ಅಣ್ಣನಿಗೆ ಗೊತ್ತಿಲ್ಲದ ದೊಡ್ಡಣ್ಣ ಸಿಕ್ಕಿದರು!: ಗುರುಪ್ರಸಾದ ಕುರ್ತಕೋಟಿ ಸರಣಿ
ನಾನು ದೊಡ್ಡಣ್ಣ ಅವರನ್ನು ಗುರುತಿಸಿದ ಕೊಡಲೇ ಅವರಿಗೆ ನಾನು ಕನ್ನಡಿಗ ಅಂತ ಗೊತ್ತಾಗಿ ಹೋಯ್ತು.. ಅವರು ನನ್ನ ಕೈ ಹಿಡಿದುಕೊಂಡು ನೀವು ಕನ್ನಡದವರ? ಬನ್ನಿ ಬನ್ನಿ ಅಂತ ಅಲ್ಲಿಯೇ ಹತ್ತಿರದಲ್ಲಿದ್ದ ಬೆಂಚ್ ಮೇಲೆ ಕೂತು ನನ್ನನ್ನೂ ಜೊತೆಯಲ್ಲಿ ಕೂಡಿಸಿಕೊಂಡರು. ಇದೆಲ್ಲವನ್ನೂ ನೋಡುತ್ತಿದ್ದ ನನ್ನ ಅಣ್ಣ ಇದ್ಯಾವುದರ ಪರಿವೆಯೇ ಇಲ್ಲದಂತೆ ನಿಂತಿದ್ದ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತಾರನೆಯ ಬರಹ
ಅಪ್ಪ ಅಂಬೋ ಆಲದಮರ: ಸುಮಾ ಸತೀಶ್ ಸರಣಿ
ಅಪ್ಪ ಅವ್ರ ಕಾಲದ ಗಂಡಸ್ರಿಗಿಂತ ವಸಿ ಮುಂದ್ವರೆದ ಯೋಚ್ನೆ ಮಾಡೋರು. ಎಲ್ರೂ ಓದ್ಬೇಕೂನ್ನೋರು. ತಾತಂಗೆ, ನಮ್ಮತ್ತೆದೀರ್ಗೆ ಲೈಬ್ರರೀಯಿಂದ ಕತೆ ಪುಸ್ತಕ ತಂದ್ಕೊಡೋರು. ತಂಗಿದೀರು ಕತೆ ಬರಿತೀವಿ ಅಂದ್ರೆ ಪುಸ್ತಕ ಪೆನ್ನು ತಂದ್ಕೊಟ್ಟು ಬೆನ್ನು ತಟ್ಟೋರು. ಸಂಗೀತ ಕಲಿಸಾಕೆ ಹಾರ್ಮೋನಿಯಂ ಮೇಷ್ಟ್ರು ಇಟ್ಟಿದ್ರು. ಕೊನೆ ತಂಗೀಗೆ ಮೊದ್ಲನೇ ಸಲ ಹೆರಿಗೇಲಿ ಮಗ ಹೋಗಿಬಿಟ್ತಂತೆ. ಮಂಕಾಗಿ ಬಿಟ್ಟಾಗ ಅಪ್ಪ ಕತೆಪುಸ್ತಕ ತಂದ್ಕೊಟ್ಟು ಓದೋಕೆ ಯೋಳತಿದ್ರಂತೆ. ನಾಗರ ಪಂಚಮಿ ಬಂದ್ರೆ ಎಲ್ಲಾ ಅಕ್ಕತಂಗೀರೂ ಖುಷೀಲಿಂದ್ಲೆ ಬೆನ್ನು ತೊಳ್ಯೋರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ತಂದೆಯವರ ಕುರಿತ ಬರಹ ಇಲ್ಲಿದೆ
ಮಕ್ಕಳನ್ನು ಮಕ್ಕಳಂತಿರಲು ಬಿಡಿ ಪಾಪ!: ಬಸವನಗೌಡ ಹೆಬ್ಬಳಗೆರೆ ಸರಣಿ
ನಾನು ತುಂಬಾ ಸ್ವಾಭಿಮಾನಿಯಾದ್ದರಿಂದ ನನ್ ಮಾಮ ‘ಖರ್ಚಿಗೆಂದು ದುಡ್ಡು ಕೇಳಲು ನಾಚಿಕೆಪಟ್ಟುಕೊಳ್ಳಬೇಡ’ ಎಂದರೂ ನಾನು ಮಾತ್ರ ಹಾಗೆ ಕೇಳುತ್ತಿರಲಿಲ್ಲ. ಮನೆಯವರಿಂದಲೂ ಅಷ್ಟೇನೂ ಆರ್ಥಿಕ ಸಹಕಾರ ಇರಲಿಲ್ಲ. ಮೊದಲೇ ಬೆಂಗಳೂರಿಗೆ ಹೊಸಬ. ಮೊದಲು ಒಂದೆರಡು ದಿನ ನನ್ನ ಮಾಮನೇ ನನ್ನನ್ನು ಕಾಲೇಜಿಗೆ ಡ್ರಾಪ್ ಕೊಟ್ಟ. ಮೂರನೇ ದಿನದಿಂದ ನನಗೇ ಬರಲು ತಿಳಿಸಿದ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ
ಭಾವೈಕ್ಯದ ಜಗದ್ಗುರು: ರಂಜಾನ್ ದರ್ಗಾ ಸರಣಿ
ಅವರು ಬಹಳ ಕಷ್ಟಪಟ್ಟು ಮಠವನ್ನು ಬೆಳೆಸಿದರು. ಅವರು ಶ್ರಮಜೀವಿಗಳಂತೆ ಕಾರ್ಯ ಮಾಡಿದರು. ಯಾವುದೇ ಆರ್ಥಿಕ ಸೌಲಭ್ಯಗಳಿಲ್ಲದ ವೇಳೆ ಡಂಬಳದಿಂದ ಗದಗಿಗೆ ಮತ್ತು ಗದಗದಿಂದ ಡಂಬಳದ ವರೆಗೆ ಕಾಲ್ನಡಿಗೆಯಲ್ಲಿ ಸುತ್ತುತ್ತ, ಬಾವಿ ತೋಡುವಂಥ ಕಠಿಣ ಕಾಯಕ ಮಾಡಿದರು. ಜೊತೆಗಿದ್ದ ಭಕ್ತರ ಮತ್ತು ಆಳುಗಳು ಬಾವಿ ತೋಡಿ, ರಾತ್ರಿ ಸುಸ್ತಾಗಿ ಮಲಗಿದ್ದಾಗ ಅವರ ಅರವಿಗೆ ಬಾರದಂತೆ ಪಾದಗಳಿಗೆ ಔಷಧಿ ಹಚ್ಚುವುದನ್ನೂ ಮಾಡಿದರು!
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಕೋಟಿಗೊಬ್ಬರು “ಎಂ.ಎಸ್.ರಾಮಯ್ಯ”: ಎಚ್. ಗೋಪಾಲಕೃಷ್ಣ ಸರಣಿ
ಮತ್ತಿಕೆರೆ ಎನ್ನುವ ಬೆಂಗಳೂರಿನ ಹೊರ ಮೂಲೆಯಲ್ಲಿದ್ದ ಒಂದು ಪುಟ್ಟ ಹಳ್ಳಿ ಇವತ್ತು ಜಗತ್ತಿನ ಒಂದು ಪ್ರಮುಖ ಸ್ಥಳವಾಗಿ ಮಾರ್ಪಾಟು ಆಗಿರುವಲ್ಲಿ ಎಂ ಎಸ್ ರಾಮಯ್ಯ ಅವರ ಕಾರ್ಯಕ್ಷೇತ್ರ ಎದ್ದು ಕಾಣುತ್ತದೆ. ಮತ್ತಿ ಕೆರೆ ಸಂಪಂಗಪ್ಪ ರಾಮಯ್ಯ ಹೀಗೆ ಜಗತ್ತಿನ ಭೂಪಟದಲ್ಲಿ ಬೆಂಗಳೂರು ಮತ್ತು ಮತ್ತಿ ಕೆರೆಗೆ ಒಂದು ವಿಶಿಷ್ಠ ಸ್ಥಾನ ದೊರಕಿಸಿ ಕೊಟ್ಟಿದ್ದಾರೆ. ಬಹುಶಃ ಜಗತ್ತಿನಲ್ಲಿ ಇಂತಹ ಉನ್ನತ ಮಟ್ಟಕ್ಕೆ ಏರಿದ ವ್ಯಕ್ತಿ ಅಪರೂಪದಲ್ಲಿ ಅಪರೂಪವೇ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ನಾಲ್ಕನೆಯ ಕಂತು ನಿಮ್ಮ ಓದಿಗೆ
ಕಾಡುವ ಪ್ರಶ್ನೆಗಳ ಕಾಡಿನಲ್ಲಿ ನೀಲಿ: ಸುಧಾ ಆಡುಕಳ ಅಂಕಣ
ಸೀತಜ್ಜಿ, ಗೌರಜ್ಜಿ, ಅಮ್ಮಣ್ಣೆಜ್ಜಿ ಇವರ ಕತೆಗಳೂ ಇದಕ್ಕಿಂತ ಬೇರೆಯೇನಿರಲಿಲ್ಲ. ಅವರೆಲ್ಲರೂ ತಮ್ಮ ಮದುವೆಯ ಕತೆಯನ್ನು ಯಾವುದೇ ವಿಷಾದಗಳಿಲ್ಲದೇ ಹೇಳಿಕೊಳ್ಳುತ್ತಿದ್ದರು. ಆದರೆ ಇವರ ನಂತರದ ತರುವಾಯದವರಾದ ಕೆಂಪಿ, ಗಣಪಿ, ನಾಗವೇಣಿಯರು ತಮ್ಮ ಮದುವೆಯ ಕತೆಯನ್ನು ಇಷ್ಟು ತಣ್ಣಗೆ ಹೇಳುತ್ತಿರಲಿಲ್ಲ. ಅವರ ಮಾತುಗಳಲ್ಲಿ ಕಹಿ, ಸಿಟ್ಟು, ಹತಾಶೆ ಎಲ್ಲವೂ ಮಡುಗಟ್ಟಿದ್ದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೆಂಟನೆಯ ಕಂತು ನಿಮ್ಮ ಓದಿಗೆ
ಬೇರು – ಬಿಳಲು: ಸುಮಾ ಸತೀಶ್ ಸರಣಿ
ಹೊಸ್ದಾಗಿ ಮದ್ವೆ ಆಗಿದ್ದ ಅಳಿಯ ಅತ್ತೆ ಮನೇಗೆ ಬಂದ್ನಂತೆ. ಅತ್ತೆ ಕಡುಬು ಮಾಡಿದ್ರು. ತೆಳ್ಳಗೆ, ಸಣ್ಣವು. ಹೊಸ ಅಳಿಯನಿಗೇಂತ ಕಷ್ಟ ಪಟ್ಟು ಸಣ್ಣ ಸಣ್ಣಕೆ ಮಾಡಿದ್ರು. ಅಳಿಯನ ತಟ್ಟೇಗೆ ಬಡಿಸಿದ್ರು. ಅವ್ನು ಒನೊಂದು ಸತೀಗೆ ಒಂದು ಗುಳುಂ ಮಾಡ್ತಿದ್ದ. ಅಳಿಯನ ಅಪ್ಪ ಥೋ ನಮ್ ಮರ್ವಾದೆ ತೆಗೀತಾವ್ನೆ ಅಂತ ಮೆಲ್ಲಕೆ ಮೂಗ್ಸನ್ನೆ ಮಾಡೀರು. ಒಂದು ಮುರಿದು ಎರ್ಡು ಭಾಗ ಮಾಡಿ ತಿನ್ನಾಕೆ ಸೈಗು (ಸನ್ನೆ) ಮಾಡಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಅಜ್ಜ-ಅಜ್ಜಿಯರ ಕುರಿತ ಬರಹ ಇಲ್ಲಿದೆ
ದ ಗ್ರೇಟ್ ನೋಟ್ ಬುಕ್ ರಾಬರಿ!: ಪೂರ್ಣೇಶ್ ಮತ್ತಾವರ ಸರಣಿ
ಜೋಗಿ ಕಿಂದರಿ ಬಾರಿಸತೊಡಗಿದೊಡನೆ ಜಗತ್ತನ್ನೇ ಮೋಹಿಸುವ ಅದರ ನಾದಕ್ಕೆ ಇಲಿಗಳು ಅನ್ನದ ಮಡಕೆಯನ್ನು ಆಗಲಿ, ಟೋಪಿಯ ಗೂಡನ್ನು ತ್ಯಜಿಸಿ, ಅಂಗಿಯ ಜೇಬು, ಕಾಲು ಚೀಲಗಳನ್ನೆಲ್ಲಾ ಬಿಟ್ಟು ಹಾರುತ್ತಾ, ಓಡುತ್ತಾ, ನೆಗೆದು ಬಂದು ಅವನನ್ನೇ ಹಿಂಬಾಲಿಸಿ ಹೋಗುವಂತೆ ಹೌಸ್ ಮಾಸ್ಟರ್ರ ಹುಣಸೆ ಬರಲಿನ ಬಾರಿಸುವಿಕೆಗೆ ನಮ್ಮ ಗೆಳೆಯರು ಟ್ರಂಕ್ ಕಪಾಟುಗಳ ಒಳಗಿನಿಂದ, ಹಾಸಿಗೆ ದಿಂಬುಗಳ ಕೆಳಗಿನಿಂದ, ವೆಂಟಿಲೇಟರ್ ಸಂದಿಯಿಂದ, ಫ್ಯಾನ್ ರೆಕ್ಕೆಯ ಮೇಲಿನಿಂದ, ಟಾಯ್ಲೆಟ್ ರೂಮಿನ ಹೆಂಚಿನ ತಳದಿಂದ, ಮರ ಗಿಡಗಳ ಮರೆಯಿಂದ ನೋಟ್ ಬುಕ್ಗಳನ್ನು ಎತ್ತಿ ತರಲಾರಂಭಿಸಿದ್ದರು.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ
ಕೂರಾಪುರಾಣ ೭: ಏನ್ರೀ ಸಂಜಮ್ಮಾ ನಿಮ್ದು ಯಾವ ಜಾತಿಯ ನಾಯಿ?
ನನ್ನಂತೆಯೇ ಹಲವರಿದ್ದಾರೆ, ಈಗಲೂ ಅವರಿಗೆ ನಾಯಿಗಳ ಬಗ್ಗೆ ಹೆಚ್ಚಿನದ್ದೇನೂ ಗೊತ್ತಿಲ್ಲ ಎಂಬ ಕಾರಣಕ್ಕಾಗಿಯೇ ಕೂರಾಪುರಾಣ ಶುರು ಮಾಡಿದ್ದು. ಥಿಯರಿ ಓದಿದರೆ ಪ್ರಾಕ್ಟಿಕಲ್ ಮಾಡಲು ಸ್ವಲ್ಪ ಧೈರ್ಯ ಹುಟ್ಟಬಹುದು ಎಂಬ ಕಾರಣಕ್ಕೆ. ಯಾಕೆಂದರೆ ನಾಯಿಗಳೊಡನೆ ಹುಟ್ಟಿಕೊಳ್ಳುವ ನಂಟು, ಅವುಗಳ ಸ್ನೇಹಕ್ಕೆ ಭಾಜನರಾಗುವ ಯೋಗ್ಯತೆ, ಮುಗ್ಧ ಪ್ರೀತಿಯನ್ನು ಅನುಭವಿಸುವ ಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂಬುದೇ ನನ್ನ ಆಸೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಏಳನೆಯ ಕಂತು










