Advertisement

ಸರಣಿ

ಬಾಸ್‌ಗಳು ಹೀಗಿದ್ರೆ ಎಷ್ಟು ಚೆಂದ ಅಲ್ವಾ??: ಬಸವನಗೌಡ ಹೆಬ್ಬಳಗೆರೆ ಸರಣಿ

ಬಾಸ್‌ಗಳು ಹೀಗಿದ್ರೆ ಎಷ್ಟು ಚೆಂದ ಅಲ್ವಾ??: ಬಸವನಗೌಡ ಹೆಬ್ಬಳಗೆರೆ ಸರಣಿ

ಒಮ್ಮೆ ಹೀಗೆ ಆಯ್ತಂತೆ: ಒಮ್ಮೆ ಒಂದು ಕಚೇರಿಯವರ ಬಳಿ ದೇವರು ಪ್ರತ್ಯಕ್ಷನಾಗಿ ‘ನಿಮಗೇನು ವರ ಬೇಕು’ ಎಂದು ಕೇಳಿದನಂತೆ. ಆಗ ಬಾಸಿಗೂ ಮೊದಲೇ ಅವರ ಸಿಬ್ಬಂದಿಯೊಬ್ಬನು ‘ನಾನು ಅಮೇರಿಕಾಗೆ ಹೋಗುವ ವರ ನೀಡು’ ಎಂದನಂತೆ. ತಕ್ಷಣ ದೇವರು ‘ತಥಾಸ್ತು’ ಎಂದನಂತೆ. ಮತ್ತೊಬ್ಬನೂ ಸಹ ‘ನಾನು ಲಂಡನ್‌ಗೆ ಹೋಗುವಂತೆ ಮಾಡು’ ಎಂದಾಗ ದೇವರು ಹಾಗೆ ಮಾಡಿದನಂತೆ. ಆಗ ಬಾಸಿನ ಸರದಿಯಲ್ಲಿ ದೇವರ ವರ ಕೇಳುವಾಗ ಅವನಿಗಿಂತ ಮುಂಚೆ ಅವರ ನೌಕರರು ವರ ಕೇಳಿದ್ದಕ್ಕೆ ಸಿಟ್ಟು ಬಂದು ಅವರಿಬ್ಬರೂ ಕಚೇರಿಗೆ ವಾಪಸ್ಸು ಬರುವ ಹಾಗೆ ಮಾಡು ಎಂದು ಕೇಳಿದನಂತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

read more
ಬದುಕಿನ ನಾಟಕ ನೋಡಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಬದುಕಿನ ನಾಟಕ ನೋಡಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಈ ಗಂಡಾಂತರವೊಂದು ಕಳೆಯುತ್ತಿದ್ದಂತೆ ನನ್ನನ್ನು ಬೇರೆ ಕಂಪೆನಿಗೆ ಸದ್ದಿಲ್ಲದೆ ಕರೆದೊಯ್ದಿದ್ದರು. ಲಕ್ಷ್ಮೀಬಾಯಿಯವರ ಗಂಡ ವೆಂಕಟ ರೆಡ್ಡಿ ಅವರ ಜೊತೆ ನಂಜಪ್ಪ, ಜಕ್ಲಿ ಈಶ್ವರ ಎಲ್ಲ ಸೇರಿಕೊಂಡು ಬೇರೆ ಕಂಪೆನಿಗೆ ಹೋಗೋಣ ಎಂದು ಸೂರ್ಯಬಾನುಗೆ ಕರೆದುಕೊಂಡು ಹೋದರು. ಹೋದದ್ದೇ, ಇನ್ನು ಐದೇ ದಿನಗಳಲ್ಲಿ ನಾಟಕ ಶುರು ಮಾಡುತ್ತೇವೆ ಎಂದರು. ಇನ್ನೂ ಐದು ದಿನಗಳು! ಹಾಗಿದ್ದರೆ ಊರಿಗೆ ಹೋಗಿ ಬರಬಹುದಲ್ಲಾ ಎನಿಸಿತು. ತಕ್ಷಣ ಮಾಲೀಕರಲ್ಲಿ ಹೋಗಿ ಕೇಳಿದೆ. ಊರಿಗೆ ಹೋಗಿಬರಬೇಕಿದೆ. ನಾಟಕ ಶುರುವಾಗುವುದರೊಳಗೆ ಇಲ್ಲಿಗೆ ಬಂದು ಸೇರುವಂತೆ ನೋಡಿಕೊಳ್ಳುವ ಹೊಣೆ ನನ್ನದು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

read more
ಜೇನು ಪೊಟರೆಯ ಹಾವು, ಕ್ವಾಕ್ ಡಾಕ್ಟರ್ ಮತ್ತವಳ ಹಾವು ಹಿಡಿವ ಗಂಡ: ಎಸ್. ಗಂಗಾಧರಯ್ಯ ಅನುಭವ ಕಥನ

ಜೇನು ಪೊಟರೆಯ ಹಾವು, ಕ್ವಾಕ್ ಡಾಕ್ಟರ್ ಮತ್ತವಳ ಹಾವು ಹಿಡಿವ ಗಂಡ: ಎಸ್. ಗಂಗಾಧರಯ್ಯ ಅನುಭವ ಕಥನ

ಅಲ್ಲಿನ ಪರಿಸ್ಥಿಯನ್ನು ಅವಲೋಕಿಸಿ ನಾನು ಹಾವು ಹಿಡಿಯುವಾಗ ಮನೆಯೊಳಕ್ಕೆ ಯಾರೂ ಬರಬಾರದೆಂದೂ ಬಾಗಿಲು ಹಾಕಿಕೊಂಡಿದ್ದಾನೆ. ಅದಾದ ಅರ್ಧ ಗಂಟೆಗೆ ಕೈಯಲ್ಲಿ ಮಾರುದ್ದದ ನಾಗರ ಹಾವನ್ನು ಹಿಡಿದು ಹೊರ ಬಂದು ನೆರೆದಿದ್ದ ಜನರಿಗೆಲ್ಲಾ ಹಾವನ್ನು ತೋರಿಸಿ ಶಬ್ಬಾಶ್‌ಗಿರಿಯನ್ನು ಪಡೆದು ಐನೂರು ರೂಪಾಯಿಯನ್ನೂ ನಾಲ್ಕೈದು ಸೇರು ರಾಗಿಯನ್ನೂ ಇಸುಕಂಡು ಬಂದಿದ್ದಾನೆ. ನಿಟ್ಟುಸಿರುಬಿಟ್ಟ ಮನೆಯವರು ಬಾಣದ ದೇವರ ಹಟ್ಟಿಯ ಜುಂಜಪ್ಪ ದೇವರಿಗೆ ಹರಕೆ ಕಟ್ಟಿಕೊಂಡು ಮನೆಯೊಳಕ್ಕೆ ಹೋಗಿದ್ದಾರೆ.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಆರನೆಯ ಕಂತು

read more
ಕಾರ್ಯಕ್ರಮದ ಲೆಕ್ಕಾಚಾರಗಳು: ಎಚ್. ಗೋಪಾಲಕೃಷ್ಣ ಸರಣಿ

ಕಾರ್ಯಕ್ರಮದ ಲೆಕ್ಕಾಚಾರಗಳು: ಎಚ್. ಗೋಪಾಲಕೃಷ್ಣ ಸರಣಿ

ಇದೇ ತರಹದ ಅನುಭವ ಎರಡು ಮೂರು ಸಲ ಬೇರೆ ಬೇರೆ ಸಂದರ್ಭಗಳಲ್ಲಿ ಆಯಿತು. ಜತೆಯಲ್ಲಿದ್ದವರು ಹುರಿದುoಬಿಸಿ ನನ್ನ ಹಕ್ಕುಗಳ ರಕ್ಷಣೆಗಾಗಿ ಜಗಳಕ್ಕೆ ಪ್ರೆರೇಪಿಸಿದ್ದರು. ಜಗಳ ಸಹ ಆಡಿದ್ದೆ! ಜಗಳದ ಎಫೆಕ್ಟ್ ಬೇರೆ ರೀತಿ ಆಯಿತು. ಆಗಿದ್ದು ಬೇರೆ ರೀತಿ ಅಂದರೆ ಕಾಸು ಗೀಸು ಹೆಸರು ಬರುವಂತಹ ಸರ್ಕಾರದ ಪ್ರಾಯೋಜಿತ ಕೆಲಸಗಳಿಂದ ದೂರ ಆದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

read more
ಕುಡುಗೊಕ್ಕು ಹರಟೆಮಲ್ಲ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕುಡುಗೊಕ್ಕು ಹರಟೆಮಲ್ಲ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಇವು 22 ಸೆಂಮೀಟರ್ ಗಾತ್ರದ ಹಕ್ಕಿಗಳು. ಕಡುಗಂದು ಬಣ್ಣದ ದೇಹ; ಮುಖದಲ್ಲಿ ಎದ್ದು ಕಾಣುವ ಬಿಳಿ ಹುಬ್ಬು, ಬಿಳಿ ಬಣ್ಣದ ಗಲ್ಲ ಮತ್ತು ಎದೆ; ಕುಡುಗೋಲಿನಂತೆ ಬಾಗಿದ, ಹಳದಿ ಬಣ್ಣದ ಗಟ್ಟಿಮುಟ್ಟಾದ ಕೊಕ್ಕು, ಅಷ್ಟೇ ಬಲಿಷ್ಟವಾದ ಕಾಲು ಮತ್ತು ಪಾದಗಳು; ಬಹುದೂರ ಹಾರಲಾಗದ, ಸಣ್ಣ-ಗುಂಡಾದ ರೆಕ್ಕೆಗಳು. ಸಡಿಲವಾಗಿ ಅಂಟಿಸಿರುವಂತೆ ಕಾಣುವ ಬಾಲ. ಸಾಧಾರಣವಾಗಿ ಆರರಿಂದ ಏಳು ಪಕ್ಷಿಗಳು ಒಟ್ಟಾಗಿ ವಾಸಮಾಡುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕುಡುಗೊಕ್ಕು ಹರಟೆಮಲ್ಲ
ಹಕ್ಕಿಯ ಕುರಿತ ಬರಹ ಇಲ್ಲಿದೆ

read more
ಮೋಸದ ಆಟ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಮೋಸದ ಆಟ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಮಾರನೇ ದಿನ, ನಾವೆಲ್ಲರೂ ಏಳುವ ಹೊತ್ತಿಗಾಗಲೇ ಸಾಲಗಾರರೆಲ್ಲ ಸೇರಿದ್ದರು. ಸಹಾಯರ್ಥ ಪ್ರದರ್ಶನ ಆಡಿದ ಮೇಲೆ, ಅದರಲ್ಲೂ ಹೌಸ್‌ಫುಲ್ ಕಲೆಕ್ಷನ್ ಗಳಿಸಿದ ಮೇಲೆ ದುಡ್ಡು ವಾಪಾಸು ಕೇಳಲು ಬರುವುದು ನ್ಯಾಯಸಮ್ಮತ ತಾನೆ. ಈ ಬಾರಿ, ಪಕ್ಕಾ ವ್ಯವಹಾರಸ್ಥರಂತೆ ಅವರೆಲ್ಲ ಕಂಡಿದ್ದರು. ನಾವೂ ಅಷ್ಟೇ, ಕಂಪೆನಿಯ ಸಾಲವನ್ನು ನಮ್ಮ ಮಾಲೀಕರು ಈಗ ತೀರಿಸುತ್ತಾರೆ ನೋಡಿ ಎಂಬ ಭಾವಭಂಗಿಯಲ್ಲೇ ನಿಂತಿದ್ದೆವು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹತ್ತೊಂಭತ್ತನೆಯ ಕಂತು

read more
ಕೆಮ್ಮಣ್ಣು ಜೀರಿಂಬೆ ಮತ್ತು ಚಿಕ್ಕವ್ವನೆಂಬ ಎಮ್ಮೆ: ಎಸ್. ಗಂಗಾಧರಯ್ಯ ಅನುಭವ ಕಥನ

ಕೆಮ್ಮಣ್ಣು ಜೀರಿಂಬೆ ಮತ್ತು ಚಿಕ್ಕವ್ವನೆಂಬ ಎಮ್ಮೆ: ಎಸ್. ಗಂಗಾಧರಯ್ಯ ಅನುಭವ ಕಥನ

ನನಗೀಗ ಏನು ಮಾಡಬೇಕೆಂಬುದು ತಿಳಿಯದೆ ಪೂರಾ ಗಾಬರಿಗೊಳಗಾದೆ. ಅಂಥ ಗಾಬರಿಯಲ್ಲೂ ಚಿಕ್ಕವ್ವನ ಜಾರುತ್ತಿದ್ದ ಬಾಲವನ್ನೇ ಆಸರೆಯಾಗಿಸಿಕೊಂಡು ಅವಳ ಬೆನ್ನ ಮೇಲೆ ಕೂತು ಬಚಾವಾಗುವ ಆಸೆಯಿಂದ ಹಿಡಿದಿದ್ದ ಬಾಲವನ್ನೂ ಕೈ ಬಿಟ್ಟು ಮೆಲ್ಲಗೆ ಅವಳ ಮೈಯ್ಯ ಹತ್ತಿರ ಸಾಗಿದೆ. ಅದು ನಾನು ಮಾಡಿಕೊಂಡ ದೊಡ್ಡ ಯಡವಟ್ಟಾಗಿತ್ತು. ಮೊದಲೇ ನೊಣ ಕೂತರೆ ಜಾರುವಷ್ಟು ನುಣುಪಾಗಿದ್ದ ಅವಳ ಮೈ ನೀರಿನೊಳಗಿದ್ದುದರಿಂದ ಅದಕ್ಕೆ ಮತ್ತಷ್ಟು ನುಣುಪು ಬಂದು ಮತ್ತಷ್ಟು ಜಾರುತ್ತಾ ನಾನು ಎಷ್ಟೇ ಪಟ್ಟು ಹಾಕಿದರೂ ಆ ಪಟ್ಟುಗಳೆಲ್ಲಾ ಮಕಾಡೆ ಮಲಗಿದವು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”

read more
ಗ್ರಾಮದೇವತೆ ಮಾರಮ್ಮನ ಕೃಪೆಯಿಂದ…: ಬಸವನಗೌಡ ಹೆಬ್ಬಳಗೆರೆ ಸರಣಿ

ಗ್ರಾಮದೇವತೆ ಮಾರಮ್ಮನ ಕೃಪೆಯಿಂದ…: ಬಸವನಗೌಡ ಹೆಬ್ಬಳಗೆರೆ ಸರಣಿ

ಬಿದ್ದ ಗಾಯ ವಾಸಿಯಾದರೂ ಗಾಯದ ನೋವು ಮಾತ್ರ ಕಡಿಮೆಯಾಗಲಿಲ್ಲ. ನಾನು ಹಲವು ವೈದ್ಯರ ಹತ್ತಿರ ತೋರಿಸಿದರೂ ಕೂಡ ಅವರು ‘ಏನೂ ಸಮಸ್ಯೆ ಇಲ್ಲ’ ಎಂದು ಹೇಳುತ್ತಿದ್ದರು, ಆದರೆ ರಾತ್ರಿ ಮಲಗಿದಾಗ ಮಾತ್ರ ವಿಪರೀತ ಕಾಲು ಸೆಳೆತ, ಕಾಲು ನೋವು ಆಗುತ್ತಿತ್ತು. ಆಗ ನನಗೆ ಮನಸ್ಸಿನಲ್ಲಿ “ಇದು ದೇವರ ಶಾಪವಿರಬಹುದೋ ಏನೋ?” ಅಂದುಕೊಂಡು ದೇವರ ಕುರಿತು “ಅಮ್ಮಾ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು, ನಾನು ಊರಿಗೆ ಬಂದು ದರ್ಶನ ಮಾಡುತ್ತೇನೆ” ಎಂದು ಹೇಳಿಕೊಂಡೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ನಾಲ್ಕನೆಯ ಕಂತು

read more
ಕಮರಿದ ಕನಸುಗಳು…: ಜುಲೇಖಾ ಬೇಗಂ ಜೀವನ ವೃತ್ತಾಂತ

ಕಮರಿದ ಕನಸುಗಳು…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂದಹಾಗೆ, ಮಾಂಡ್ರೆ ಕವಿಗಳ ಕಂಪೆನಿಯಲ್ಲಿ ಆಗ ಬೇಬಿ ಬರುತ್ತಾಳೆಂಬುದೇ ದೊಡ್ಡ ಸುದ್ದಿ. ನನ್ನ ಮಗಳು ಬೇಬಿ ಬರುತ್ತಾಳೆ ಎಂದು ಓಡಾಡುತ್ತಿದ್ದ ಬಿ.ಪಿ.ಸಣ್ಣಪ್ಪ ಅವರ ಕಾಲು ನಿಂತಲ್ಲಿ ನಿಂತಿದ್ದೇ ಸುಳ್ಳು. ನಮಗೆಲ್ಲ ಬೇಬಿ ಅವರ ನಿಜವಾದ ಮಗಳೆಂದೇ ಎಣಿಕೆ. ಅವಳು ಬಂದರೆ ನಮ್ಮ ಕಂಪೆನಿ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲ ಹೇಳುತ್ತಿದ್ದದ್ದು ನಮಗೆ ಬೇಬಿ ಎಂದರೆ ದೇವಲೋಕದಿಂದ ಥಟ್ಟನೆ ರಾಮದುರ್ಗಕ್ಕೆ ಬಂದಿಳಿವ ದೇವತೆಯ ರೂಪದಂತೆ ಭಾಸವಾಗುತ್ತಿತ್ತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೆಂಟನೆಯ ಕಂತು

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ