Advertisement

Category: ದಿನದ ಪುಸ್ತಕ

ಸಹಜಪ್ರಕೃತಿ ದರ್ಶನದ ಕವಿತೆಗಳು: ಡಾ. ಬಿ. ಜನಾರ್ದನ ಭಟ್ ಬರಹ

ನಮ್ಮ ಕಾಲದ ದೊಡ್ಡ ದೊಡ್ಡ ಕವಿಗಳೆಲ್ಲ ಹೀಗೆ ನೇರವಾಗಿ ಧರ್ಮಬೋಧನೆ ಅಲ್ಲದಿದ್ದರೂ ಒಂದಲ್ಲ ಒಂದು ಜೀವನ ದರ್ಶನವನ್ನು – ಜೀವನ ಧರ್ಮವನ್ನು – ತಮ್ಮ ಕಾವ್ಯದ ಮೂಲಕ ಜನರಿಗೆ ನೀಡಿದವರೇ ಆಗಿದ್ದಾರೆ. ಮೊಗಸಾಲೆಯವರ ಕಾವ್ಯ ಯಾನವನ್ನೇ ಗಮನಿಸಿದರೆ ಅವರು ಪ್ರಾರಂಭದಲ್ಲಿ ನವ್ಯ ಸಾಹಿತ್ಯದ ಪ್ರೇರಣೆಯಿಂದ ಬರೆಯುತ್ತಿದ್ದರು. ನವ್ಯ ಸಾಹಿತ್ಯಕ್ಕೆ ಅಸ್ತಿತ್ವವಾದದ ಹಿನ್ನೆಲೆ ಇತ್ತು. ಆಮೇಲೆ ಮೊಗಸಾಲೆಯವರನ್ನು ಅಲ್ಲಮಪ್ರಭು ಪ್ರಭಾವಿಸಿದ. ಅಲ್ಲಮನ ಹೊಸ ರೂಪಕಗಳು, ಹೊಸತನವುಳ್ಳ ವಿಚಾರಗಳು ಅವರನ್ನು ಸೆಳೆದವು.
ಡಾ. ನಾ ಮೊಗಸಾಲೆಯವರ ಹೊಸ ಕವನ ಸಂಕಲನ “ಹೇ ರಾಮ್”‌ ಕುರಿತು ಡಾ. ಜನಾರ್ಧನ ಭಟ್‌ ಬರಹ ನಿಮ್ಮ ಓದಿಗೆ

Read More

“ಅಳವು ಅರಿಯದ ಭಾಷೆ” ಎಂಬ ಸಾವಿನ ಗಂಟೆ: ಕೆ. ಪಿ. ಸುರೇಶ ಬರಹ

ಈ ಮಾತು ಎಷ್ಟು? ಬೆಳಗಿನವರೆಗೆ ಪ್ರಸಂಗವನ್ನು ಕಟ್ಟಬೇಕಾದ ಕಾರಣ ಕ್ವಚಿತ್ತಾದ ಚೌಕಟ್ಟಿನ ಮಾತು ಪಾತ್ರಧಾರಿಗೆ ಸಾಲುವುದಿಲ್ಲ. ಆತ ಅಕ್ಷಯಾಂಬರದ ತರ ಮಾತಿನ ಎಳೆಗಳನ್ನು ಪೋಣಿಸುತ್ತಾ ಹೋಗಬೇಕು. ಈ ಸ್ವಾತಂತ್ರ್ಯವೇ ಯಕ್ಷಗಾನದ ವೃತ್ತಿ ಪ್ರದರ್ಶನಗಳ ಜೀವಾಳ ಮತ್ತು ಶಾಪ. ಇದು ಕಲಾವಿದರದ್ದೂ ಕೂಡ. ಹೀಗಾದಾಗ ಮಾತು ಸಡಿಲವಾಗುತ್ತಾ ಸ್ವೇಚ್ಛೆಯಾಗುತ್ತಾ ಹೋಗುವ ವಿಧಿ ಈ ಪ್ರಕಾರದೊಳಗೇ ಅಂತರ್ಗತವಾಗಿದೆ. ಈಗ ಹರಡಿರುವ ಹತ್ತಾರು ಮೇಳಗಳ ಕಲಾವಿದರ ಸಂಖ್ಯೆ ಮತ್ತು ಅವರ ಪ್ರತಿಭಾ ಶ್ರೇಣಿಯನ್ನು ಗಮನಿಸಿದರೆ ವಿದ್ವತ್ತು ಮತ್ತು ಮಾತಿನ ಪ್ರೌಢಿಮೆಗಳೆರಡೂ ಸಮಪಾಕಗೊಂಡ ಕಲಾವಿದರ ಪ್ರಮಾಣ ತೀರ ಕಡಿಮೆ ಸಂಖ್ಯೆಯದ್ದು.
ನಿತ್ಯಾನಂದ ಬಿ. ಶೆಟ್ಟಿ ಬರೆದ “ಅಳವು ಅರಿಯದ ಭಾಷೆ” ಕೃತಿಯ ಕುರಿತು ಕೆ.ಪಿ. ಸುರೇಶ ಬರಹ

Read More

ಅಮಾಯಕ ಸ್ತ್ರೀಯರ  ಬದುಕಿಗೆ “ಗ್ಲಾನಿ” ಯಾಗುವ ಗಂಡಸರು: ನಾರಾಯಣ ಯಾಜಿ ಬರಹ

ಬದುಕು ಎಂದರೆ ಎಲ್ಲರಿಗೂ ಒಂದೇ ರೀತಿಯ ಪಯಣವಲ್ಲ. ಕೆಲವರಿಗೆ ಅದು ಸಾಧನೆಯ ಮಾರ್ಗವಾಗಬಹುದು; ಕೆಲವರಿಗೆ ಅದು ಸಹನೆಯ ಪರೀಕ್ಷೆಯಾಗಬಹುದು. ‘ಗ್ಲಾನಿ’ಯ ಮಹಾಲಕ್ಷ್ಮಿ ಮತ್ತು ಅಂಬಾಬಾಯಿ ಈ ಸಹನೆಯ ಪ್ರತಿಮೆಗಳು. ಶಿವು ಆ ಸಹನೆಯ ಸಾಕ್ಷಿ. ಅವರ ಬದುಕಿನಲ್ಲಿ ಜಯವಿಲ್ಲದಿದ್ದರೂ, ಒಂದು ಗಂಭೀರವಾದ ಅರ್ಥವಿದೆ. ಆ ಅರ್ಥವೇ ಈ ಕಾದಂಬರಿಯ ಜೀವಾಳ.
ಅರುಣಕುಮಾರ ಹಬ್ಬು ಕಾದಂಬರಿ “ಗ್ಲಾನಿ” ಕುರಿತು ನಾರಾಯಣ ಯಾಜಿ ಬರಹ

Read More

ಒಡಲ ನಂಟಿಗೆ ಗಂಟು ಬಿದ್ದಾಗ: ರಾಮಲಿಂಗ ಮಾಡಗಿರಿ ಕೃತಿಯ ಕುರಿತು ಶಿವಕುಮಾರ ಕರನಂದಿ ಬರಹ

ಕವಿತೆ ಅನುಕರಿಸಿದೆ, ನಕಲಿಸದೆ, ತನ್ನ ಸುತ್ತಮುತ್ತಲಿನ ಘಟನೆಗಳ ಮೇಲೆ ಕೇಂದ್ರಿಕರಿಸಿ, ತನ್ನೊಳಗಿನ ಭಾವನೆಗಳ ಮೂಲಕ ಕವಿತೆ ಕಟ್ಟಬೇಕಿದೆ. ರೂಪಕ, ಪ್ರತಿಮೆ, ಹೋಲಿಕೆಗಳೊಂದಿಗೆ ಕಾವ್ಯವನ್ನು ರಚಿಸಬೇಕಿದೆ. ಅಂದಾಗ ಮಾತ್ರ ಆ ಮನುಷ್ಯ ಚಿಂತನಾಶೀಲ ಕವಿಯಾಗಲು ಸಾಧ್ಯ. ಹೀಗೆ ಬರೆಯುತ್ತಾ ಸಾಗಿದಾಗ ನಾಳೆಯ ಚಿಂತಕನಾಗಲು ಸಾಧ್ಯ. ಈ ಒಂದು ದಿಸೆಯಲ್ಲಿ ಗೆಳೆಯ ರಾಮಲಿಂಗ ಮಾಡಗಿರಿ ತನ್ನ ಮೊದಲ ಸಂಕಲನದಿಂದ ಪ್ರವರ್ಧಮಾನಕ್ಕೆ ಕಾಲಿಡುತ್ತಿದ್ದಾರೆ. ಇವರು ಸ್ನಾತಕೋತ್ತರ ಪದವೀಧರರಾಗಿದ್ದು ಗಿಡಮರಗಳ ನಾಡಿಮಿಡಿತ ಅರಿತ ಇವರು ಕವಿತೆಯ ಸಾರವನ್ನು ಹೆಕ್ಕಲು ಬಂದಿದ್ದಾರೆ.
ರಾಮಲಿಂಗ ಮಾಡಗಿರಿ ಕವನ ಸಂಕಲನ “”ಒಡಲಿಗಂಟಿದ ನಂಟು” ಕುರಿತು ಶಿವಕುಮಾರ ಮೋಹನ ಕರನಂದಿ ಬರಹ

Read More

ಇದು ವಾತ್ಸಲ್ಯದ ಒಸಗೆ: ಡಾ. ರಾಜಲಕ್ಷ್ಮಿ ಕೃತಿಯ ಕುರಿತು ಸುಧಾ ಆಡುಕಳ ಬರಹ

ಬೆರಳ ತುದಿಯಲ್ಲಿ ನೂರಾರು ಅರಿವಿನ ಹರಹುಗಳು ಹರಡಿಕೊಳ್ಳುವ ಕಾಲದಲ್ಲಿ ಇಂತಹ ಮಾಹಿತಿಗಳು ನಮಗೆ ಬೇಕೆ? ಎಂದು ಪ್ರಶ್ನಿಸಿಕೊಂಡರೆ ಎಂದಿಗಿಂತಲೂ ಇಂದು ಈ ರೀತಿಯ ಪುಸ್ತಕಗಳು ಹೆಚ್ಚು ಅವಶ್ಯಕ ಎನಿಸುವುದು. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಎಲ್ಲರೂ ಸ್ವಯಂ ವೈದ್ಯರಂತೆ ವರ್ತಿಸುತ್ತಿದ್ದಾರೆ. ಅಂತರ್ಜಾಲವೆಂಬ ಆಕಾಶದಲ್ಲಿ ತುಂಬಿರುವ ಮಾಹಿತಿಗಳಲ್ಲಿ ಸತ್ಯಕ್ಕಿಂತಲೂ ಸುಳ್ಳಿನ ವೈಭವೀಕರಣವೇ ಹೆಚ್ಚು ತುಂಬಿದೆ. ಅವುಗಳ ಮೊರೆಹೋಗಿ ತಪ್ಪು ಜಾಲಗಳಲ್ಲಿ ಇಂದಿನ ಕಿಶೋರಿಯರು ಸಿಲುಕಿರುವ ಎಷ್ಟೋ ಉದಾಹರಣೆಗಳು ನಮ್ಮ ಎದುರಿಗಿವೆ. ತಿಳಿದವರು, ತಿಳಿಯದವರಿಗೆ, ತಿಳಿಯುವಂತೆ ತಿಳಿಸಿದರೆ ಮಾತ್ರ ಅದು ‘ತಿಳುವಳಿಕೆ’ ಅನಿಸಿಕೊಳ್ಳುತ್ತದೆ.
ಡಾ. ರಾಜಲಕ್ಷ್ಮಿ ಬರೆದ “ವಾತ್ಸಲ್ಯದ ಒಸಗೆ” ಕೃತಿಯ ಕುರಿತು ಸುಧಾ ಆಡುಕಳ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ