ಅಂಗಿ, ಮತ್ತದರ ಪ್ರಸಂಗಗಳು…: ಮಾರುತಿ ಗೋಪಿಕುಂಟೆ ಸರಣಿ
ಊರಿನ ಹುಡುಗರೆಲ್ಲ ನೋಡಿ ಹೇಗೆ ಹರಳೆಣ್ಣೆ ಹಚ್ಕೊಂಡು ಓಡಾಡ್ತ ಇದ್ದಾರೆ. ನಿಮಗೆ ಹಬ್ಬ ಬ್ಯಾಡ್ವ ಎಂದು ಅಜ್ಜಿ ಗದರಿದ್ದಳು. ನಾವೇನು ಹೊಸಬಟ್ಟೆ ಹಾಕ್ಕೋಳಲ್ಲ. ನಾವ್ಯಾಕೆ ಹರಳೆಣ್ಣೆ ಹಚ್ಕೊಬೇಕು ಎಂದು ಸುಮ್ಮನಾದೆವು. ಅಪ್ಪ ಬಂದು ಗದರಿದ. ನಾವು ವಿಧಿಯಿಲ್ಲದೆ ಅದಕ್ಕೆ ಸಿದ್ಧರಾದೆವು. ಎಣ್ಣೆಸ್ನಾನ ಆದಮೇಲೆ ಇದ್ದಕ್ಕಿದ್ದಂತೆ ಹೊಸ ಬಟ್ಟೆ ಕಾಣಿಸಿದವು. ಅವು ರೆಡಿಮೇಡ್ ಬಟ್ಟೆಗಳಾಗಿದ್ದವು. ಬುಟ್ಟಿ ತೋಳಿನ ರಬ್ಬರ್ನ ಎಳೆಯ ಅಲ್ಲಲ್ಲಿ ಮಿಂಚು ಕಾಣಿಸುವ ಇಂಗ್ಲೀಷ್ ಅಕ್ಷರದ ಉಲ್ಟಾ ಸೀದಾ ಅಡ್ಡ ಹೀಗೆ ನಾನಾ ರೀತಿ ಕಾಣುವ ಪ್ರಿಂಟೆಡ್ ಅಕ್ಷರಗಳ ಆ ‘ಅಂಗಿ’ ಆಧುನಿಕತೆಯ ‘ಟೀ ಶರ್ಟ್’ ಆಗಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನಾರನೆಯ ಕಂತು
ವಾಲ್ಕಾಟ್ ಎಂಬ ಮಹಾಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ
ವಾಲ್ಕಾಟ್ ಅವರ ಕವಿತೆಗಳನ್ನು ವಿಮರ್ಶಿಸುತ್ತಾ, ಕವಿ ಗ್ಲಿನ್ ಮ್ಯಾಕ್ಸ್ವೆಲ್ರು ಹೀಗೆ ಹೇಳುತ್ತಾರೆ; “ಕವಿಯಾಗಿ ವಾಲ್ಕಾಟ್ರ ಸಾಮರ್ಥ್ಯ ವಿಷಯವಸ್ತುಗಳ ಆಯ್ಕೆಯಲ್ಲಿ ಮತ್ತು ನಿರೂಪಣೆಯಲ್ಲಿ ಮಾತ್ರ ಅಡಗಿಲ್ಲ; ಅವರ ‘ಕಿವಿ’ ಅಥವಾ ‘ಶ್ರವಣ’ ಕೂಡ ದೊಡ್ಡ ಪಾತ್ರ ವಹಿಸಿದೆ.” ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ವೆಸ್ಟ್ ಇಂಡೀಸ್-ನ ಸೇಂಟ್ ಲೂಸಿಯಾ ದೇಶದ ಕವಿ ಡೆರಿಕ್ ವಾಲ್ಕಾಟ್-ರ (DEREK WALCOTT) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ನಾವು ಹೊರಗೋಡಿ ಹೋದದ್ದು ಯಾಕೆ?: ಸುಮಾವೀಣಾ ಸರಣಿ
ಈಗ ನಾವು ನೋಡಿದ್ದ ವಿಶಾಲ ಗದ್ದೆಗಳು ಸಂಪೂರ್ಣ ಮನೆಗಳಿಂದ ಆವೃತವಾಗಿದೆ. ನೋಡಲಿಕ್ಕೆ ಬೇಸರವಾಗುತ್ತದೆ. ಉತ್ತ ಗದ್ದೆ, ನಾಟಿಯಾದ ಗದ್ದೆ, ತೆನೆಗಟ್ಟಿದ ಗದ್ದೆ, ಕೊಯ್ಲು ಮಾಡಿದ ಗದ್ದೆ, ಹಾಗೆ ಖಾಲಿಯಿದ್ದ ಗದ್ದೆ, ಕಚಡ ಬೆಳೆದ ಗದ್ದೆ ಹೀಗೆ ಕಾಲಕಾಲಕ್ಕೆ ಬದಲಾಗುತ್ತಿದ್ದ ಬಯಲ ಗದ್ದೆ ಈಗ ಮನೆಗಳಿಂದ ಆವೃತ. ಯಾವಾಗಲೂ ಒಂದೇ ರೀತಿಯ ದೃಶ್ಯ. ಬಹುಶಃ ಮನುಷ್ಯ ಇದಕ್ಕಿಂತ ಹೆಚ್ಚು ಮುಂದೆ ಹೋಗಲಾರ ಅನ್ನುವ ಸಂಕೇತವೇನೋ? ಬಿಡಿ!
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಎಂಟನೆಯ ಕಂತು ನಿಮ್ಮ ಓದಿಗೆ
ಅವಮಾನ, ಕೀಳರಿಮೆ ಮತ್ತು ಸಂವೇದನೆ: ಮಾರುತಿ ಗೋಪಿಕುಂಟೆ ಸರಣಿ
ಬಹಳ ಪ್ರೀತಿಯಿಂದ ಸಾಕಿದ ಕುರಿಯೊಂದನ್ನು ನನಗೆ ಗೊತ್ತಿಲ್ಲದೆ ಹಬ್ಬಕ್ಕೆಂದು ಅಪ್ಪ ಮಾರಿಬಿಟ್ಟಿದ್ದ. ನನಗೆ ವಿಪರೀತ ದುಃಖವಾಗಿ ಒಂದು ದಿನ ಊಟವನ್ನೆ ಬಿಟ್ಟಿದ್ದೆ. ಬರುಬರುತ್ತಾ ಪ್ರಾಣಿಗಳನ್ನು ಸಾಕುವುದನ್ನೆ ಬಿಟ್ಟುಬಿಟ್ಟೆ. ಇವೆಲ್ಲವುಗಳ ನನ್ನೊಳಗೊಂದು ಸಂವೇದನೆಯನ್ನು ಹುಟ್ಟಿಹಾಕಿದವು. ಪ್ರಾಣಿಗಳು ಎಷ್ಟು ಅಲ್ಪಾಯುಗಳು ಅಲ್ಲವೆ? ಇನ್ನೊಬ್ಬರಿಗೆ ಆಹಾರವಾಗಲೊ, ಹರಕೆ ತೀರಿಸಲು ಬದುಕುವ ಈ ಪ್ರಾಣಿಗಳನ್ನು ಕುರಿತು ಬಸವಣ್ಣನವರ ವಚನ ನೆನಪಾಗುತ್ತದೆ; “ಹಬ್ಬಕ್ಕೆ ತಂದ ಹರಕೆಯ ಕುರಿ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ
ಪುಸ್ತಕದಂಗಡಿಗಳೂ… ಸಿನೆಮಾ ಟಾಕೀಸುಗಳೂ…: ಎಚ್. ಗೋಪಾಲಕೃಷ್ಣ ಸರಣಿ
ಭಾನುವಾರ ಅಂದರೆ ಸಾಕು ಈ ಹಳೆಯ ಪುಸ್ತಕದ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿತ್ತು. ಬೆಳಿಗ್ಗೆ ಏಳರ ಸುಮಾರಿಗೆ ಸುಮಾರು ಖಾಯಂ ಅಂಗಡಿಗಳ ಮುಂಭಾಗದಲ್ಲಿ ಈ ಅಂಗಡಿಗಳು ತೆರೆದುಕೊಳ್ಳುತ್ತಿದ್ದವು. ಮೊದಮೊದಲು ಜಟಕಾ ಗಾಡಿಗಳಲ್ಲಿ ಪುಸ್ತಕದ ಹೊರೆ ಬರುತ್ತಿತ್ತು. ಪುಸ್ತಕವನ್ನು ಅದರ ಆಕಾರಕ್ಕೆ ಅನುಗುಣವಾಗಿ ಜೋಡಿಸಿ ಹಗ್ಗದಲ್ಲಿ ಕಟ್ಟಿರುತ್ತಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ
ನಾವೇ ಭೂಮಿಯ ವಾರಸುದಾರರೇ?: ಚಂದ್ರಮತಿ ಸೋಂದಾ ಸರಣಿ
ನಮ್ಮ ಬಂಧುವೊಬ್ಬರದು ಅರಣ್ಯದ ನಡುವಿನ ಒಂಟಿ ಮನೆ. ಒಂದು ಬೇಸಿಗೆಯ ಬೆಳದಿಂಗಳ ರಾತ್ರಿಯಲ್ಲಿ ಹುಲಿ ಮತ್ತು ಕಾಡೆಮ್ಮೆ ಎರಡರ ನಡುವೆ ಭಯಂಕರ ಕಾದಾಟ. ಅವರ ಮನೆಯ ಹಿತ್ತಿಲಿನ ಪಕ್ಕದಲ್ಲಿಯೇ ಇವೆರಡರ ಹೋರಾಟವನ್ನು ಆ ಮನೆಯ ಜನರೆಲ್ಲ ಕುತೂಹಲದಿಂದ ಸುಮಾರು ಅರ್ಧಗಂಟೆಗೂ ಹೆಚ್ಚಿನ ಸಮಯ ವೀಕ್ಷಿಸಿದರಂತೆ. ಆ ಪ್ರಾಣಿಗಳ ಹೋರಾಟದ ಜಾಗಕ್ಕೂ ಇವರ ಮಧ್ಯೆ ಕೇವಲ ಒಂದು ಬೇಲಿಯಷ್ಟೆ ಇದ್ದುದು. ಇದು ಎಲ್ಲಿಯೂ ಸುದ್ದಿಯಾಗಲೇ ಇಲ್ಲ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ
ಚಿತ್ರಕಲಾವಿದೆಯ ಕಾವ್ಯಲೋಕ: ಎಸ್. ಜಯಶ್ರೀನಿವಾಸ ರಾವ್ ಸರಣಿ
“ನೀವು ಇಲ್ಲಿ ಸಂಘರ್ಷವನ್ನು ಗಮನಿಸುವುದಿಲ್ಲ, ಆದರೆ ಇಲ್ಲಿ ಬೇರೆ ಏನೋ ಇದೆ – ಅದು ಪ್ರೀತಿ. ಈ ಕಾವ್ಯ ಯಾವ ವರ್ಗಕ್ಕೆ ಸೇರಿದ ಕಾವ್ಯ? ಪ್ರೀತಿಯು ಹಕ್ಕಿಯ ಗರಿಯಹಾಗೆ, ಅದನ್ನು ಕಾವ್ಯದ ಬಗ್ಗೆ ಮಾತನಾಡುವಾಗ ಈ ಅಧ್ಯಯನದ ಭಾಗವಾಗಿ ವ್ಯಾಖ್ಯಾನಿಸಬೇಕು.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲ್ಯಾಟ್ವಿಯಾ ದೇಶದ ಕವಿ ಆ್ಯನಾ ಆವ್ಜಿನ್ಯಾ
(Anna Auziņa) ಅವರ ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ
ವರ್ಷಕಾಲದಲ್ಲಿ ಸಂಭ್ರಮಾಚರಣೆಯ ಸಂಕಷ್ಟಗಳು: ಸುಮಾವೀಣಾ ಸರಣಿ
ನಮ್ಮ ಟೀಚರ್ಸ್ ಡೇ ಸೆಲೆಬ್ರೇಷನ್ನಿಗೂ ಮಳೆರಾಯ ತಪ್ಪದೆ ಹಾಜರಿ ಹಾಕುತ್ತಿದ್ದ. ಯಾವಾಗಲು ಸೆಪ್ಟೆಂಬರ್ 4 ರ ಮಧ್ಯಾಹ್ನ ಕಾರ್ಯಕ್ರಮ ನಿಗದಿಯಾಗಿರುತ್ತಿತ್ತು. ಕಾರ್ಯಕ್ರಮ ಪ್ರಾರಂಭವಾಗಿ ಸ್ವಾಗತ ಉದ್ಘಾಟನೆ ಮೊದಲಾದ ಔಪಚಾರಿಕ ಕಾರ್ಯಕ್ರಮ ಮುಗಿದು ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಗುವ ಹೊತ್ತಿಗೆ ಹಾಡು ಕೇಳದಷ್ಟು ಜೋರು ಮಳೆ. ಮುಸಿ ಮುಸಿ ನಗುತ್ತಾ ಬರೆ ಡಾನ್ಸ್ ನೋಡುತ್ತಿದ್ದೆವು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ
ಋಣಾನುಬಂಧದ ಎರಡು ಕತೆಗಳು: ಮಾರುತಿ ಗೋಪಿಕುಂಟೆ ಸರಣಿ
ಆತ ಆಗಾಗ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ. ಸುಮ್ಮನೆ ಊಟಮಾಡಬೇಕಲ್ಲ ಎಂಬ ಸ್ವಾಭಿಮಾನದ ಧೋರಣೆ ಆತನದ್ದಿರಬೇಕು. ಮನೆಯಲ್ಲಿ ಮಲಗು ಎಂದು ಎಷ್ಟು ಹೇಳಿದರೂ ಆತ ಕಿರಾಣಿ ಅಂಗಡಿಯ ಬಾಗಿಲ ಮುಂದೆಯೇ ಮಲಗುತ್ತಿದ್ದ. ಯಾಕೆಂದು ನಮಗೂ ತಿಳಿಯಲಿಲ್ಲ. ಅಡಿಗೆ ಆದಮೇಲೆ ನಾನೆ ತೆಗೆದುಕೊಂಡು ಹೋಗಿ ಕೊಡುತಿದ್ದೆ. ಊಟ ಮಾಡುತ್ತಿದ್ದ. ಮಾತಿಗಿಂತ ಮೌನವೆ ಹೆಚ್ಚು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ









