Advertisement

ಸರಣಿ-2

ಟ್ರಿನಿಡಾಡ್ ಎಂಡ್ ಟೊಬೇಗೊ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಟ್ರಿನಿಡಾಡ್ ಎಂಡ್ ಟೊಬೇಗೊ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಬೂಡೂ-ಫೋರ್ಚುನೆ ಅವರ ಸಾಲುಗಳು ಸರಳತೆ ಮತ್ತು ಕ್ರೂರತೆಗೆ ಸಮಾನವಾಗಿ ಆದ್ಯತೆ ನೀಡುತ್ತದೆ, ಮೀನುಗಾರರ ಅರ್ಧ ಮುಳುಗಿದ ಲೋಕಗಳನ್ನು, ಸಮಾಧಿ ಮಾಡಿದ ಮೂಳೆಗಳಲ್ಲಿ ಕಲಕುವ ಭರವಸೆಗಳನ್ನು, ಹೆಣ್ಣುಮಕ್ಕಳನ್ನು ಪ್ರೀತಿಸುವ ತಾಯಂದಿರ ಮತ್ತು ಎಲ್ಲಾ ರೀತಿಯ ತಿಳಿಯಲಾಗದ, ನಿಗೂಢ ಆತ್ಮಗಳನ್ನು ಹಿಡಿದಿಟ್ಟುಕೊಳ್ಳುತ್ತವೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಟ್ರಿನಿಡಾಡ್ ಎಂಡ್ ಟೊಬೇಗೊ (Trinidad and Tobago) ದೇಶದ ಯುವ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ-ರವರ (Danielle Boodoo-Fortuné, 1986) ಕಾವ್ಯದ ಕುರಿತ ಬರಹ

read more
ಆಪತ್ಬಾಂಧವನಿಂದ ಕರಗಿದ ಕಾರ್ಮೋಡ: ಎಚ್. ಗೋಪಾಲಕೃಷ್ಣ ಸರಣಿ

ಆಪತ್ಬಾಂಧವನಿಂದ ಕರಗಿದ ಕಾರ್ಮೋಡ: ಎಚ್. ಗೋಪಾಲಕೃಷ್ಣ ಸರಣಿ

ಹೆಂಡತಿ ನೂರು ಕ್ಯಾಂಡಲ್ ಕೆಂಪು ಬಲ್ಬಿನ ಹಾಗೆ ಕಂಡಳು. ಅವಳನ್ನು ಒಳಗೆ ಕರೆದು ಸಮಾಧಾನ ಪಡಿಸಿ ಓನರಿಣಿಯನ್ನು ಮನೆಗೆ ಸಾಗಹಾಕುವ ಪ್ಲಾನ್ ತಲೆಯಲ್ಲಿ ಮೊಳಕೆ ಹೊಡೆಯುತ್ತಿತ್ತು. ಎಂಟ್ರಿ ಹೇಗಾಯಿತು ಅಂದರೆ ರಾತ್ರಿ ಒಂಬತ್ತರ ಕತ್ತಲು, ಹತ್ತಿರದ ಕೆರೆಯಿಂದ ಕಪ್ಪೆಗಳ ವಟಗುಟ್ಟುವಿಕೆ, ಜೀರುಂಡೆ ಧ್ವನಿ ಮತ್ತು ಮನೆಯಿಂದ ಮೂರುನಾಲ್ಕು ಕಿಮೀ ದೂರದ ರೈಲು ಹಳಿ ಮೇಲೆ ರೈಲು ಹೋಗುತ್ತಿರುವ, ಎಂಜಿನು ವಿಶಲ್ ಹಾಕುವ ಶಬ್ದ. ನರಿ ಕೂಗು ಕೇಳುತ್ತೆ ಅಂತ ನನಗಿಂತ ಮೊದಲು ಬಂದವರು ಹೇಳುತ್ತಿದ್ದರು….
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

read more
ಭೂಮಿ ಬಯಕೆ ತೀರಿಸುವ ಭೂಮಿ ಹುಣ್ಣಿಮೆ ಹಬ್ಬ: ಭವ್ಯ ಟಿ.ಎಸ್. ಸರಣಿ

ಭೂಮಿ ಬಯಕೆ ತೀರಿಸುವ ಭೂಮಿ ಹುಣ್ಣಿಮೆ ಹಬ್ಬ: ಭವ್ಯ ಟಿ.ಎಸ್. ಸರಣಿ

ಆಶ್ವಯುಜ ಮಾಸದಲ್ಲಿ ಬರುವ ಭೂಮಿ ಹುಣ್ಣಿಮೆಯ ಕುರಿತು ಹೇಳುತ್ತಿದ್ದೇನೆ. ಮಲೆನಾಡಿಗರ ಭಾಷೆಯಲ್ಲಿ ಇದು ಭೂಮಣಿ ಹಬ್ಬ. ಭೂಮಿಹುಣ್ಣಿಮೆ ಎಂದ ಕೂಡಲೇ ನನ್ನ ಮನ ನಿಲ್ಲದೆ ತೀರ್ಥಹಳ್ಳಿಯ ಸಮೀಪದ ನನ್ನ ಅಜ್ಜಿ ಮನೆಯೆಡೆಗೆ ಓಡುತ್ತದೆ. ನಮ್ಮ ಅಜ್ಜಿ ಈ ಹಬ್ಬವನ್ನು ತುಂಬಾ ‌ಶ್ರದ್ಧೆಯಿಂದ ಆಚರಿಸುತ್ತಿದ್ದರು. ಹಬ್ಬದ ಮುನ್ನಾ ದಿನ ಗದ್ದೆಯ ಅಂಚಿನ ಒಂದು ಭಾಗವನ್ನು ಶುಚಿಗೊಳಿಸಿ, ಸಗಣಿ ಸಾರಿಸಿ, ಬಾಳೆಕಂಬ, ತೋರಣಗಳಿಂದ ಅಲಂಕರಿಸಿ ಬರುತ್ತಾರೆ. ಅಂದು ಮನೆಯ ಮಕ್ಕಳು ಒಂದು ಬುಟ್ಟಿ ಹಿಡಿದು ಸುತ್ತಮುತ್ತ ತಿರುಗಿ ಬಗೆಬಗೆಯ ಸೊಪ್ಪುಗಳನ್ನು ಆಯ್ದು ತರಬೇಕು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ

read more
ಆಟೋ ಕರೆಕ್ಷನ್: ಸುಮಾವೀಣಾ ಸರಣಿ

ಆಟೋ ಕರೆಕ್ಷನ್: ಸುಮಾವೀಣಾ ಸರಣಿ

ಇಂಥ ಅದೆಷ್ಟೋ ಸನ್ನಿವೇಶಗಳನ್ನು ನೀವುಗಳೂ ಕೇಳಿರಬಹುದು. ಆಟೋಗಳಲ್ಲಿ, ಸಿಟಿ ಬಸ್‌ಗಳಲ್ಲಿ ಓಡಾಡುವಾಗ ಇಂಥ ಕೆಲವು ತುಣುಕುಗಳು ಯಾವುದೋ ಸಿನೆಮಾ ಟೀಸರ್‌ಗಳಂತೆ ನಮ್ಮ ಕಣ್ಣೆದುರು ಹಾದು ಹೋಗಬಹುದು. ತರಹೇವಾರಿ ಸಿನೆಮಾಗಳು ಬಂದಂತೆ ಪ್ರಯಾಣದ ಸನ್ನಿವೇಶಗಳೂ ಕೂಡ ಬಂದು ಬಂದು ಹೋಗುತ್ತವೆ. ಕೊರೊನಾ ನಂತರ ಥಿಯೇಟರಿನಲ್ಲಿ ಸಿನೆಮಾಗಳನ್ನು ನೋಡುವವರ ಸಂಖ್ಯೆ ಈಗ ಕುಸಿದಿದೆ. ಎಲ್ಲಾ ಓಟಿಟಿಯಲ್ಲಿ ನೋಡಿಬಿಡ್ತಾರೆ. ಈಗಂತೂ ‘ಡೌನ್ ಪೇಮೆಂಟೋ, ಇಲ್ಲಾ ಸೆಕೆಂಡ್ ಹ್ಯಾಂಡೋ ಮನೆಗ್ ಒಂದ್ ಕಾರ್ ಇರ್ಲಿ’ ಎಂದು ದುಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಆದರೂ ಸ್ವಂತ ವಾಹನ ಹೊಂದಿದ ಬದಲಾವಣೆಯಾಗಿದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ

read more
ಅವಳಿ ನಗರಗಳ ದರ್ಶನ: ದರ್ಶನ್‌ ಜಯಣ್ಣ ಸರಣಿ

ಅವಳಿ ನಗರಗಳ ದರ್ಶನ: ದರ್ಶನ್‌ ಜಯಣ್ಣ ಸರಣಿ

ಇದೆಲ್ಲಕ್ಕೆ ಶಿಕರಪ್ರಾಯದಂತೆ ಇದ್ದುದು ಅಲ್ಲಿನ ಆಲ್ ಕರಾ ಗುಹೆ. ನೋಡಲಿಕ್ಕೆ ನಮ್ಮ ಬದಾಮಿಯ ಗುಹೆಯ ಬಣ್ಣವಿರುವ ಇದು ಸಾವಿರಾರು ವರ್ಷಗಳ ಹಿಂದೆ ಇಲ್ಲಿದ್ದ ಸಮುದ್ರದಿಂದ ರೂಪುಗೊಂಡಿರುವುದಾಗಿಯೂ ಅದರ ಒಳಮೈಯಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಇರುವುದಾಗಿಯೂ ಅಲ್ಲಿನ ಗೈಡ್ ನಮಗೆ ಹೇಳಿದರು. ಅದರ ಎತ್ತರ ಆಕೃತಿ ನಮ್ಮ ಶಿರಸಿಯ ಯಾಣದಂತಿದೆಯಾದರೂ ಒಂದು ಲಾವಾದ ಪರಿಣಾಮದಿಂದ ಮತ್ತೊಂದು ಮರಳುಗಾಡಿನಲ್ಲಿ ಯಾವಾಗಲೋ ಬಿದ್ದ ಬೀಳುತ್ತಿದ್ದ ಮಳೆಯಿಂದ ಆಗಿರಬಹುದೆಂದು ನಂತರ ನಾನು ತಿಳಿದುಕೊಂಡೆ.

read more
ಮಾಘಿಯ ಚಳಿಯಲ್ಲಿ, ಆಲೆಮನೆಯ ಘಮಲಲ್ಲಿ…: ರೂಪಾ ರವೀಂದ್ರ ಜೋಶಿ ಸರಣಿ

ಮಾಘಿಯ ಚಳಿಯಲ್ಲಿ, ಆಲೆಮನೆಯ ಘಮಲಲ್ಲಿ…: ರೂಪಾ ರವೀಂದ್ರ ಜೋಶಿ ಸರಣಿ

ಅಪ್ಪಯ್ಯ “ಯೇ ಹುಡುಗ್ರೇ ಏಳ್ರೇ. ಆಲೇಮನೀಗೆ ಹೋಗಿ ಹಾಲು ಕುಡೀರೇ.” ಎಂದು ಏಳಿಸುತ್ತಿದ್ದರು. ಹಸಿದ ಹೊಟ್ಟೆಗೆ ಕಬ್ಬಿನ ಹಾಲು ಕುಡಿದರೆ ಅದೆಲ್ಲ ರಕ್ತವೇ ಆಗಿಬಿಡುತ್ತದೆಯಂತೆ ಎಂದು ಅಪ್ಪಯ್ಯ ಯಾವಾಗಲೂ ಹೇಳುತ್ತಿದ್ದರು. ಅಪ್ಪಯ್ಯನ ದನಿಗೆ, ನಾವು ಹೊದಿಕೆ ಕಿತ್ತೊಗೆದು, ಮುಖ ತೊಳೆದ ಶಾಸ್ತ್ರಮಾಡಿ, ಆಲೆಮನೆಯತ್ತ ಓಡುತ್ತಿದ್ದೆವು. ಅಷ್ಟರಲ್ಲಿ ಅಪ್ಪಯ್ಯ ಒಳ್ಳೆಯ ಕಬ್ಬು ಹುಡುಕಿ, ಗಾಣಕ್ಕೆ ಕೊಡಿಸಿ, ನಮಗೆ ಕುಡಿಯಲು ಸವಿಯಾದ ಐಸ್ ಕೋಲ್ಡ್ ಹಾಲು ಹಿಡಿದು ಇಟ್ಟಿರುತ್ತಿದ್ದರು. ಮೊದಲೇ ಮಾಘ ಮಾಸದ ಛಳಿ. ಆ ಥಣ್ಣನೆಯ ಹಾಲು ಹೊಟ್ಟೆಗಿಳಿಯುತ್ತಿದ್ದಂತೆಯೇ, ದಂತ ಪಂಕ್ತಿಗಳು, ಮಸೆದುಕೊಳ್ಳುತ್ತ, ಕಟ ಕಟನೆ ಸಪ್ಪಳ ಮಾಡತೊಡಗುತ್ತಿದ್ದವು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

read more
ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ?: ಬಸವನಗೌಡ ಹೆಬ್ಬಳಗೆರೆ ಸರಣಿ

ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ?: ಬಸವನಗೌಡ ಹೆಬ್ಬಳಗೆರೆ ಸರಣಿ

ಟಿಸಿಹೆಚ್ ಕಾಲೇಜಿನಲ್ಲಿ ಬಹುತೇಕರು ಇಷ್ಟಪಡುತ್ತಿದ್ದುದು ‘ಅಪುನಾ ಸರ್’ ಅವರನ್ನೇ. ಇವರನ್ನು ನಾವು ನಮ್ಮ ಕಾಲೇಜು ಮಿತಿಯಲ್ಲಿ ‘ನಡೆದಾಡುವ ವಿಶ್ವಕೋಶ’ ಎಂದೇ ಕರೆಯುತ್ತಿದ್ದೆವು. ಅವರು ಮೂಲತಃ ‘ಜೀವ ವಿಜ್ಞಾನ ಶಿಕ್ಷಕ’ ರಾಗಿದ್ದಾಗ್ಯೂ ನಮಗೆ ಅವರ ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ, ಸಮಾಜ ವಿಜ್ಞಾನದಲ್ಲಿ ಅವರಲ್ಲಿದ್ದ ಪಾಂಡಿತ್ಯ, ಪ್ರಖರ ದೇಶಪ್ರೇಮ, ಸಮಯಪ್ರಜ್ಞೆ, ನಾಯಕತ್ವ ಗುಣ, ಪಾಠವನ್ನು ಅರ್ಥೈಸುತ್ತಿದ್ದ ರೀತಿ ನಮ್ಮನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೈದನೆಯ ಕಂತು ನಿಮ್ಮ ಓದಿಗೆ

read more
ಸರ್ಕಾರಿ ಸಿಬ್ಬಂದಿಯೊಂದಿಗೆ ನಡೆದ ಜಟಾಪಟಿ: ಎಚ್. ಗೋಪಾಲಕೃಷ್ಣ ಸರಣಿ

ಸರ್ಕಾರಿ ಸಿಬ್ಬಂದಿಯೊಂದಿಗೆ ನಡೆದ ಜಟಾಪಟಿ: ಎಚ್. ಗೋಪಾಲಕೃಷ್ಣ ಸರಣಿ

ಬೆಳಿಗ್ಗೆಯಿಂದ ಸುತ್ತಿದ್ದು, ಹಸಿವಿನ ಹೊಟ್ಟೆ, ನಾಲ್ಕು ಮಹಡಿ ಹತ್ತು ಎರಡು ಮಾಡಿ ಇಳಿ… ಬಿಪಿ ಏರಿತು ಕಾಣಿರಿ… ವಾಚಾಮಗೋಚರ ಪುಂಖಾನು ಪುಂಖವಾಗಿ ಬಾಯಿಂದ ಬೈಗುಳ ಹೆಂಗೆ ಯಾವ ಡೆಸಿಮಲ್‌ನಲ್ಲಿ ಉಕ್ಕಿತು ಅಂದರೆ ಮೇಲಿನ ಮಹಡಿ ಕೆಳಗಿನ ಮಹಡಿ ನಾನು ನಿಂತಿದ್ದ ಮಹಡಿ ಜನ ಸುತ್ತಲೂ ಸೇರಿಬಿಟ್ಟರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೆಂಟನೆಯ ಕಂತು

read more
ಗಣಪನ ಸಂಗಡ ವ್ಯಾಕರಣ: ಸುಮಾವೀಣಾ ಸರಣಿ

ಗಣಪನ ಸಂಗಡ ವ್ಯಾಕರಣ: ಸುಮಾವೀಣಾ ಸರಣಿ

ರುಚಿನೋಡಿ ರವೆಯನ್ನು ನೋಡುತ್ತಿದ್ದಂತೆ 12 ವರ್ಷದ ಮಗನ ನೆನಪಿಗೆ ಬಂದದ್ದೆ “ರವೆ ಉಂಡೆ ರವೆ ಉಂಡೆ ಬೀರಿನಲ್ಲಿ ಕಂಡೆ” ಎಂಬ ಶಿಶುಪದ್ಯದ ಸಾಲುಗಳು ಬಂದರೆ ನನಗೆಂತೂ ಆ ರವಮಂ ನಿರ್ಜಿತ ಕಂಠೀರವಮಂ ನಿರಸ್ತಘನ ರವಮಂ ಕೋಪಾರುಣ ನೇತ್ರಂ ಕೇಳ್ದಾ ನೀರೊಳಗಿರ್ದುಂ ಬೆಮರ್ತನ್ ಉರಗಪತಾಕಂ ಎಂಬ ರನ್ನನ ಕೃತಿಯ 6ನೇ ಸಂಧಿಯ 22 ನೆಯ ಪದ್ಯ. ಇದು ದುರ್ಯೋಧನನ್ನು ಆತನ ಕೋಪವನ್ನು ವಿವರಿಸುವ ಪದ್ಯ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ನಾಲ್ಕನೆಯ ಬರಹ ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ