Advertisement

Tag: kendasampige

ಕಾರೂ… ಕಾರ್‌ ಬಾರೂ..: ಗುರುಪ್ರಸಾದ ಕುರ್ತಕೋಟಿ ಸರಣಿ

ಕಾರನ್ನ ಮನೆಗೆ ನಾನೇ ಓಡಿಸಿಕೊಂಡು ಬಂದೆ. ಜೊತೆಗೆ ಅಜ್ಜಂಪುರ ಸರ್ ಕೂಡ ಬಂದರು. ಅವರ ಧೈರ್ಯ ಮೆಚ್ಚಲೇಬೇಕು! ನನಗೆ ಅಮೆರಿಕೆಯಲ್ಲಿ ಮೊದಲೇ ಕಾರ್ ಓಡಿಸಿದ ಅನುಭವ ಇತ್ತು. ಹಿಂದೆ ಒಂದೆರಡು ಬಾರಿ ಕೆಲವು ತಿಂಗಳಿಗೆ ಅಂತ ಅಮೆರಿಕೆಯ ಯುಟಾ (Utah) ಗೆ ಹೋಗಿದ್ದಾಗ ಅಲ್ಲಿ ನನ್ನ ಮ್ಯಾನೇಜರ್ ನನಗೆ ಒತ್ತಾಯ ಮಾಡಿ ಕಾರ್ ಓಡಿಸಲು ರೂಡಿ ಮಾಡಿಸಿದ್ದು ಈಗ ಪ್ರಯೋಜನಕ್ಕೆ ಬಂದಿತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಎಂಟನೆಯ ಬರಹ

Read More

ಏನು ಬರೆಯುವುದು?: ಎಂ.ವಿ. ಶಶಿಭೂಷಣ ರಾಜು ಬರಹ

ತಮ್ಮ ಖಯಾಲಿಗೋ, ಸಾಮಾಜಿಕ ಜವಾಬ್ದಾರಿಯಿಂದಲೋ, ಸಮಾಜಕ್ಕೆ ತನ್ನದೊಂದು ಅಳಿಲ ಸೇವೆ ಎಂದೋ ಪ್ರಖ್ಯಾತಗೊಳ್ಳಲೋ ಬರೆಯುವರಿಗೆ ಸ್ವಲ್ಪ ಭಯ ಇದ್ದೇ ಇರುತ್ತದೆ. ಏಕೆಂದರೆ ಸಹಾಯ ಮಾಡಿಸಿಕೊಂಡವರೇ ಎದುರು ತಿರುಗುವುದು, ಹಿಂದೆ ಕೆಟ್ಟದಾಗಿ ಆಡಿಕೊಳ್ಳುವುದು, ಕಷ್ಟಕೊಡುವುದು ಹೀಗೆ ಅನೇಕ ರೀತಿಯಲ್ಲಿ ನೋವು ಕೊಡುವುದರಿಂದ, ನನಗ್ಯಾಕೆ ಇಲ್ಲದ ಉಸಾಬರಿ ಎಂದುಕೊಳ್ಳುವವರು ಸಂಖ್ಯೆ ಹೆಚ್ಚಾಗುತ್ತಿದೆ.
ಎಂ.ವಿ. ಶಶಿಭೂಷಣ ರಾಜು ಬರಹ ನಿಮ್ಮ ಓದಿಗೆ

Read More

ಕಡಲಿನಗಲದ ಕಣ್ಣುಗಳೊಳಗಿನ ಸುನಾಮಿ…: ಆಶಾ ಜಗದೀಶ್ ಅಂಕಣ

ನಾವು ಅದೆಷ್ಟು ತೀವ್ರವಾಗಿ ಅತ್ತಿದ್ದೇವೆ, ಒಬ್ಬರನ್ನೊಬ್ಬರು ಹಂಬಲಿಸಿದ್ದೇವೆ, ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎನಿಸುವಷ್ಟು ಹಚ್ಚಿಕೊಂಡಿದ್ದೇವೆ. ಜೊತೆಯಲ್ಲಿರುವಂತೆ ಭ್ರಮಿಸಿದ್ದೇವೆ. ಭ್ರಮೆಯಿಂದ ತಿಳಿದೆದ್ದು ವಿಹ್ವಲಗೊಂಡಿದ್ದೇವೆ. ಅದೊಂದು ದಿನ ನಡುರಾತ್ರಿ, ಒಂದು ಕನಸು ಅರಳತೊಡಗಿತ್ತು; ನೈಜವೆನಿಸುವಷ್ಟೇ ಸಹಜವಾಗಿ. ನಾವಿಬ್ಬರೂ ಎರೆಡು ಪುಟ್ಟ ಗಿಳಿಗಳಂತೆ ಒಟ್ಟೊಟ್ಟಾಗಿ ಒತ್ತಿಕೊಂಡು ಕೂತು, ನಿಂತು, ಮಲಗಿ ಆಟವಾಡುತ್ತಿದ್ದೆವು. ಮುದ ಮತ್ತು ಮುಗ್ಧ… ಯಾರ ಸಂಚೋ ತಿಳಿಯದು. ಕನಸು ಒಡೆಯಿತು. ಕಣ್ಣು ತೆರೆದಾಗ ನೀನಿಲ್ಲ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಹೊಸ ಬರಹ

Read More

ಸಮತೆಯ ಸಂತ, ಕಾಮ್ರೇಡ್ ವಿ.ಎನ್. ಪಾಟೀಲ: ರಂಜಾನ್‌ ದರ್ಗಾ ಸರಣಿ

ಪ್ರಾಮಾಣಿಕ ರಾಜಕಾರಣಿಗಳು ತಮ್ಮ ಇಳಿವಯಸ್ಸಿನಲ್ಲಿ ಎಷ್ಟೊಂದು ಕಷ್ಟಪಡುವರು ಎಂಬುದರ ಬಗ್ಗೆ ಅರಿವಿದ್ದ ನನಗೆ ಅಂದು ಬಹಳ ಹೊತ್ತಿನವರೆಗೆ ನಿದ್ರೆ ಬರಲಿಲ್ಲ. ಪ್ರಾಮಾಣಿಕ ರಾಜಕಾರಣಿಗಳಿಗೆ ಇಂಥ ಗತಿ ಬರದೆ ಬೇರೆ ದಾರಿಯಿಲ್ಲ ಎನಿಸಿತು. ಎಷ್ಟೋ ಮರಿಪುಢಾರಿಗಳು ವಿಧಾನ ಸೌಧ, ಮಂತ್ರಿಗಳ ಮನೆ ಮತ್ತು ಶಾಸಕರ ಭವನದ ಮುಂದೆ ಕಾರಲ್ಲಿ ಸುತ್ತಾಡುವುದನ್ನು ನೋಡಿದ ನನಗೆ, ನನ್ನ ನಾಯಕನೊಬ್ಬ ಈ ರೀತಿ ಯಾವ ಸೌಲಭ್ಯಗಳೂ ಇಲ್ಲದೆ ಬದುಕುವುದನ್ನು ನೋಡಿ ಅತೀವ ಖೇದವೆನಿಸಿತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 69ನೇ ಕಂತು ನಿಮ್ಮ ಓದಿಗೆ

Read More

ಐವತ್ತು ಪದ್ಯ, ಮೂವತ್ತಮೂರು ವರ್ಷ…: ದೀಪಾ ಗೋನಾಳ ಬರಹ

ಹೀಗೆ ತೇಲಿ ಹೋದ ಮತ್ತು ಕವಿತೆಯಾಗಿ ಉಳಿದು ಹೋದ ಜೀವ ಕೆತ್ತಿದ ಮೆತ್ತನೆ ಪದಗಳು ಬದುಕನ್ನ ಅವನು ಪಳಗಿಸ ಹೊರಟ ದಾರಿ ನಡುವೆ ನಿಂತು ನಕ್ಕ ದಾರಿಗಲ್ಲು. ಆ ಕಲ್ಲಿಗೂ ಕರುಳುಂಟು ಎನ್ನುವ ಅವನೊಳಗಿನ ಜೀವನಪ್ರೀತಿ. ಕವಿ ತಾನು ಇಲ್ಲದಾಗ ನಾವು ಅವನ ಮನೆಗೆ ಹೋದ್ರೆ ಏನು ಮಾಡಬೇಕು ಅಂತ ಹೇಳಿದ್ದಾನೆ, ಹೇಳಿ ಹೋಗಿದ್ದಾನೆ. ಅವನು ಇದನ್ನೆಲ್ಲ ಯಾಕೆ ಮೊದಲೇ ಇಷ್ಟು ನಿಖರವಾಗಿ ಹೇಳಿದ ಅನ್ನೊ ಪ್ರಶ್ನೆ ನನ್ನದು, ಆದರೆ ಅವನು ಹೇಳಿದ ಮಾತಿಗೆ ಬೆರಗೂ ಹಿಂಬಾಲಿಸೋದು ಕಂಡು ಆಶ್ಚರ್ಯವೂ..
ಎರಡು ವರ್ಷಗಳ ಹಿಂದೆ ತೀರಿಕೊಂಡ ಯುವಕವಿ ಅನಿಲ ಹುಲಮನಿ ಅವರ ಕವನ ಸಂಕಲನ “ಹೊಸ ಅಧ್ಯಾಯ”ವನ್ನು ಧಾರವಾಡದ ಕ್ರಾಂತಿ ಪ್ರಕಾಶನ ಪ್ರಕಟಿಸಿದ್ದು, ಈ ಸಂಕಲನದ ಕುರಿತು ದೀಪಾ ಗೋನಾಳ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ