Advertisement

ಸಾಹಿತ್ಯ

ಆಶಾ ಜಗದೀಶ್‌ ಬರೆದ ಈ ಭಾನುವಾರದ ಕತೆ “ನೆನಪುಗಳು”

ಆಶಾ ಜಗದೀಶ್‌ ಬರೆದ ಈ ಭಾನುವಾರದ ಕತೆ “ನೆನಪುಗಳು”

ಕಣ್ಣ ಹೊಸಿಲ ದಾಟಿ ಹನಿಯೊಂದು ಮತ್ತೆ ಉಪ್ಪು ಕಡಲನ್ನು ಸೇರಿತು. ಅವನ ಜೊತೆ ಹಾಕಿದ ಹೆಜ್ಜೆಗಳು, ಮಾತು, ನಗು, ಮುದ್ದು, ಎದೆಬಡಿತ, ಆಣೆ, ಪ್ರಮಾಣ, ಕಣ್ಣೀರು, ನೋವು… ಯಾವುದೂ ಸುಳ್ಳಲ್ಲ. ಅವನು ಅಷ್ಟೊಂದು ದ್ರೋಹಿಯಾಗಿರಲು ಸಾಧ್ಯವಿಲ್ಲ. ಅದರ ಸತ್ಯ ನನಗೆ ಗೊತ್ತು. ತೀವ್ರ ಭಾವಗಳು ಹೃದಯದಿಂದಲೇ ಹುಟ್ಟುತ್ತವೆ. ಆದರೆ ಮನುಷ್ಯನಾದವನಿಗೆ ಅವನ್ನು ತನ್ನ ಸಮಯಸಾಧಕತನಕ್ಕೆ ಬಳಸಿಕೊಳ್ಳುವುದು ಗೊತ್ತು, ಸತ್ಯವಾಗುಳಿವ ಅವಕಾಶವಿದ್ದಾಗಲೂ.
ಆಶಾ ಜಗದೀಶ್‌ ಬರೆದ ಈ ಭಾನುವಾರದ ಕತೆ “ನೆನಪುಗಳು”

read more
ಹುತಾತ್ಮ ಜತೀಂದ್ರನಾಥರಿಂದಾಗಿ ಮೊಳಗಿದ ‘ಪಾಂಚಜನ್ಯ’: “ಹಳೆಯ ಪುಟಗಳಿಂದ” ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ

ಹುತಾತ್ಮ ಜತೀಂದ್ರನಾಥರಿಂದಾಗಿ ಮೊಳಗಿದ ‘ಪಾಂಚಜನ್ಯ’: “ಹಳೆಯ ಪುಟಗಳಿಂದ” ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ

ಆಗ ಕುವೆಂಪು ತಾವು ಬರೆಯುತ್ತಿದ್ದ ದಿನಚರಿ, ಪತ್ರಗಳು, ಕವಿತೆಗಳು ಮೊದಲಾದುವುಗಳ ತುದಿಯಲ್ಲಿ ‘ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಬರೆಯುತ್ತಿದ್ದರು. ಪಾಂಚಜನ್ಯವನ್ನು ಮೊದಲು ಪ್ರಕಟಿಸಿದ ‘ವಿಶ್ವಕರ್ಣಾಟಕ’ ಪತ್ರಿಕೆಯ ಸಂಪಾದಕರಿಗೆ ಬರೆದಿದ್ದ ಪೋಸ್ಟ್ ಕಾರ್ಡಿನಲ್ಲೂ ಈ ಕ್ರಾಂತಿ ಬೀಜಾಕ್ಷರಗಳನ್ನು ಕಂಡು, ತಿ.ತಾ.ಶರ್ಮರು ‘ಅಷ್ಟು ಬಟ್ಟಬಯಲಾಗಿ ಬರೆಯಬಾರದು’ ಎಂದು ಕವಿಯ ಹಿತಕ್ಕಾಗಿ ಹೇಳಿದ್ದರಂತೆ. ಕುವೆಂಪು ಈ ಕ್ರಾಂತಿಗೀತೆಯನ್ನು ಬರೆದು ಸಭೆಗಳಲ್ಲಿ ವೀರಾವೇಶದಿಂದ ಅಭಿನಯಪೂರ್ವಕವಾಗಿ ವಾಚಿಸುತ್ತಿದ್ದರು.
“ಹಳೆಯ ಪುಟಗಳಿಂದ” ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ

read more
ಮೋಹನ್‌ ಮಂಜಪ್ಪ ಬರೆದ ಈ ಭಾನುವಾರದ ಕತೆ “ಬದುಕು ಜಟಕಾಬಂಡಿ”

ಮೋಹನ್‌ ಮಂಜಪ್ಪ ಬರೆದ ಈ ಭಾನುವಾರದ ಕತೆ “ಬದುಕು ಜಟಕಾಬಂಡಿ”

ಯಾವಾಗ ಒಬ್ಬ ಮನುಷ್ಯ ಬೇರೆಯವರ ಕಣ್ಣಿಗೆ ಬರೀ ಒಂದು ಬಾಡಿಯಾಗಿ ಬದಲಾಗುತ್ತಾನೋ ಯಾರಿಗೂ ಗೊತ್ತಿಲ್ಲ. ಆದರೂ ಎಲ್ಲರೂ ತಾವೇನೋ ಶಾಶ್ವತವಾಗಿ ಇಲ್ಲೇ ಮೊಳೆ ಹೊಡೆದುಕೊಂಡು ಕೂರೋರ ಹಾಗೇ ಇಡೀ ಪ್ರಪಂಚವೇ ನಂದು ಅನ್ನೋ ಹಾಗೆ ಹೇಗೆ ವರ್ತಿಸುತ್ತೀವಿ!? ನಾಲಕ್ಕೇ ನಾಲಕ್ಕು ಕಾಸು ಜಾಸ್ತಿ ದುಡಿದ ಕೂಡಲೆ ತಲೆ ಮೇಲೊಂದು ಕೊಂಬು ಬಂದಂತೆ ನಡೆದುಕೊಳ್ಳುವುದು, ಧಾಷ್ಟ್ಯ, ಅಹಂಕಾರ, ಅತಿರೇಕದ ಆಟಗಳೋ!?
ಮೋಹನ್‌ ಮಂಜಪ್ಪ ಬರೆದ ಕತೆ “ಬದುಕು ಜಟಕಾಬಂಡಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

read more
ಮಹಾದೇವ್‌ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ನಾಳೆ ಇಲ್ಲದ ಬವಣೆ”

ಮಹಾದೇವ್‌ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ನಾಳೆ ಇಲ್ಲದ ಬವಣೆ”

ಚಳಿಕಾಯಿಸಲೆಂದು ಪಕ್ಕದಲ್ಲೇ ಬಿದ್ದಿದ್ದ ಮರದ ಕೊಂಟಿಗೆ ಉಕ್ಕಡ ಹಾಕಿ, ಏನನ್ನೋ ಯೋಚಿಸುತ್ತ ಒಮ್ಮೆ ಮಲೆ ಮಾದೇಶ್ವರನ ದೇವಸ್ಥಾನದ ರಾಜಗೋಪುರದ ಕಡೆಗೆ ಕಣ್ಣಾಡಿಸಿ ಎದ್ದು ನಿಂತು ಅತ್ತ ತಿರುಗಿ, ಪಾಪ ಎಷ್ಟೋ ವರ್ಷುದ್ ಮೇಲೆ ಎಡ್ತಿ-ಮೊಗೀನ್ ಜೊತೆ ನೆಗ್ನೆಗ್ತಾ ಇದ್ದ, ಸಂಗ್ಡ ಯಾರು ಇಲ್ಲ ಅಂತ ಅವನ್ನ ಈ ಅಡವಿಗೆ ಕರ್ಕುಂಬಂದಿ ಕಿರ್ಬುದ್ಬಾಯಿಗೆ ಆಕ್ಬುಟ್ನಲ್ಲಪ್ಪ ಮಾದಪ್ಪ ಸಣ್ಣಕ್ಕಿನ ನೀನೆ ಕಾಪಾಡಪ್ಪ; ಅವನಿಗೆ ಏನೂ ಆಗ್ದೇ ಇರ್ಲಪ್ಪ!..”
ಮಹಾದೇವ್‌ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ನಾಳೆ ಇಲ್ಲದ ಬವಣೆ” ನಿಮ್ಮ ಓದಿಗೆ

read more
ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಯಾನವಾಸ್”

ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಯಾನವಾಸ್”

ಪ್ರಭಾಳನ್ನ ನಾನೊಬ್ಬ ಹುಚ್ಚನಂತೆ ಆವಾಹಿಸಿಕೊಂಡೆ. ಅವಳನ್ನೇ ಬದುಕಿನ ಬಣ್ಣವಾಗಿಸಿಕೊಂಡೆ. ಕಾವಾದ ಹಿಡಿ ಹಿಡಿ ಮಣ್ಣಿನಲ್ಲೂ ಆಕೆಯ ಹೆಜ್ಜೆಗಳನ್ನ ತಡಕಾಡಿದೆ. ನನ್ನ ಪ್ರತಿ ಪೇಂಟಿಂಗಿನಲ್ಲೂ ಆಕೆಯನ್ನ ಚಿತ್ರಿಸಿದೆ. ನನ್ನ ಜೀವನದಲ್ಲಿ ಘಟಿಸಿದ ವಾಸುದೇವನ ಬಣ್ಣಗಳು, ಅಮ್ಮನ ಚಿತ್ರಗಳು, ಈ ನನ್ನ ಪ್ರಭಾ- ಸತ್ಯ. ಪ್ರಭಾ ಪ್ಯಾಲೆಟ್ಟಿನಲ್ಲಿ ಕಲಿಸಿದ ಬಣ್ಣದಂತೆ. ವಾಸುದೇವನನ್ನ ಚಿತ್ರಿಸುವಾಗ ನನ್ನನ್ನ ಚಿತ್ರಿಸಿದ ಪ್ರಭಾ. ಈಕೆ ಕಲಾಕೃತಿಯಲ್ಲ. ಚಿತ್ರವಲ್ಲ.
ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಯಾನವಾಸ್” ನಿಮ್ಮ ಓದಿಗೆ

read more
ನವೀನ್‌ ತೇಜಸ್ವಿ ಬರೆದ ಈ ಭಾನುವಾರದ ಕತೆ “ಬಂಗಾರಕಡ್ಡಿ ಡೇರೆಹೂವು”

ನವೀನ್‌ ತೇಜಸ್ವಿ ಬರೆದ ಈ ಭಾನುವಾರದ ಕತೆ “ಬಂಗಾರಕಡ್ಡಿ ಡೇರೆಹೂವು”

ನೇತ್ರಿ ಮೆಡಿಕಲ್ ಶಾಪಿನಲ್ಲಿ ಡಾಕ್ಟರ್ ಬರೆದಕ್ಕಿಂತ ಅರ್ಧರ್ಧವೆ ಮಾತ್ರೆ ತೆಗೆಸಿದಳು. ಟಾನಿಕ್ ಇರಲಿಲ್ಲ. ಸ್ವಲ್ಪ ದೂರದಲ್ಲಿ ಮತ್ತೊಂದು ಮೆಡಿಕಲ್ ಶಾಪಿತ್ತು. ಅಲ್ಲಿಗೆ ನಡೆದು ಹೋಗಿ ಅದನ್ನೂ ಕೊಂಡು ಆಸ್ಪತ್ರೆಯ ಕಡೆ ಬಂದರೆ ಕೂತ ಜಾಗದಲ್ಲಿ ಅವ್ವ ಮಗು ಇರಲಿಲ್ಲ! ಹಳದಿ ಕವರ್ರು ಮಾತ್ರವೇ ಬೆಂಚಿನ ಮೇಲಿತ್ತು. ಹೋಗಿ ಮಾತ್ರೆಯನ್ನು ನರ್ಸಿಗೆ ತೋರಿಸಿ ಮತ್ತೆ ಬೆಂಚಿನ ಬಳಿ ಬಂದಳು. ಪಕ್ಕ ಕೂತಿದ್ದ ಅಜ್ಜನೊಬ್ಬ “ತಂಗಿ ನಿಮ್ಮವ್ವ ಇಲ್ಲೆ ಎಲ್ಲೊ ಹೊರಗಡೆ ಹೋದ್ರು. ಹನುಮಂತನ ಗುಡಿ ಹತ್ರ ಇರ್ಬಕಂತೆ. ಬರ್ತಾಳಂತೆ” ಎಂದನು.
ನವೀನ್‌ ತೇಜಸ್ವಿ ಕಥಾಸಂಕಲನ “ಬಂಗಾರಕಡ್ಡಿ ಡೇರೆಹೂವು”, ಶೀರ್ಷಿಕೆ ಕತೆ

read more
ಪೂರ್ಣಿಮಾ ಭಟ್ಟ ಸಣ್ಣಕೇರಿ ಬರೆದ ಈ ಭಾನುವಾರದ ಕತೆ “ಮಾಯ್ಕಾರ ಕಿಟಕಿ”

ಪೂರ್ಣಿಮಾ ಭಟ್ಟ ಸಣ್ಣಕೇರಿ ಬರೆದ ಈ ಭಾನುವಾರದ ಕತೆ “ಮಾಯ್ಕಾರ ಕಿಟಕಿ”

ಊರವರು, ಸಂಬಂಧಿಗಳು ಎಲ್ಲರೂ ಮೇಕಿಯ ಮೇಲೆ ಮನೆಗೆ ಬಂದು ಹೋದರು. ಬಿಳಿಯ ಗಂಡಸನ್ನು ಮದುವೆಯಾದ ಜ್ಯೋತ್ಸ್ನಾಳ ಅದೃಷ್ಟವನ್ನು ನೋಡಬೇಕಿತ್ತಲ್ಲ! ಹೊತ್ತಿಗೊಂದು ಕತೆಕಟ್ಟಿದರು. ಕೆಲವು ಸಂಭಾಷಣೆಗಳ ಹರಿವನ್ನು ನೋಡಿಯೇ ನೀಲ್ ಏನಾಗಿರಬಹುದೆಂದು ಊಹಿಸುತ್ತಿದ್ದ. ‘ಯುವರ್ ಹೋಮ್‌ಲ್ಯಾಂಡ್ ಇಸ್ ನಾಟ್ ಲೈಕ್ ವಾಟ್ ಐ ಥಾಟ್ ಜೋಹ್. ನೌ, ಐ ನೋ ವ್ಹೇರ್ ಯುವರ್ ಇಂಟರ್‌ಪ್ರಿಟೇಶನ್ಸ್ ಕಮ್ ಫ್ರಂ’ ಎಂದು ಎಳೆಗರುವಿನಂತೆ ಮುಖ ಮಾಡಿದಾಗ ಅವಳು ಇನ್ನಷ್ಟು ಮೋಹಕ್ಕೆ ಬಿದ್ದಳು.
ಪೂರ್ಣಿಮಾ ಭಟ್ಟ ಸಣ್ಣಕೇರಿ ಕಥಾ ಸಂಕಲನ “ರಸಮಲಾಯಿ”ಯ ಕತೆ “ಮಾಯ್ಕಾರ ಕಿಟಕಿ”

read more
ರವಿಶಂಕರ್‌ ಎಸ್‌. ಎಲ್. ಮತ್ತು ಇಟಗಿ ಮಹಾಬಲೇಶ್ವರ ಭಟ್ಟ, ಜಂಟಿಯಾಗಿ ಬರೆದ ಕತೆ “ಮನ್ವಂತರ”

ರವಿಶಂಕರ್‌ ಎಸ್‌. ಎಲ್. ಮತ್ತು ಇಟಗಿ ಮಹಾಬಲೇಶ್ವರ ಭಟ್ಟ, ಜಂಟಿಯಾಗಿ ಬರೆದ ಕತೆ “ಮನ್ವಂತರ”

ಯಕ್ಷಗಾನ ಬಿಟ್ಟು ಗಂಭೀರವಾಗಿ ಯಾವುದಾದರೂ ನೌಕರಿ ಸೇರಿಕೊಂಡು ದುಡಿಯಬೇಕು ಇದು ನಮ್ಮ ತಂದೆಯ ವರಾತ. ಯಕ್ಷಗಾನ ಕಲಾವಿದನಿಗೇನು ಸಮಾಜದಲ್ಲಿ ಗೌರವವಿಲ್ಲ. ಅಷ್ಟಾಗಿ ಈಗಿನ ಕಾಲದಲ್ಲಿ ಯಕ್ಷಗಾನದವನಿಗೆ ಯಾರು ಹೆಣ್ಣು ಕೊಟ್ಟಾರು. ರಾತ್ರಿಯಿಡೀ ನಿದ್ದೆ ಬಿಡುವುದು, ಹಗಲು ನಿದ್ದೆ ಮಾಡುವುದು ಗೂಬೆಯಂತೆ. ಇದೇನು ಅಂಥಹ ಪುರುಷಾರ್ಥ ಸಾಧನೆಯ ಹಾದಿಯಲ್ಲ. ಇವುಗಳೆಲ್ಲ ನನ್ನ ತಂದೆಯವರ ಹಳವಂಡ. ತಂದೆಯವರ ಈ ಧೋರಣೆಯು ನನಗೇನೂ ಪರಿಣಾಮ ಬೀರದು.
ರವಿಶಂಕರ್‌ ಎಸ್‌. ಎಲ್. ಮತ್ತು ಇಟಗಿ ಮಹಾಬಲೇಶ್ವರ ಭಟ್ಟ, ಜಂಟಿಯಾಗಿ ಬರೆದ ಕತೆ “ಮನ್ವಂತರ” ನಿಮ್ಮ ಈ ಭಾನುವಾರದ ಓದಿಗೆ

read more
ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ “ನೋಟ”

ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ “ನೋಟ”

ಅವರಿಗೀಗಲೂ ಶಬ್ದ ಮಾಡುವವರಿಗಿಂತ, ಆ ಶಬ್ದವೇ ಆಪ್ತವಾಗಿತ್ತು. ಆದರೆ ಮೇಲಿನ ಮನೆಯ ಆ ಶಬ್ದ ಇತ್ತೀಚಿನ ದಿನಗಳಲ್ಲಿ ಎಷ್ಟೊಂದು ಸಹಜ ಎನಿಸಿದೆಯೆಂದರೆ, ಸದ್ದಾಗುವುದೂ ತನಗೀಗ ತಿಳಿಯುತ್ತಿಲ್ಲ ಎನಿಸಿ ಸಾವಿತ್ರಮ್ಮನಿಗೆ ನಗುಬರುತ್ತಿತ್ತು. ಜೊತೆಗೆ, ತನಗೆ ಕಿವಿ ಇನ್ನಷ್ಟು ಮಂದವಾಗುತ್ತಿದೆಯೇ ಎನ್ನುವ ಅನುಮಾನವೂ ಬರುತ್ತಿತ್ತು. ದಿನವಿಡೀ ನಂಜಯ್ಯ ಮಾತಾಡುವುದು ಅಷ್ಟಕ್ಕಷ್ಟೇ. ಮನೆಗೆ ಬರುವವರು ಆಡುವ ಮಾತೂ ಹೆಚ್ಚೇನಿರುವುದಿಲ್ಲ. ಹಾಗಾಗಿ ಸದಾ ತನಗೆ ಜೊತೆಯಾಗುವುದೆಂದರೆ ಅದೊಂದು ಸದ್ದು ಮಾತ್ರ …
ಅಲಕಾ ಕಟ್ಟೆಮನೆ ಬರೆದ ಕತೆ “ನೋಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ