Advertisement

ಸರಣಿ

ಆಕ್ಸಿಡೆಂಟೂ… ಅಜ್ಜಿಯ ಆರೈಕೆಯೂ: ಸುಮಾವೀಣಾ ಸರಣಿ

ಆಕ್ಸಿಡೆಂಟೂ… ಅಜ್ಜಿಯ ಆರೈಕೆಯೂ: ಸುಮಾವೀಣಾ ಸರಣಿ

ಅಲ್ಲೇ ರಸ್ತೇ ಬದಿಯಲ್ಲಿ ಚಿಕ್ಕ ಟವಲ್ ಹಾಕಿ ನನ್ನನ್ನು ಕೂರಿಸಿ ತಾನೂ ಛತ್ರಿ ಬಿಡಿಸಿ ಕುಳಿತುಕೊಂಡು ಬಿಟ್ಟಳು. ನನಗೋ ಕೋಪವೆಂದರೆ ಕೋಪ. “ನಾನು ಪಾಯಸ ಕುಡಿದಿದ್ದೇನೆ’’ ಅಂದರೆ ಕೇಳಲೇ ಇಲ್ಲ. ಗಲ್ಲ ಸವರಿ, ತಲೆ ಸವರಿ “ಊಟ ವೇಸ್ಟ್ ಮಾಡಬಾರದು….!” ಎನ್ನುತ್ತಾ ತಿನ್ನಿಸಲು ಬಂದರೆ ನಾನು ತಿನ್ನುತ್ತೇನೆಯೇ? ಸಾಧ್ಯನಾ? ತುತ್ತನ್ನಷ್ಟೇ ತಿಂದೆ ಕೋಪದಿಂದ. ತನ್ನ ಕೈಯ್ಯಲ್ಲೇ ನನ್ನ ಬಾಯೊರೆಸಿ “ಜಾಗ್ರತೆ ಈಗ್ ಹೋಗು ಸಂಜೆ ಬೇಗ ಸೈಡಲ್ಲಿ ಬಾ” ಎಂದು ಟಾಟಾ ಹೇಳಿಬಿಟ್ಟಳು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

read more
ಹೋಮ್‌ವರ್ಕ್‌ ಎಂದರೇನು?: ಅನುಸೂಯ ಯತೀಶ್ ಸರಣಿ

ಹೋಮ್‌ವರ್ಕ್‌ ಎಂದರೇನು?: ಅನುಸೂಯ ಯತೀಶ್ ಸರಣಿ

ಆ ಮೂವರು ಮಕ್ಕಳು ನಮ್ಮ ಶಾಲೆಯಲ್ಲಿ ಹೋಮ್ ವರ್ಕ್ ಮಾಡದೇ ಬರುವ ಶುದ್ಧ ಸೋಂಬೇರಿಗಳು. ಇವರದು ಮುಗಿಯದ ಅನುದಿನದ ಕಥೆ. ಅವರನ್ನ ನಿತ್ಯ ಹೀಗೆ ಕಾರಣಗಳನ್ನು ಹುಡುಕಿ ವಹಿಸಿಕೊಳ್ಳುತ್ತಾ ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕುತ್ತಿರುವ ವ್ಯಾಮೋಹಿ ಅಮ್ಮಂದಿರು ಅವರು ಎಂದರು. ಈ ಮಾತು ಕೇಳಿ ನನ್ನ ಕೈಗೆ ಸಿಕ್ಕಂತಾಗಿದ್ದ ಆಕಾಶ ತಲೆ ಮೇಲೆ ಅಪ್ಪಳಿಸಿದಂತಾಯಿತು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

read more
ಸೈಕಲ್‌ನಿಂದ ಮೋಟಾರ್ ಸೈಕಲ್‌ಗೆ ಸಿಕ್ಕ ಪ್ರಮೋಷನ್: ಮಾರುತಿ ಗೋಪಿಕುಂಟೆ

ಸೈಕಲ್‌ನಿಂದ ಮೋಟಾರ್ ಸೈಕಲ್‌ಗೆ ಸಿಕ್ಕ ಪ್ರಮೋಷನ್: ಮಾರುತಿ ಗೋಪಿಕುಂಟೆ

ರಜಾ ದಿನಗಳಲ್ಲಿ ಊಟ ಮಾಡುತ್ತಿದ್ದುದೆ ಕಡಿಮೆ. ಒಮ್ಮೊಮ್ಮೆ ಇದೇ ಕಾರಣಕ್ಕೆ ಏಟುಗಳು ಬೀಳುತ್ತಿದ್ದವು. ನಾನು ಅದರಲ್ಲಿ ಸೈಕಲ್ ಚಕ್ರವನ್ನು ದಾನ ಮಾಡುತ್ತಿದ್ದೆ. ಇದಕ್ಕೆ ಕಾರಣವು ಇತ್ತು. ಪಕ್ಕದ ಬರಗೂರು ನಮ್ಮಮ್ಮನ ತವರು ಮನೆಯಾದ್ದರಿಂದ ನಮ್ಮ ಮಾವ ಬಳಸಿ ಬಿಸಾಡಿದ ಚಕ್ರಗಳನ್ನು ಸುಲಭವಾಗಿ ತಂದುಕೊಡುತ್ತಿದ್ದ. ಒಂದೊಂದ್ಸಾರಿ ನಮ್ಮ ಚಿಕ್ಕಪ್ಪನೂ ತಂದುಕೊಟ್ಟಿದ್ದು ಉಂಟು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

read more
ಸೂರ್ಯಕಾಂತಿಯ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿ

ಸೂರ್ಯಕಾಂತಿಯ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಬ್ರುಂಡ್‌ಜಾಯಿಟೆ ಅವರ ಕಾವ್ಯದ ಪ್ರಮುಖ ಹಾಗೂ ಆಕರ್ಷಕ ಗುಣವೆಂದರೆ ಅವರು ಚಿತ್ರಿಸುವ ಪ್ರಪಂಚದ ಪ್ರಾಮಾಣಿಕತೆ ಮತ್ತು ಗೀತಾತ್ಮಕ ವಿಷಯದ ಸತ್ಯತೆ ಮತ್ತು ಶ್ರದ್ಧೆ. ಇಲ್ಲಿ ಮುಖವಾಡ ಧರಿಸುವ ಅಥವಾ ಅಲಂಕಾರಿಕ ಸರಸೋಕ್ತಿಗಳನ್ನು ಬಳಸುವ ಮತ್ತು ಅನಗತ್ಯವಾಗಿ ಚತುರರಾಗುವ ಯಾವುದೇ ಪ್ರಯತ್ನವಿಲ್ಲ. ಬ್ರುಂಡ್‌ಜಾಯಿಟೆ ಭಾಷೆ ಮತ್ತು ಇತರರ ಕೃತಿಗಳ ಉಲ್ಲೇಖಗಳೊಂದಿಗೆ ಶಬ್ದವಾಟವಾಡುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

read more
ಊರೆಂಬ ಹರಿಗೋಲು: ಚಂದ್ರಮತಿ ಸೋಂದಾ ಸರಣಿ

ಊರೆಂಬ ಹರಿಗೋಲು: ಚಂದ್ರಮತಿ ಸೋಂದಾ ಸರಣಿ

ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಂದು ನಮಗೆಲ್ಲ ಸಂಭ್ರಮವೋ ಸಂಭ್ರಮ. ಹಿಂದಿನ ದಿನವೇ ನಮ್ಮ ಮೇಷ್ಟ್ರು ಯಾರ‍್ಯಾರಿಗೆ ಏನೇನು ಕೆಲಸ ಎಂದು ತಿಳಿಸುತ್ತಿದ್ದರು. ಸ್ವಲ್ಪ ದೊಡ್ಡ ಮಕ್ಕಳು ಹಿಂದಿನ ಸಂಜೆಯೇ ತಮ್ಮನೆಯ ಹಿತ್ತಲಿನಲ್ಲಿರುವ ಮಾವಿನ ಗಿಡದಿಂದ ಮಾವಿನ ಸೊಪ್ಪನ್ನು ತಂದು ಅದನ್ನು ದಾರದಲ್ಲಿ ಪೋಣಿಸಿ ಶಾಲೆಯ ಬಾಗಿಲಿಗೆ ಕಟ್ಟುತ್ತಿದ್ದರು. ಹೆಚ್ಚಾಗಿ ಇದು ಗಂಡುಮಕ್ಕಳ ಕೆಲಸವಾಗಿತ್ತು. ಆಗ ನಮಗೆ ಸಮವಸ್ತ್ರದ ಕಟ್ಟುಪಾಡಿರಲಿಲ್ಲ. ಹಾಗಾಗಿ ನಮ್ಮ ಬಳಿ ಇರುವ ಒಳ್ಳೆಯ ಬಟ್ಟೆಯನ್ನು ಧರಿಸಿ, ಎಂಟುಗಂಟೆಗೆ ನಾವು ಶಾಲೆಯಲ್ಲಿರುತ್ತಿದ್ದೆವು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

read more
ಜೈಲಲ್ಲಿ ನೀತಿಶಾಸ್ತ್ರ: ಕೆ. ಸತ್ಯನಾರಾಯಣ ಸರಣಿ

ಜೈಲಲ್ಲಿ ನೀತಿಶಾಸ್ತ್ರ: ಕೆ. ಸತ್ಯನಾರಾಯಣ ಸರಣಿ

ಸೆರೆಮನೆಯಲ್ಲಿರುವ, ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ಖೈದಿಗಳಿಗೆ ಮನರಂಜನೆ ಇರಬೇಕು, ಅದಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂಬ ಮಾತನ್ನು ನಾನು ಇದುವರೆಗೆ ಎಲ್ಲೂ ಕೇಳಿಲ್ಲ. ಅವರ ಮನೋಧರ್ಮದಲ್ಲಿ ಏನಾದರೂ ಸುಧಾರಣೆ ಆಗಬೇಕು ಎನ್ನುವುದಾದರೆ, ಧಾರ್ಮಿಕ ಪ್ರವಚನಗಳನ್ನು ಏರ್ಪಡಿಸಲಿ, ಭಗವದ್ಗೀತೆ ಮೇಲೆ ಉಪನ್ಯಾಸ ನೀಡಲಿ, ಭಜನೆ ಇರಲಿ, ಹಾಡುಗಾರರನ್ನು ಕರೆಸಿ ದೇವರನಾಮ ಹೇಳಿಸಿ, ಪ್ರಾರ್ಥನೆ ಇರಲಿ.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿ

read more
ಕಾರೂ… ಕಾರ್‌ ಬಾರೂ..: ಗುರುಪ್ರಸಾದ ಕುರ್ತಕೋಟಿ ಸರಣಿ

ಕಾರೂ… ಕಾರ್‌ ಬಾರೂ..: ಗುರುಪ್ರಸಾದ ಕುರ್ತಕೋಟಿ ಸರಣಿ

ಕಾರನ್ನ ಮನೆಗೆ ನಾನೇ ಓಡಿಸಿಕೊಂಡು ಬಂದೆ. ಜೊತೆಗೆ ಅಜ್ಜಂಪುರ ಸರ್ ಕೂಡ ಬಂದರು. ಅವರ ಧೈರ್ಯ ಮೆಚ್ಚಲೇಬೇಕು! ನನಗೆ ಅಮೆರಿಕೆಯಲ್ಲಿ ಮೊದಲೇ ಕಾರ್ ಓಡಿಸಿದ ಅನುಭವ ಇತ್ತು. ಹಿಂದೆ ಒಂದೆರಡು ಬಾರಿ ಕೆಲವು ತಿಂಗಳಿಗೆ ಅಂತ ಅಮೆರಿಕೆಯ ಯುಟಾ (Utah) ಗೆ ಹೋಗಿದ್ದಾಗ ಅಲ್ಲಿ ನನ್ನ ಮ್ಯಾನೇಜರ್ ನನಗೆ ಒತ್ತಾಯ ಮಾಡಿ ಕಾರ್ ಓಡಿಸಲು ರೂಡಿ ಮಾಡಿಸಿದ್ದು ಈಗ ಪ್ರಯೋಜನಕ್ಕೆ ಬಂದಿತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಎಂಟನೆಯ ಬರಹ

read more
ಕಾಲದೊಂದಿಗೆ ಇಲ್ಲಿ ಕೆಲವೊಂದು ಬದಲಾಗುತ್ತವೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಕಾಲದೊಂದಿಗೆ ಇಲ್ಲಿ ಕೆಲವೊಂದು ಬದಲಾಗುತ್ತವೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಆಗ ಊರಲ್ಲಿ ಯಾವುದೇ ಮನೆಯ ಮದುವೆಯಾದ್ರೂ ನಮಗೆ ಊರ ಹಬ್ಬದ ವಾತಾವರಣದಂತೆ ಅನಿಸುತ್ತಿತ್ತು. ಮದುವೆ ಮನೆ ಊಟದ ಖುಷಿ ಒಂದೆಡೆಯಾದರೆ ಅಲ್ಲಿ ಮೈಕಿನಲ್ಲಿ ಹಾಕಿರುತ್ತಿದ್ದ ಚಲನಚಿತ್ರ ಗೀತೆಗಳನ್ನು ಕೇಳುವುದೂ ಖುಷಿ ಕೊಡುತ್ತಿತ್ತು. ಮೊದಲಿಗೆ ‘ಮೂಷಿಕ ವಾಹನ ಮೋದಕ ಹಸ್ತ’ ಹಾಡಿನಿಂದ ಮದುವೆಯ ಮನೆಯ ಹಾಡುಗಳು ಶುರುವಾಗುತ್ತಿದ್ದವು. ಆಗ ಊರಲ್ಲಿ ಮದುವೆಯಾದರೆ ಆ ಮದುವೆಯಲ್ಲಿ ಊಟ ಬಡಿಸೋಕೆ ಅಂತಾ ದುಡ್ಡು ಕೊಟ್ಟು ಜನರನ್ನು ಕರೆಸುತ್ತಿರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

read more
ಸಮತೆಯ ಸಂತ, ಕಾಮ್ರೇಡ್ ವಿ.ಎನ್. ಪಾಟೀಲ: ರಂಜಾನ್‌ ದರ್ಗಾ ಸರಣಿ

ಸಮತೆಯ ಸಂತ, ಕಾಮ್ರೇಡ್ ವಿ.ಎನ್. ಪಾಟೀಲ: ರಂಜಾನ್‌ ದರ್ಗಾ ಸರಣಿ

ಪ್ರಾಮಾಣಿಕ ರಾಜಕಾರಣಿಗಳು ತಮ್ಮ ಇಳಿವಯಸ್ಸಿನಲ್ಲಿ ಎಷ್ಟೊಂದು ಕಷ್ಟಪಡುವರು ಎಂಬುದರ ಬಗ್ಗೆ ಅರಿವಿದ್ದ ನನಗೆ ಅಂದು ಬಹಳ ಹೊತ್ತಿನವರೆಗೆ ನಿದ್ರೆ ಬರಲಿಲ್ಲ. ಪ್ರಾಮಾಣಿಕ ರಾಜಕಾರಣಿಗಳಿಗೆ ಇಂಥ ಗತಿ ಬರದೆ ಬೇರೆ ದಾರಿಯಿಲ್ಲ ಎನಿಸಿತು. ಎಷ್ಟೋ ಮರಿಪುಢಾರಿಗಳು ವಿಧಾನ ಸೌಧ, ಮಂತ್ರಿಗಳ ಮನೆ ಮತ್ತು ಶಾಸಕರ ಭವನದ ಮುಂದೆ ಕಾರಲ್ಲಿ ಸುತ್ತಾಡುವುದನ್ನು ನೋಡಿದ ನನಗೆ, ನನ್ನ ನಾಯಕನೊಬ್ಬ ಈ ರೀತಿ ಯಾವ ಸೌಲಭ್ಯಗಳೂ ಇಲ್ಲದೆ ಬದುಕುವುದನ್ನು ನೋಡಿ ಅತೀವ ಖೇದವೆನಿಸಿತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 69ನೇ ಕಂತು ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ