ಮಾರುತಿ ಗೋಪಿಕುಂಟೆ ಬರೆದ ಈ ಭಾನುವಾರದ ಕತೆ
ಒಮ್ಮೊಮ್ಮೆ ಕನಸ್ಸಿನಲ್ಲಿ ಬೆಚ್ಚಿಬೀಳ್ತಾ ಇದ್ದ. ನಾರಾಣಿ ಅತ್ತಂತೆ ಕನಸ್ಸು ಬೀಳ್ತಾಇತ್ತು ತಾನು ಅತ್ತಂತಾಗುತ್ತಿತ್ತು. ಲಕ್ಷ್ಮಕ್ಕ ಬಂದು ಕತ್ತಿಸಿಕಿದಂತೆ ಕೆನ್ನೆಗೆ ಹೊಡೆದಂತೆ ಭಾಸವಾಗ್ತಾ ಇತ್ತು. ಅವಾಗೆಲ್ಲಾ ವಿಪರೀತ ಖಿನ್ನನಾಗ್ತಾ ಇದ್ದ. ಮಾದನನ್ನು ನೆನೆದಾಗಲೆಲ್ಲಾ ಚಿಕ್ಕಮಕ್ಕಳಂತೆ ಅತ್ತುಬಿಡುತ್ತಿದ್ದ. ಕರ್ಮಗಳೆಲ್ಲಾ ಹೀಗೆ ಕನಸುಗಳಲ್ಲಿ ಬಂದು ಕಾಡ್ತಾ ಇರ್ತವೆ ನಮ್ಮ ಪಾಪಕರ್ಮಗಳು ಕನಸುಗಳಲ್ಲಿ ಜೀವಂತವಾಗಿರುತ್ತವೆ ಅದಕ್ಕಾಗಿಯೇ. ಅವು ನಮ್ಮನ್ನು ಕಾಡುತ್ತವೆ ಕಾಡಿಸುತ್ತವೆ ನಮ್ಮನ್ನು ಶುಭ್ರಗೊಳಿಸುತ್ತವೆ. ಅದಕ್ಕಾಗಿ ನಾವೇಕೆ ಬೆಚ್ಚಬೇಕು. ಅಚ್ಚಹಸಿರಾಗಬೇಕು ಮನಸು ತಿಳಿಯಾಗಬೇಕು.
ಮಾರುತಿ ಗೋಪಿಕುಂಟೆ ಬರೆದ ಈ ಭಾನುವಾರದ ಕತೆ “ಭಾವ ಬಿತ್ತಿದ ಬೀಜ” ನಿಮ್ಮ ಓದಿಗೆ
