Advertisement

Tag: kendasampige

ದರ್ಶನ್‌ ಜಯಣ್ಣ ಹೊಸ ಸರಣಿ “ಸೌದಿ ಡೇಟ್ಸ್” ಇಂದಿನಿಂದ….

ನಾನಿಲ್ಲಿ ಇಲ್ಲಿಯತನಕ ಆರು ವರ್ಷ ನಾಲ್ಕು ತಿಂಗಳುಗಳನ್ನ ಕಳೆದಿದ್ದೇನೆ. ನನ್ನ ಕುಟುಂಬದ ಜೊತೆ, ಗೆಳೆಯರ ಜೊತೆ ಈ ದೇಶ ಸುತ್ತಾಡಿದ್ದೇನೆ. ಇಲ್ಲಿನ ಬೃಹತ್ ಕಾರ್ಖಾನೆಗಳನ್ನು ಸ್ವತಃ ನೋಡಿದ್ದೇನೆ. ಇಲ್ಲಿನ ರಣ ಬಿಸಿಲಿನ ಜೊತೆಗೆ ತಂಪಾದ ಹವೆಯನ್ನೂ ಅನುಭವಿಸಿದ್ದೇನೆ. ಮರಳ ಮಳೆ, ನಿಜದ ಮಳೆ ಎರಡಕ್ಕೂ ಸಾಕ್ಷಿಯಾಗಿದ್ದೇನೆ. ಅರಬ್ಬರ ಜೊತೆ ಕೆಲಸ ಮಾಡಿ, ಓಡಾಡಿ ಚರ್ಚಿಸಿದ್ದೇನೆ. ಅವರ ಕನಸು, ವಿಚಾರ, ಜೀವನ ಕ್ರಮ, ಸ್ನೇಹವನ್ನು ಅನುಭವಿಸಿದ್ದೇನೆ.
ಸೌದಿ ಅರೇಬಿಯಾದ ವಾಸಿಯಾದ ದರ್ಶನ್‌ ಜಯಣ್ಣ ಅಲ್ಲಿನ ವಾಸದ ಹಾಗೂ ಆ ದೇಶದ ಕುರಿತು ತಮ್ಮ ಅನುಭವಗಳನ್ನು “ಸೌದಿ ಡೇಟ್ಸ್”‌ ಹೆಸರಿನಲ್ಲಿ ಶನಿವಾರಗಳಂದು, ಹದಿನೈದು ದಿನಗಳಿಗೊಮ್ಮೆ ಬರೆಯಲಿದ್ದಾರೆ

Read More

ತ್ಯಾಗದಿಂದ ಹುಟ್ಟಿಕೊಂಡಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ನಾನು ಬರೆಯುವೆ ಕಣ್ಮರೆಯಾಗಲು, ಇದರಿಂದ ಜೀವನವು ನನಗೆ ಬಹಿರಂಗವಾಗುತ್ತೆ, ನಾನಿಲ್ಲದೆನೇ, ಅಂತ್ಯದಲ್ಲಿ ನನ್ನ ಮುಖವು ಕಾಗದದ ಬಿಳಿ ಬಣ್ಣಕ್ಕಿಂತ ಹೆಚ್ಚು ಮಸುಕಾಗಿರುತ್ತೆ, ಪ್ರತಿಬಿಂಬವಿಲ್ಲದೆನೇ. ತನ್ನನ್ನು ತಾನು ಮರೆಯಬಹುದಾದಂತಹ ಜಗತ್ತು. ಕನ್ನಡಿಯಾಗಲ್ಲ, ಒಂದು ಕಲ್ಲಾಗಿ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಇಟಲಿ ದೇಶದ ಹೆಸರಾಂತ ಕವಿ ಆ್ಯಂಟೊನೆಲಾ ಅನೆಡಾ-ರವರ (Antonella Anedda, 1955) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಶರತ್ಕಾಲದ ರಂಗುರಂಗಿನ ಪ್ರಚಾರ: ಡಾ. ವಿನತೆ ಶರ್ಮ ಅಂಕಣ

ಕಾನೂನಿನ ಪ್ರಕಾರ ಗೋಡೆ ಗ್ರಫಿಟಿ ಆರ್ಟ್, ಮಸಿ ಬಳೆಯುವುದು ಇಂಥವುದೆಲ್ಲಾ ಅಪರಾಧಗಳು. ಬಲವಾದ, ಅದರಲ್ಲೂ ಕೇಂದ್ರೀಯ ವಿರೋಧಪಕ್ಷದ ನಾಯಕರಾದ ಪೀಟರ್ ಡಟ್ಟನ್ ಅವರ ಭಿತ್ತಿಚಿತ್ರಕ್ಕೆ ಮಸಿ ಬಳೆದದ್ದನ್ನ ನೋಡಿ ನನಗೆ ಆಶ್ಚರ್ಯವಾಯ್ತು. ಅದ್ಯಾರೊ ಬಹಳ ಧೈರ್ಯವಂತರಿರಬೇಕು ಎಂದುಕೊಂಡೆ. ಇಲ್ಲವೇ, ಡಟ್ಟನ್ ಅವರ ಸ್ವಲ್ಪವೂ ಸತ್ವವಿಲ್ಲದ, ಅಸತ್ಯದ, ಅಸಂಗತ ಮಾತುಗಳು, ಹೇಳಿಕೆಗಳಿಂದ ಬೇಸತ್ತು ಅವರ ಭಿತ್ತಿಚಿತ್ರದ ಮುಖಕ್ಕೆ ಮಸಿಬಳೆಯುವ ಯೋಚನೆ ಬಂದಿರಬೇಕು. ಅವರ ಬಳಿ ಸತ್ವಯುತ, ಅಭಿವೃದ್ಧಿ-ಪರ, ಜನ-ಪರ ಆಶ್ವಾಸನೆಗಳು ಇಲ್ಲದಿರುವುದು ಮಸಿಬಳೆದ ಕಿಡಿಗೇಡಿಗಳಿಗೆ ಅದೆಷ್ಟು ನಿರಾಸೆ ತಂದಿರಬೇಕು ಎಂದೆನಿಸಿತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮಕ್ಕಳನ್ನು ಬೆಳೆಸುವ `ಕಲೆ’- ಎಂದಾದರೂ ಸಿದ್ಧಿಸೀತೇ?: ಎಲ್.ಜಿ.ಮೀರಾ ಅಂಕಣ

ಬೆಳಿಗ್ಗೆ ಏಳುವ ಸಮಯದಿಂದ ಹಿಡಿದು ರಾತ್ರಿ ಮಲಗುವ ಸಮಯದ ತನಕ ಪ್ರತಿಯೊಂದೂ ಅಂದರೆ ಇಂಚಿಂಚು ಜೀವನವೂ ನಿರ್ಬಂಧಮಯವಾದ ಜೀವನಶೈಲಿ ಇರುವ ಸನ್ನಿವೇಶ ಇದು. ಮಕ್ಕಳನ್ನು ಅದರಲ್ಲೂ ವಿಜ್ಞಾನ ಶಿಕ್ಷಣ ಆರಿಸಿಕೊಂಡವರಿಗೆ ಜಂಗಮವಾಣಿಯನ್ನು ಮುಟ್ಟಲೂ ಬಿಡದ, ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳಿಗೆ ತೊಡಗಿಸದ ಮನೆಗಳಿವೆ, ವಿದ್ಯಾರ್ಥಿನಿಲಯಗಳಿವೆ! ಈ ವ್ಯವಸ್ಥೆಗೆ ಕೆಲವು ಮಕ್ಕಳು ಹೇಗೋ ಹೊಂದಿಕೊಂಡರೆ ಇನ್ನು ಕೆಲವರು ಆ `ಸೆರೆಮನೆ’ಯಿಂದ ಓಡಿ ಹೋಗಿಬಿಡುವುದು, ಅಥವಾ ದಿಕ್ಕು ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುವುದು ಇಂತಹ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನೇಳನೆಯ ಬರಹ

Read More

ಬೇವಿನ್‌ ಮರ್ದಲ್ಲಿ ಬಾಗ್ಲು ಮಾಡಸ್ತಾರ!: ಎಚ್. ಗೋಪಾಲಕೃಷ್ಣ ಸರಣಿ

ಒಂದೇ ಒಂದು ಭಂಡ ಧೈರ್ಯ ಇತ್ತು ನೋಡಿ. ಅದು ಈಗ ಮುನ್ನೆಲೆಗೆ ಜಿಗಿಯಿತು. ಕೂಡಲೇ ನನ್ನ ಆರನೇ ಸೆನ್ಸ್ ಜಾಗೃತ ಆಯಿತು. ನನ್ನ ಅರಿವಿಗೆ ಬಂದಿದ್ದ ಬೇವಿಗೆ ಸಂಬಂಧಪಟ್ಟ ಲೇಖನಗಳು, ಅವುಗಳ ಬಗ್ಗೆ ಇದ್ದ ನಂಬಿಕೆಗಳು, ನಮ್ಮ ಪೂರ್ವಜರು ಬೇವನ್ನು ಉಪಯೋಗಿಸುತ್ತಿದ್ದ ರೀತಿ ರಿವಾಜು ಎಲ್ಲವೂ ತಲೆಯಲ್ಲಿ ಒಂದರ ಹಿಂದೆ ಒಂದು ಬಂದು ಕ್ಯೂ ನಿಂತವು. ಮಲ್ಲಯ್ಯನ ಕಡೆ ನೋಡಿದೆ. ಅವನ ಮುಖದಲ್ಲಿ ಒಂದು ರೀತಿಯ ವಿಚಿತ್ರ ಕಳೆ ಕಾಣಿಸಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೆಂಟನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ