Advertisement

Category: ಪುಸ್ತಕ ಸಂಪಿಗೆ

ಪ್ರಕೃತಿ ದೇವಿಗೆ ಮೊದಲ ನಮನ: ದೇವಿಕಾ ನಾಗೇಶ್‌ ಬರಹ

ಪ್ರಕೃತಿಯ ಪುನರುತ್ಪತ್ತಿ ಕ್ರಿಯೆಯನ್ನು ಬಲ್ಲ ಹಿರಿಯರಿಗೆ ಪ್ರಕೃತಿಯ ಅಗಾಧತೆಯ ಅರಿವು ಇರುತ್ತದೆ. ಆದ್ದರಿಂದಲೇ ಅವರಲ್ಲಿ ವಿನೀತ ಭಾವ ಕಾಣಿಸಿಕೊಳ್ಳುತ್ತದೆ… ಇದು ದೈವೀಕತೆಯಲ್ಲದೆ ಮತ್ತೇನಲ್ಲ. ಕೃಷಿ ಚಟುವಟಿಕೆಗಳಲ್ಲಿ ಒಂದು ಧ್ಯಾನಸ್ಥ ಸ್ಥಿತಿಯಿದೆ. ಅದು ಯಾವ ಬಿರುದು ಬಾವಲಿಯನ್ನು ಬಯಸುವುದಿಲ್ಲ. ತಲ್ಲೀನತೆ ಹಂಚಿಕೊಂಡು ಬಾಳುವುದು ಕೃಷಿ ಬದುಕಿನ ಜೀವನ ಮೌಲ್ಯಗಳು. ರೈತರು ಹಿಂದೆ ಊರಿನಿಂದ ಊರಿಗೆ ಹೋಗುವಾಗ ಬೀಜಗಳನ್ನು ಬಿತ್ತಿ ಸಾಲುಮರಗಳನ್ನು ಬೆಳೆಸುತ್ತಿದ್ದರು. ನೆತ್ತಿಗೆ ನೆರಳು ನೀಡುವ ಈ ಮರಗಳ ಮೌಲ್ಯ ಅರಿತಿದ್ದ ಅವರು ಪ್ರತಿ ಊರಿನಲ್ಲೂ ಗುಂಡು ತೋಪುಗಳನ್ನು ಮಾಡುತ್ತಿದ್ದರು.
ಅ. ನಾ. ಯಲ್ಲಪ್ಪ ರೆಡ್ಡಿಯವರ “ಅರಣ್ಯೆ ನಿನಗೆ ಶರಣು” ಕೃತಿಯ ಕುರಿತು ದೇವಿಕಾ ನಾಗೇಶ್‌ ಬರಹ

Read More

ದೊಡ್ಡ ದೇಶದ  ಸಂಗತಿಗಳು  ಚಿಕ್ಕ ಚಿಕ್ಕ  ಟಿಪ್ಪಣಿಗಳಲ್ಲಿ: ಶಶಿಧರ ಹಾಲಾಡಿಯವರ ಕೃತಿಯ ಕುರಿತು ನಾರಾಯಣ ಯಾಜಿ ಬರಹ

ಅಮೆರಿಕದಂತಹ ವಿಶಾಲ ದೇಶವನ್ನು ಸಾವಿರಾರು ಪ್ರವಾಸಿಗರು ನೋಡಿರಬಹುದು. ಆದರೆ ಎಲ್ಲರೂ ಅದನ್ನು ಓದುಗರ ಕಣ್ಮುಂದೆ ಜೀವಂತಗೊಳಿಸಲು ಸಾಧ್ಯವಿಲ್ಲ. ಒಂದು ಸ್ಥಳದ ಸೌಂದರ್ಯವನ್ನು ವರ್ಣಿಸುವುದು ಸುಲಭ; ಆದರೆ ಆ ಸ್ಥಳದ ಇತಿಹಾಸ, ಸಾಮಾಜಿಕ ಹಿನ್ನೆಲೆ, ವೈಜ್ಞಾನಿಕ ಅಂಶಗಳು, ಅಲ್ಲಿನ ಜನಜೀವನ ಮತ್ತು ಮಾನವ ನಾಗರಿಕತೆಯ ಪಯಣವನ್ನು ಒಂದೇ ಬರಹದಲ್ಲಿ ಬೆರೆಸಿ ಹೇಳುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಲಾಡಿಯವರು ಅದನ್ನು ಸಾಧಿಸಿದ್ದಾರೆ. ಈ ಕೃತಿಯ ಅತ್ಯಂತ ದೊಡ್ಡ ಶಕ್ತಿ ಅವರ ‘ಸೂಕ್ಷ್ಮ ಅವಲೋಕನ’. ಸಾಮಾನ್ಯ ಪ್ರವಾಸಿಗನ ಕಣ್ಣಿಗೆ ಕಾಣದ ಸಂಗತಿಗಳನ್ನೂ ಲೇಖಕರು ಹಿಡಿದುಕೊಡುತ್ತಾರೆ.
ಶಶಿಧರ ಹಾಲಾಡಿ ಬರೆದ ಪ್ರವಾಸ ಕಥನ “ಇಲ್ಲಿ ಶಾಸ್ತ್ರ ಹೇಳಲಾಗುವುದು” ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

Read More

ಹಾಡೊಂದು ವಾಪಸ್ಸು ಕೈ ಬೀಸಿ ಕರೆದಿತ್ತು…: ವಿನಾಯಕ ಅರಳಸುರಳಿ ಕೃತಿಯ ಆಯ್ದ ಭಾಗ

ಡಾ. ಪುರುಷೋತ್ತಮ್ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡೆ. ಮೊಬೈಲನ್ನು ಆನ್ ಮಾಡಿ ಅಪ್ಪನ ಇಷ್ಟದ ಹಾಡುಗಳನ್ನು ಹಾಕಿ ಇಯರ್ ಫೋನನ್ನು ಅಪ್ಪನ ಕಿವಿಗೆ ತೊಡಿಸಿದೆ. ಒಂದಿಡೀ ಬದುಕಿನುದ್ದಕ್ಕೂ ಅವನ ಬೆಳಗು, ಮಧ್ಯಾಹ್ನ, ಸಂಜೆಗಳನ್ನು ಸಲಹಿದ, ‘ಇದೀಗ ಚಿತ್ರಗೀತೆಗಳು’ ಎಂಬ ಘೋಷಣೆಯ ಮೂಲಕ ಅವನ ಹೃದಯದಲ್ಲಿ ದೀಪ ಹಚ್ಚಿದ, ಅವನ ಬಾಲ್ಯ, ಪ್ರೀತಿ, ನೆನಪುಗಳ ಸರ್ವಸ್ವವೂ ಆದ ಹಾಡುಗಳನ್ನು ಒಂದೊಂದಾಗಿ ನೇರ ಅವನ ಹೃದಯಕ್ಕೇ ಕೇಳುವಂತೆ ಹಾಕಿದೆ…
ವಿನಾಯಕ ಅರಳಸುರಳಿ ಬರೆದ “ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ” ಹೊಸ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

Read More

ಅರ್ಥಗಾರಿಕೆಯ ಆಂತರ್ಯ ಮತ್ತು “ಮಾತು ಮದ್ದಳೆ”: ನಾರಾಯಣ ಯಾಜಿ ಬರಹ

ಯಕ್ಷಗಾನದಲ್ಲಿ ಭೀಷ್ಮ ವಿಜಯ, ವಾಲಿವಧೆ, ಕೃಷ್ಣ ಸಂಧಾನ ಇವೆಲ್ಲವೂ ವಾದಕೇದ್ರಿತವಾಗಿ, ರಸವೆನ್ನುವುದನ್ನು ಹುಡುಕಬೇಕಾಗಿದೆ. ವಾಲಿ ಸುಗ್ರೀವ ಎದುರಾದಾಗ “ಮತ್ತು ಮತ್ತೆನ್ನೆಡೊನೆ ನಿತ್ತುಕೊಂಡೀರಣದಿ ಉತ್ತರವ ಕೊಡುವೆ” ಎನ್ನುವ ಭರದಲ್ಲಿ ಉದ್ದುದ್ದು ಮಾತನಾಡುವ ಪ್ರವೃತ್ತಿಯನ್ನು ನಿರಾಕರಿಸುವಾಗ ಗ ನಾ ಭಟ್ಟರಿಗೆ ವರ್ತಮಾನದ ತಾಳಮದ್ದಳೆಯ ಅಪಸವ್ಯಗಳು ಎದುರಾಗಿವೆ. ವೀರ ರಸದ ಭಾಗದಲ್ಲಿ ಮಾತು ಕಡಿಮೆ ಆಡಬೇಕೆನ್ನುವ ಔಚಿತ್ಯಪ್ರಜ್ಞೆಯನ್ನು ಅವರು ವಿವರಿಸುತ್ತಾರೆ. ರಾಮ ಧರ್ಮಸೂಕ್ಷ್ಮವನ್ನು ವಿವರಿಸಬೇಕೆ ಹೊರತೂ ತರ್ಕದ ಹಾದಿ ಹಿಡಿಯ ಬಾರದು. ಜೊತೆಗೆ ಪಾರ್ತಿಸುಬ್ಬ ವಾಲಿಯನ್ನು ಉದಾತೀಕರಣಕೊಳಿಸಿರುವುದನ್ನು ಕಟುವಾಗಿ ಟೀಕಿಸುತ್ತಾರೆ. ಇದು ಓರ್ವ ವಿಮರ್ಶಕನಿರಬೇಕಾದ ನಿಲುವು.
ಗ.ನಾ. ಭಟ್ಟ ಬರೆದ “ಮಾತು ಮದ್ದಳೆ” ಕೃತಿಯ ಕುರಿತು ನಾರಾಯಣ ಯಾಜಿ ಬರಹ

Read More

ಯಾಕೆ ಸಾರ್ ನೀವು  ಎಲ್ಲವನ್ನೂ ಉಲ್ಟಾ ಬರೆಯುತ್ತೀರಿ…?

ನಾವು ನೋಡುತ್ತಿರುವುದೇ ಸತ್ಯ ಎಂದು ಯಾಕೆ ಹೇಳುತ್ತೇವೆ…? ಗೂಬೆ ಅಂದುಕೊಂಡಿರುವುದು ಸರಿ ಆಗಿರಬಹುದು… ನಾಯಿ ನೋಡುತ್ತಿರುವುದೇ ಸರಿ ಇರಬಹುದಲ್ಲ…! ಹೀಗಾಗಿ ಭೂಮಿಗೆ ಅದರದೇ ಒಂದು ಕ್ಯಾರೆಕ್ಟರ್ ಇಲ್ಲ. ಎಲ್ಲಾ ನಾವು ಮಾಡಿಕೊಂಡಿರುವುದು. ನೀರಿಗೆ ಹೆಣ್ಣಿನ ಹೆಸರನ್ನೇ ಯಾಕೆ ಇಟ್ಟಿದ್ದಾರೆ..? ಅದು ಹೇಳಿತ್ತೇ ನಾನು ಹೆಣ್ಣೆಂದು ಆದರೆ ನಾವು ಹೆಣ್ಣು ಎಂದು ಮಾಡಿಕೊಂಡಿದ್ದೇವೆ. ಇವೆಲ್ಲ ನಮ್ಮ ಕಲ್ಪನೆಗಳು ಇದನ್ನು ಮೀರಿ ಹೇಳಬೇಕು. ಈ ಪ್ರಪಂಚ ಎನ್ನುವುದು ನಾವು ನೋಡಿದಂತೆ ಅದಕ್ಕೆ ತನ್ನದೇ ಆದ ಕ್ಯಾರೆಕ್ಟರ್ ಇಲ್ಲ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ