Advertisement

Tag: ಕೆಂಡಸಂಪಿಗೆ

ಹಕ್ಕಿಗಳ ಗೂಡು: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಹಲವಾರು ಹಕ್ಕಿಗಳು ಒಟ್ಟಿಗೆ, ಸಮೂಹವಾಗಿ ಕಾಲೊನಿಯನ್ನು ಕಟ್ಟಿಕೊಳ್ಳುವುದೂ ಉಂಟು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಇದು ಸಾಬೀತು ಪಡಿಸುತ್ತದೆ. ಹೀಗೆ ಸಾಮಾನ್ಯವಾಗಿ ಎಲ್ಲ ಹಕ್ಕಿಗಳು ತಮ್ಮ ಗೂಡನ್ನು ತಾವೇ ಕಟ್ಟಿಕೊಳ್ಳುತ್ತವೆ. ಗೂಡುಕಟ್ಟುವ ಕ್ರಿಯೆಯಲ್ಲಾಗಲಿ, ಮೊಟ್ಟೆಗಳಿಗೆ ಕಾವು ಕೊಟ್ಟು, ಮರಿಗಳಿಗೆ ಗುಟುಕು ನೀಡಿ ಬೆಳೆಸುವ ಕಾರ್ಯದಲ್ಲಿಯೇ ಆಗಲಿ ಸಾಮಾನ್ಯವಾಗಿ ಎರಡೂ ಹಕ್ಕಿಗಳು ಕೆಲಸವನ್ನು ಹಂಚಿಕೊಳ್ಳುವುದನ್ನು ಕಾಣುತ್ತೇವೆ. ಸಾಮಾನ್ಯವಾಗಿ ಹೆಣ್ಣುಹಕ್ಕಿ ಗೂಡು ಕಟ್ಟುವ ಕಾರ್ಯ ಮಾಡಿದರೆ, ಗಂಡುಹಕ್ಕಿ ಅಗತ್ಯ ಸಾಮಗ್ರಿಗಳನ್ನು ತಂದು ಪೂರೈಸುವ ಕೆಲಸ ವಹಿಸಿಕೊಳ್ಳುತ್ತದೆ. ಅಪವಾದಗಳು ಇಲ್ಲದಿಲ್ಲ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಹಕ್ಕಿಗಳ ಗೂಡು, ಅವುಗಳ ಕಟ್ಟುವಿಕೆಯ ಕುರಿತ ಬರಹ ಇಲ್ಲಿದೆ

Read More

ಕೀರ್‌ಗಂಗಾ ದಾರಿಯಲ್ಲಿ ಸಿಕ್ಕನೊಬ್ಬ ಸಂತ: ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ ಪ್ರವಾಸ ಸರಣಿ

ಕಾಲು ಸರಿಯಿಲ್ಲದ ಬಾಣಸಿಗನೊಬ್ಬ ಕಷ್ಟಪಟ್ಟು ಮೇಲೇರಿ ಬಂದು ಅಡುಗೆ ಮಾಡಿದ್ದ. ಆತನ ಬದುಕಿನ ಕಷ್ಟಗಳು ಏನಿದ್ದವೋ? ಸದಾ ಚಡಪಡಿಸುತ್ತಲೇ ಇರುತ್ತಿದ್ದ. ಹಿಮಾಚಲ, ಮೇಘಾಲಯದಲ್ಲಿ ಹಬ್ಬುತ್ತಿರುವ ಗಾಂಜಾ ವಾಸನೆ ಇಲ್ಲಿಯೂ ನನ್ನ ಮೂಗಿಗೆ ಬಡಿದಿತ್ತು!! ರಾತ್ರಿಯಾಗುತ್ತಲೇ ಆಗಸದ ಬೀದಿಯಲ್ಲಿ ತಾರಾ ಮೆರವಣಿಗೆ. ಎಲ್ಲೂ ಜಾಗವಿಲ್ಲದಂತೆ ಹಾಸಿದ್ದ ನಕ್ಷತ್ರ ಚಾಪೆ! ಕೌತುಕಮಯ ನೀಲಾಕಾಶ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿ

Read More

ಬುದ್ಧನಿಲ್ಲ ಇಲ್ಲಿ!: ಸುಕನ್ಯಾ ಕನಾರಳ್ಳಿ ಅಂಕಣ

ಮೂರನೆಯ ದಿನದ ಹೊತ್ತಿಗೆ ಹಕ್ಕಿಯಂತೆ ಹಾರಿದರೆ ಮತ್ತೆ ಮರಳುವುದಿಲ್ಲ ಎಂದು ನೂರು ಬಾರಿ ಶಪಥ ಮಾಡಿದ್ದೆ. ಅಷ್ಟರ ಹೊತ್ತಿಗೆ ಇಂಗ್ಲಿಷ್ ಪ್ರವಚನ ಯಾಕೋ ಕೃತಕವೆನ್ನಿಸಿತ್ತು. ಅದೇ ದನಿ ಹಿಂದಿಯಲ್ಲಿ ಕೇಳಿಸಿಕೊಳ್ಳುತ್ತಿದ್ದವರ ಕಡೆಯಿಂದ ಬಂದಾಗ ಅರೆ, ಇದರಲ್ಲಿ ಸಾಕಷ್ಟು ಜೀವಂತಿಕೆ ಇದೆಯಲ್ಲ ಅಂತನ್ನಿಸಿ ಕೊನೆಯ ಪ್ರವಚನವನ್ನು ಕೇಳಲು ಹಿಂದಿಯ ಕಡೆಗೆ ಹೋಗಲು ಪ್ರಯತ್ನಿಸಿದೆ. ‘ಆಚಾರ್ಯರನ್ನು ಕೇಳಿ,’ ಎಂಬ ಆದೇಶ ಬಂತು. ಸರಿ, ಕೇಳಿದೆ. ಪ್ರೈಮರಿ ಸ್ಕೂಲಿನಲ್ಲಿ ‘ಮಿಸ್, ಮಿಸ್, ನಂಗೆ ಬಾತ್ ರೂಮಿಗೆ ಹೋಗಬೇಕು, ಅರ್ಜೆಂಟೂ…’ ನೆನಪಿಗೆ ಬಂದು ಮುಖದಲ್ಲಿ ನಗು ಮೂಡಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿಮೂರನೆಯ ಬರಹ

Read More

ಆಪ್ತವಾಗಿದ್ದ ಆಪ್ತರಂಗ ಪ್ರಯೋಗಗಳು: ಚಿತ್ರಾ ವೆಂಕಟರಾಜು ಸರಣಿ

ಮೂರನೇ ಬೆಲ್‌ ಆದ ತಕ್ಷಣ ನಟ ನಿಧಾನವಾಗಿ ಪ್ರೇಕ್ಷಕರ ಕೈಹಿಡಿದು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ನಟ ಪಾತ್ರದಲ್ಲಿ ಇಳಿಯುತ್ತಿದ್ದಂತೆ ಪ್ರೇಕ್ಷಕನೂ ತನ್ನನ್ನು ಮರೆಯುತ್ತಾನೆ. ನಟರೊಂದಿಗೆ – ನಿರ್ದೇಶಕರು ತಮ್ಮ ತಮ್ಮ ಕಲ್ಪನೆಯಲ್ಲಿ ಇಷ್ಟು ತಿಂಗಳೂ ಕಟ್ಟಿದ ನಾಟಕ ಪ್ರೇಕ್ಷಕರೊಂದಿಗೆ ಸಂವಾದಕ್ಕಿಳಿಯುತ್ತದೆ. ನೋಡಿದ ನಾಟಕಗಳಲ್ಲಿ ಕೆಲವೇ ಕೆಲವು ಪ್ರಯೋಗಗಳು ನಾಟಕ ಮುಗಿದ ಎಷ್ಟೋ ವರ್ಷಗಳ ನಂತರವೂ ನೆನಪಿನ ಭಾಗವಾಗಿ ಭದ್ರವಾಗಿರುತ್ತದೆ ಎಂದರೆ ಆ ಮಾಧ್ಯಮಕ್ಕಿರುವ ಶಕ್ತಿ ಅಂಥದ್ದು! ಆ ಪ್ರಯೋಗಗಳು ಹೇಗಿತ್ತು ಎಂದರೆ ಹೇಳಲು ಬರುವುದಿಲ್ಲ…
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಹರ್ಷದ ಕೂಳನ್ನು ನೆಚ್ಚಿಕೊಂಡು ವರ್ಷದ ಕೂಳನ್ನು  ಕಳೆದುಕೊಳ್ಳಬಾರದಂತೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ನನಗೆ ತೊಂದರೆ ಆಗುತ್ತಿದ್ದುದು ನನ್ನ ಸಂಬಂಧಿಕರ ಮನೆಯಿಂದ ಬರುತ್ತಿದ್ದ 3 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಲು ತುಂಬಾ ತಡವಾಗಿ ಬರುತ್ತಿದ್ದರು. ಇದರಿಂದ ನನಗೆ ಅವರು ಹೋಗುವವರೆಗೂ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾನು ಮಾಡಿದ್ದ ರೂಮಿನಲ್ಲಿ ಒಂದೇ ಹಾಲ್ ಇದ್ದುದ್ದರಿಂದ ಮಕ್ಕಳ ಎದುರಿಗೆ ಹೋಗಿ ಅಡುಗೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿ ಅವರು ಹೋಗುವವರೆಗೂ ಕಾಯಬೇಕಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ