೆರಳು, ಬೆನ್ನ ಹಿಂದೆಯೇ ಕಾದು
ನಿಂತಿರುವ ಸಾವಿನ ಸಂಕೇತವೇ ಅಲ್ಲವೇ?”- ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

Read More

ನರೇಂದ್ರ ಅ ಭಟ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನರೇಂದ್ರ ಅ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಒಂದು ಹಳ್ಳಿ, ಕಾನಗೋಡು. ಸಧ್ಯ ನಾಗಪುರದ ಲಾರ್ಸನ್ ಎಂಡ್ ಟೂಬ್ರೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಕೃತಿಗಳ ಓದು, ಹಿಂದುಸ್ಥಾನಿ ಸಂಗೀತ, ಪುರಾತನ ದೇವಾಲಯಗಳ ಹುಡುಕಾಟ ಹಾಗು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

Read More

ಬೆರಳಿಗಂಟಿದ ರಕ್ತ ಹಾಗೇ ಇತ್ತು..: “ಕಲ್ಯಾಣ ಕೆಡುವ ಹಾದಿ”ಯ ಕೆಲವು ಪುಟಗಳು

ತಹಸಿಲ್ದಾರರು ಹೊರಟ ನಂತರ ದಲಿತರ ಮೇಲೆ ಹಲ್ಲೆ ಮಾಡಿದ ಮುನಿಪಾಪಣ್ಣನ ಕಡೆಯವರು, ಅವನಿಗೆದುರಾಗಿ ಯಾರ್ಯಾರು ಅರ್ಜಿಯಲ್ಲಿ ಎಡ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡಿದ್ದಾರೆ. ನಂತರ ಆತ ಮತ್ತು ಆತನ ಮಕ್ಕಳು ಆ ಐದು ಜನರನ್ನೂ ಹಿಡಿದು, ಅವರೆಲ್ಲರ ಹೆಬ್ಬೆಟ್ಟುಗಳನ್ನೂ ಕತ್ತರಿಸಿ, ‘ಈಗ ಡಿಸಿ ಸಾಹೇಬರಿಗೆ ಹೇಗೆ ಅರ್ಜಿ ಕೊಡುತ್ತೀರೋ ನೋಡೋಣ!’ ಎಂದು ಕೂಗಾಡಿದ್ದಾರೆ. ಆ ಐದೂ ದಲಿತರೂ ಬ್ಯಾಂಡೇಜ್ ತೆಗೆದು, ನನ್ನ ಮುಂದೆ ತಮ್ಮ ಎಡಗೈ ಚಾಚಿದರು.
ಎನ್.‌ ಸಂಧ್ಯಾರಾಣಿ ಅನುವಾದಿಸಿರುವ ರೆಬೆಲ್‌ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್‌ ಅವರ ಆತ್ಮಕಥನ “ಕಲ್ಯಾಣ ಕೆಡುವ ಹಾದಿ”ಯ ಕೆಲವು ಪುಟಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ