Advertisement

ಸುಮಾವೀಣಾ

ಎರೆನೆತ್ತಿ ಎಂಬ ಬಾಲ್ಯಕಾಲದ ನಿಗೂಢಗಳು….: ಎಸ್.ಗಂಗಾಧರಯ್ಯ

ಹಿಂಗೆ ಪ್ರಾಣಿಗಳ ಕಾಟದ ಜೊತೆಗೆ ಎರೆನೆತ್ತಿಯ ಕಾಡಿನೊಳಕ್ಕೆ ಆಗಾಗ ದೂರದ ಊರುಗಳಿಂದ ದರೋಡೆಕೋರರು ಬಂದು ಸೇರಿಕೊಂಡುಬಿಡುತ್ತಿದ್ದರಂತೆ. ಆಗ ಅಪ್ಪಿತಪ್ಪಿಯೂ ಸುತ್ತಲ ಹಳ್ಳಿಗಳ ಜನರು ಅತ್ತ ಸುಳಿಯುತ್ತಿರಲಿಲ್ಲವಂತೆ. ಪೊಲೀಸರಿಗೆ ದೂರು ಕೊಟ್ಟರೂ ಅತ್ತ ಹೋಗಲು ಅವರೂ ಹಿಂಜರಿಯುತ್ತಿದ್ದರಂತೆ. ಸುತ್ತಮುತ್ತಲ ಹಳ್ಳಿಗಳಲ್ಲಿ ಸಾಕಷ್ಟು ಕಳ್ಳತನ ಮಾಡಿದ ಮೇಲೆ ಆ ದರೋಡೆಕೋರರು ಅವರಾಗಿಯೇ ಜಾಗ ಖಾಲಿ ಮಾಡುತ್ತಿದ್ದರಂತೆ. ಎರೆನೆತ್ತಿಯ ಬಗ್ಗೆ ಇಂಥ ಪುಕಾರುಗಳನ್ನು ನನ್ನ ಅಜ್ಜನಷ್ಟೇ ಅಲ್ಲ ಊರಿನ ಹಲವು ಹಿರಿಯ ತಲೆಗಳು ಹೇಳುತ್ತಿದ್ದುದರಿಂದ ಅದು ನನ್ನಂಥವರೊಳಗೆ ಒಂದು ನಿಗೂಢ ಲೋಕವಾಗಿ ಉಳಿದುಬಿಟ್ಟಿತ್ತು.
ಕಥೆಗಾರ ಎಸ್.‌ ಗಂಗಾಧರಯ್ಯ ಅವರ ಈತನಕದ ಕತೆಗಳ ಸಂಕಲನ “ಎರೆನೆತ್ತಿ”ಗೆ ಅವರೇ ಬರೆದ ಮಾತುಗಳು ಇಲ್ಲಿವೆ

Read More

ಎನ್. ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ಎನ್. ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ವಾಸವಾಗಿದ್ದಾರೆ. ತಾ.ಪಂ ಕಚೇರಿ, ಹಿರಿಯೂರು ಇಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹಂಪಿಯ ಕನ್ನಡ ವಿ.ವಿ.ಯಲ್ಲಿ ಪಿ.ಹೆಚ್ ಡಿ ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ಕತೆಗಳು ಪ್ರಕಟವಾಗಿವೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

Read More

ಕಲ್ಯಾಣಕ್ರಾಂತಿ: ಡಾ. ಲತಾ ಗುತ್ತಿ ಕಾದಂಬರಿಯ ಪುಟಗಳು

ಬೆಳಗಿನ ಜಾವ ಕಣ್ಣುಬಿಟ್ಟಾಗ ಎಲ್ಲೆಲ್ಲೂ ಜಾತ್ರೆಯದೇ ಆದ ಒಂದು ಬೆಡಗಿನ ಸೊಬಗು. ತಣ್ಣನೆಯ ಗಾಳಿ-ಪಕ್ಷಿಗಳ ಕಲರವ. ಸೂರ್ಯೋದಯ. ದೇವಸ್ಥಾನದ ಆವರಣದಿಂದ ಕೇಳಿಬರುವ ಶರಣರ ವಚನಗಳ ಹಾಡುಗಳು. ಸುತ್ತೆಲ್ಲ ಹಸಿರು ಗಿಡಮರಗಳಿಂದ ತುಂಬಿದ ತಂಪಾದ ಸ್ಥಳದಲ್ಲಿ ಚೆನ್ನಬಸವಣ್ಣನ ದೇವಸ್ಥಾನ ದೂರ ದಿಂದಲೇ ಕಂಗೊಳಿಸುತ್ತದೆ. ಎತ್ತರದ ಗೋಪುರದಲ್ಲಿ ಶಿವಶರಣರ ಶಿಲ್ಪ ಕೃತಿಗಳು. ಅವರವರ ವೃತ್ತಿಗೆ ತಕ್ಕಂತೆ ಕೆತ್ತನೆಗಳಿವೆ. ೧೨ನೆಯ ಶತಮಾನದ ಶರಣರೆಲ್ಲ ಕಣ್ಣಿಗೆ ಕಟ್ಟುವಂತೆ ಕಾಣುತ್ತಾರೆ. ದೇವಸ್ಥಾನ ತಳಿರು ತೋರಣಗಳಿಂದ ಶೋಭಿತಗೊಂಡಿದೆ.
ಡಾ. ಲತಾ ಗುತ್ತಿ ಹೊಸ ಕಾದಂಬರಿ “ಚದುರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ

Read More

ವಿಫಲಪ್ರೇಮಿಯ ತಪ್ಪೊಪ್ಪಿಗೆಗಳು: ರಹಮತ್ ತರೀಕೆರೆ

ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಕವಿತೆ ಬರೆಯುತ್ತಿದ್ದಳು. ಸರಳವಾದ ಪದದ ಅರ್ಥ-ಅದನ್ನು ತರಗತಿಯಲ್ಲೂ ಕೇಳಬಹುದಿತ್ತು- ಕೇಳಿಕೊಂಡು ಸ್ಟಾಫ್‌ರೂಮಿಗೆ ಬರುತ್ತಿದ್ದಳು. ಸಹೋದ್ಯೋಗಿಗಳು `ನೀನೇ ಹುಡುಗಿ ತರಹ ನಾಚ್ಕೊತೀ ಯಲ್ಲೋ’ ಎಂದು ಛೇಡಿಸುತ್ತಿದ್ದರು. ಬದುಕಿನ ಬಗ್ಗೆ ಭವಿಷ್ಯದ ಬಗ್ಗೆ ಚಿಂತನೆ ಹೊಣೆಗಾರಿಕೆ ಇಲ್ಲದೆ ಹುಟ್ಟಿದ ಎಳಸು ಆಕರ್ಷಣೆಗಳವು. ಆದರೂ ಒಬ್ಬಾಕೆಯ ದೊಡ್ಡ ಕಣ್ಣುಗಳ ಮುಖ ಚಿತ್ತದಲ್ಲಿ ಉಳಿದುಬಿಟ್ಟಿದೆ. ಚೆಲ್ಲು ವರ್ತನೆಯ ಆಕೆ, ಕನ್ನಡದಲ್ಲಿ ಭಯಂಕರ ಕಾಗುಣಿತ ತಪ್ಪು ಮಾಡುತ್ತಿದ್ದಳು. ಚೆಲುವನ್ನು ಕೊಟ್ಟು ಬುದ್ಧಿಯನ್ನು ಕೊಡದ ವಿಧಿಯನ್ನು ಬೈದುಕೊಂಡು, ಭಾಷಾ ದೋಷಗಳನ್ನು ಉದಾರವಾಗಿ ತಿದ್ದುತ್ತಿದ್ದೆ.
ಡಾ. ರಹಮತ್‌ ತರೀಕೆರೆಯವರ ಆತ್ಮಕಥನ “ಕುಲುಮೆ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

“ದೇಹಕೊಂದು ಹೆಸರಿದೆ, ಆಕಾರವೂ ಇದೆ
ಆದರೆ, ಅಂತರಾಳದಲಿ‌ರುವ ಲಕ್ಷ ಕೋಟಿ ಜೀವಾತ್ಮಗಳಿಗೆ ಹೆಸರಿಲ್ಲದಿದ್ದರೂ ಅಸ್ತಿತ್ವವಿದೆ
ಅಗಣಿತ ಅಣುರೇಣುಗಳಿಗೆ ಜಗವನಾಳುವ ಛಾತಿಯಿದೆ
ಸೂರ್ಯರಶ್ಮಿಯ ಪ್ರಖರತೆಗೆ ಮಗ್ಗುಲು ಬದಲಿಸುವ ನೆರಳು, ಬೆನ್ನ ಹಿಂದೆಯೇ ಕಾದು
ನಿಂತಿರುವ ಸಾವಿನ ಸಂಕೇತವೇ ಅಲ್ಲವೇ?”- ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ