Advertisement

Tag: ಕೆಂಡಸಂಪಿಗೆ

“ಲಯ”ದ ಜಾಡು ಹಿಡಿದು: ಸುಭದ್ರಾ ಹೆಗಡೆ ಬರಹ

ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವ, ಕೆಡುಕಿನೆಡೆಗೆ ಸಾಗಬಾರದೆಂಬ ಕಳಕಳಿ, ಪರೋಪಕಾರ ಮನೋಭಾವ ಎಲ್ಲಾ ಪಾತ್ರಗಳಲ್ಲಿ ಅಡಕವಾಗಿರುವ ಮೂಲದ್ರವ್ಯ. ಹಾಗಾಗಿ ವಿದೇಶಿಯಳಾದರೂ ಸೋಫಿಯಾ ಮತ್ತವಳ ಮಗನನ್ನು ತಮ್ಮೊಳಗೆ ಒಬ್ಬನಂತೆ ಭಾವಿಸುತ್ತಾರೆ. ಗಂಗಾಳ ವಿಧವೆ ಮಗಳಿಗೊಂದು ಬದುಕು ಕಟ್ಟಿಕೊಡುವ ಹಿರಿಯಗುಣ ಇವರೆಲ್ಲರಲ್ಲಿ ಕಾಣಸಿಗುತ್ತದೆ. ಸಹಬಾಳ್ವೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬಲ್ಲದು ಎನ್ನುವುದೇ ಲಯದಲ್ಲಿ ಕಂಡುಬರುವ ಪ್ರಮುಖ ಅಂಶ. ವಿವಿಧ ರಂಗದಲ್ಲಿ ವಿಭಿನ್ನ ಬದುಕನ್ನು ಕಟ್ಟಿಕೊಂಡ ಉತ್ತಮ ವಿಚಾರಗಳ, ಸಂಸ್ಕಾರ, ಸಂಸ್ಕೃತಿಪ್ರಿಯರ ಸಮಾವೇಶವೇ ಈ ‘ಲಯ’ ಕಾದಂಬರಿಯಲ್ಲಿದೆ.
ಎಲ್.ಎಸ್.‌ ಶಾಸ್ತ್ರಿ ಅವರ “ಲಯ” ಕಾದಂಬರಿ ಕುರಿತು ಸುಭದ್ರಾ ಹೆಗಡೆ ಬರಹ

Read More

ಪ್ರಸ್ತುತ ಕಾಲಘಟ್ಟ ಮತ್ತು “ಬೆಂಕಿಯ ನೆರಳು”: ಎನ್.ಎಸ್. ಚಿದಂಬರರಾವ್ ಕಾದಂಬರಿಯ ಕುರಿತು ಸಿಂಧೂರಾವ್‌ ಟಿ. ಬರಹ

ಎಲ್ಲಾ ಕಾಲದಲ್ಲೂ ತಮ್ಮ ತಮ್ಮ ಪರಿಸ್ಥಿತಿಗಳಲ್ಲಿ ಸ್ವತಂತ್ರ ಆಲೋಚನೆ ಮತ್ತು ನಡವಳಿಕೆ ತೋರುವುದಕ್ಕೆ ಎಲ್ಲ ಯುವಜನಾಂಗವೂ ಆಶಿಸುತ್ತಲೆ ಇರುತ್ತದೆ. ಅದು ಸಹಜ ಮತ್ತು ಹಾಗೇ ಇರಬೇಕಾದ್ದು. ಕಾಲಕ್ಕೆ ತಕ್ಕಂತೆ ಅವರ ಅಭಿವ್ಯಕ್ತಿಗಳಿಗೆ ನಡವಳಿಕೆಗಳಿಗೆ ಕಡಿವಾಣಗಳು ಬಿಗಿಯಾಗಿ, ಸಡಿಲಾಗಿ, ಉದುರಿಹೋಗಿ ಎಲ್ಲಾ ಆಗಿದೆ. ಈ ಸ್ಥಿತ್ಯಂತರದ ಕಾಲವನ್ನು ಅವರು ಆತ್ಮವಿಶ್ವಾಸ, ಓದು, ಆರ್ಥಿಕ ಸ್ವಾತಂತ್ರ್ಯ ಇದ್ದಾಗ ಹೇಗೆ ನಿಭಾಯಿಸುತ್ತಾರೆ ಎಂಬುದು ಯಶಸ್ಸು ಅಥವಾ ದುರಂತದ ಪರಿಣಾಮವನ್ನು ತಂದಿಡುತ್ತದೆ. ಓದು ಬರಿದೆ ಡಿಗ್ರಿಗಳಾದಾಗ, ಕೆಲಸದ ಪದಕಗಳಾದಾಗ ಏನಾಗುತ್ತದೆ ಎಂಬ ಪರಿಣಾಮವನ್ನು ನೋಡುತ್ತಲೇ ಇದ್ದೇವೆ.
ದಿವಂಗತ ಎನ್.ಎಸ್. ಚಿದಂಬರರಾವ್ ಅವರ “ಬೆಂಕಿಯ ನೆರಳು” ಕಾದಂಬರಿಯನ್ನು ಪುಸ್ತಕ ಮನೆ ಪ್ರಕಾಶನ ಮರುಮುದ್ರಿಸಿದ್ದು, ಈ ಕೃತಿಯ ಕುರಿತು ಸಿಂಧುರಾವ್‌ ಟಿ. ಬರಹ ನಿಮ್ಮ ಓದಿಗೆ

Read More

ಕಮರಿದ ಕನಸುಗಳು…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂದಹಾಗೆ, ಮಾಂಡ್ರೆ ಕವಿಗಳ ಕಂಪೆನಿಯಲ್ಲಿ ಆಗ ಬೇಬಿ ಬರುತ್ತಾಳೆಂಬುದೇ ದೊಡ್ಡ ಸುದ್ದಿ. ನನ್ನ ಮಗಳು ಬೇಬಿ ಬರುತ್ತಾಳೆ ಎಂದು ಓಡಾಡುತ್ತಿದ್ದ ಬಿ.ಪಿ.ಸಣ್ಣಪ್ಪ ಅವರ ಕಾಲು ನಿಂತಲ್ಲಿ ನಿಂತಿದ್ದೇ ಸುಳ್ಳು. ನಮಗೆಲ್ಲ ಬೇಬಿ ಅವರ ನಿಜವಾದ ಮಗಳೆಂದೇ ಎಣಿಕೆ. ಅವಳು ಬಂದರೆ ನಮ್ಮ ಕಂಪೆನಿ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲ ಹೇಳುತ್ತಿದ್ದದ್ದು ನಮಗೆ ಬೇಬಿ ಎಂದರೆ ದೇವಲೋಕದಿಂದ ಥಟ್ಟನೆ ರಾಮದುರ್ಗಕ್ಕೆ ಬಂದಿಳಿವ ದೇವತೆಯ ರೂಪದಂತೆ ಭಾಸವಾಗುತ್ತಿತ್ತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೆಂಟನೆಯ ಕಂತು

Read More

ಸೇದುವಬಾವಿ, ಮೂಲೆಯ ಮಡಕೆ ಮತ್ತು ಮರದಡಿಯ ಮುದುಕ: ಎಸ್. ಗಂಗಾಧರಯ್ಯ ಅನುಭವ ಕಥನ

ಆತುರಗಾಳಿ ಶಂಕರ ತನ್ನ ಜೇಬುಗಳು ಆಗಲೇ ತುಂಬಿರುವುದಾಗಿಯೂ ಕೆಳಗಿಳಿದು ಹೋಗಿ ರಸ್ತೆಯಲ್ಲಿ ನಮಗಾಗಿ ಕಾಯುತ್ತಿರುವುದಾಗಿಯೂ ಪಿಸುಗುಟ್ಟಿದ. ಹಂಗೆ ಪಿಸುಗುಟ್ಟಿದವನು ನಮ್ಮಿಬ್ಬರ ಮಾತಿಗೂ ಕಾಯದೆ ಕೊಂಬೆಯ ಮೇಲಿಂದ ಕೆಳಗೆ ನೆಗೆಯಲು ಮುಂದಾದ. ಆಗ ಅವನ ಚೆಡ್ಡಿ ಅವನು ಕೂತಿದ್ದ ಕೊಂಬೆಯ ಗೂಟದಂಥ ಮೋಟಿಗೆ ಸಿಕ್ಕಿಕೊಂಡುಬಿಟ್ಟಿತ್ತು. ಯಾವಾಗ ಅವನು ದಬುಕ್ಕಂತ ನೆಗೆದನೋ ಅವನ ಚೆಡ್ಡಿ ಪರಪರನೆ ಹರಿದು ಹೋದದ್ದಲ್ಲದೆ ಆಯ ತಪ್ಪಿ ಕೆಳಗೆ ಮಲಗಿದ್ದ ಕಿವುಡಜ್ಜನ ಮೇಲೆ ದೊಪ್ಪನೆ ಬಿದ್ದು ಬಿಟ್ಟ.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”

Read More

ಆಸ್ಟ್ರೇಲಿಯನ್ ಬಹುತ್ವಗಳ ಆತಂಕ ಸಮಯ: ಡಾ. ವಿನತೆ ಶರ್ಮ ಅಂಕಣ

ಅಂದರೆ ಆಸ್ಟ್ರೇಲಿಯಾದಲ್ಲಿ ಎಲ್ಲರೂ ಸಲ್ಲುತ್ತಾರೆ ಎಂದಾಯಿತು. ಯಾವುದೇ ಭಾಷೆ ಮಾತನಾಡುತ್ತಿರಲಿ, ಯಾವುದೇ ಸಂಸ್ಕೃತಿಯನ್ನು ಆಚರಿಸುತ್ತಿರಲಿ, ಯಾವುದೇ ಧರ್ಮವನ್ನು ಪಾಲಿಸುತ್ತಿರಲಿ, ಎಲ್ಲಾರೂ ಇಲ್ಲಿ ಸಲ್ಲುತ್ತಾರೆ. ಅವರ ಆಹಾರ, ಉಡುಗೆತೊಡುಗೆಗಳ ವೈವಿಧ್ಯತೆ, ಇಂಗ್ಲಿಷ್ ಭಾಷೆಯ ಉಚ್ಚಾರಣೆ ಎಲ್ಲವೂ ಸಹ್ಯ, ಸಲ್ಲುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ