Advertisement

Tag: ಕೆಂಡಸಂಪಿಗೆ

ತಂದೆಯವರೊಂದಿಗಿನ, ಮಗನ ನೆನಪುಗಳು: ಪಾಲಾಕ್ಷಪ್ಪ ಎಸ್.ಎನ್. ಬರಹ

ಕುವೆಂಪುರವರನ್ನು ನೋಡಲು ಬರುವವರ ಬಗ್ಗೆ, ಸಂದರ್ಶನಗಳಿಂದ ವಿಶ್ರಾಂತಿಗೆ ಆಗುತ್ತಿದ್ದ ತೊಂದರೆ ಬಗ್ಗೆ, ಆಚರಿಸಿಕೊಳ್ಳದ ಹುಟ್ಟು ಹಬ್ಬದ ಬಗ್ಗೆ, ಅಣ್ಣನನ್ನು ಪ್ರೀತಿಸುವ ಜನರ ಬಗ್ಗೆ, ಸಾಹಿತ್ಯವಲಯದ ಪಿತೂರಿ, ಶೀತಲ ಸಮರದ ಬಗ್ಗೆ, ಎದುರಿಸಿದ ವಿರೋಧಗಳ ಬಗ್ಗೆ, ತಮ್ಮ ಹುದ್ದೆಯ ನಿರ್ವಹಣೆ ಸಂದರ್ಭದ ಕೆಲ ಘಟನೆಗಳ ಬಗ್ಗೆ, ಬಸವೇಶ್ವರ, ವಿವೇಕಾನಂದರ ಬಗೆಗಿನ ಅಭಿಪ್ರಾಯ, ಅಡ್ಡಪಲ್ಲಕ್ಕಿ, ಪಾದಪೂಜೆಗಳ ಬಗೆಗಿನ ತಿರಸ್ಕಾರ, ‘ಮಂತ್ರ ಮಾಂಗಲ್ಯ’ ಸರಳ ವಿವಾಹದ ಬಗ್ಗೆ, ಮಕ್ಕಳ ಮದುವೆಯನ್ನು ಸರಳವಾಗಿ ನೆರವೇರಿಸಿದ ಬಗ್ಗೆ ಒಂದಿಷ್ಟು ವಿವರಗಳು ಈ ಕೃತಿಯಲ್ಲಿವೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬರೆದ “ಅಣ್ಣನ ನೆನಪು” ಕೃತಿಯ ಕುರಿತು ಪಾಲಾಕ್ಷಪ್ಪ ಎಸ್.ಎನ್. ಬರಹ ನಿಮ್ಮ ಓದಿಗೆ

Read More

ಮಹಾಮಾತೆ ನನ್ನತ್ತೆ: ಸುಮಾ ಸತೀಶ್ ಸರಣಿ

ಅವರ ಜೀವನ ಪ್ರೀತಿ ಬಲು ಹಿತವಾಗಿತ್ತು.‌ ಮನೆತುಂಬ ಮಕ್ಕಳಿದ್ದಾಗ ತರಾವರಿ ಅಡುಗೆ ಮಾಡುತ್ತಿದ್ದರು.‌ ಕೊನೆಗೆ ತಾವಿಬ್ಬರೇ ಇರುವಾಗಲೂ ಯಾವೊಂದು ತಿಂಡಿಯನ್ನೂ ಬಿಡದೆ ಮಾಡುತ್ತಿದ್ದರು. ಇಡ್ಲಿ, ದೋಸೆ, ಕಡುಬು, ಒಬ್ಬಟ್ಟು ಊಹೂ ಯಾವುದೂ ಬಿಡುತ್ತಿರಲಿಲ್ಲ. ಸೋಮಾರಿತನ ಇವರನ್ನು ಕದ್ದು ನೋಡಲೂ ಹೆದರಿ ಓಡುತ್ತಿತ್ತು. ಕೊನೆಗೆ ಮಾಮ ಹೋದ ಮೇಲೆ ಸುಮಾರು ವರ್ಷಗಳು ಒಬ್ಬರೇ ಇದ್ದಾಗಲೂ ಅದೇ ಆಹಾರ ಪದ್ಧತಿಯಿತ್ತು. ತಾವೊಬ್ಬರೇ ತಿನ್ನದೆ ಅಕ್ಕಪಕ್ಕದವರಿಗೆ, ಹತ್ತಿರದ ಬಡಮಕ್ಕಳಿಗೆ, ಕೂಲಿ ಕೆಲಸದವರಿಗೆ‌ ಕೊಟ್ಟು ತಿನ್ನುತ್ತಿದ್ದರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ

Read More

ಹುಬ್ಬಳ್ಳಿಗರ ಇಂಗ್ಲೀಷ್ ವ್ಯಾಮೋಹ: ರೂಪಾ ಜೋಶಿ ಬರೆದ ಲಲಿತ ಪ್ರಬಂಧ

ಇಲ್ಲಿಯ ಭಾಷೆಯಲ್ಲಿ ಎಲ್ಲರಿಗೂ “ರೀ”…. ಎಂಬ ಅಕ್ಷರ ಹಚ್ಚಿಯೇ ಮಾತಾಡುವ ರೂಢಿಯಿದೆ. ಅಪ್ಪಾರು, ಅವ್ವಾರು, ಅಕ್ಕಾರು, ಮಾಮಾರು, ಅಣ್ಣಾರು, ಅಜ್ಜಾರು ಹೀಗೇ. ಎಲ್ಲರನ್ನೂ ಬಹುವಚನದಲ್ಲೇ ಹೆಸರಿಸುವ ಈ ಪದ್ಧತಿ ನಿಜಕ್ಕೂ ಒಳ್ಳೆಯದೇ. ಅದೇ ಕಾರಣಕ್ಕೆ ಆಂಗ್ಲ ಪದ ಬಳಕೆ ಮಾಡಿದಾಗಲೂ ಅವರು ಅದಕ್ಕೆ ಕನ್ನಡದ ‘ರೀ’ ಮತ್ತೂ ‘ರು’ ಪದ ಹಚ್ಚಿ, ” ಮೇಡಮ್ರಿ, ಸರ್ರೀ, ಮಮ್ಮೀರೀ…. ಡ್ಯಾಡಿರೀ, ಅಜ್ಜಾರ್ರೀ, ಅಂಕಲ್ರೀ ಅಂತ ರೂಪಾಂತರಿಸಿ, ಅದು ನಮ್ಮ ಕನ್ನಡದ್ದೇ ಅನ್ನುವಷ್ಟು ಸಲೀಸಾಗಿ ಬಳಸುವುದನ್ನು ನೋಡಿ, ನನಗೆ ಮೊದ ಮೊದಲು ತುಂಬಾ ವಿಸ್ಮಯವೆನ್ನಿಸುತ್ತಿತ್ತು.
ರೂಪಾ ರವೀಂದ್ರ ಜೋಷಿ ಬರೆದ ಪ್ರಬಂಧ

Read More

ಚಾಲೆಂಜ್ ಗೆಲ್ಲೋಕೆ ತಿನ್ನುತ್ತಿದ್ದ ರೋಚಕ ಪ್ರಸಂಗಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಾನು ಮೆಸ್ ಬಿಲ್ ಕೊಡುವುದು ಒಂದೆರಡು ತಿಂಗಳು ತಡವಾಯ್ತು. ಆಗ ಚೆನ್ನಕೇಶವಣ್ಣನ ಸಿಟ್ಟು ನನ್ನ ಮೇಲೆ ತಾರಕಕ್ಕೇರಿತ್ತು. ಈ ವಿಷಯವನ್ನು ಚೆನ್ನಕೇಶನಣ್ಣನ ಮನೆಯವರ ಬಳಿ ಹೇಳಿದೆ. ಆಗ ಅವರು ಅವರ ಬಳಿ ಇದ್ದ ಹಣವನ್ನೇ ಕೊಟ್ಟು ಮೆಸ್ ಬಿಲ್ ಕೊಡು ಎಂದು ತಿಳಿಸಿದ್ದರು. ಹೀಗೆ ಅವರು ಮಾತೃಹೃದಯಿಯಾಗಿದ್ದರು. ಅವರು ಕೋಪ ಮಾಡಿಕೊಂಡಿದ್ದನ್ನು ನಾನು ನೋಡಿಯೇ ಇರಲಿಲ್ಲ. ತುಂಬಾ ತಾಳ್ಮೆ ಇತ್ತು. ನಗುಮೊಗದ ಸ್ವಭಾವ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೇಳನೆಯ ಕಂತು ನಿಮ್ಮ ಓದಿಗೆ

Read More

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ಸಂದರ್ಶನ ಚೆನ್ನಾಗಿ ಮೂಡಿ ಬಂತು. ಬಾಲಮುರಳಿ ಸಂಗೀತದ ಬಗ್ಗೆ, ತಮ್ಮ ಬಗ್ಗೆ ಮಾತ್ರವಲ್ಲ, ಉಳಿದ ಸಂಗೀತಗಾರರ ಬಗ್ಗೆ ಕೂಡ ಅದ್ಭುತ ಒಳನೋಟಗಳನ್ನು ನೀಡಿದರು. ಮಾತು ಮಾತಿಗೂ ಹಾಡುತ್ತಿದ್ದರು. ಕಣ್ಣುಗಳಲ್ಲಿ ಅದೇನು ತಲ್ಲೀನತೆ. ಮೈಮರೆತು ಇನ್ನೊಂದು ಲೋಕಕ್ಕೆ ಹೋಗಿ ಕೇಳುಗರನ್ನೂ, ವೀಕ್ಷಕರನ್ನೂ ಇನ್ನೊಂದು ಲೋಕಕ್ಕೆ ಕರೆದೊಯ್ಯುವ ಉತ್ಸುಕತೆ. ಮಾತುಕತೆಯ ಉದ್ದಕ್ಕೂ.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ “ಅಕಾಡೆಮಿ ಒಲ್ಲೆನೆಂದ ಬಾಲಮುರಳಿ ಕೃಷ್ಣ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ