Advertisement

Tag: ಕೆಂಡಸಂಪಿಗೆ

ಇನ್ನು ಮೇಲೆ ನಾವು ಮೂವರೇ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕೋಮಲ ಮನೆಯಲ್ಲಿ ಇಲ್ಲದ ಸಮಯದಲ್ಲಿ ಸೆಲ್ವಿ ತನ್ನ ಅತ್ತೆ ಕನಕಳಿಗೆ ಎಲ್ಲವನ್ನೂ ವಿವರಿಸಿ ಹೇಳಿದಳು. ಕನಕ ತನ್ನ ತವರೂರಿಗೆ ತನ್ನ ಮೊಮ್ಮಗಳನ್ನು ಕೊಡುತ್ತಿರುವುದಕ್ಕೆ ಸಂತೋಷವಾಗಿ ಹುಡುಗ ಕೂಡ ಒಳ್ಳೆಯವನು ಎಂದು ಹೇಳಿದಳು. ಅದೇ ಮಾತುಗಳನ್ನು ಮತ್ತೆ ಸೆಲ್ವಿ, ಮಣಿ ಜೊತೆಗೆ ಕನಕಳ ಮುಂದೆ ಇನ್ನೊಂದೆರಡು ಸಲ ಮಾತನಾಡಿದ ಮೇಲೆ ಅಂತಿಮವಾಗಿ ಕೋಮಲಳನ್ನು ಆರ್ಮುಗಮ್ ಕರೆದುಕೊಂಡುಬಂದಿದ್ದ ಯುವಕ ಸಂತೋಷ್‌ಗೆ ಕೊಟ್ಟು ಮದುವೆ ಮಾಡುವುದಾಗಿ ತೀರ್ಮಾನ ತೆಗೆದುಕೊಂಡರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ

Read More

ಕಾವ್ಯದಿಂದ ಏನನ್ನು ನಿರೀಕ್ಷಿಸುತ್ತೇವೆ?: ಕಮಲಾಕರ ಕಡವೆ ಕೃತಿಗೆ ಸಿರಾಜ್‌ ಅಹಮದ್‌ ಮುನ್ನುಡಿ 

‘ಮುಗಿಯದ ಮಧ್ಯಾಹ್ನʼ ಸಂಕಲನದಲ್ಲಿ ಸೂಚಿಸುವ ಹಾಗೆ ನಿಧಾನ ನಿಧನದತ್ತ ಸಾಗಿರುವ ಸುತ್ತಲಿನ ಜಗತ್ತಿನ ಬಗೆಗೆ ಕವಿ ಬಹಳ ವ್ಯಾಕುಲನಾಗಿದ್ದಾನೆ. ಇನ್ನೊಂದು ಬಗೆಯಲ್ಲಿ ಇದರಿಂದ ಅವನ ಅಂತರಂಗವೂ ಕ್ರಮೇಣ ವಿಕೃತಗೊಂಡಿರುವ ಸೂಚನೆಗಳು ಇಲ್ಲಿ ಸಿಗುತ್ತವೆ. ಹಕ್ಕಿ ಕಂಡರೂ ಅದು ಏರುವ ವಿಸ್ತಾರವನ್ನು ಕಾಣದ ಅದರ ಹಾರಾಟವನ್ನು ಶಂಕಿಸುವ ಮನಸುಗಳಿಗೆ ಮೊದಲು ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗಿ ಹೋಗುವ ದುರಂತವನ್ನು ಕವಿ ಕಾಣಿಸುತ್ತಾನೆ.
ಕಮಲಾಕರ ಕಡವೆ “ವಲಸೆ ಹಕ್ಕಿಗಳ ಹುಯಿಲು” ಕವನ ಸಂಕಲನಕ್ಕೆ ‌ಎಸ್ ಸಿರಾಜ್‌ ಅಹಮದ್‌ ಮುನ್ನುಡಿ

Read More

ಏಳು….. ಕೋಡಗ…… ಕೊಡಗು: ಸುಮಾವೀಣಾ ಸರಣಿ

“ಮಗನೆ ಏಳು!” ಎಂದೆ. “ಎಷ್ಟು ಗಂಟೆ” ಎಂದು ನಿದ್ರೆಗಣ್ಣಲ್ಲಿಯೇ ಅವನು ಕೇಳಿದ “ಏಳು” ಎಂದೆ. “ಗಂಟೆ ಏಳಾಗಿದೆ ಎದ್ದೇಳು” ಎನ್ನಬಹುದಾಗಿತ್ತು. ಅವನ ಪ್ರಶ್ನೆ ಮತ್ತು ನನ್ನ ಕಮಾಂಡ್ ಒಂದೇ ಪದದಲ್ಲಿ ಮುಗಿಯಿತು. ಇಂಥ ಬ್ಯಾಡ್ ಅಲ್ಲ ಬೆಡ್ ತರಲೆಗಳು ಸಹಜವೇ ಅಲ್ವೆ!
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನಾರನೆಯ ಬರಹ ನಿಮ್ಮ ಓದಿಗೆ

Read More

ಎಂ.ವಿ. ಶಶಿಭೂಷಣ ರಾಜು ಬರೆದ ಈ ಭಾನುವಾರದ ಕತೆ

ಬತ್ತಿ ಹೋಗಿರುವ ನದಿಯ ದಡದಲ್ಲಿ ಕುಳಿತು ಹರಿಯುವ ನದಿಯನ್ನು ಕಲ್ಪಿಸಿಕೊಂಡು ಸುಖಪಡುತ್ತಿದ್ದ ಕುಮದ್ವತಿಗೆ, ಎಲ್ಲವೂ ವೇಗವಾಗಿ ಮನಸಿನಲಿ ಸುಳಿದುಹೋದವು. ಕೆಲವು ಸಲ ಊರಿನವರ ಮಾತುಗಳಿಗೆ ಬೇಸರವಾದರೂ, ಪ್ರೀತಿಸುವ ಗಂಡನಿಂದ ಎಲ್ಲವೂ ಮರೆಯುತ್ತಿದ್ದಳು. ಸೊಸೆಯ ಒಳ್ಳೆಯತನ ಕಂಡಮೇಲೆ ಅತ್ತೆ ಇನ್ನೂ ಹತ್ತಿರವಾಗಿದ್ದರು. ಸೊಸೆಗೆ ಯಾವುದೇ ತೊಂದರೆ ಆಗದಂತೆ, ತನ್ನ ಮಗನಿಂದ ಅವಳಿಗೆ ಅನ್ಯಾಯ ಆಯಿತಲ್ಲ ಎನ್ನುವ ಪಾಪ ಪ್ರಜ್ಞೆಯಿಂದ ಸೊಸೆಯನ್ನು ಇನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು.
ಎಂ.ವಿ. ಶಶಿಭೂಷಣ ರಾಜು ಬರೆದ ಈ ಭಾನುವಾರದ ಕತೆ “ಕುಮದ್ವತಿ”

Read More

ಆರಕ್ಕೇರದ ಮೂರಕ್ಕಿಳಿಯದ ಬಡವರ ಬದುಕು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಪಕ್ಕದಲ್ಲಿದ್ದ ಮಣಿ, “ಸರ್ ಅವರೆಲ್ಲರ ಹೆಸರುಗಳು ಏನೇನು ಅಂತ ಗೊತ್ತ ಸರ್?” ಎಂದ. ಲೋಗನಾಥನ್, “ಗೊತ್ತಿಲ್ಲ” ಎಂದ. ಮಣಿ “ಕರ್ಣನ್, ಧರ್ಮರಾಯನ್, ಭೀಮನ್, ಅರ್ಜುನನ್, ನಖುಲನ್ ಮತ್ತು ಸಹದೇವನ್” ಎನ್ನುತ್ತಿದ್ದಂತೆ, ಲೋಗನಾಥನ್ “ಇನ್ನೂ ಮೂವರ ಹೆಸರು?” ಕೇಳಿದರು. ಗೋವಿಂದ, “ಮೊದಲ ಇಬ್ಬರು ಸತ್ತೋದರಂತೆ ಸರ್. ಐದು ಜನ ಗಂಡು ಮಕ್ಕಳಾದ ಮೇಲೆ ನಾನು ಹುಟ್ಟಿ, ನನಗೆ ಗೋವಿಂದಾ ಅಂತ ಹೆಸರು ಇಟ್ಟ ಮೇಲೆ ನಮ್ಮಮ್ಮನಿಗೆ ಮಕ್ಕಳಾಗುವುದು ನಿಂತೋಯಿತಂತೆ” ಎಂದ ಗೋವಿಂದನೆ ಬಿದ್ದೂಬಿದ್ದು ನಕ್ಕ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ