Advertisement

ಸರಣಿ

ಬೋಳುಮಂಡೆಯವನಾಗಿ ನನ್ನ ಸ್ವಗತ: ಬಸವನಗೌಡ ಹೆಬ್ಬಳಗೆರೆ ಸರಣಿ

ಬೋಳುಮಂಡೆಯವನಾಗಿ ನನ್ನ ಸ್ವಗತ: ಬಸವನಗೌಡ ಹೆಬ್ಬಳಗೆರೆ ಸರಣಿ

ಹಲವರು ದೇವರಿಗೆ ತಮ್ಮ ಹರಕೆ ತೀರಿಸಲು ದೇವರಿಗೆ ಮುಡಿ ಕೊಡುತ್ತಾರೆ. ಆದರೆ ತಲೆಯಲ್ಲಿ ಕೂದಲಿಲ್ಲದೇ ಬೋಳಾಗಿರುವ ನನಗೆ ಈ ರೀತಿ ಮುಡಿ ಕೊಡಲು ಸಾಧ್ಯವಿಲ್ಲ ಎಂದು ಬೇಸರವಾಗುವುದಿಲ್ಲ. ತುಂಬಾ ಆಶಾವಾದಿ ನಾನು. ಇದಕ್ಕೆ ಬದಲಾಗಿ ನನ್ನ ಕೂದಲನು ಮುಡಿ ತೆಗೆದುಕೊಳ್ಳುವ ವಿಷಯದಲ್ಲಿ ದೇವರಿಗೇ ಅದೃಷ್ಟ ಇಲ್ಲ ಎಂದೇ ನಾನು ಭಾವಿಸುತ್ತೇನೆ! ಏಕೆಂದರೆ ಅನೇಕರು ಮಡಿ ಕೊಟ್ಟು ಹರಕೆ ತೀರಿಸಿಕೊಳ್ಳುತ್ತಾರೆ. ಆದರೆ ಮುಡಿ ಕೊಡುವಷ್ಟು ಕೂದಲನ್ನು ನಮ್ಮಿಂದ ಈಗಾಗಲೇ ಕಿತ್ತುಕೊಂಡಿರುವುದರಿಂದ ಮುಡಿ ಕೊಡುವ ಪ್ರಮೇಯವೇ ಬರುವುದಿಲ್ಲ! ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

read more
ಜಗನ್‌ ಮೋಹನ್‌ ಎಂಬ ವಠಾರ: ಕೆ. ಸತ್ಯನಾರಾಯಣ ಕಥಾ ಸರಣಿ

ಜಗನ್‌ ಮೋಹನ್‌ ಎಂಬ ವಠಾರ: ಕೆ. ಸತ್ಯನಾರಾಯಣ ಕಥಾ ಸರಣಿ

ಬಿಂದಿಗೆ-ಬಕೆಟ್‌ ಇಡಲು ಬಂದವರನ್ನು ಕಂಡು ಗೇಲಿ ಮಾಡುತ್ತಿದ್ದೆವು. ನಾಲ್ಕು ದಿನ ಸುಮ್ಮನೆ ಇರಲು ಬಂದಿದ್ದ ನಾವು ಕೂಡ ಈ ಗೇಲಿಯಲ್ಲಿ ದೊಡ್ಡಪ್ಪನ ಮಕ್ಕಳ ಜೊತೆ ಸೇರಿಕೊಳ್ಳುತ್ತಿದ್ದೆವು. ಇದಕ್ಕಾಗಿ ವಠಾರದ ಉಳಿದ ಮನೆಗಳವರಿಗೆ ಯಾವತ್ತೂ ನಮ್ಮನ್ನು ಕಂಡರೆ ಆಗುತ್ತಿರಲಿಲ್ಲ. ನಲ್ಲಿ ನೀರು ಬಂದಮೇಲೂ ನಿಲ್ಲುವ ತನಕವೂ ಜಗಳ, ಕಿತ್ತಾಟ. ಒಂದೊಂದು ಸಲ ದಿನ-ಎರಡು ದಿನಕ್ಕೊಮ್ಮೆ ನೀರು ಬರುವುದು ನಿಂತು ಹೋಗುತ್ತಿತ್ತು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

read more
ಮಾಕಳ್ಳಿಯ ಮಾಂತ್ರಿಕ ಕಥಿಕರು: ಎಸ್. ಗಂಗಾಧರಯ್ಯ ಅನುಭವ ಕಥನ

ಮಾಕಳ್ಳಿಯ ಮಾಂತ್ರಿಕ ಕಥಿಕರು: ಎಸ್. ಗಂಗಾಧರಯ್ಯ ಅನುಭವ ಕಥನ

ಮುಂದೆ ಬುಡುಗೊಚ್ಚ ತಮಗೆ ಬೇಕಾದಾಗಲೆಲ್ಲಾ ಎಡಬಿಡದೆ ಹಾಗೇ ಮಾಡಿದರಂತೆ. ಅದರಂತೆ ಸಾವಿರಾರು ಬೆಳ್ಳಿ ರೂಪಾಯಿಗಳನ್ನು ಮಾಡಿಕೊಂಡರಂತೆ. ಒಂದು ದಿನ ಹೀಗೆ ಅಜ್ಜ ಹತ್ತಾರು ಹೂಗಳನ್ನು ಒಟ್ಟಿಗೇ ಬೊಗಸೆಯಲ್ಲಿ ಹಿಡಿದುಕೊಂಡು ಬೆಳ್ಳಿ ರೂಪಾಯಿಗಳನ್ನು ಮಾಡಿಕೊಳ್ಳುತ್ತಿರಬೇಕಾದರೆ, ಆ ಹೂಗಳು `ಇನ್ನು ನಿನ್ನ ಹಿತ್ತಲಿನಲ್ಲಿ ನಮ್ಮ ಸರದಿ ಮುಗಿಯಿತು, ನಾವಿನ್ನು ಹೊರಡುತ್ತೇವೆ,’ ಅಂದವಂತೆ. ಅಜ್ಜನಿಗೆ ವಿಪರೀತ ದುಃಖವಾಗಿ ಪರಿ ಪರಿಯಾಗಿ ಬೇಡಿಕೊಂಡರಂತೆ.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹತ್ತನೆಯ ಕಂತು

read more
“ಕೊರವಂಜಿ” ಹಾಕಿಕೊಟ್ಟ ಹಾಸ್ಯೋತ್ಸವದ ಹಾದಿ…: ಎಚ್. ಗೋಪಾಲಕೃಷ್ಣ ಸರಣಿ

“ಕೊರವಂಜಿ” ಹಾಕಿಕೊಟ್ಟ ಹಾಸ್ಯೋತ್ಸವದ ಹಾದಿ…: ಎಚ್. ಗೋಪಾಲಕೃಷ್ಣ ಸರಣಿ

1996ರ ಹಾಸ್ಯೋತ್ಸವವನ್ನು ನಾ. ಕಸ್ತೂರಿ ಅವರ ನೆನಪಿಗೆ ಮಾಡಿದ್ದು. ನಾ. ಕ ಅವರನ್ನು ಕುರಿತ ಎರಡು ಪುಸ್ತಕಗಳು ಅಂದು ಕನ್ನಡ ಪ್ರಕಟಣಾ ಪ್ರಪಂಚದಲ್ಲಿಯೇ ಒಂದು ವಿನೂತನ ದಾಖಲೆ ನಿರ್ಮಿಸಿದವು. ಗೋಪಾಲಕೃಷ್ಣ (ನಾನು) ಮತ್ತು ಕೃಷ್ಣಸುಬ್ಬರಾವ್ ಸಂಪಾದಿಸಿದ್ದ ‘ಕೊರವಂಜಿ ಕಸ್ತೂರಿ’ಹಾಗೂ ಶ್ರೀ ಚಂದ್ರ ಮೋಹನ್ ಜತೆಗೆ ಕೃಷ್ಣಸುಬ್ಬರಾವ್ ಸಂಪಾದಿಸಿದ್ದ ‘ಕೊರವಂಜಿ ಶತಕಂ’ ಎರಡೇ ಗಂಟೆಗಳ ಅವಧಿಯಲ್ಲಿ ಸಂಪೂರ್ಣ ಮಾರಾಟಗೊಂಡವು! ಇದರ ಮಹತ್ವ ನಮ್ಮ ಅರಿವಿಗೆ ಬಂದದ್ದು ತಡವಾಗಿ. ತಡವಾಗಿ ಅಂದರೆ ಕೆಲವು ವರ್ಷಗಳ ನಂತರ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೧ನೇ ಬರಹ ನಿಮ್ಮ ಓದಿಗೆ

read more
ಖಗರತ್ನ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಖಗರತ್ನ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಮಳೆಗಾಲ ಬಂತೆಂದರೆ, ಕೀಟಗಳ ಸಂಖ್ಯೆಯೂ ಹೆಚ್ಚಾಗಿ, ಮರಿಹಕ್ಕಿಗಳಿಗೆ ವಿಫುಲವಾದ ಆಹಾರ ದೊರಕುವುದರಿಂದ, ಖಗರತ್ನಗಳು ಈ ಋತುವಿನಲ್ಲಿ ಗೂಡು ಕಟ್ಟುತ್ತವೆ. ಗೂಡು ಕಟ್ಟುವ ಸಂಪೂರ್ಣ ಜವಾಬ್ದಾರಿ ಹೆಣ್ಣು ಹಕ್ಕಿಯದ್ದು. ಗಂಡು ಹಕ್ಕಿಯದೇನಿದ್ದರೂ ಕೇವಲ ಮೇಲ್ವಿಚಾರಣೆ! ಒಂದು ಕೊಂಬೆಯ ತುದಿಯಲ್ಲಿ, ಕಸ-ಕಡ್ಡಿ, ಒಣಗಿದ ನಾರು-ಬೇರು ಹಾಗೂ ಪುಷ್ಕಳವಾದ ಜೇಡರ ಬಲೆಯನ್ನು ಬಳಸಿ ಕಟ್ಟುವ ಗೂಡು. ಇದು ಹೊರಗಿನಿಂದ ಒರಟಾಗಿ ಕಂಡರೂ, ಒಳಗೆ ಮುದ್ದಾದ, ಮೃದುವಾದ, ನೇತಾಡುವ ಗೂಡು. ಆಶ್ಚರ್ಯವೆಂದರೆ, ಮಳೆಯಿಂದ ರಕ್ಷಣೆಗಾಗಿ, ಅದರ ಬಾಗಿಲ ಮೇಲೊಂದು ಚಜ್ಜ!
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ

read more
ಭಲೇ ಸ್ವಾಮೀಜಿ ಎಂದ ಮಾರ್ಕ್‌ ಟುಲಿ:‌ ಕೆ. ಸತ್ಯನಾರಾಯಣ ಕಥಾ ಸರಣಿ

ಭಲೇ ಸ್ವಾಮೀಜಿ ಎಂದ ಮಾರ್ಕ್‌ ಟುಲಿ:‌ ಕೆ. ಸತ್ಯನಾರಾಯಣ ಕಥಾ ಸರಣಿ

ಹೋಟೆಲಿಗೆ ಬಂದ ನಂತರ, ಟುಲಿ ಇದ್ದಕ್ಕಿದ್ದಂತೆ ಮೌನವಾಗಿಬಿಟ್ಟರು. ಒಂದೈದು ನಿಮಿಷ ಕಣ್ಣುಮುಚ್ಚಿ ‍ಧ್ಯಾನಿಸುತ್ತಿರುವಂತೆ ಕಂಡರು. ಏಸಿ ಆರಿಸಿ, ಕಿಟಕಿ ಬಾಗಿಲು ತೆರೆದರು. ಚಿಂತಾಕ್ರಾಂತರಾಗಿ ಆಕಡೆ, ಈ ಕಡೆ ಹೆಜ್ಜೆ ಹಾಕುತ್ತಾ, ಕಿಟಕಿಯ ಹೊರಗಡೆ ಕಾಣುವ ವಾಹನಗಳ ಓಡಾಟ, ಜನಗಳ ಗಡಿಬಿಡಿಯನ್ನೇ ಗಮನವಿಟ್ಟು ನೋಡುತ್ತಿದ್ದರು. ಕ್ಷಣ ಕ್ಷಣಕ್ಕೂ ಮುಖದಲ್ಲಿ ಗಾಂಭೀರ್ಯ ಹೆಚ್ಚುತ್ತಿತ್ತು. ಒಂದೆರಡು ಸಲ ಮುಖ ಕಿವುಚಿಕೊಂಡ ಹಾಗಾಯಿತು. ಟೀಪಾಯ್‌ ಬಳಿ ಬಂದು ಗ್ಲಾಸಿಗೆ ನೀರು ಬಗ್ಗಿಸಿಕೊಂಡು ಕುಡಿದರು. ಆದರೂ ಸಮಾಧಾನಗೊಂಡಂತೆ ಕಾಣಲಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ” 

read more
ಹೀನ ಸುಳಿ ಹೋರಿಕರ ಮತ್ತು ಸಾಟಿಬುಗುರಿಯವರು: ಎಸ್. ಗಂಗಾಧರಯ್ಯ ಅನುಭವ ಕಥನ

ಹೀನ ಸುಳಿ ಹೋರಿಕರ ಮತ್ತು ಸಾಟಿಬುಗುರಿಯವರು: ಎಸ್. ಗಂಗಾಧರಯ್ಯ ಅನುಭವ ಕಥನ

ಅವತ್ತು ಹೊಲದಲ್ಲಿ ಆ ಪುಣ್ಯಾತ್ಮ ಕರುವಿನ ಮೈಲ್ಲಿ ಹೀನಸುಳಿಯನ್ನು ಪತ್ತೆ ಹಚ್ಚಿದ ಲಾಗಾಯ್ತಿನಿಂದ ಅದನ್ನು ಮಾರಾಟ ಮಾಡುವುದು ಕಷ್ಟವಂತೂ ಆಯ್ತು. ನೋಡಲು ಬಂದವರು `ಹೇಳಂಗಿದ್ರೆ ಈ ಕರ ಐತಲ್ಲ ಇದ್ರ ಯಾಪಾರ ಹೇಳಿ’ ಅಂತ ಇನ್ನೊಂದು ಕರುವನ್ನು ತೋರಿಸುತ್ತಿದ್ದರು. ಯಾರೋ ಅಪರೂಪಕ್ಕೊಬ್ಬ `ಹಣೇಲಿ ಬರ್ದದ್ದು ಆಗ್ಲಿ ತಗಂತೀನಿ. ನೋಡಿ ಸರ್ಯಾಗಿ ಗಿಟ್ಟಂಗೆ ಹೇಳು ಮತ್ತೆ ಯಾಪಾರಾನಾ’ಅಂತ ಆರಕ್ಕೆ ಮೂರರಂಗೆ ಬೇಕಾಬಿಟ್ಟಿ ಕೇಳುತ್ತಾ ರೋಸುತ್ತಿದ್ದರು. ಹಿಂಗೆ ಹೋರಿಗೆ ಹೀನಸುಳಿಯ ಇದೆ ಅಂತ ತಿಳಿಯುತ್ತಲೇ ಯಂಗಾರಾ ಮಾಡಿ ಸಸ್ತಕ್ಕೆ ಅಮಿಕ್ಕಂಡು ಬಿಡಬಹುದು ಅಂತ ಸುಮಾರು ಜನ ಸಾಟಿ ಬುಗುರಿಯವರು ಬಂದು ಬಂದು ನೋಡಿಕೊಂಡು ಹೋಗುತ್ತಿದ್ದರು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”

read more
ಮೇಷ್ಟ್ರಾಗಿ ಹೇಳಿದ  ಆ ಸುಳ್ಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಮೇಷ್ಟ್ರಾಗಿ ಹೇಳಿದ  ಆ ಸುಳ್ಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಮಾರನೇ ದಿನದಿಂದ ಆ ತರಗತಿಯ ಮಕ್ಕಳಲ್ಲಿ ವಿಶೇಷ ಬದಲಾವಣೆ ಕಂಡಿತು. ಅದೂ ಇದೂ ನೆಪ ಹೇಳಿ ಶಾಲೆಗೆ ಚಕ್ಕರ್ ಹಾಕುತ್ತಿದ್ದವರೆಲ್ಲ ಇಂದು ಶಾಲೆಗೆ ಬಂದಿದ್ದರು ಕೊಟ್ಟ ಹೋಂ ವರ್ಕ್ ಮುಗಿಸಿದ್ದರು. ಈ ವಿಷಯವು ಕಾಡ್ಗಿಚ್ಚಿನಂತೆ ನಮ್ಮ ಶಾಲೆಯ ಇತರೆ ತರಗತಿಯ ಮಕ್ಕಳಿಗೂ ಹಬ್ಬಿತು. ಅವರೂ ಸಹ ಬುದ್ಧಿ ಶಕ್ತಿ ಹೇಳಲು ಪೀಡಿಸತೊಡಗಿದರು. ನನ್ನ ಈ ಮಾತನ್ನು 8 ನೇ ತರಗತಿಯ ಮಕ್ಕಳೂ ಸಹ ನಂಬಿದ್ದರು!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತಾರನೆಯ ಕಂತು ನಿಮ್ಮ ಓದಿಗೆ

read more
ಊರ ಹೆಸರು “ಸೀತಾಪುರ”: ಕೆ. ಸತ್ಯನಾರಾಯಣ ಕಥಾ ಸರಣಿ

ಊರ ಹೆಸರು “ಸೀತಾಪುರ”: ಕೆ. ಸತ್ಯನಾರಾಯಣ ಕಥಾ ಸರಣಿ

ದ್ವೇಷಕ್ಕೋ, ಜಿದ್ದಿಗೋ, ಶೇಕದಾರ್‌ ನಮ್ಮ ಪುರಾತನ ಗ್ರಾಮವಾದ ಗೊಬ್ಬಳಿಪುರದ ಬಗ್ಗೆ ಅಪಪ್ರಚಾರ ಶುರುಮಾಡಿದ. ಪುರದ ಹೆಣ್ಣುಮಕ್ಕಳೆಲ್ಲ ಸೀತಾದೇವಿ ತರ, ತೀರಾ ಅಯೋಧ್ಯೆಗೇ ಮದುವೆ ಮಾಡಿಕೊಟ್ಟಿದ್ದರೂ ಹುಡುಗೀರ ಕೆಟ್ಟ ಜಾತಕದಿಂದಾಗಿ ಯಾವ ಮದುವೇನೂ ನಾಲ್ಕು ದಿನ ಕೂಡ ನಿಲ್ಲೋಲ್ಲ. ನಿಂತರೂ ರಾಮನಿಗೆ ಆದ ಹಾಗೆ ಇವರನ್ನು ಕೊಟ್ಟ ಮನೆಯಲ್ಲೂ ಏಳಿಗೆ ಕಂಡು ಬರೋಲ್ಲ. ಸಂಸಾರದೊಳಗೆ ಇದ್ದರೂ ಗೊಬ್ಬಳಿ ಮುಳ್ಳಿನ ತರಹ ಆಳವಾಗಿ ಊರಿ ಹಿಂಸೆ ಮಾಡ್ತಾರೆ. ಮುಳ್ಳು ತೆಗೆಯೋಕೂ ಕಷ್ಟ. ತೆಗೆದರೂ ಗಾಯ ಹಾಗೇ ಉಳಿದಿರುತ್ತೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ