Advertisement

ಸರಣಿ

ನೀನೆ ಭುವನಕ್ಕಾರಾಧ್ಯನೈ… ಚೂತರಾಜಾ: ಚಂದ್ರಮತಿ ಸೋಂದಾ ಸರಣಿ

ಮಲೆನಾಡು, ಕರಾವಳಿ ಭಾಗದಲ್ಲಿ ಕೊಸಗಾಯಿ ಅಥವಾ ಕುಚ್ಚುಮಾವಿನಕಾಯಿ ಎನ್ನುವುದು ಮಳೆಗಾಲದಲ್ಲಿ ಅಡಿಗೆಗೆ ಸಹಾಯಕ. ಕುದಿಯುವ ಹಂತದಲ್ಲಿದ್ದ ನೀರಿಗೆ ತೊಳೆದು ಶುದ್ಧಗೊಳಿಸಿದ ಮಾವಿನಕಾಯಿಗಳನ್ನು ಹಾಕಿ ಒಂದು ಕ್ಷಣಬಿಟ್ಟು ಅದನ್ನು ಅಲ್ಲಿಂದ ತೆಗೆದು ಆರಿದ ಮೇಲೆ ಉಪ್ಪುನೀರಿನಲ್ಲಿ ಹಾಕಿಡಬೇಕು. ಇದರಿಂದಲೂ ಹಸಿಮಾವಿನಕಾಯಿಯಲ್ಲಿ ಮಾಡುವ ವ್ಯಂಜನಗಳನ್ನೆಲ್ಲ ಮಾಡಬಹುದು. ಇದಕ್ಕೂ ಅಷ್ಟೆ, ಎಲ್ಲ ಮಾವಿನಕಾಯಿಯೂ ಬಾರದು. ಸಿಪ್ಪೆ ದಪ್ಪವಿದ್ದು ಉಪ್ಪಿನಲ್ಲಿ ಕರಗಬಾರದು. ಜೋಓಓ ಎಂದು ಹೊಯ್ಯುವ ಮಳೆಯಲ್ಲಿ ಕಮ್ಮಗೆ ಉಂಡು, ಬೆಚ್ಚನೆ ಹೊದ್ದು ಮಲಗಿದರೆ ʻಸ್ವರ್ಗಕ್ಕೆ ಕಿಚ್ಚು ಹಚ್ಚೆಂದ….ʼ
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ನಾಲ್ಕನೆ ಕಂತು

read more
ಲೇಬರ್‌ ಕ್ಯಾಂಪಿನಲ್ಲಿ ಹುಟ್ಟಿದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಲೇಬರ್‌ ಕ್ಯಾಂಪಿನಲ್ಲಿ ಹುಟ್ಟಿದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಅವರ ದೇಶದ ಮೇಲಿನ ಪ್ರೀತಿ ಅವರಲ್ಲಿ ಆಳವಾಗಿ ಬೇರೂರಿತ್ತಾದರೂ, ಅದು ಡಾಂಭಿಕತೆಯ ಪ್ರೀತಿ ಅಥವಾ ವಾಗಾಡಂಬರವಾಗಿರಲಿಲ್ಲ; ಬದಲಿಗೆ ಶಾಂತತೆಯಿಂದ ಕೂಡಿತ್ತು ಹಾಗೂ ವೈಯಕ್ತಿಕವಾಗಿತ್ತು. ಅವರ ಲೇಬರ್ ಕ್ಯಾಂಪಿನ ನಂತರದ ಕವಿತೆಗಳಲ್ಲಿ ಮೂಲಭೂತ ಮಾನವ ಸ್ಥಿತಿ ಮತ್ತದರ ಅಮಿತ ಕಷ್ಟಗಳು ಪ್ರಧಾನ ವಿಷಯಗಳಾಗಿವೆ. ಪ್ರಕೃತಿವಸ್ತುಗಳಿಂದ ತುಂಬಿದ ಸಾಂಕೇತಿಕತೆಯನ್ನು ತೋರಿಸುತ್ತಾ ಅವರು ತನ್ನ ಪ್ರೀತಿಯ ಪರಿಸರವನ್ನು, ದೇಶ, ಮತ್ತು ಅದರ ಜನರನ್ನು ಮೀರಿ ನಿಂತು ಸಾರ್ವತ್ರಿಕ ಕವಿಯಾಗುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

read more
ಬರವಣಿಗೆಯ ಶಿಸ್ತನ್ನು ಕಲಿಸಿದ ಸಿಸ್ಟರ್ ಲಾರೆನ್ಸಿಯಾ: ಸುಮಾವೀಣಾ ಸರಣಿ

ಬರವಣಿಗೆಯ ಶಿಸ್ತನ್ನು ಕಲಿಸಿದ ಸಿಸ್ಟರ್ ಲಾರೆನ್ಸಿಯಾ: ಸುಮಾವೀಣಾ ಸರಣಿ

ಸಿಸ್ಟರ್ ಲಾರೆನ್ಸಿಯ ಅವರಿಗೆ ಗಾರ್ಡೆನಿಂಗ್ ಅಂದರೂ ಇವರಿಗೆ ಬಹಳ ಇಷ್ಟವಿತ್ತು. ನಮ್ಮ ತರಗತಿಯ ಮುಂದೆ ಇದ್ದ ಹೂತೋಟದಲ್ಲಿ ಚಂದದ ಗಿಡಗಳನ್ನು ಬೆಳೆಸಿದ್ದರು. ಅದರಲ್ಲಿ ದಾಳಿಂಬೆ ಬಣ್ಣದ ಪಾಪಿ ಹೂಗಳು ಅರಳುತ್ತಿದ್ದುದನ್ನು ಅದರ ನಯವಾದ ಎಸಳುಗಳನ್ನು ಇವತ್ತಿಗೂ ಮರೆಯಲಾಗುತ್ತಿಲ್ಲ. ತಮ್ಮ ತಲೆಯ ವಸ್ತ್ರವನ್ನು ಸರಿ ಮಾಡಿಕೊಂಡು ಬಗ್ಗಿ ಕೆಲಸ ಮಾಡುತ್ತಿದ್ದರು. “ಮುಂದೆ ಮಿಡ್ಲ್ ಸ್ಕೂಲಿಗೆ ಹೋಗುತ್ತೀರ ಚಂದ ಕಲಿತು ಹೋಗಬೇಕು” ಎಂದು ಪದೇ ಪದೇ ಹೇಳುತ್ತಿದ್ದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ನಾಲ್ಕನೆಯ ಬರಹ

read more
ಮಳೆಗಾಲದ ಆ ದಿನದ ನೆನಪು: ಮಾರುತಿ ಗೋಪಿಕುಂಟೆ ಸರಣಿ

ಮಳೆಗಾಲದ ಆ ದಿನದ ನೆನಪು: ಮಾರುತಿ ಗೋಪಿಕುಂಟೆ ಸರಣಿ

ಬರಗೂರು ತಲುಪುವಷ್ಟರಲ್ಲಿಯೆ ಧಾರಾಕಾರವಾಗಿ ಮಳೆಸುರಿಯಲಾರಂಭಿಸಿತು. ರಾತ್ರಿಯ ಭಯಂಕರವಾದ ಕತ್ತಲೆ ಬಸ್ಸು ಇಳಿಯುವಷ್ಟರಲ್ಲಿ ಸ್ವಲ್ಪ ಮಳೆ ಕಡಿಮೆಯಾಗಿತ್ತು. ಸ್ವಲ್ಪ ದೂರಹೋಗುವಷ್ಟರಲ್ಲಿ ಇನ್ನಷ್ಟು ಮಳೆ ಕಡಿಮೆಯಾಯಿತು. ಎಲೆಯು ನೆನೆಯುವಂತಿರಲಿಲ್ಲ. ಬರಗೂರನ್ನು ಬಿಟ್ಟು ಸ್ವಲ್ಪ ಹತ್ತಾರು ಮಾರು ದೂರ ಹೋಗಿದ್ದೆವು. ಪಶ್ಚಿಮದ ದಿಕ್ಕಿನಿಂದ ಗಾಳಿಯ ಮೋಡಗಳು ದಟ್ಟವಾಗಿ ಬರುತ್ತಿವೆ. ಒಂದಕ್ಕಿಂತ ಒಂದು ಪದರು ಪದರಾಗಿ ಬರುತ್ತಿವೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

read more
ಹರಿಕತೆಯ ಸಮಯದಲ್ಲಿ…: ಎಚ್. ಗೋಪಾಲಕೃಷ್ಣ ಸರಣಿ

ಹರಿಕತೆಯ ಸಮಯದಲ್ಲಿ…: ಎಚ್. ಗೋಪಾಲಕೃಷ್ಣ ಸರಣಿ

ಇವನ್ನೆಲ್ಲಾ ಮರೆತು ಹೋಗಿದ್ದಾಗ ಹರಿಕತೆ ದಾಸರ ನೆನಪು ನನಗೆ ಮತ್ತೆ ಧುತ್ತೆಂದು ಬಂದದ್ದು ರಾಜಧಾನಿಯಲ್ಲಿ ಚಂದ್ರಶೇಖರ ಕಂಬಾರರು ಅಭಿನಯಿಸಿದ ಒಂದು ನಾಟಕ ನೋಡಿದಾಗ. ಕಂಬಾರರು ನಾಟಕ ಮಾಡಿದಾಗ ಕೆಂಪು ಜುಬ್ಬ ಧರಿಸಿ ತಲೆಗೆ ರುಮಾಲು ಕಟ್ಟಿ ಸೊಂಟಕ್ಕೆ ಬಟ್ಟೆ ಬಿಗಿದು, ಕಾಲಿನ ಗೆಜ್ಜೆ ಕುಣಿಸಿ ಡಾನ್ಸ್ ಮಾಡುತ್ತಾ ನಾಟಕ ಮಾಡಿದಾಗ ಯಾವುದೋ ಬೇರೆ ಲೋಕಕ್ಕೆ ಹೋದ ಹಾಗೆ ಭಾಸವಾಗಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

read more
ಭಾವುಕ ಕವಿಯ ಕಾವ್ಯಲೋಕ: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಭಾವುಕ ಕವಿಯ ಕಾವ್ಯಲೋಕ: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಜೊನಿನಾಸ್ ಅವರ ತಲೆಮಾರಿನವರಿಗೆ ಮುಖವಾಡಗಳೊಂದಿಗೆ ಆಟವಾಡುವುದು ಒಂದು ತರಹದ ಜೀವನಶೈಲಿಯಾಗಿತ್ತು. ಆಗ ಚಾಲ್ತಿಯಲ್ಲಿದ್ದ ಬೂದು ಬಣ್ಣದ ಉಡುಪುಗಳ ವ್ಯತಿರಿಕ್ತವಾಗಿ ಇವರು ಹಿಪ್ಪಿ ಮತ್ತು ಷೋಕಿಯ ಉಡುಪುಗಳಲ್ಲಿ ಸಾಂಕೇತಿಕ ಪ್ರಾಮುಖ್ಯತೆಯನ್ನು ಕಂಡರು. ಆಗಿನ ವ್ಯವಸ್ಥೆಯೊಳಗೆ ತಮ್ಮದೇ ಆದ ಸ್ವಾಯತ್ತ ಜಗತ್ತನ್ನು ಸೃಷ್ಟಿಸಲು ಪ್ರಯತ್ನಿಸಿದ ಪೀಳಿಗೆಯಿದು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

read more
ಎಸ್. ಜಯಶ್ರೀನಿವಾಸ ರಾವ್ ಬರೆಯುವ ಹೊಸ ಸರಣಿ “ಲೋಕ ಕಾವ್ಯ ವಿಹಾರ” ಇಂದಿನಿಂದ

ಎಸ್. ಜಯಶ್ರೀನಿವಾಸ ರಾವ್ ಬರೆಯುವ ಹೊಸ ಸರಣಿ “ಲೋಕ ಕಾವ್ಯ ವಿಹಾರ” ಇಂದಿನಿಂದ

ಗೊಂದಲಮಯ ದ್ವಂದ್ವಾರ್ಥತೆಗಳು ಮತ್ತು ದೃಷ್ಟಿಕೋನದ ಕ್ಷಿಪ್ರ ಬದಲಾವಣೆಗಳನ್ನೊಳಗೊಂಡ ವೀಡಿಂಗ್-ರ ವಿಕೇಂದ್ರಿತ, ಸಾಂಕೇತಿಕ ಮತ್ತು ಬಹುತಾರ್ಕಿಕ ಕಾವ್ಯಶೈಲಿ 1970-ರ ಮತ್ತು 80-ರ ದಶಕಗಳಲ್ಲಿ ಎಸ್ಟೋನಿಯಾದಲ್ಲಿ ಬರೆಯುತ್ತಿದ್ದ ಹೆಚ್ಚಿನ ಯುವ ಕವಿಗಳಿಗೆ ಸಾರ್ವತ್ರಿಕ ಉಲ್ಲೇಖಬಿಂದುಗಳಾಗಿದ್ದವು. ಬೇರೆ ಯಾವುದೇ ಎಸ್ಟೋನಿಯನ್ ಕವಿ ಈ ತರಹದ ಅನುಕರಣೆಗಳ, ಪ್ರಸ್ತಾಪಗಳ ಮತ್ತು ಮರುರೂಪಿಸುವಿಕೆಗಳ ಹರಿವನ್ನು ಸೃಷ್ಟಿಸಿಲ್ಲ: ಯುಹಾನ್ ವೀಡಿಂಗ್ ತಯಾರಿಸಿದ ಕಾವ್ಯದ ಅಚ್ಚಿನಲ್ಲಿ ಒಂದು ಇಡೀ ಪೀಳಿಗೆಯ ಕಾವ್ಯಭಾಷೆ ರೂಪುಗೊಂಡಿತು.
ಎಸ್.‌ ಜಯಶ್ರೀನಿವಾಸ ರಾವ್ ಬರೆಯುವ ಜಗತ್ತಿನ ಬೇರೆ ಬೇರೆ ಭಾಷೆಯ‌ ಕವಿಗಳ ಬದುಕು- ಅನುವಾದಿತ ಕವಿತೆಗಳ ಸರಣಿ “ಲೋಕ ಕಾವ್ಯ ವಿಹಾರ” ಇಂದಿನಿಂದ, ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

read more
ಮುಳ್ಳಕ್ಕಿಯ ರೆಕ್ಕೆಪುಕ್ಕಗಳು: ಡಾ. ಚಂದ್ರಮತಿ ಸೋಂದಾ ಸರಣಿ

ಮುಳ್ಳಕ್ಕಿಯ ರೆಕ್ಕೆಪುಕ್ಕಗಳು: ಡಾ. ಚಂದ್ರಮತಿ ಸೋಂದಾ ಸರಣಿ

ಹಿಂದೆ ಕೂಲಿ ಕೆಲಸ ಮಾಡುವ ಜನರು ಬೇಸಿಗೆಯಲ್ಲಿ ಒಣಗಿಸಿಟ್ಟ ಹಲಸಿನ ಬೀಜಗಳನ್ನು ಮಳೆಗಾಲದಲ್ಲಿ ಮುಖ್ಯ ಆಹಾರವಾಗಿ ಬಳಸುತ್ತಿದ್ದರು. ಆಗ ಅಧಿಕ ಮಳೆ ಹೊಯ್ಯುತ್ತಿದ್ದುದರಿಂದ ಅವರಿಗೆ ಕೂಲಿಕೆಲಸ ಸಿಗುತ್ತಿರಲಿಲ್ಲ, ದವಸಧಾನ್ಯಗಳನ್ನು ಕೊಳ್ಳಲು ಆಗುತ್ತಿರಲಿಲ್ಲ. ಒಂದುಹೊತ್ತು ಅನ್ನವನ್ನೋ ಗಂಜಿಯನ್ನೋ ಉಂಡರೆ ಇನ್ನೊಂದು ಹೊತ್ತಿಗೆ ಹಲಸಿನ ಬೇಳೆಯೇ ಆಹಾರವಾಗಿತ್ತು. ಹೀಗೆ ಹಲಸಿನ ಬೇಳೆ ಅವರನ್ನು ಸಲಹುತ್ತಿತ್ತು. ಇತ್ತೀಚೆಗೆ ಹಲಸಿನ ಬೇಳೆಯಲ್ಲಿ ಅತ್ಯಧಿಕ ಪೌಷ್ಟಿಕಾಂಶ ಇದೆ ಎನ್ನುವ ಸಂಗತಿ ಪ್ರಚಲಿತವಾಗಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯಲ್ಲಿ ಮೂರನೆಯ ಬರಹ

read more
ಪ್ರಕೃತಿಯ ರಿಯಲ್ ಡೆಮೋ: ಸುಮಾವೀಣಾ ಸರಣಿ

ಪ್ರಕೃತಿಯ ರಿಯಲ್ ಡೆಮೋ: ಸುಮಾವೀಣಾ ಸರಣಿ

ಇಲ್ಲಿನ ಜನರು ಮಳೆಗಾಲಕ್ಕೆ ಪ್ರತ್ಯೇಕ ಶಾಪಿಂಗ್ ಮಾಡಬೇಕು. ಜರ್ಕಿನ್ಸ್, ರೇನ್ಕೊಟ್, ಕೊಡೆಗಳು, ಸ್ಕಾರ್ಫ್‌ಗಳು, ಸ್ವೆಟರ್‌ಗಳು, ಟೋಪಿಗಳು, ಟಾರ್ಪಲ್ಸ್ ಮೆಡಿಸಿನ್ಸ್, ಜೇನು ಇತ್ಯಾದಿ. ಇದರ ಜೊತೆಗೆ ಸೌದೆಯನ್ನು ಹಾಕಿಸಿಕೊಳ್ಳುವುದು. ಒಂದು ಜೀಪ್ ಇಲ್ಲವೆ ಮಿನಿ ಲಾರಿಯಲ್ಲಿ ಒಂದು ಅಟ್ಟಿ ಎರಡು ಅಟ್ಟಿ ಸೌದೆ ಹೀಗೆ ಹಾಕಿಸಿಕೊಂಡರೆ ಅದನ್ನು ಒಡೆಯಲು ಜನ ಇರುತ್ತಿದ್ದರು. ‘ಕೊಡ್ಲಿ ಸೌದೆಯನ್ನು ಒಡೆಯಲು ಬಳಸುವ ಪರಿಕರ. ‘ಕೊಡ್ಲಿ’ ಪದದಲ್ಲಿ ಒತ್ತಕ್ಷರ ಬಿಡಿಸಿ ಹೊಸದೊಂದು ‘ಅ’ ಸ್ವರವನ್ನು ಸೇರಿಸಿದರೆ ‘ಕೊಡಲಿ’ ಆಗುತ್ತದೆ ನಮ್ಮ ಶಿಷ್ಟ ಭಾಷೆಯನ್ನು ‘ಕೊಡಲಿ’ ಎಂದರೆ ‘ನೀಡಲಿ’ ಎಂದರ್ಥ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ