Advertisement

Category: ಪುಸ್ತಕ ಸಂಪಿಗೆ

ಕಲ್ಲಹಳ್ಳದ ಕಾಡುತೋಟ: ಸತೀಶ್‌ ತಿಪಟೂರು ಬರಹ

ನಾವು ತೋಟದ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೆವು. ಮರಗಿಡಗಳ ನಡುವಿನ ಕಾಲು ಹಾದಿಯಲ್ಲಿ ಸ್ವಲ್ಪ ದೂರ ನಡೆದು ಪಂಪ್ ಹೌಸ್ ಬಳಿ ಅವರು ನಿಂತರು. ಮರಗಿಡಗಳ ನಡುವೆ ಏನೋ ಕಂಡಂತಾಗಿ ನಾನು ನಿಂತೆ. ನಿಧಾನವಾಗಿ ಹೆಜ್ಜೆಯಿಟ್ಟು ಮುಂದೆ ಸರಿದು ನೋಡಿದರೆ ಪ್ರಪಾತದಂತೆ ಆಳ, ಅಗಲ, ವಿಸ್ತಾರವಾದ ತುಂಗಾ ನದಿ. ಅಬ್ಬಾ! ರೋಮಾಂಚನವಾಯಿತು. ನಾವು ನದಿಯ ತಟದಲ್ಲಿ ನಿಂತಿದ್ದೆವು.
ರಂಗಕರ್ಮಿ ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಕೆಲವು ಅಧ್ಯಾಯಗಳು ಪ್ರತಿ ಶನಿವಾರ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟಗೊಳ್ಳಲಿವೆ

Read More

ನೀಲಿ ಮತ್ತು ಸೇಬು: ಸುಧಾ ಆಡುಕಳ ಕಥಾಸಂಕಲನಕ್ಕೆ ಎಚ್. ಎಸ್. ಸತ್ಯನಾರಾಯಣ ಮುನ್ನುಡಿ

‘ಹೆಣ್ಣು’ ಇವರ ಕಥೆಗಳ ಕೇಂದ್ರವಾದರೂ ಆಕೆಯ ಸುತ್ತಲಿರುವ ಗಂಡಿನ ಮನೋಧರ್ಮವನ್ನೂ ಇವರು ಅಲಕ್ಷಿಸಿಲ್ಲ. ಮನುಷ್ಯಪ್ರಜ್ಞೆ ಕಾಲದಿಂದ ಕಾಲಕ್ಕೆ ಜಿಗಿಯುವಲ್ಲಿ, ವಿಕಸಿಸುವಲ್ಲಿ, ಅರ್ಥಪೂರ್ಣತೆಯತ್ತ ತುಡಿಯುವಲ್ಲಿ ಎದುರಿಸಿ ನಿಲ್ಲಬೇಕಾದ ಬಿಕ್ಕಟ್ಟುಗಳನ್ನು ತಮ್ಮ ಕಥೆಗಳ ಮೂಲಕ ಶೋಧಿಸುವ ಸುಧಾ ಅವರ ಲೇಖನಿ ಬದುಕಿನ ಸಕಾರಾತ್ಮಕ ಗುಣಗಳತ್ತಲೇ ಹೆಚ್ಚಾಗಿ ವಾಲುವುದರಿಂದ ಇವರ ಪಾತ್ರಗಳು ಸಂಕಟಗಳ ನಡುವೆಯೂ ಜೀವನೋತ್ಸಾಹವನ್ನು ಉಳಿಸಿಕೊಂಡು ಪುಟಿಯುತ್ತವೆ.
ಸುಧಾ ಆಡುಕಳ ಅವರ “ನೀಲಿ ಮತ್ತು ಸೇಬು” ಕಥಾ ಸಂಕಲನಕ್ಕೆ ಡಾ. ಎಚ್. ಎಸ್. ಸತ್ಯನಾರಾಯಣ ಬರೆದ ಮುನ್ನುಡಿ

Read More

‘ಹೂವಿನ ಕೊಲ್ಲಿʼ ಅನ್ನುವ ದ್ವೀಪ: ಅಬ್ದುಲ್ ರಶೀದ್ ಕಾದಂಬರಿಗೆ ಬಿ.ವಿ.ರಾಮಪ್ರಸಾದ್ ಪ್ರಸ್ತಾವನೆ

“ಈ ಕಾದಂಬರಿಯ ನಿರೂಪಣೆಯ ವೈಶಿಷ್ಠ್ಯ ಇರುವುದು ಎಲ್ಲಿಯೂ ಪಾತ್ರಗಳ ಮೇಲೆ, ಅವುಗಳ ನಡೆಗಳ ಮೇಲೆ, ನಂಬಿಕೆಗಳ ಮೇಲೆ ‘ನೈತಿಕʼ ಅಥವಾ ‘ವೈಚಾರಿಕʼ ಟಿಪ್ಪಣಿಯನ್ನು ಮಾಡದೇ ಇರುವುದು. ‘ಇವರೆಲ್ಲಾ ಎಂತಾ ಮೂಢನಂಬಿಕೆ ಜನಾರಿʼ ಎಂದೆಲ್ಲಾ ಹೇಳದೇ ಇರುವುದು. ಇಲ್ಲಿ ನಿರೂಪಕ ಇದ್ದು ಕೂಡ ಇಲ್ಲ ಅನ್ನುವ ಹಾಗೆ ಪಾತ್ರಗಳು ತಮ್ಮ ಪಾಡಿಗೆ ತಾವಿದ್ದಾವೆ ಅನಿಸುತ್ತದೆ”
ಕನ್ನಡದ ಕಥೆಗಾರ ಅಬ್ದುಲ್ ರಶೀದ್ ದಶಕಗಳ ಹಿಂದೆ ಬರೆದಿದ್ದ, ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದ ‘ಹೂವಿನಕೊಲ್ಲಿ’ ಕಾದಂಬರಿ ಈಗ ಪರಿಷ್ಕೃತಗೊಂಡು ಮರುಮುದ್ರಣಗೊಳ್ಳುತ್ತಿದೆ. ಪರಿಷ್ಕೃತ ಕಾದಂಬರಿಯಲ್ಲಿ ಪ್ರಕಟವಾಗಿರುವ ಡಾ. ಬಿ.ವಿ.ರಾಮಪ್ರಸಾದ್ ಅವರ ಪ್ರಸ್ತಾವನೆ ಇಲ್ಲಿದೆ.

Read More

ಖಂಡವಿದೆಕೋ.. ಮಾಂಸವಿದೆಕೋ…: ಶ್ರೀಧರ ಪತ್ತಾರ ಬರಹ

ಸಮಯ ಸರಿಯಾಗಿತ್ತು ಹಾಗಾಗಲಿಲ್ಲ. ಒಂದು ವೇಳೆ ನಾನು ಶಸ್ತ್ರಪ್ರಹಾರಕ್ಕೆ ಅಣಿಯಾದೆನೆಂದಿಟ್ಟುಕೊಳ್ಳಿ. ಅದುವರೆಗೂ ಕದಲದೇ ನಿಂತಿದ್ದ ನನ್ನ ಅನಿರೀಕ್ಷಿತ ದೇಹಚಲನೆ ಕಂಡು ಹುಲಿಗೆ ವಿಚಲಿತವಾದಂತೆನ್ನಿಸಿ ಅದು ಅಕ್ಷರಶಃ ಕೆರಳುತ್ತಿತ್ತು. ನಾನು ಗನ್ನು ಮೇಲಕ್ಕೆತ್ತಿ ಹೊಡೆಯಬೇಕೆಂದು ಹಂಚಿಕೆ ಹಾಕುವಾಗಲೇ ಅದು ಠಣ್ ಎಂದು ಒಂದೇ ನೆಗೆತಕ್ಕೆ ನಮ್ಮ ಮೇಲೆರಗಿ ಸಿಕ್ಕವರ ಕತ್ತು ಹಿಸುಕಿ ಕರುಳು ಬಗೆದಿರುತ್ತಿತ್ತು. ಕ್ಷಣಮಾತ್ರದಲ್ಲೇ ಈ ಅಚಾತುರ್ಯ ಸಂಭವಿಸುವ ಸಾಧ್ಯತೆಯಿತ್ತು. ನಾನು ಗನ್ನು ಚಲಾಯಿಸುವ ಗೋಜಿಗೆ ಹೋಗದಿದ್ದುದೆ ಸರಿಯಾಯ್ತು.
ಶ್ರೀಧರ ಪತ್ತಾರ ಅನುಭವ ಕಥನ “ಕಾಟಿಹಳ್ಳದ ತಿರುವು” ಕೃತಿಯ ಒಂದು ಬರಹ ನಿಮ್ಮ ಓದಿಗೆ

Read More

ವರ್ತಮಾನದ ತಲ್ಲಣಗಳಿಗೆ ಪ್ರತಿಕ್ರಿಯೆ: ಮೊಗಳ್ಳಿ ಗಣೇಶ್‌ ಬರಹ

ಚಂದನ್ ಮತೊಂದು ಭಾರತವನ್ನು ಅವಲೋಕಿಸುತ್ತಿರುವುದೇ ದಮನಿತರ ದೃಷ್ಟಿಕೋನದಿಂದ. ಅಂಚಿನ ಸಂಗತಿಗಳನ್ನು ಮುಖ್ಯ ವಾಹಿನಿಗೆ ತಂದಿರಿಸಿ ನಿರೂಪಿಸುವುದೇ ಸಾಂಸ್ಕೃತವಾಗಿ ಮಹತ್ವದ್ದು. ದಲಿತ ಕವಿ ಸಿದ್ದಲಿಂಗಯ್ಯನವರ ಆತ್ಮಕಥನವ ಕಂಡಂತೆಯೆ, ಸರ್.ಎಂ.ವಿಶ್ವೇಶ್ವರಯ್ಯ ಅವರ ಬಗೆಗೂ, ನಾಲ್ವಡಿ ಕೃಷ್ಣ ರಾಜೇಂದ್ರ ಅವರ ಬಗೆಗೂ ಟಿಪ್ಪು ಸುಲ್ತಾನ್ ಬಗೆಗೂ ಸಮಾನವಾಗಿ ನೋಡುವ ಪರಿಯು ಗಮನಾರ್ಹವಾಗಿದೆ. ಯು.ಆರ್. ಅನಂತಮೂರ್ತಿ ಅವರು ಆತ್ಯಂತಿಕ ಪ್ರಭೆಯ ಲೇಖಕರು. ಅವರ ಮೂಲಕ ಭಾರತವನ್ನು ಚಂದನ್ ಭಾವಿಸುತ್ತಾರೆ.
ಚಂದನ್‌ ಗೌಡ ಹೊಸ ಕೃತಿ “ಅನದರ್‌ ಇಂಡಿಯಾ” ಕೃತಿಯ ಕುರಿತು ಮೊಗಳ್ಳಿ ಗಣೇಶ್‌ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ