Advertisement
ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಉಳಿದ ಕಿಡಿಗಳು…

ಎಂದೋ ಹೊತ್ತುರಿದ ಪರ್ವದಿನಗಳ
ಅಗ್ನಿ ಕುಂಡದಲಿ, ಇನ್ನೂ ಬಿಸುಪು
ಉಳಿದಿರಬಹುದೇ ಎಂದು
ಕಣ್ಣೋಟದಲಿ ಮಿಂಚನರಸಿ
ಬರಬೇಡ ಹೊತ್ತು ಸಿಡಿವ ಕಿಡಿಗಳನು

ನೆರೆತ ತಲೆಗೂದಲು
ಮೈಯ ಸುಕ್ಕಲು ಬೆಸೆತ
ಹೊಸ ಬಾಂದವ್ಯಗಳ ಒಂಟಿ ಬದುಕಿನ ನಡುವೆ
ಉಳಿದಿರಬಹುದೇ ಎಂದು, ಕಾಡಿದ
ಅಂದಿನ ಆ ಬೆಳದಿಂಗಳು

ಭದ್ರವಾಗಿಟ್ಟಿರುವೆ ಜೋಪಾನ
ತೆರೆಯಹೊರಟರೆ ಉಕ್ಕಬಹುದು
ಆದರೂ ಒಪ್ಪಲಾರೆ, ಬತ್ತದೊಲವ
ನೋವಿನಲಿ ಮೌನ
ಹೊಲಿದ ತುಟಿಗಳ ನಡುವೆ ಉಳಿದ ನಮ್ಮದೇ ಧ್ಯಾನ

ಮನದುಳಿದ ಚಿತ್ರ ಕದಲಿಸಿ
ಕಳೆದ ದಿನಗಳ ಮರುಕಳಿಸಿ
ʼಒಂದಿಷ್ಟು ಜೀವಿಸು?ʼ ಎಂದವನ
ಕರೆಗೆ ಓಗೊಟ್ಟು, ಅಂದು ಬದಿಗೆ
ಸರಿದು ನಿಂತವನ ಪ್ರಶ್ನೆಗೆ ಉತ್ತರವಾಗಲಾರೆ

About The Author

ಡಾ.ಪ್ರೇಮಲತ

ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್‌ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ