Advertisement

ಅಂಕಣ

ಕಮಲಾದಾಸ್, ಅನುವಾದ ಹಾಗೂ ಬರಹವೆಂಬ ಬಿಡುಗಡೆ….: ಡಾ. ಎಲ್.ಜಿ. ಮೀರಾ ಅಂಕಣ

ಕಮಲಾದಾಸ್, ಅನುವಾದ ಹಾಗೂ ಬರಹವೆಂಬ ಬಿಡುಗಡೆ….: ಡಾ. ಎಲ್.ಜಿ. ಮೀರಾ ಅಂಕಣ

ಆಧುನಿಕ ಭಾರತೀಯ ಸಾಹಿತ್ಯಚರಿತ್ರೆಯ ಲೇಖಕಿಯರ ಪಟ್ಟಿಯೆಂಬ ಆಕಾಶಗಂಗೆಯಲ್ಲಿ ಎದ್ದು ಕಾಣುವ ಒಂದು ವಿಭಿನ್ನ ನಕ್ಷತ್ರವೆಂದರೆ ಅದು ಕಮಲಾದಾಸ್. ಕೇರಳದ ಮಗಳಾದ ಈ ಹೆಣ್ಣುಮಗಳು ಲೋಕವನ್ನು ಕುರಿತ ತನ್ನ ಸೂಕ್ಷ್ಮ ಗ್ರಹಿಕೆಯಿಂದ ಬೇರೆ ಲೇಖಕ, ಲೇಖಕಿಯರು ಹೋಗಲು ಹೆದರುವ ಭಾವಲೋಕಗಳಿಗೆ ದಿಟ್ಟವಾಗಿ ಕಾಲಿಟ್ಟರು. ಪ್ರೀತಿ, ಮದುವೆ, ಜೀವನ, ಸಂಬಂಧಗಳು ಇವೆಲ್ಲವನ್ನೂ ಪುರುಷ ಪ್ರಧಾನ ಜಗತ್ತಿನಲ್ಲಿ ಹುಟ್ಟಿದ್ದರೂ ಅದರ ಬಂಗಾರದ ಸರಪಳಿಗಳಲ್ಲಿ ಬಂಧಿಯಾಗಲೊಪ್ಪದ ಧೈರ್ಯದ ಹೆಣ್ಣಿನ ಕಣ್ಣಿಂದ ನೋಡಿದರು, ಬರೆದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೊಂಭತ್ತನೆಯ ಬರಹ

read more
ಊರು ಕೇರಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಊರು ಕೇರಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಒಮ್ಮೊಮ್ಮೆ ಈ ನೆಲದ ಋಣದ ಕುರಿತು ಯೋಚಿಸುತ್ತೇನೆ. ಅಷ್ಟು ಗಾಢವಾದ ಋಣವೇ ಅದು? ಎಲ್ಲಿದ್ದರೂ ಊರಿನತ್ತ ಕೈಬೀಸಿ ಕರೆಯುವ ಮೋಹನ ಮುರಳಿಯ ಸೆಳೆತ ನಿಜವಾಗಿಯೂ ತೀವ್ರವಾದದ್ದೇ ಹೌದು. ಅದಲ್ಲದಿದ್ದರೆ ಹೋಗುವ ಯಾವುದೇ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ ಮನೆಗೆ ಹೋಗ್ಬೇಕು, ನನ್ನನ್ನು ಊರಿಗೆ ಬಿಟ್ಟು ಬಾ ಅಂತ ಮತ್ತೆ ಮತ್ತೆ ಅಪ್ಪ ಹೇಳುತ್ತಿರಲಿಲ್ಲ. ನನಗಂತೂ ಬಾಲ್ಯಕ್ಕೆ ಜಿಗಿಯಬೇಕು ಅಂತ ಅನ್ನಿಸಿದ ಕೂಡಲೇ ನನ್ನೆಲ್ಲಾ ಕೆಲಸವನ್ನು ಬಿಟ್ಟು ಇಲ್ಲಿಗೆ ಬಂಡುಬಿಡುವುದು ಇತ್ತೀಚಿನ ನನ್ನಿಷ್ಟದ ಕೆಲಸಗಳಲ್ಲಿ ಒಂದಾಗಿ ಹೋಗಿದೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”

read more
ಬಿಡುಗಣ್ಣಿನ ಎರಡು ಬಿಡಿನೋಟಗಳು: ಸುಕನ್ಯಾ ಕನಾರಳ್ಳಿ ಅಂಕಣ

ಬಿಡುಗಣ್ಣಿನ ಎರಡು ಬಿಡಿನೋಟಗಳು: ಸುಕನ್ಯಾ ಕನಾರಳ್ಳಿ ಅಂಕಣ

ಉತ್ಪಾದನೆ ಯಾರು ಮಾಡ್ತಾರೋ ಅವರಿಗೆ ಅದರ ಮೇಲೆ ಅಧಿಕಾರ ಇರಬೇಕು ಅಂತ ಒಪ್ಪಿಕೊಂಡಿರೋ ವ್ಯವಸ್ಥೆ ಒಳಗೇ ಇದ್ದುಕೊಂಡು ತಾನು ಹೊತ್ತು, ಹೆತ್ತು, ಬೆಳೆಸಿದ ಮಕ್ಕಳ ಅಧಿಕಾರವನ್ನ ವ್ಯವಸ್ಥೆಗೆ ಬಿಟ್ಟುಕೊಡಬೇಕಾದ ಅಸಹಾಯಕತೆಯಲ್ಲಿಯೂ ಸಹ ಹೆಣ್ಣು ಬದುಕಿ ಉಳಿತಾಳೆ. ವ್ಯವಸ್ಥೆ ತಮ್ಮ ತಮ್ಮ ಹುಚ್ಚಾಟಗಳಿಗೆ ಆ ಮಕ್ಕಳನ್ನ ಯುದ್ಧಕ್ಕೆ ಕಳುಹಿಸಿ ಅವಳ ಕಣ್ಣೆದುರೇ ಅವು ಹೊಸಕಿ ಹೋದರೂ ಸಹ ಮತ್ತೆ ಮತ್ತೆ ಯಾವುದೋ ನಂಬಿಕೆಯಲ್ಲಿ ಮಕ್ಕಳನ್ನ ಹುಟ್ಟಿಸಿ ಬೆಳೆಸುತ್ತಲೇ ಹೋಗುತ್ತಾಳಲ್ಲ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

read more
ಮಕ್ಕಳನ್ನು ಹೇಗೆ ಬೆಳೆಸೋದು!: ಜಯಲಕ್ಷ್ಮಿ ಪಾಟೀಲ್ ಅಂಕಣ

ಮಕ್ಕಳನ್ನು ಹೇಗೆ ಬೆಳೆಸೋದು!: ಜಯಲಕ್ಷ್ಮಿ ಪಾಟೀಲ್ ಅಂಕಣ

ಮಕ್ಕಳನ್ನು ಮಕ್ಕಳಂತೇ ಬೆಳೆಸೋಣ. ನಮಗೆ ತೋಚಿದಷ್ಟು, ಅಥವಾ ಅವರ ಮುಗ್ಧತೆಗೆ ಧಕ್ಕೆ ಬಾರದಷ್ಟು ಉತ್ತರಿಸಲು ಸಾಧ್ಯವಾದಲ್ಲಿ ಉತ್ತರಿಸಬೇಕು. ನನ್ನ ಬಲವಾದ ವಿರೋಧವಿರೋದು ಬಾಲ್ಯದಲ್ಲಿಯೇ ವ್ಯಕ್ತಿ ಸ್ವಾತಂತ್ರ್ಯದ, ಪ್ರಗತಿಯ ಹೆಸರಲ್ಲಿ ಮಕ್ಕಳ ಮುಗ್ಧತೆಯನ್ನು ಕಸಿಯುವುದರ ಬಗ್ಗೆ. ಮಕ್ಕಳು ಬೆಳೆದಂತೆ ಅವರೊಂದಿಗಿನ ನಮ್ಮ ವರ್ತನೆಯೂ ಅದೇ ಹದದಲ್ಲಿ ಬದಲಾಗುತ್ತಾ ಹೋಗುತ್ತದೆ. ನನ್ನ ಮಕ್ಕಳು ಚಿಕ್ಕವರಿದ್ದಾಗ ಅವರ ಎಲ್ಲ ಪ್ರಶ್ನೆಗಳಿಗೆ ನಾನು ಅಥವಾ ನಾವಿಬ್ಬರೂ ಉತ್ತರಿಸಿಲ್ಲ. ಕೇಳಿದ್ದೆಲ್ಲವನ್ನೂ ಅವರಪ್ಪ ತೆಗೆಸಿಕೊಡಲು ಮುಂದಾಗುತ್ತಾರೆ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ಐದನೆಯ ಬರಹ

read more
ಸಂತಾಲಿ ಕವಿಯ ಸ್ತ್ರೀ ಸಂವೇದಿ ಕಾವ್ಯ: ಸುಕನ್ಯಾ ಕನಾರಳ್ಳಿ ಅಂಕಣ

ಸಂತಾಲಿ ಕವಿಯ ಸ್ತ್ರೀ ಸಂವೇದಿ ಕಾವ್ಯ: ಸುಕನ್ಯಾ ಕನಾರಳ್ಳಿ ಅಂಕಣ

ಇಲ್ಲಿ ನಾನು-ನೀನು ಅಂದರೆ ಸಮುದಾಯ ಉಳಿಯಬೇಕು, ಅವರಿಂದ ಅಂದರೆ ಹೊರಗಿನವರಿಂದ ನನ್ನನ್ನು ಕಾಪಾಡು ಎಂಬ ಬೇಡಿಕೆ ಇದೆ. ನಿನ್ನಿಂದ ಅಂದರೆ ದೌರ್ಜನ್ಯದ ಮೂಲವಾದ ಕುಟುಂಬ ಎಂಬ ವ್ಯವಸ್ಥೆಯಲ್ಲಿರುವ ಲಿಂಗ ತಾರತಮ್ಯದಿಂದ ತನ್ನನ್ನು ಕಾಪಾಡಿಕೊಳ್ಳಬೇಕು ಎನ್ನುವ ಆಗ್ರಹವಿಲ್ಲ. ಇದು ನನ್ನ ಗ್ರಹಿಕೆಗೆ ದಕ್ಕುವ ರೀತಿಯಲ್ಲಿ ಕಾಡನ್ನು ನಂಬಿದ, ಕೃಷಿಯ ಮೇಲೆಯೇ ಬದುಕುತ್ತಿರುವ ಸಮುದಾಯಕ್ಕೆ ಕುಟುಂಬ ಹೇಗಾದರೂ ಬದುಕಿ ಉಳಿಯಬೇಕು ಎನ್ನುವ ನೆಲೆಯಿಂದ ಹೊಮ್ಮಿದ ಒಂದು ಸತ್ಯ. ಕೃಷಿ ಕೆಲಸಕ್ಕೆಂದೇ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ಕೃಷಿಕ ಕುಟುಂಬಕ್ಕೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಉಪದೇಶ ಮಾಡುವುದು ಅಧಿಕಪ್ರಸಂಗತನ ತಾನೇ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

read more
ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ..: ವಿನಾಯಕ ಅರಳಸುರಳಿ ಅಂಕಣ

ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ..: ವಿನಾಯಕ ಅರಳಸುರಳಿ ಅಂಕಣ

ಕೆಲವೊಮ್ಮೆ ಅಚಾನಕ್ಕಾಗಿ ಬೆಂಗಳೂರಿನ ಮೇಲೆ ಪ್ರೀತಿಯುಕ್ಕುತ್ತದೆ. ಈ ಶಹರ ನಮಗೆ ಬದಕು ಕೊಟ್ಟಿದೆ, ಇದಿನ್ನು ನಮ್ಮ ಊರು, ನಾನಿನ್ನು ಇಲ್ಲಿಯವನು ಎಂದು ನಂಬಲು ಪ್ರಯತ್ನಿಸುತ್ತೇವೆ.‌ ಆಗಲೇ ನಾವು ಪ್ರತಿದಿನ ವ್ಯವಹರಿಸುವ ಅಂಗಡಿಯವನು ಇದ್ದಕ್ಕಿದ್ದಂತೆ ಹತ್ತು ರೂಪಾಯಿಗಾಗಿ ಬಿರುಮಾತಾಡುತ್ತಾನೆ. ವರ್ಷದಿಂದ ಪಕ್ಕದ ಮನೆಯಲ್ಲೇ ವಾಸವಿರುವ ಹೆಂಗಸು ಯಕಶ್ಚಿತ್ ನ್ಯಾಲೆಯ ಮೇಲಿನ ಬಟ್ಟೆ ತೆಗೆದಿಲ್ಲವೆಂಬ ಕಾರಣಕ್ಕೆ ಜಗಳಕ್ಕೆ ನಿಲ್ಲುತ್ತಾಳೆ. ಹೆಗಲ ಮೇಲೆ ಕೈ ಹಾಕಿಕೊಂಡು ಜೊತೆಗೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಮಿತ್ರ ಆಫೀಸು ಬದಲಿಸಿದ ಮರುಕ್ಷಣ ಕರೆ ಸ್ವೀಕರಿಸದೇ, ಮೆಸೇಜೂ ಮಾಡದೇ ಮಾಯವಾಗಿಬಿಡುತ್ತಾನೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

read more
ಒಗ್ಗಟ್ಟು, ಒಡಕುಗಳ ವಿಚಲತೆ: ಡಾ. ವಿನತೆ ಶರ್ಮ ಬರೆಯುವ ಅಂಕಣ

ಒಗ್ಗಟ್ಟು, ಒಡಕುಗಳ ವಿಚಲತೆ: ಡಾ. ವಿನತೆ ಶರ್ಮ ಬರೆಯುವ ಅಂಕಣ

ಆಂಗ್ಲೋ-ಆಸ್ಟ್ರೇಲಿಯನ್ ಅಂದರೆ ಬಿಳಿ-ವಸಾಹತುಶಾಹಿ-ಸೆಟ್ಟ್ಲರ್ ಸಮಾಜಕ್ಕೆ ಸೇರಿದ ಪೌಲಿನ್ ಹ್ಯಾನ್ಸನ್ ತನ್ನನ್ನು ಕಟ್ಟಾ ಆಸ್ಟ್ರೇಲಿಯನ್ ಎಂದು ಕರೆದುಕೊಳ್ಳುತ್ತಾರೆ. ಅಂದರೆ ಬ್ರಿಟಿಷರು ಹುಟ್ಟುಹಾಕಿದ ಬಿಳಿ ಆಸ್ಟ್ರೇಲಿಯಾ. ಆಸ್ಟ್ರೇಲಿಯಾದಲ್ಲಿ ಬದುಕುತ್ತಿರುವವರು ಕಡ್ಡಾಯವಾಗಿ ಆಸ್ಟ್ರೇಲಿಯನ್ ಸಂಸ್ಕೃತಿಯನ್ನು ಅಂದರೆ ಬಿಳಿಯರ ಸಂಸ್ಕೃತಿಯನ್ನು ಪಾಲಿಸಬೇಕು, ಇಲ್ಲವಾದರೆ ದೇಶ ತೊರೆದು ಹೋಗಬೇಕು, ಎನ್ನುತ್ತಾರೆ. ಹಿಂದೊಮ್ಮೆ ಇಲ್ಲಿನ ಮೂಲನಿವಾಸಿಗಳು ಆಸ್ಟ್ರೇಲಿಯನ್ನರಲ್ಲ ಎಂದು, ನಂತರ ಏಷ್ಯನ್ನರಿಗೆ ಈ ದೇಶದಲ್ಲಿ ಪ್ರವೇಶ ಇಲ್ಲ ಎಂದು ಹೇಳಿ ಎಲ್ಲರ ಗಮನ ಸೆಳೆದಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

read more
“ಶಿಲ್ಪಕ್ಕೆ ತುಟಿಯುಂಟು, ಇಲ್ಲ ಮಾತು”: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

“ಶಿಲ್ಪಕ್ಕೆ ತುಟಿಯುಂಟು, ಇಲ್ಲ ಮಾತು”: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಪ್ರೀತಿ ಅಭಿಮಾನ ಗೌರವದಿಂದ ಸೀತೆಯನ್ನು ಬರಮಾಡಿಕೊಳ್ಳಬೇಕಾಗಿದ್ದ ಕ್ಷಣ ಅದು. ಎಲ್ಲರೂ ಅಂತಹದೊಂದು ಕ್ಷಣಕ್ಕೆ ಸಾಕ್ಷಿಯಾಗಲು ಅಲ್ಲಿ ನಿಂತವರು. ಆದರೆ ತುಂಬು ನಿರೀಕ್ಷೆಯಿಂದ ರಾಮನ ಎದುರು ಬಂದು ನಿಲ್ಲುವ ಸೀತೆಗೆ ಸಿಕ್ಕಿದ ಸ್ವಾಗತವಾದರೂ ಎಂಥದ್ದು? ಪ್ರೀತಿ ಮತ್ತು ಸಂಭ್ರಮದಲ್ಲಿ ಅರಳಬೇಕಾಗಿದ್ದ ರಾಮನ ಮುಖ ಸಿಟ್ಟಿನಿಂದ ಉಗ್ರವಾಗುತ್ತದೆ. ಲಕ್ಷ್ಮಣ, ವಿಭೀಷಣ, ಆಂಜನೇಯರಿಗೆ ಇದು ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ಮುಂದೆ ರಾಮ ಆಡುವ ಮಾತುಗಳನ್ನು ಕೇಳಿಸಿಕೊಂಡ ಸೀತೆಗೆ ಅಗ್ನಿ ಪ್ರವೇಶ ಮಾಡುವುದು ಬಿಟ್ಟು ಬೇರೆ ವಿಕಲ್ಪವೇನೂ ಉಳಿಯುವುದಿಲ್ಲ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”

read more
ಕೋಟಿ ಯೋಜನವಿರಲಿ, ದಾಟಿ ಬರುವೆನು… ಬಿಳಿಮಲೆಗೆ: ಸುಕನ್ಯಾ ಕನಾರಳ್ಳಿ ಅಂಕಣ

ಕೋಟಿ ಯೋಜನವಿರಲಿ, ದಾಟಿ ಬರುವೆನು… ಬಿಳಿಮಲೆಗೆ: ಸುಕನ್ಯಾ ಕನಾರಳ್ಳಿ ಅಂಕಣ

ಸುಖವಾದ ಊಟವಾದ ಮೇಲೆ ಸುಮಾರು ಎರಡು ರಾತ್ರಿಗಳಿಂದ ನಿದ್ದೆಯಿಲ್ಲದೇ ಬಳಲಿದ್ದ ನನ್ನ ಕಣ್ಣುಗಳನ್ನು ಇನ್ನಿಲ್ಲದಂತೆ ಅಗಲವಾಗಿ ತೆರೆದು ಇರಿಸಿದ್ದು ‘ಕೃಷ್ಣಸಂಧಾನ’ ಪ್ರಸಂಗದ ತಾಳಮದ್ದಳೆ ಕಾರ್ಯಕ್ರಮ. ಸುಮಾರು ಎರಡು ಗಂಟೆಗಳ ಕಾಲ ಆ ಭಾಷೆ, ವಾಗ್ವೈಖರಿ, ಹಾಸ್ಯ, ಅಭಿನಯಗಳು ಅದೆಂತಹ ಬೌದ್ಧಿಕ ಸಾಂತ್ವನವನ್ನು ನೀಡಿದವೆಂದರೆ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಸತತವಾಗಿ ಮೂರು ಗಂಟೆಗಳ ಉಪನ್ಯಾಸವನ್ನು ತಲ್ಲೀನಳಾಗಿ ಕೇಳಿಸಿಕೊಂಡು ನಂತರ ಅದನ್ನು ಅರಗಿಸಿಕೊಳ್ಳಲು ಮುಂದಿನ ಒಂದು ವಾರದ ಮಟ್ಟಿಗೆ ಹೆಣಗುತ್ತಿದ್ದೆನಲ್ಲ, ಇದು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಇನ್ನೊಂದು ಹತ್ತು ದಿನವಾದರೂ ನಿನ್ನ ತಲೆಗೆ ಬಿಡುವಿರುವುದಿಲ್ಲ, ಬಿಡು ಎಂದು ಕಣ್ಣು ಹೊಡೆಯುತ್ತಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ