Advertisement

ಅಂಕಣ

ಗರತಿಗಂಗಮ್ಮ ಮತ್ತು ಡಿಸ್ಕೋ ಲೈಟು!: ಸುಕನ್ಯಾ ಕನಾರಳ್ಳಿ ಅಂಕಣ

ಗರತಿಗಂಗಮ್ಮ ಮತ್ತು ಡಿಸ್ಕೋ ಲೈಟು!: ಸುಕನ್ಯಾ ಕನಾರಳ್ಳಿ ಅಂಕಣ

ಸಮಂಜಸತೆ ಮತ್ತು ಸಾವಯವತೆ ದೃಶ್ಯಸಂಸ್ಕೃತಿಯ ಅನಿವಾರ್ಯ ಭಾಗ ಎನ್ನುವುದನ್ನು ನಾವು ಸಾರಾಸಗಟಾಗಿ ಮರೆತಿದ್ದೇವೆ ಅಂತನ್ನಿಸುತ್ತದೆ. ಸನ್ಯಾಸಿಯೊಬ್ಬರು ಧೀಮಂತ ಭಂಗಿಯಲ್ಲಿ ನಿಂತಿರುವ ರಸ್ತೆಯುದ್ದಕ್ಕೂ ಲಲನೆಯರು ಚಿನ್ನ ವಜ್ರಗಳನ್ನು ಹೊತ್ತು ನಿಂತ ಬ್ಯಾನರುಗಳು ಕಣ್ಣಿಗೆ ಹೊಡೆಯುತ್ತವೆ. ಕಳೆದವಾರ ಶ್ರೀರಾಮಕೃಷ್ಣರ ವೃತ್ತವನ್ನೂ ಕಚ್ಚಿಕೊಂಡಂತೆ ಸುತ್ತ ಮುತ್ತಲೆಲ್ಲ ಯಾವುದೋ ಕಾರ್ಪೊರೇಟರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಫ್ಲೆಕ್ಸ್ ಬ್ಯಾನರುಗಳು ಹಲ್ಲು ಕಿರಿದಿದ್ದೇ ಕಿರಿದಿದ್ದು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತೆರಡನೆಯ ಬರಹ

read more
ಆಸ್ಟ್ರೇಲಿಯನ್ ಜನಗಣತಿ ಕಥನಗಳು: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯನ್ ಜನಗಣತಿ ಕಥನಗಳು: ವಿನತೆ ಶರ್ಮ ಅಂಕಣ

ಸರಕಾರವು ಎಲ್ಲರೂ ಜನಗಣತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕಳೆದ ಎರಡು ತಿಂಗಳುಗಳಿಂದ ಭಾರಿ ಪ್ರಚಾರ ನಡೆಸಿತ್ತು. ವಿವರಗಳನ್ನು ಕೊಟ್ಟರಾಯ್ತು ಎಂದುಕೊಂಡು ಸುಮ್ಮನಾಗಿ ಕೊನೆಯಲ್ಲಿ ಆನ್ಲೈನ್ ಫಾರಂ ತುಂಬಲು ಹೊರಟಾಗ ಹೆಣಗಾಡಬೇಕಾಯ್ತು. ಒಂದು ಬಾಕ್ಸಿನಲ್ಲಿ ಮಾಹಿತಿಯನ್ನು ಕೊಟ್ಟರೆ ಅದು ಮತ್ತೊಂದು, ಮಗದೊಂದು ಬಾಕ್ಸ್‌ಗಳನ್ನು ತೆರೆದು ಕೊಡು ಮತ್ತಷ್ಟು ವಿವರ, ಎನ್ನುತ್ತಿತ್ತು. ಆರೋಗ್ಯದ ಬಗ್ಗೆ ವಿವರಗಳನ್ನು ಕೊಡುವಾಗ ಈ ಎಲ್ಲಾ ವಿವರಗಳು ಸರ್ಕಾರದ ಆರೋಗ್ಯ ವ್ಯವಸ್ಥೆಯಲ್ಲಿ ಈಗಾಗಲೇ ದಾಖಲಾಗಿದೆಯಲ್ಲಾ, ಮತ್ತೆ ಇಷ್ಟೆಲ್ಲಾ ಬರೆಯಬೇಕಾದ ಅಗತ್ಯವೇನಿತ್ತು ಎಂದೆನಿಸಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

read more
ಆರ್. ಕಲ್ಯಾಣಮ್ಮ ಮತ್ತು ಶ್ಯಾಮಲಾದೇವಿ: ನವೋದಯ ಸ್ತ್ರೀಸಾಹಿತ್ಯದ ಎರಡು ಆದಿದೀಪಗಳು: ಡಾ.ಎಲ್.ಜಿ. ಮೀರಾ ಅಂಕಣ

ಆರ್. ಕಲ್ಯಾಣಮ್ಮ ಮತ್ತು ಶ್ಯಾಮಲಾದೇವಿ: ನವೋದಯ ಸ್ತ್ರೀಸಾಹಿತ್ಯದ ಎರಡು ಆದಿದೀಪಗಳು: ಡಾ.ಎಲ್.ಜಿ. ಮೀರಾ ಅಂಕಣ

ಜನಮಾನಸಕ್ಕೆ ನವೋದಯ ಲೇಖಕಿಯರ ಮಹತ್ವದ ಕೊಡುಗೆಯನ್ನು ಪರಿಚಯ ಮಾಡಿಕೊಡುವಲ್ಲಿ ಮುಂದಿನ ಪೀಳಿಗೆಗಳ ಲೇಖಕಿಯರು ಮಾಡಿರುವ ಅಪಾರ ಪರಿಶ್ರಮವನ್ನು ನಾವು ನೆನೆಯಬೇಕು. ಪ್ರಧಾನವಾಹಿನಿಯ ಸಾಹಿತ್ಯಚರಿತ್ರೆಯು ಹಿರಿಯಲೇಖಕಿಯರನ್ನು ನಿರ್ಲಕ್ಷಿಸಿದ್ದ ಸಂದರ್ಭದಲ್ಲಿ, ಪ್ರೊ.ಚಿ.ನ.ಮಂಗಳಾರಂತಹ ವಿದ್ವಾಂಸೆಯರ ಆಸಕ್ತ ಪ್ರಯತ್ನಗಳು ಈ ಕೊರತೆಯನ್ನು ತುಂಬಲು ಪ್ರಾರಂಭಿಸಿದವು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತನೆಯ ಬರಹ

read more
ಇದಮಿತ್ಥಂ ಎಲ್ಲಿಹುದು ಮನುಜ ಸ್ವಭಾವದಲಿ?: ಸುಕನ್ಯಾ ಕನಾರಳ್ಳಿ ಅಂಕಣ

ಇದಮಿತ್ಥಂ ಎಲ್ಲಿಹುದು ಮನುಜ ಸ್ವಭಾವದಲಿ?: ಸುಕನ್ಯಾ ಕನಾರಳ್ಳಿ ಅಂಕಣ

ಆದರೆ ನಿಜವಾದ ಹೊಡೆತ ಬೀಳುವುದು ಆ ಕಪ್ಪು ಹುಡುಗನ ತಾಯಿಯನ್ನು ಅವಳು ಭೇಟಿಯಾದಾಗ. ಕೌಟುಂಬಿಕ ಹಿಂಸೆಯಡಿ ಸಿಕ್ಕಿಬಿದ್ದ ಆ ತಾಯಿಗೆ ಕುಟುಂಬವೂ ಉಳಿಯಬೇಕು, ಮಗನ ಬರ್ಕತ್ತೂ ಆಗಬೇಕು. ಕರಿಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಸಮಾಜ ಒಂದು ಕಡೆ, ಸ್ಕೂಲಿನಿಂದ ಹೊರಕಳಿಸಿದರೆ ಆ ಎಳೆಯನ ಭವಿಷ್ಯವನ್ನು ಕತ್ತರಿಸಿ ಬಿಸಾಕುವ ಅವನ ಕ್ರೂರಿ ಅಪ್ಪ ಇನ್ನೊಂದು ಕಡೆ, ನಿನಗೆ ಬೇಕಿದ್ದರೆ ಪಾದ್ರಿಯನ್ನು ಹೊರದಬ್ಬು, ನನ್ನ ಮಗನ ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡಬೇಡ, ಎಂದು ನಯವಾಗಿ ಆದರೆ ದೃಢವಾಗಿ ಹೇಳುವ ಅವಳ ಧಾರಣಶಕ್ತಿ ಮತ್ತು ಹೇಗೋ ಬದುಕುಳಿದು ತನ್ನವರನ್ನೂ ಬದುಕಿಸಿಕೊಳ್ಳುವ ಅವಳ ತಣ್ಣಗಿನ ಸ್ಥೈರ್ಯ ಈ ಸಿಸ್ಟರಿನಿಯ ಧಾರ್ಮಿಕ ಹುಂಬತನವನ್ನು ಅಲ್ಲಾಡಿಸಿಬಿಡುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

read more
ಸುಮಾವೀಣಾ ಹೊಸ ಅಂಕಣ “ನುಡಿನಲಿವು” ಇಂದಿನಿಂದ

ಸುಮಾವೀಣಾ ಹೊಸ ಅಂಕಣ “ನುಡಿನಲಿವು” ಇಂದಿನಿಂದ

‘ಮಂಜಣ್ಣ ಹೇಳಿದ ಸ್ಥಳಕತೆ’ ಮಳೆಗಾಲದ ರೌದ್ರತೆಯನ್ನೆ ಹೇಳುವ ಪದ್ಯ. ಕುವೆಂಪುರವರು ಇಲ್ಲಿ ಮಳೆಯ ಭೀಕರತೆ ಎದುರಾಗುವ ಹಠಾತ್ ಸನ್ನಿವೇಶಗಳನ್ನು. ಸಿಂಗಿಯನು ಕರಿಸಿದ್ಧ ಕರೆತರಲು ಹೋಗುತ್ತಾನೆ. ಅಲ್ಲಿ ಆತಿಥ್ಯ ಸ್ವೀಕರಿಸಿ ಚಿಕ್ನೂರಿಗೆ ಹೊರಡಬೇಕು ಎನ್ನುತ್ತಾ ಹೆಂಡತಿಯನ್ನು ಕರೆದುಕೊಂಡು ಹೊರಡುವಾಗ ‘ಸಾವನೆ ಕಾರುವ ಕಾರದು ಸುರಿಯಿತು’ ಎಂದು ಅಪಾಯದ ಮುನ್ಸೂಚನೆಯನ್ನು ಹೇಳಿ ಮತ್ತಷ್ಟು ಬಲವಾಗಿ ಅಪ್ಪಿದರು ಎಂದಿದ್ದಾರೆ. ಮೃತ್ಯುವಿನ ಸೂಚನೆ ಕೊಡುವ ಹಾಗು ನಡೆದ ದುರಂತಕ್ಕೆ ವರ್ಷಗಳವರೆಗೆ ವಿಷಾದ ವ್ಯಕ್ತಪಡಿಸುವ ಈ ಪದ್ಯ ಪ್ರಸ್ತುತವಾಗಿದೆ.
ಸುಮಾವೀಣಾ ಹೊಸ ಅಂಕಣ “ನುಡಿನಲಿವು” ಇಂದಿನಿಂದ

read more
ಇಂಗ್ಲೀಷ್ ಮೇಡಮ್ಮಿನ ಕನ್ನಡ ಪುರಾಣ: ಸುಕನ್ಯಾ ಕನಾರಳ್ಳಿ ಅಂಕಣ

ಇಂಗ್ಲೀಷ್ ಮೇಡಮ್ಮಿನ ಕನ್ನಡ ಪುರಾಣ: ಸುಕನ್ಯಾ ಕನಾರಳ್ಳಿ ಅಂಕಣ

ಷೇಕ್ಸ್ಪಿಯರ್ ತನ್ನ ಕಾಲದಲ್ಲಿ ಮಹಾನ್ ನಾಟಕಕಾರ ಎಂದು ಪರಿಗಣಿಸಲ್ಪಟ್ಟಿದ್ದನೊ ಇಲ್ಲವೋ. ವಾಸ್ತವವಾಗಿ ಆತ ಕೇವಲ ಎರಡನೆಯ ಅಥವಾ ಮೂರನೆಯ ದರ್ಜೆಯ ನಾಟಕಾರನಾಗಿದ್ದ ಎಂಬ ನಿಲುವಿದೆ. ನಮ್ಮ ವಿ. ಸೀತಾರಾಮಯ್ಯನವರ ಮಾತುಗಳು ಅದನ್ನೇ ಧ್ವನಿಸುತ್ತವೆ. ‘ಶೇಕ್ಸಪಿಯರನಲ್ಲಿ ಭವ್ಯವಾದ, ಸುಬದ್ಧವಾದ, ತಾರಕವಾದ ಜೀವನಮೌಲ್ಯಗಳಿಲ್ಲ; ದರ್ಶನವಿಲ್ಲ. ಆದುದರಿಂದ ಅವನು ಕೀಳನೆಂಬ ಒಂದು ವಿಚಿತ್ರ ತೀರ್ಮಾನ ಬಹುಕಾಲದಿಂದ ಬಂದಿದೆ. (ಪು. ೨೦). ಆದರೆ ಭಾರತದಲ್ಲಿ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ, ಇಂಗ್ಲಿಷ್ ಶಿಕ್ಷಕರ ಕೈಯಲ್ಲಿ ಅವನು ಮಹಾನ್ ಎತ್ತರವನ್ನು ಏರಿದ ರೀತಿಗೆ ಕಾರಣವನ್ನು ಹುಡುಕಬೇಕೆಂದರೆ ವಸಾಹತುಶಾಹಿ ಇತಿಹಾಸದತ್ತ ಹೊರಳಿಕೊಳ್ಳಬೇಕು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

read more
ಆಸ್ಟ್ರೇಲಿಯಾದಲ್ಲಿ ಮಹಿಳಾ ನಡಿಗೆ ಗುಂಪು: ವಿನತೆ ಶರ್ಮಾ ಅಂಕಣ

ಆಸ್ಟ್ರೇಲಿಯಾದಲ್ಲಿ ಮಹಿಳಾ ನಡಿಗೆ ಗುಂಪು: ವಿನತೆ ಶರ್ಮಾ ಅಂಕಣ

ನನಗೆ ಆಸ್ಟ್ರೇಲಿಯಾದಲ್ಲಿ ‘ಹೊರತುಪಡಿಸುವ’ ಮನೋಭಾವದ ಅನುಭವ ದಟ್ಟವಾಗಿರುವುದರಿಂದ ಈಚೀಚೆಗೆ ಆ ಮನೋಭಾವದ ಮಜಲುಗಳ, ಅದು ವ್ಯಕ್ತವಾಗುವ ಹಿನ್ನೆಲೆಗಳ ಬಗ್ಗೆ ಆಸಕ್ತಿ ಬೆಳೆದಿದೆ. ಕೆಲತಿಂಗಳ ಹಿಂದೆ ನಡಿಗೆ ಗುಂಪಿಗೆ ವಾಪಸ್ಸಾದಾಗ ನನ್ನ ಪರಿಚಯದಾಕೆ ಉತ್ಸಾಹದಿಂದ ಬರಮಾಡಿಕೊಂಡರು. ಬೇರೆಯವರಿಗೆ ನಾನು ನನ್ನ ಹೆಸರನ್ನು ಹೇಳಿಕೊಂಡು, ಕೆಲವರ್ಷಗಳ ಹಿಂದೆ ನಿಮ್ಮ ಜೊತೆ ನಡೆಯುತ್ತಿದ್ದೆ, ಎಂದೆಲ್ಲಾ ಪೀಠಿಕೆ ಕೊಟ್ಟೆ. ಇತರರಲ್ಲಿ ಅದೇ ಉದಾಸೀನತೆ. ಪುನಃ ಎಲ್ಲರೂ ಬಿಳಿಯರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

read more
ಅನಕೃ ಎಂಬ ಕನ್ನಡದ ಒನಪು! ಜುಲೈ ತಿಂಗಳ ಈ ನೆನಪು: ಎಲ್.ಜಿ.ಮೀರಾ ಅಂಕಣ

ಅನಕೃ ಎಂಬ ಕನ್ನಡದ ಒನಪು! ಜುಲೈ ತಿಂಗಳ ಈ ನೆನಪು: ಎಲ್.ಜಿ.ಮೀರಾ ಅಂಕಣ

ಅನಕೃ ಅವರ ಬರಹದ ಉದ್ದೇಶವು ಇಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಹಿಂದಿನ ಕಾಲದಿಂದ ನಂಬಿಕೊಂಡು ಬಂದ ಮೌಲ್ಯಗಳನ್ನು ಆಧುನಿಕ ಸಂದರ್ಭದಲ್ಲಿ ಅಳವಡಿಸಿಕೊಂಡು ಬಾಳುವ ವ್ಯಕ್ತಿಗಳು ಹೇಗಿರುತ್ತಾರೆ ಎಂಬ ಪ್ರಶ್ನೆಯನ್ನು ಅವರು ಎತ್ತಿಕೊಂಡಿದ್ದಾರೆ. ಅಂತಹ ಬಾಳನ್ನು ಬಾಳುವ ವ್ಯಕ್ತಿಗಳನ್ನು ಮತ್ತು ಅವರಿಗೆ ಎದುರಾಗುವ ಪ್ರತಿಕೂಲ ಸ್ವಭಾವದ ವ್ಯಕ್ತಿಗಳನ್ನು ಪಾತ್ರಗಳಾಗಿ ಇಟ್ಟುಕೊಂಡು, ಪರಸ್ಪರ ವಿರುದ್ಧ ಗುಣಗಳ ಸಂಘರ್ಷವನ್ನು ಚಿತ್ರಿಸಿ ಕೊನೆಗೆ ಒಳ್ಳೆಯದರ ಮುಂದೆ ಕೆಟ್ಟದ್ದು ಸೋಲುತ್ತದೆ ಎಂಬ ಶುಭಸಂದೇಶವನ್ನು ಸಾರುವ ಉಪಸಂಹಾರವನ್ನು ನೀಡಿದ್ದಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

read more
ಒಂಟಿಹೆಣ್ಣು ಮತ್ತು ಹಂಪೆಯಾತ್ರೆ: ಸುಕನ್ಯಾ ಕನಾರಳ್ಳಿ ಅಂಕಣ

ಒಂಟಿಹೆಣ್ಣು ಮತ್ತು ಹಂಪೆಯಾತ್ರೆ: ಸುಕನ್ಯಾ ಕನಾರಳ್ಳಿ ಅಂಕಣ

ಮೂರನೆಯ ದಿನದ ಹೊತ್ತಿಗೆ ಮನಸ್ಸನ್ನು ಉಲ್ಲಾಸಕ್ಕೆ ಹಚ್ಚುವ, ಹರಿಯುವ, ಸೆಳೆಯುವ ನದಿಯನ್ನು ನೋಡಬೇಕೆನ್ನಿಸಿತ್ತು. ತುಂಗಭದ್ರೆಯ ಹರವನ್ನು ಕಲ್ಪಿಸಿಕೊಳ್ಳುತ್ತಾ ಬೆಳಿಗ್ಗೆಯೇ ಹೋಗಿ ಒಂದು ಮೂಲೆ ಹಿಡಿದು ಕೂತು ಎಷ್ಟೋ ಹೊತ್ತು ಆಕೆಯನ್ನು ಕಣ್ತುಂಬಿಕೊಂಡ ಮೇಲೆ ಸ್ವಲ್ಪ ಸಮಾಧಾನವೆನ್ನಿಸಿತ್ತು. ಕೃಷ್ಣದೇವರಾಯ ತನ್ನ ಆಳ್ವಿಕೆಯನ್ನು ಪ್ರಾರಂಭಿಸಿದ್ದ ಆನೆಗುಂದಿಗೆ ಹೋಗಬೇಕು ಎಂದು ಹೇಳಿದ್ದರೂ ನಮ್ಮ ಆಟೋವಾಲ ಕರೆದುಕೊಂಡು ಹೋಗಿದ್ದು ಐನೂರ ಎಪ್ಪತ್ತೈದು ಮೆಟ್ಟಿಲು ಹತ್ತಬೇಕಿದ್ದ ಅಂಜನಾದ್ರಿಗೆ. ಕಡಿದರೆ ಎರಡು ಆಳಾಗುವ ಒಬ್ಬ ಧಡಿಯ ಮೈಮೂತಿ ತುಂಬ ಹನುಮಂತನ ಬಣ್ಣ ಬಳಿದುಕೊಂಡು, ಸೊಂಟದ ಹಿಂದೆ ಒಂದು ಬಾಲವನ್ನು ಅಂಟಿಸಿಕೊಂಡು, ಗದೆ ಹಿಡಿದು ನಡುದಾರಿಯಲ್ಲಿ ಹಾದಿಗುಪ್ಪೆಯ ಮೇಲೇ ನಿಂತಿದ್ದ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ