Advertisement

Tag: Roopashree Kalliganur

ಅಗರ್ತಲಾದ ಬೀದಿಗಳಲ್ಲಿ ಸುತ್ತಾಡಿದ ನೆನಪುಗಳು: ರೂಪಶ್ರೀ ಕಲ್ಲಿಗನೂರ್ ಅಂಕಣ

“ತ್ರಿಪುರಾ ವಿಶ್ವವಿದ್ಯಾಲಯದಿಂದ ನೀರ್ ಮಹಲ್ ಮೂವತ್ತು ಕಿಲೋಮೀಟರುಗಳಷ್ಟು ದೂರವಿತ್ತು. ಹಾದಿಯುದ್ದಕ್ಕೂ ಅಲ್ಲಲ್ಲಿ ಹಸುರು ಗದ್ದೆಗಳು, ಕೈಕಾಲು ಮುರಿದುಕೊಂಡು ಬೀದಿಗೆ ಬಿದ್ದ ಬಂಗಾಳಿ ದೇವತೆಯರು, ಮೆಟಲ್ ಶೀಟಿನ ಅಂಗಡಿಗಳು, ಮನೆಗಳು, ಕಾಡು ಕಡಿದು ಎದೆಯುಬ್ಬಿಸಿಕೊಂಡು ಎದ್ದು ನಿಂತಿದ್ದ ರಬ್ಬರ್ ತೋಟಗಳು ಸಿಕ್ಕವು. ಪ್ರವಾಸಿಗರ ಕೊರತೆಯಿಂದ ಹಾಗೂ ಬಡತನದ ಹೊಡೆತದಿಂದ ಅಗರ್ತಲಾ…”

Read More

ಇಳೆಯ ಹಾಗೆ ಮಳೆಗೆ ಕಾಯುತ್ತಾ: ರೂಪಶ್ರೀ ಕಲ್ಲಿಗನೂರ್ ಅಂಕಣ

“ನಾವಿಷ್ಟಪಟ್ಟ ಸ್ಥಳಕ್ಕೆ ಆದಾಗಲೊಮ್ಮೆ ಭೇಟಿಕೊಡುತ್ತೇವೆ ಅನ್ನೋದು ನಿಜ. ಆದ್ರೆ ಆ ಸ್ಥಳ ಮೊದಲ ಸಲ ಹೋದಾಗ ಇದ್ದಷ್ಟೇ ಚಂದವಾಗಿ ಇದ್ಯ? ಕಳೆದ ಸಲ ಹೋದಾಗ ಅದರ ಪರಿಸ್ಥಿತಿ ಏನಾಗಿತ್ತು? ಒಮ್ಮೆ ಎರಡೂ ಪ್ರವಾಸವನ್ನು ನೆನಪಿಗೆ ತಂದುಕೊಳ್ಳಿ. ಮೊದಲಿಗೆ ಹೋದಾಗ ಆಗಿದ್ದ ಸಂತೋಷ ಮತ್ತೆಮತ್ತೆ ಹೋದಾಗಲೂ ಘಟಿಸುತ್ತಿದೆಯೆಂದರೆ ಆ ಸ್ಥಳವಿನ್ನೂ ಮನುಷ್ಯನ ಅಟ್ಟಹಾಸಕ್ಕೆ ಸಿಕ್ಕಿಹಾಕಿಕೊಂಡಿಲ್ಲ ಎಂದರ್ಥ. ಆದ್ರೆ ಹಾಗೆ ಯಾವುದಾದ್ರೂ ಸ್ಥಳ ಕೇವಲ ಹತ್ತು ವರ್ಷ ಹಿಂದಿದ್ದಷ್ಟೇ ಪ್ರಶಾಂತವಾಗಿ, ಸ್ವಚ್ಛವಾಗಿ, ಚಂದದಿಂದ ಉಳಿದುಕೊಂಡಿರೋದು ಸಾಧ್ಯವೇ ಇಲ್ಲ ಅನ್ನಬಹುದು.”

Read More

“ಪಾಯಿಖಾನೆ ಒಲ್ಲೆ ಎನ್ನುವ ಹೆಣ್ಣುಮಕ್ಕಳು”: ರೂಪಶ್ರೀ ಕಲ್ಲಿಗನೂರ್ ಅಂಕಣ

“ಆವತ್ತು ನಾನು ಮತ್ತೆ ಅಕ್ಕಾ ಒತ್ತಾಯಿಸಿದ್ದೆವು ಅಂತ ಅಣ್ಣ ಪಾಯಿಖಾನೆ ಹಾಕಿಸಿದ್ದ. ಆದರೆ ಹೀಗೆ ನಾವು ಬೆಂಗಳೂರಿನ ಕಡೆ ಮುಖಮಾಡಿದ್ದೇ ಅದಕ್ಕೆ ಬೀಗ ಬಿದ್ದಿತ್ತು! ನಾವೀಗ ಮತ್ತೆ ಅಲ್ಲಿಗೆ ಬರೋ ಸುದ್ದಿ ಕೇಳಿದ ಮೇಲೆ, ಅದರ ಬೀಗವನ್ನು ತೆರೆಯಲಾಗಿತ್ತು. ಮನೆಯ ಗಂಡಸರಿರಲೀ, ಅಥವಾ ದೊಡ್ಡಮ್ಮ ಅದನ್ನು ಬಳಸುವ ಮಾತು ಹಾಗಿರಲಿ, ಮನೆಯ ಯಾವ ಹೆಣ್ಮಕ್ಕಳಿಗೂ ಆ “ಪಾಯಖಾನೆ”ಯ ಸುದ್ದಿಯೇ ಬೇಡ.”

Read More

ಶಾಪಿಂಗ್ ಭೂತದ ಬೆನ್ನೇರಿ: ರೂಪಶ್ರೀ ಕಲ್ಲಿಗನೂರ್ ಅಂಕಣ

“ಚುಮ್ಮಿಗೆ ನಾನು “ಕರ್ನಾಟಕ” ಕೊಡಿಸಲ್ಲ ಅಂತ ಖಾತ್ರಿಯಾದದ್ದೇ, ಅವಳೂ ಓಡಾಟವನ್ನು ನಿಲ್ಲಿಸಿ, ಬಂದು ನನ್ನ ಪಕ್ಕದಲ್ಲಿ ಕುಳಿತಿದ್ದಳು. ನಮ್ಮೆದುರಿಗೇ ಬಿಲ್ಲಿಂಗ್ ಕೌಂಟರ್ ಇತ್ತು. ಅಂಗಡಿಯ ಹೊರಗೆ-ಒಳಗೆಲ್ಲ ಆಫರ್ ಬೋರ್ಡುಗಳ ಸುರಿಮಳೆ. ಆಫರ್ ಅಂದಮೇಲೆ ಗೊತ್ತಲ್ಲ. 900 ವಸ್ತುವಿಗೆ 1500 ರೂ ಬೆಲೆ ಹಾಕಿ, ಮತ್ತದರ ಮೇಲೆ ಗೀಟು ಎಳೆದು 300 ರೂ ಆಫರ್ ಅಂತ ಹಾಕಿರೋದನ್ನೂ ಕಣ್ಣುಮುಚ್ಚಿ ತೆಗೆದುಕೊಳ್ತಾರೆ.”

Read More

ಗೋಡೆ ಹಾರುತ್ತಿದ್ದ ಗೆಳತಿಯರು: ರೂಪಶ್ರೀ ಅಂಕಣ

“ಅಲ್ಲಿ ನಾವಿಬ್ಬರೂ ಶಾಲೆ ಕಲಿತ ನೆನಪಿತ್ತು. ಗುಲ್ ಮೊಹರ್ ಹೂವಿನ ಕೆಳಗಿನ ಎಸಳನ್ನು ಉಗುರುಗಳಿಗೆ ಅಂಟಿಸಿಕೊಂಡು “ದೆವ್ವಾ… ದೆವ್ವಾ..” ಅಂತ ಪುಟ್ಟ ತಮ್ಮನಿಗೆ ಹೆದರಿಸಿ, ಆಟ ಆಡಿದ ನೆನಪಿತ್ತು. ಅದರಲ್ಲೂ ಮುಖ್ಯವಾಗಿ ಬಹುತೇಕ ಸಂಜೆಗಳಲ್ಲಿ ಅಕ್ಕ ಮತ್ತು ನಾನು ಬಾಡಿಗೆ ಸೈಕಲ್ ಪಡೆದು ಮೈದಾನದ ತುಂಬೆಲ್ಲ ಸುತ್ತಾಡಿದ ನೆನಪಂತೂ ಇನ್ನೂ ಬೆಚ್ಚಗೆ ಮನಸ್ಸಲ್ಲಿದೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ