Advertisement

Tag: kendasampige

ತಿಜೋರಿಯಿಂದ ತಪ್ಪಿಸಿಕೊಂಡ ಘಳಿಗೆಗಳೆಷ್ಟೋ…: ಆಶಾ ಜಗದೀಶ್ ಅಂಕಣ

ಸುಮ್ಮನೇ ತಟ್ಟೆಯ ಮುಂದೆ ಕುಳಿತು ಸಮಯ ಉರುಳದಂತೆ, ಈ ತುತ್ತು ಮತ್ತಾರದೋ ಚೀಲ ಸೇರಲಿ ಎಂದಷ್ಟೇ ಪ್ರಾರ್ಥಿಸುತ್ತಾ… ಇಷ್ಟೇ ಅಲ್ಲವಾ ಈ ಬದುಕು ಎನ್ನುವ ಅಂತಿಮ ಸತ್ಯದ ದರ್ಶನವಾದಾಗ ಯಾವುದೆಲ್ಲವನ್ನು ಬೇಕು ಎಂದುಕೊಳ್ಳುತ್ತಿದ್ದೇವೋ ಅದಾವುದೂ ನಮ್ಮ ಆತ್ಯಂತಿಕ ಜರೂರತ್ತಿನ ಪಟ್ಟಿಯಲ್ಲಿ ಇರಲೇ ಇಲ್ಲ ಎನ್ನುವುದನ್ನು ಪ್ರಯಾಸದಿಂದ ಮನಗಾಣುತ್ತಾ… ಯಾವುದೂ ಪೂರ್ಣವಲ್ಲ ಇಲ್ಲಿ… ಈ ರೈಲು ಬಂಡಿ, ನಾವು ಹತ್ತುವ ಮುಂಚೆಯೇ ಪಯಣ ಆರಂಭಿಸಿತ್ತು ಮತ್ತು ನಾವು ಇಳಿದ ನಂತರವೂ ಪಯಣಿಸುತ್ತಲೇ ಇರುತ್ತದೆ..
ಆಶಾ ಜಗದೀಶ್ ಅಂಕಣ “ಆಶಾ ಲಹರಿ”

Read More

ನನ್ನ ತವನಿಧಿ…: ರಂಜಾನ್ ದರ್ಗಾ ಬರೆಯುವ ಸರಣಿ

ಜನಸಾಮಾನ್ಯರ ಶಕ್ತಿಯಲ್ಲಿ ಮತ್ತು ಜ್ಞಾನ ಶಕ್ತಿಯಲ್ಲಿ ಅವರಿಗೆ ಅಪಾರವಾದ ನಂಬಿಕೆ ಇದೆ. ಒಬ್ಬ ವಕೀಲನಿಗೆ ತನ್ನ ಕ್ಷೇತ್ರದಲ್ಲಿನ ಎಷ್ಟು ಶಬ್ದಗಳು ಗೊತ್ತಿವೆಯೋ ಅದಕ್ಕಿಂತ ಹೆಚ್ಚಿನ ಶಬ್ದಗಳು ಮೀನುಗಾರನಿಗೆ ಅವನ ಸಮುದ್ರ ಸಂಬಂಧದಿಂದ ಗೊತ್ತಾಗುತ್ತವೆ ಎಂದು ಅವರು ಹೇಳಿದ್ದರು. ಆತನಿಗೆ ವಿವಿಧ ಜಾತಿಯ ಜಲಚರಗಳು, ಗಾಳಿ, ಮೋಡಗಳು, ತೆರೆಗಳು, ಕಾಲ ಮತ್ತು ದಿನಮಾನಗಳ ಪರಿಚಯವಿರುತ್ತದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 68ನೇ ಕಂತು ನಿಮ್ಮ ಓದಿಗೆ

Read More

ಮೈಸೂರಿನ ಸಂಕ್ರಾಂತಿಯ ವೈಶಿಷ್ಟ್ಯ: ಡಾ. ಪುನೀತ್ ಕುಮಾರ್ ಪದ್ಮನಾಭನ್ ಬರಹ

ಪ್ರಕೃತಿಮಾತೆಯು ಹೇಗೆ ಸೂರ್ಯನ ಮುಖಾಂತರ ನಮಗೆ ಬೇಕಾದ್ದನ್ನು ಕೊಡುತ್ತಾಳೆಯೋ, ಬದಲಿಗೆ ಯಾವುದನ್ನೂ ನಮ್ಮಿಂದ ಅಪೇಕ್ಷಿಸುವುದಿಲ್ಲವೋ, ಅಂತಹಾ ಒಂದು ಶಕ್ತಿಗೆ, ಪ್ರಕೃತಿಗೆ ನಮ್ಮ ಸಂಕ್ರಾಂತಿಯ ಪೂಜೆ. ಸಂಕ್ರಾಂತಿಯ ದಿನದಂದು ಪೂಜೆಯನ್ನು ಕೃತಜ್ಞತಾ ಭಾವದಿಂದ ಪ್ರಕೃತಿಮಾತೆಗೆ ಮಾಡುವುದೆ ಸಂಕ್ರಾಂತಿಹಬ್ಬದ ವಿಶೇಷತೆ.
ಸಂಕ್ರಾಂತಿ ಹಬ್ಬದ ನಿಮಿತ್ತ ಮೈಸೂರಿನ ಸಂಕ್ರಾಂತಿಯ ಹಿನ್ನೆಲೆ ಹಾಗೂ ಅದರ ವೈಶಿಷ್ಟ್ಯತೆಗಳ ಕುರಿತು ಡಾ. ಪುನೀತ್ ಕುಮಾರ್ ಪದ್ಮನಾಭನ್ ಬರಹ

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಮೊದಲು ಮುಕುಂದರಾವ್ ಹೆಂಡತಿ ಬಳಿ ಹೇಳಿದರು. ಆಗ ಶ್ರೀ ವೇದ “ಅಲ್ಲರೀ, ಆಟೋದವರಿಗೆ ಹೆಣ್ಣು ಕೊಡುವುದಂದರೆ ನೆಂಟರಿಷ್ಟರು ಆಡಿಕೊಳ್ಳುವುದಿಲ್ಲವೇ, ಸಾಮಾನ್ಯವಾಗಿ ಆಟೋ ಡ್ರೈವರ್‌ಗಳ ಬಗ್ಗೆ ಕೆಲವರಿಗೆ ಏನೋ ಒಂದು ರೀತಿಯ ತಾತ್ಸಾರ ಭಾವ ಇರುತ್ತಲ್ಲವೇ, ಅಲ್ಲದೆ ಶ್ರಾವಣಿಗೂ ತುಂಬಾ ವಯಸ್ಸು ಆಗಿ ಹೋಗಿಲ್ಲ, ಇನ್ನೂ ಸ್ವಲ್ಪ ಕಾಯೋಣ, ಬನಶಂಕರಿ ಹುಡುಗ ಇನ್ನೂ ಏನು ಫೈನಲ್ ಮಾಡಿಲ್ಲ ಅಲ್ಲವೇ? ಅದು ಆದರೂ ಆಗಬಹುದಲ್ಲವೇ” ಎಂದಳು.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ಸಮನ್ವಿತ”

Read More

ಕಾಲಕ್ಕೆ ಶರಣು ಎನ್ನೋಣ: ವಿನತೆ ಶರ್ಮ ಅಂಕಣ

ವಾರಾಂತ್ಯಗಳಲ್ಲಿ ದೇಶದ ರಾಜಧಾನಿ ನಗರಗಳಲ್ಲಿ ನಡೆಸುವ ಸಾರ್ವಜನಿಕ ಪ್ರದರ್ಶನಗಳು, ಬಹುಸಂಸ್ಕೃತಿಗಳವರ ಕಾರ್ಯಕ್ರಮಗಳು ಹೆಚ್ಚಾಗಿವೆ. ೨೦೨೩ ರ ಕೊನೆಯಲ್ಲಿ ನಾವು ಮೂರು, ನಾಲ್ಕು ಬಾರಿ ಇಸ್ರೇಲ್, ಪ್ಯಾಲೆಸ್ಟೈನ್-ಗಾಝಾ, ಯೂಕ್ರೇನ್ ಮೂಲಗಳ ಜನರು ನಡೆಸುತ್ತಿದ್ದ ಪ್ರದರ್ಶನಗಳ ಪರಿಣಾಮಕ್ಕೆ ಸಿಲುಕಿದ್ದೆವು. ಅದೇನೂ ದೊಡ್ಡ ವಿಷಯವಲ್ಲ ಬಿಡಿ. ಪ್ರದರ್ಶನದಲ್ಲಿ ಭಾಗವಹಿಸಿದ್ದ ಪ್ರತಿರೋಧಿಗಳು ಘೋಷಣೆಗಳನ್ನು ಕೂಗುತ್ತಾ ರಸ್ತೆಗಿಳಿದಾಗ ಪೊಲೀಸರು ರಸ್ತೆ ಬಂದ್ ಮಾಡಿದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ