ತಾಯಿ ಭುವನೇಶ್ವರಿಯ ಮಕ್ಕಳು ನಾವೂ…: ಎಚ್. ಗೋಪಾಲಕೃಷ್ಣ ಸರಣಿ
ಇಬ್ಬರು ಕನ್ನಡಿಗರು ಅವರ ಹುಟ್ಟೂರಿನಲ್ಲಿ ಸಿಕ್ಕಿದರೂ ಸಹ ಇಂಗ್ಲಿಷ್ ನಲ್ಲಿ ಮಾತು ಆರಂಭಿಸುತ್ತಾರಂತೆ. ಬೇರೆಯವರ ಸಂಗಡ ಆದರೆ ಎದುರಿನವನ ಭಾಷೆ ಇವರದ್ದು ಆಗುತ್ತಂತೆ. ಬೇರೆ ಊರಿನಲ್ಲಿ ಭೇಟಿಸಿದರೆ ಅದೆಷ್ಟೋ ವರ್ಷ ತಾವು ಕನ್ನಡದವರು ಎಂದು ತಿಳಿದಿರುಲ್ಲವಂತೆ. ಊರು ಬಿಡಬೇಕಾದರೆ ತಮ್ಮಿಬ್ಬರ ತಾಯಿ ಒಬ್ಬಳೇ, ಆಕೆಯೇ ಭುವನೇಶ್ವರಿ ಅಂತ ಗೊತ್ತಾಗುತ್ತಂತೆ! ಒಂದು ಸಣ್ಣ ಉಪಕತೆ ನೀವು ಅಲ್ಲ ಸಾರಿ ನಾನು ಮರೆಯುವ ಮೊದಲು ನಿಮಗೆ ಹೇಳಿ ಬಿಡುತ್ತೇನೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೮ನೇ ಬರಹ ನಿಮ್ಮ ಓದಿಗೆ
ಕೆಂಬೂತ: ಡಾ. ಎಸ್.ವಿ. ನರಸಿಂಹನ್ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ
ಇವುಗಳದ್ದು ತುಂಬಾ ಸಂಕೋಚ ಸ್ವಭಾವ. ಇದರ ರೆಕ್ಕೆಗಳು ದುರ್ಬಲವಾದ್ದರಿಂದ ಇವು ಹೆಚ್ಚಾಗಿ ಮರ-ಪೊದೆಗಳಲ್ಲಿ ಕುಪ್ಪಳಿಸಿಕೊಂಡು ಆಹಾರವನ್ನು ಅರಸುತ್ತವೆ. ಕೆಂಬೂತಗಳ ಆಹಾರ ಬಲುಬಗೆಯ ಕೀಟಗಳು, ಹುಳುಗಳು, ಧಾನ್ಯಗಳು, ಹಣ್ಣುಗಳು, ಬೀಜಗಳು, ಅನ್ಯ ಹಕ್ಕಿಯ ಮೊಟ್ಟೆಗಳು, ಚಿಕ್ಕ ಹಾವುಗಳು, ಕೆಲ ವಿಷಕಾರಿ ಹಣ್ಣುಗಳು ಮತ್ತು ಅದರ ಬೀಜಗಳು. ಪಾಮ್ ಎಣ್ಣೆ ಮರದಲ್ಲಿನ ಹಣ್ಣನ್ನು ಬಯಸುವ ಇವು, ಪಾಮ್-ಮರದ ಕೃಷಿಕರಲ್ಲಿ ಬೆಳೆ ನಾಶಕ ಎಂದೆನಿಸಿವೆ. ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೆಂಬೂತದ ಕುರಿತ ಬರಹ ಇಲ್ಲಿದೆ
ಅಲೆಮಾರಿ ಗುಡಾರಗಳು, ಮುಂಗುಸಿ ಭದ್ರ ಮತ್ತು ಮಂಚಿಗೆ: ಎಸ್. ಗಂಗಾಧರಯ್ಯ ಅನುಭವ ಕಥನ
ಭದ್ರ ಬಂದವನೇ ಕೈಯ್ಯಲ್ಲಿದ್ದ ಪುಟ್ಟ ಬುಡುಬುಡಿಕೆಯನ್ನು ಚೆಡ್ಡಿ ಜೇಬೊಳಕ್ಕೆ ತುರುಕಿಕೊಂಡು `ಎದ್ದಾಳಿ ಮತ್ತೆ ಬೇಗ’ ಅಂತ ನಮ್ಮನ್ನು ಏಳಿಸಿಕೊಂಡು ಶೆಟ್ಟೀಕೆರೆಯ ಕೆರೆಯ ಅಂಗಳಕ್ಕೆ ಕರೆದೊಯ್ದು ಅಲ್ಲಿ ತಾವರೆ ಬೀಜಗಳನ್ನು ಹುಡುಕತೊಡಗಿದ. ಭದ್ರನೊಂದಿಗೆ ನಾವೂ ಕೈ ಜೋಡಿಸಿದೆವು. ಕೆರೆಯ ಅಂಗಳದಲ್ಲಿ ಬಿಟ್ಟಿದ್ದ ಬಿರಿಗಳ ನಡುವಲ್ಲಿ ಗೋಚರಿಸುತ್ತಿದ್ದ ತಾವರೆ ಬೀಜಗಳನ್ನು ಮೂವರೂ ಜೇಬಿಗಿಳಿಕೊಂಡು ಮತ್ತೆ ಮಂಚಿಗೆಯತ್ತ ಬಂದೆವು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಮೂರನೆಯ ಕಂತು
ಮೊದಲ ಶಾಲೆಯ ಪ್ರಾರಂಭದ ಅನುಭವಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ
ನಾನು ಆ ಮನೆಗೆ ಹೋಗುತ್ತೇನೆ ಎಂದು ತಿಳಿದು ಅವರು ಬಾಕಿ ಇರುವ ಕರೆಂಟ್ ಬಿಲ್ ಕಟ್ಟಿದ್ದರಂತೆ ಹಾಗೂ ಕ್ಲೀನ್ ಮಾಡಿಸಿದ್ದರಂತೆ. ಯಾವಾಗ ನಾನು ಹೋಗೋದಿಲ್ಲ ಎಂದು ತಿಳಿದ ಮೇಲೆ ನನ್ನ ಮೇಲೆ ಗರಂ ಆದರು. ಆದರೆ ಇದನ್ನು ತೋರಿಸಿಕೊಳ್ಳುವ ಹಾಗಿರಲಿಲ್ಲ. ಮನದಲ್ಲಿ ನನ್ನ ಬಗ್ಗೆ ಕೋಪವು ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಆಗ ಇವರೇ ನಮ್ಮ ಹೆಚ್ಚೆಂ ಆದ್ದರಿಂದ ನನಗೆ ಕಿರಿಕ್ ಕೊಡಲು ಶುರು ಮಾಡಿದರು. ರಜಾ ಕೇಳಿದಾಗ ತಕ್ಷಣ ಪ್ರತಿಕ್ರಿಯೆ ನೀಡದೇ ಇರುತ್ತಿದ್ದುದು, ಸುಖಾ ಸುಮ್ಮನೇ ಅದು ಮಾಡಿಲ್ಲ ಇದು ಮಾಡಿಲ್ಲ ಎಂದು ಹೇಳುತ್ತಿದ್ದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ಮೂರನೆಯ ಕಂತು ನಿಮ್ಮ ಓದಿಗೆ
ಅರಾ ಮಿತ್ರ ಸಿಕ್ಕರ!: ಎಚ್. ಗೋಪಾಲಕೃಷ್ಣ ಸರಣಿ
ಇದಕ್ಕಿಂತ ಸುಲಭ ಉಪಾಯ ಒಂದು ನನ್ನ ತಲೆಯಲ್ಲಿದೆ. ಅದೇನಪ್ಪಾ ಅಂದರೆ ಯಾವುದೇ ರಸ್ತೆಯಲ್ಲಿ ಯಾವುದೇ ಗಂಡಸು ಯಾ ಹೆಂಗಸು ಹುಂಜನ ಹಾಗೇ ನಡೆಯುತ್ತಾ ಇದ್ದಾರೆ ಅಂದರೆ ಅವರು ನೂತಕ್ಕೆ ನೂತು ಬರೆಹಗಾರ ಅಂತ. ನೂತಕ್ಕೆ ನೂತು ಅನ್ನುವುದು ಕನ್ನಡ ಅಲ್ಲ, ತಮಿಳು ಇರಬಹುದು. ಆದರೆ ಈಚೆಗೆ ಬರಹದ ಎಫೆಕ್ಟ್ ಹೆಚ್ಚು ಎದ್ದು ಕಾಣಬೇಕು ಎನ್ನುವ ಏಕಮೇವ ಉದ್ದೇಶದಿಂದ ಬೇರೆ ಬೇರೆ ಭಾಷೆಗಳ ಇಂತಹ ಪದಪುಂಜಗಳು ನಮ್ಮಲ್ಲೂ ಹೆಚ್ಚಿವೆ. ಪುರಾವೆ ಬೇಕಾ? ನಮ್ಮ ಪತ್ರಿಕೆ ನೋಡಿ ಅಷ್ಟೇ.. ಕಥೆಗೆ ಕಾಲಿಲ್ಲವಂತೆ, ಅದಕ್ಕೆ ಬರೇ ರೆಕ್ಕೆ ಅಂತೆ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೭ನೇ ಬರಹ ನಿಮ್ಮ ಓದಿಗೆ
ರಾತ್ರಿ ಸ್ಕೂಲು, ಶನಿ ಮಹಾತ್ಮೆ ಮತ್ತು ಚಳ್ಳೆ ಹಣ್ಣಿನ ಮೇಷ್ಟ್ರು: ಎಸ್. ಗಂಗಾಧರಯ್ಯ ಅನುಭವ ಕಥನ
ಇದರಿಂದ ಆಗಬಹುದಾದ ಅನಾಹುತದ ಸೂಚನೆಯನ್ನು ಅರಿತ ನನ್ನ ಪಕ್ಕದಲ್ಲಿದ್ದ ಶಂಕರ ಅಳುತ್ತಾ ಒಮ್ಮೆಗೇ ಮೇಲೆದ್ದು ಆಚೆ ಓಡಲು ಯತ್ನಿಸಿದ. ಅದು ಗೊತ್ತಿದ್ದವರಂತೆ ಮೇಷ್ಟ್ರು ಅವನನ್ನು ತಡೆದು ಮತ್ತೆ ಕೂರಿಸಿದರು. ಮೇಷ್ಟ್ರು ಕೈಯ್ಯಲ್ಲಿದ್ದ ಕೋಲನ್ನು ಮೇಜಿನ ಮೇಲಿಟ್ಟು ಚಣೊತ್ತು ಮೌನವಾಗಿ ಕೂತುಬಿಟ್ಟರು. ನಂತರ ನಿಂತೇ ಇದ್ದ ಶಿವನನ್ನು ಕೂರಲು ಹೇಳಿ ನಮ್ಮತ್ತ ನೋಡಿ ಮುಗುಳ್ನಕ್ಕರು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಎರಡನೆಯ ಕಂತು
ಕೆಂಪು ಟಿಟ್ಟಿಭ: ಡಾ. ಎಸ್.ವಿ. ನರಸಿಂಹನ್ ಸರಣಿ
ಕೆಂಪು ಟಿಟ್ಟಿಭ, ಗೂಡು ಕಟ್ಟುವ ಪರಿ, ವಿಚಿತ್ರ ಮತ್ತು ವಿಶಿಷ್ಟ! ಮಾರ್ಚ್ನಿಂದ ಆಗಸ್ಟ್ ತಿಂಗಳುಗಳಲ್ಲಿ ಇವುಗಳ ಸಂತಾನಾಭಿವೃದ್ಧಿ. ಗಂಡು ಮತ್ತು ಹೆಣ್ಣು ಹಕ್ಕಿಗಳು ಸೇರಿ, ನೇರವಾಗಿ ನೆಲದ ಮೇಲೆಯೇ ಗೂಡನ್ನು ನಿರ್ಮಿಸುತ್ತವೆ. 3-4 ಮೊಟ್ಟೆಗಳನ್ನು ಇಟ್ಟು, ಮರಿ ಮಾಡುತ್ತದೆ. ಮೊಟ್ಟೆಗಳು ಕಂದು ಬಣ್ಣದ ಮೇಲೆ ವಿವಿಧ ಗಾತ್ರದ ಗಾಢ ಮಣ್ಣಿನ ಚುಕ್ಕೆಗಳಿದ್ದು, ಗೂಡುಗಳು ಮತ್ತು ಮೊಟ್ಟೆಗಳು ಅವುಗಳಿರುವ ನೆಲದ ಬಣ್ಣ ಹಾಗೂ ಸುತ್ತಲಿನ ವಸ್ತುಗಳನ್ನು ಹೋಲುವುದರಿಂದ ಅವುಗಳನ್ನು ಗುರುತಿಸುವುದು ಬಹಳ ಕಷ್ಟ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೆಂಪು ಟಿಟ್ಟಿಭ ಹಕ್ಕಿಯ ಕುರಿತ ಬರಹ ಇಲ್ಲಿದೆ
ಎಸ್. ಗಂಗಾಧರಯ್ಯ ಅನುಭವ ಕಥಾನಕ “ಕಾಡ ಕಕ್ಕೆ” ಇಂದಿನಿಂದ…
ನಾನು ಸೋಮ್ಲಾನಾಯಕ್ರನ್ನು ಎಷ್ಟು ಹಚ್ಚಿಕೊಂಡಿದ್ದೆ ಅಂದರೆ ಅವರೊಂದಿಗೆ ಕೆಲವೊಮ್ಮೆ ಅವರುಗಳು ಮಲಗುತ್ತಿದ್ದ ಆ ಹೊಂಗೆಯ ಮರದಡಿಯಲ್ಲೇ ಮಲಗುತ್ತಿದ್ದೆ. ಬೇಸಿಗೆಯ ಬೆಳದಿಂಗಳಿನಲ್ಲಿ ಆ ಏಕಾಂತ, ಆ ಹಾಲು ಚೆಲ್ಲಿದಂತ ಬೆಳದಿಂಗಳು, ಹೊಂಗೆ ಸೀಗೆ ಹೂಗಳ ಆಹ್ಲಾದಕರ ಘಮಲು ಇಂದಿಗೂ ಮಾಸಿಲ್ಲ. ಆ ತಂಗಾಳಿ, ಅದರೊಂದಿಗೆ ಅಡ್ಡಾಡುತ್ತಿದ್ದ ಯಾರದೋ ಹೊಲದಲ್ಲಿ ಹಾಕಿರುತ್ತಿದ್ದ ಮಂದೆಯಿಂದ ಕುರಿ, ಮೇಕೆಗಳ ಕೂಗು, ನಾಯಿಗಳ ಬೊಬ್ಬಿರಿಯುವಿಕೆ, ಕುರಿಗಾಹಿಗಳು ಹಾಡುತ್ತಿದ್ದ ಹಾಡುಗಳು, ಜಲ್ಲೆ ಗಾಡಿಯವರ ಅರ್ಥವಾಗದ ಭಾಷೆಯ ಮಾತುಗಳ ಸಂಗೀತ ಮಾಧುರ್ಯ ಇಂದಿಗೂ ಮರೆಯಾಗಿಲ್ಲ.
ಕನ್ನಡದ ಕತೆಗಾರ ಎಸ್. ಗಂಗಾಧರಯ್ಯ ಬರೆಯುವ ಅನುಭವ ಕಥನ “ಕಾಡ ಕಕ್ಕೆ” ಇಂದಿನಿಂದ
ನಂಬಿ ಕೆಟ್ಟವರಿಲ್ಲವೋ ಮನುಜ….: ಬಸವನಗೌಡ ಹೆಬ್ಬಳಗೆರೆ ಸರಣಿ
ಅವನ ಮಾತು ಕೇಳಿದ ಮನಸ್ಸು ಇನ್ನೊಂದು ರೀತಿ ಯೋಚನೆ ಮಾಡಲು ಶುರು ಮಾಡ್ತು. ಸುಮ್ಮನೇ ಕೆಲಸಕ್ಕೆ ಸೇರದೇ ಮೆಡಿಕಲ್ ರೆಪ್ ಕೆಲಸದಲ್ಲಿ ಮುಂದುವರೆದರೆ ಹೇಗೆ? ಎಂದು ಯೋಚಿಸಿದೆ. ಇದಕ್ಕೆ ಪೂರಕವಾಗಿ ಹಲವಾರು ನನ್ನ ಮೆಡಿಕಲ್ ರೆಪ್ ಗೆಳೆಯರು ಅಲ್ಲಿ ಪೆನ್ಶನ್ ಇಲ್ವಂತೆ. ಸುಮ್ನೇ ಇಲ್ಲೇ ಇದ್ಬಿಡು ಎಂದರು. ನಾನು ಇದೇ ರೀತಿ ಮಾಡಬೇಕು ಎಂದುಕೊಂಡರೆ ನಮ್ಮ ಸಂಬಂಧಿಕರು ಇದಕ್ಕೆ ಒಪ್ಪಲಿಲ್ಲ. ಸರ್ಕಾರಿ ಕೆಲಸ ಸಿಗೋಕೂ ಪುಣ್ಯ ಮಾಡಿರಬೇಕು ಈ ರೀತಿ ಮಾಡಿ ತಿನ್ನೋ ಅನ್ನದಾಗೆ ಕಲ್ಲು ಹಾಕಿಕೊಳ್ಳಬೇಡ ಎಂದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೆರಡನೆಯ ಕಂತು ನಿಮ್ಮ ಓದಿಗೆ










