ಯಾರೋ ಕುಯೆಂಪು ಅನ್ನೊರ ಮಗನಂತೆ
ಕಾಫಿಬೋರ್ಡು ಮಧ್ಯವರ್ತಿಗಳ ಹಾವಳಿಯನ್ನೂ ತಪ್ಪಿಸಲಾಗದೆ ದಲ್ಲಾಳಿಗಳ ಕೈಗೊಂಬೆಯಂತೆ ವರ್ತಿಸಿತು. ಕಾಫಿ ಬೆಳೆಯನ್ನು ಬಿಟ್ಟರೆ ಎಲ್ಲಾ ಬೆಳೆಗಾರರು ತಮ್ಮ ಉತ್ಪಾದನೆಯನ್ನು ತಾವೇ ಮಾರಿಕೊಳ್ಳುತ್ತಿದ್ದರು. ಕಾಫಿ ಬೆಳೆಗಾರನು ಎದುರಿಸುತ್ತಿದ್ದ ಸಮಸ್ಯೆ ಮತ್ತು ಮುಂದೊದಗಬಹುದಾದ ಆಪತ್ತು ವಿಪತ್ತುಗಳನ್ನು ಚಿಂತಿಸಿ ೧೯೭೧ರಲ್ಲೇ ತೇಜಸ್ವಿಯು ತಾವು ಬೆಳೆದ ಕಾಫಿಯನ್ನು ಸಂತೆಯಲ್ಲಿ ಮಾರಿಕೊಳ್ಳುವೆನೆಂಬ ಹೇಳಿಕೆ ಕೊಟ್ಟು ಕಾಫಿ ಬೋರ್ಡಿನ ಬಗ್ಗೆ ಮೊಟ್ಟಮೊದಲ ಬಾರಿಗೆ ಸಿಡಿದೆದ್ದರು. ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ
ಚಳಿ, ಕಾಫಿ ಪಿಕ್ಕಿಂಗ್ , ಪಲ್ಪರ್ ಮತ್ತು ಮೂಡಿಗೆರೆ
ಏಳೆಂಟು ವರ್ಷಗಳ ಹಿಂದೆ ಗೌರಿಹಬ್ಬದಲ್ಲಿ ಬಳೆ ಕೊಳ್ಳಲಿಕ್ಕೆಂದು ಮೂಡಿಗೆರೆ ಪೇಟೆ ಬೀದಿಗೆ ಹೋದೆ. ಅಲ್ಲೊಬ್ಬರು ಈ ಗೊಬ್ಬೆ ಸೀರೆ ಉಟ್ಟವರು ವಯಸ್ಸಾದ ಮಹಿಳೆ ಮೊಮ್ಮಕಳೊಟ್ಟಿಗೆ ಹೋಗುತ್ತಿದ್ದರು. ಅವರು ತುರುಬಿಗೆ ಕುಪ್ಪಿಗೆ ಎಂಬ ಆಭರಣ ಸಿಕ್ಕಿಸಿಕೊಂಡಿದ್ದರು. ಮತ್ತು ಕಿವಿಗೆ ಹಾಕಿದ್ದ ಬುಗುಡಿಯಿಂದ ಬಂದ ಬಂಗಾರದ ಸರ ಕುಪ್ಪಿಗೆಗೆ ಸೇರಿಕೊಂಡಂತೆ ಇತ್ತು. ಮೆಲ್ಲಗೆ ಅವರ ಹಿಂದೆಯೇ ಒಂದಷ್ಟು ದೂರ ನಡೆದೆ. ಆ ಆಭರಣದ ಚೆಂದ ನೋಡಿದೆ. ಮನಸ್ಸಿಗೆ ಚೆಂದವಾಯಿತು. ಅಂದು ಇಂತಹ ಉಡಿಗೆ ತೊಡಿಗೆಯವರೇ
ಬೀರುವಿನೊಳಗೇ ಅವಿತು ಕೂತ ಅತಿಥಿಗಳು
ಒಮ್ಮೆ ನಾವು ಮೈಸೂರಿಗೆ ಹೋಗಿ ಒಂದಷ್ಟು ದಿನಗಳ ಕಾಲ ಉಳಿದು, ಮರಳಿ ಮನೆಗೆ ಬಂದೆವು. ಬಂದವಳೇ ಬಟ್ಟೆ ಬ್ಯಾಗು ಹಿಡಿದುಕೊಂಡು ಒಳಹೋಗಿ, ಅಲ್ಲಿದ್ದ ಗೋಡೆ ಬೀರಿನ ಬಾಗಿಲು ತೆಗೆದೆ. ಒಂದು ಸಲ ಶಾಕ್ ಹೊಡಿತು. ಗೊಳೋ ಎಂದು ಜೋರಾಗಿ ಅಳುತ್ತಿದ್ದೆ. ‘ಯಾಕೆ, ಏನೇ ಆಯ್ತು,’ ಹೀಗೆ ಅಳಕ್ಕೆ ಎಂದು, ರೂಮಿಗೆ ಗದರಿಕೊಂಡೇ ಬಂದರು ತೇಜಸ್ವಿ. ಇನ್ನೂ ಜೋರಾಯಿತು ನನ್ನ ಅಳು. ನನಗೆ ಮಾತೇ ಹೊರಡಲಿಲ್ಲ. ‘ಏನೇ’ ಎಂದು, ಹಾರು ಹೊಡೆದುಕೊಂಡು ಬಿದ್ದಿದ್ದ ಬಾಗಿಲಿನತ್ತ ನೋಡಿದರು. ಬೇಸ್ತು ಬಿದ್ದರು. ಈ ಹೊಸ ಅತಿಥಿಗಳಿಂದ ನನಗಾದ ನಷ್ಟ ಎಣಿಸಲಾಗದ್ದು.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ , ರಾಜೇಶ್ವರಿ ತೇಜಸ್ವಿ ಬರೆದ ಬರಹ ಇಂದಿನ ಓದಿಗಾಗಿ.
ಇನ್ನು ನಿರುತ್ತರದಲ್ಲಿ ರಾಜೇಶ್ವರಿಯೂ ಇಲ್ಲ
ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಮಂಗಳವಾರ ಮುಂಜಾನೆ ತೀರಿಕೊಂಡಿದ್ದಾರೆ. ವಯೋಸಹಜ ಅನಾರೋಗ್ಯ ಅವರನ್ನು ಕಾಡಿತ್ತು. ರಾಜೇಶ್ವರಿ ತೇಜಸ್ವಿ ಅವರು ಕೆಂಡಸಂಪಿಗೆಯ ಮೂಲಕವೇ ಬರವಣಿಗೆ ಶುರು ಮಾಡಿದ್ದರು.
ನೂತನ ಅಳೀಮಯ್ಯರ ಮುಂದೆ ಪ್ರೆಸ್ಟೀಜು ಪ್ರಶ್ನೆ
ಆ ಮನೆಯ ಬೆಡ್ರೂಮು ದೊಡ್ಡದಾದ ಬಿರುಕಿನಿಂದ ಕೂಡಿತ್ತು. ಆ ಕೋಣೆಯಲ್ಲಿ ಮಲಗಿದಾಗ, ಕಿಟಕಿಯಲ್ಲಿ, ರಾತ್ರಿಯ ರಮಣೀಯ ಚಂದ್ರನನ್ನು, ಇರುಳಿನ ಹೊಳೆವ ತಾರೆಗಳನ್ನು ನೋಡಿ ಆನಂದಿಸಬಹುದಾಗಿತ್ತು! ಮಲಗಿದಲ್ಲಿಯೇ ಆಗಸವನ್ನು ನೋಡುತ್ತಾ ಕಾವ್ಯರಚಿಸಬಹುದಾಗಿತ್ತು! ಕಾಡಿನಲ್ಲಿದ್ದ ಆ ಕ್ವಾಟ್ರರ್ಸನಲ್ಲಿ ಕೋಗಿಲೆಯ ಹಾಡೋ, ನವಿಲುಗಳ ನರ್ತನವೋ ನಮ್ಮ ಭಾಗ್ಯಕ್ಕೆ ಸಿಗಲಿಲ್ಲ.
ಅಭಿನಯಕ್ಕೆ ಅಲಂಕಾರದ ಮೊನಚು ಕೊಡುವ ಹಸ್ತಾಭಿನಯ
ವೇದಿಕೆಯಲ್ಲಿ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ, ನರ್ತಿಸಿದ್ದಾರೆ ಎಂದಾಗ ನಾವು ಅವರಲ್ಲಿ ಕಂಡಂತಹ ವಿಶೇಷತೆಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಕಲಾವಿದರ ಕಣ್ಣುಗಳು ಮಾತನಾಡುತ್ತಿದ್ದವು, ಕೈಗಳೂ ಮಾತನಾಡುತ್ತಿದ್ದವು, ಕಾಲುಗಳೂ ಮಾತನಾಡುತ್ತಿದ್ದವು ಹೀಗೆ… ಇಲ್ಲಿ ಒಂದೊಂದು ಅಂಗಗಳು ತಮ್ಮ ಅಭಿನಯದ ಮೂಲಕ ನಮ್ಮ ಮನಸ್ಸನ್ನು ತಟ್ಟುವ ಕೆಲಸವನ್ನು ಮಾಡಿರುತ್ತವೆ ಎಂದೇ ಅರ್ಥ. ಹಾಗೆಂದರೆ ಇಲ್ಲಿ ಮಾತು ಎಂಬ ಪದ ಕಲಾವಿದ…
ಈ ಜೋರು ಮಳೆಯೂ, ಬೊಬ್ಬೆಯೂ.. ನಿಮಗೇನಾದರೂ ಕೇಳಿಸುತ್ತಿದೆಯಾ ?
ಸುಂದರವಾದ ಇಂಟೀರಿಯರ್ ಡೆಕೊರೇಶನ್ ಮಾಡಿದ ಅಡುಗೆ ಮನೆಯಲ್ಲಿ ದಿನಸಿ ಸಾಮಾನು ತುಂಬಿಡಲು ಎಷ್ಟೊಂದು ಚಂದದ ಡಬ್ಬಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆದರೆ ಅತ್ತ ಸುರಿಯುತ್ತಿರುವ ಭಾರೀ ಮಳೆಯೂ, ಕೃಷಿ ಕ್ಷೇತ್ರದ ಕುರಿತು ನಡೆಯುತ್ತಿರುವ ಚರ್ಚೆಗಳು, ಏರುಪೇರಾದ ಹವಾಮಾನದ ಆತಂಕಗಳು ಯಾಕೋ ಕಂಗಾಲು ಮಾಡುತ್ತಿವೆ. ಅಂತಹುದೇ ಆತಂಕಗಳನ್ನು ನಮ್ಮ ನಡುವಿನ ಕತೆ…
ಮುದ್ದು ಮಕ್ಕಳ ಉಸಿರು-ಉಲ್ಲಾಸದ ಹಸಿರು
ಶಿಶು ಲೋಕದಲ್ಲಿ ಎಲ್ಲವೂ ಎಷ್ಟು ಸರಾಗ! ಮೂವರೂ ಮಕ್ಕಳು ಪುಣ್ಯಕೋಟಿಯ ಕಥೆಗೆ ಕಣ್ಣೀರುಗರೆದವರೇ. ಪಂಚತಂತ್ರ, ಜಾತಕ, ಅರೇಬಿಯನ್ ನೈಟ್ಸ್, ಈಸೋಪ, ಅಮರಚಿತ್ರ ಕಥಾ ಸರಣಿಗಳು-ಇವರ ಕುತೂಹಲ ತಣಿಸಲು ಕಥೆಗಳ ಕಣಜವೇ ಬೇಕು. ಸಹಜವಾಗಿಯೇ ಪುಸ್ತಕಗಳ ಒಲವು. ನಾನು ರಾತ್ರಿಯಿಡೀ ಪ್ರಯಾಣ ಮಾಡಿ ಮಗಳ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಧನ್ಯ ಮತ್ತು ಮಾನ್ಯ ಹೊಸದಾಗಿ ಕೊಂಡ ಪುಸ್ತಕಗಳ ರಾಶಿ ಮುಂದಿಟ್ಟು ನಮಗೆ ವಿವರಿಸಲಾರಂಭಿಸುವುದು…
ಕನಕ ಕನಸಿದ ‘ಕಲ್ಯಾಣ’: ಉದಾರಚರಿತದ ರೂಪಕ
ಕುರುಬ ಸಮುದಾಯದ’ಕನಕ’, ಕನಕದಾಸರಾಗಿದ್ದುದರ ಬಗ್ಗೆ ಅನೇಕ ಕಥನಗಳಿವೆ. ಆದರೆ ಈ ಹಾದಿಯಲ್ಲಿ ಕನಕರು ಕುಲದ ಕಾರಣಕ್ಕಾಗಿ ಎದುರಿಸಬೇಕಾಗಿ ಬಂದ ಸಂಕಟಗಳನ್ನು ನಾವು ಗಮನಿಸಬೇಕು. ಶ್ರೀನಿವಾಸ ಶೆಟ್ಟಿ, ಪುರಂದರ ದಾಸರಾಗಲು ಇರುವ ಅವಕಾಶ ಕನಕನಾಯಕ ಕನಕದಾಸರಾಗೋದಕ್ಕೆ ಇರಲಿಲ್ಲ. ಅವರು ತಮ್ಮ ಹುಟ್ಟಿನ ಸೂತಕದ ಕಾರಣಕ್ಕಾಗಿ ಮತ್ತೆ ಮತ್ತೆ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳಬೇಕಾಯ್ತು.







