Advertisement

Tag: ಕೆಂಡಸಂಪಿಗೆ

ಡಾರ್ಕ್ ಹ್ಯೂಮರ್ ಮತ್ತು ನಮ್ಮ ಗ್ರಹಿಕೆಗಳು

ನಾವು ಎಷ್ಟೋ ಬಾರಿ ಸೆಕ್ಸಿಸ್ಟ್, ಕ್ಯಾಸ್ಟಿಸ್ಟ್ ಜೋಕುಗಳನ್ನು ಮಾಡುತ್ತೇವೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿದ್ದರೆ ಇನ್ನೂ‌ ಕೆಲವೊಮ್ಮೆ ಅಪ್ರಯತ್ನಪೂರ್ವಕಾಗಿ ಬರುತ್ತದೆ. ಈಗಲೂ ಬರವಣಿಗೆಯಲ್ಲಿ ನಾನು ಇಂತಹ ಪದಗಳ ಬಳಸುವುದು ಕಮ್ಮಿಯಾದರೂ ಆತ್ಮೀಯ ಗೆಳೆಯರೊಟ್ಟಿಗೆ ಮಾತಾಡುವಾಗ ಕ್ಯಾಸ್ಟಿಸ್ಟ್ ಅಲ್ಲದಿದ್ದರೂ ಸೆಕ್ಸಿಸ್ಟ್ ಬೈಗಳುಗಳು ಅಪ್ರಯತ್ನಪೂರ್ವಕವಾಗಿ ಬರುತ್ತವೆ. ಮುಂದಾದರೂ ಅದನ್ನು ಕಮ್ಮಿ ಮಾಡಬೇಕು ಎಂದು ಇವರ ಬರಹಗಳ ಓದಿದಾಗ ಅನ್ನಿಸಿದೆ.
ಗಿರಿಧರ್‌ ಗುಂಜಗೋಡು ಅಂಕಣ

Read More

ಮುದ್ದೆಯಾದ ಕಾಗದ!

ಮರುದಿನ ಅಜ್ಜಿಯ ಆರೋಗ್ಯ ಮತ್ತಷ್ಟು ಹದೆಗೆಟ್ಟಿತು. ಅವಳಿಗೆ ಎದ್ದು ತಿರುಗಾಡಲು ಆಗಲಿಲ್ಲ. ಮಲಗಿದ್ದಲ್ಲೇ ಮಲಗಿ ಒಂದೇ ಸವನೆ ನರಳತೊಡಗಿದಳು. ಆಗಲೂ ಅಮ್ಮನ ಮನಸ್ಸು ಕರಗಲಿಲ್ಲ. ಊಟ ತಿಂಡಿಯೂ ಹಾಕಲಿಲ್ಲ. ಇವಳಿಗೆ ಮನೆಯಲ್ಲಿಟ್ಟುಕೊಂಡರೆ ನಮಗೂ ರೋಗ ಬರಬಹುದು ಅಂತ ಯೋಚಿಸಿ ಮನೆಯ ಅಂಗಳದಲ್ಲಿ ಮಲಗಲು ಖಡಕ್ಕಾಗಿ ಸೂಚಿಸಿ ಅವಳ ಹಾಸಿಗೆ ಹೊಚ್ಚಿಗೆ ತಾಟು ತಂಬಿಗೆ ಎಲ್ಲವೂ ಬೇರ್ಪಡಿಸಿ ಕೈ ತೊಳೆದುಕೊಂಡಳು. ಈ ಎಲ್ಲ ದೃಶ್ಯಾವಳಿ ನೋಡಿ ರಾಜೂನ ದುಃಖ ಉಕ್ಕಿ ಬಂದಿತು. ಮಲ್ಲಿಕಾಳ ಕರುಳು ಹಿಂಡಿದಂತಾಯಿತು.
ಶರಣಗೌಡ ಬಿ ಪಾಟೀಲ ತಿಳಗೂಳ ಪ್ರಬಂಧ

Read More

ಮಹಾಮರ್ಕಟ ಮನಸ್ಸಿನ ಸುತ್ತ…

ಮಾರ್ಟಿನ್‌ ಸಾಮಾನ್ಯರಂತಿರಲು ಮತ್ತು ಕಿರು ಪ್ರಮಾಣದ ಸಾವಧಾನದಿಂದಿರಲು ಬೇಕಾದ ಆಂತರಿಕ ಜೀವರಸವೇ ಇಲ್ಲದವನ ಹಾಗೆ ಕಾಣುತ್ತಾನೆ.. ಯಾವ ಬಗೆಯಲ್ಲಿ ಯೋಚಿಸಿದರೂ ಅವನ ಬುದ್ಧಿ, ಮನಸ್ಸಿನ ಎಳೆಗಳಲ್ಲಿ ಹಿಂಸಿಸುವುದಲ್ಲದೆ ಬೇರೆ ಬಣ್ಣಗಳ ಛಾಯೆಯೇ ಇರುವಂತೆ ಕಾಣುವುದಿಲ್ಲ. ಅವನು ಇತರ ಸಾಮಾನ್ಯರೊಂದಿಗೆ ಹೋಲಿಸಿಕೊಳ್ಳುವ ಮಾತಂತೂ ಹತ್ತಿರ ಸುಳಿಯುವ ಹಾಗೆಯೇ ಇರುವುದಿಲ್ಲ. ಅವನು ಸದಾಕಾಲ ಉಳಿದವರಿಗಿಂತ ಭಿನ್ನವಾಗಿ ರಚಿಸಿಕೊಂಡ ಮತ್ತು ಅದನ್ನೇ ಸಹಜವೆಂದು ನಂಬಿರುವ ಮನೋನೆಲೆಯಲ್ಲಿರುವ ವ್ಯಕ್ತಿ.
ಎ.ಎನ್. ಪ್ರಸನ್ನ ಸರಣಿ

Read More

ನಗರ ಜೀವನದ ಬಿಕ್ಕಟ್ಟಿನ ಕತೆಗಳು…

ಮಧ್ಯಮ ವರ್ಗದ ಜನ ಚೀಟಿ ವ್ಯವಹಾರದಲ್ಲಿ ಮೋಸ ಹೋಗುವುದನ್ನು ಚಿತ್ರಿಸುವ ಕತೆ ‘ಹರಿಚಿತ್ತ’ ಆಂಧ್ರದಿಂದ ವಲಸೆ ಬಂದ ದಲಿತ ಪೆದ್ದ ಪೆಂಚಾಲಯ್ಯ, ಎಂತೆಂಥವೋ ಕೆಲಸ ಮಾಡುತ್ತಾ, ಹೋರಾಡುತ್ತಾ, ಮಗ ಪೆಂಚಾಲಯ್ಯ ನನ್ನು ಪೊಲೀಸ್ ಕೆಲಸಕ್ಕೆ ಸೇರಿಸುತ್ತಾನೆ. ರಾಜಕೀಯ ಗಲಾಟೆಯಲ್ಲಿ ಸಿಕ್ಕಿ ಹೊಡೆತ ತಿಂದು ಬಿದ್ದಾಗ, ಗಲಾಟೆ ನಿಯಂತ್ರಿಸಲು ಮಗ ಪೊಲೀಸ್ ಪೆಂಚಾಲಯ್ಯ ಬರ್ತಾನೆ. ಗಲಾಟೆಗೆ ಬಲಿಯಾಗುವವರು ಇಂತಹ ಅಮಾಯಕರೇ.. ಕೆಳ ಮಧ್ಯಮವರ್ಗದವರಿಗೆ ‘ಯಾರೂ ಕಾಯುವವರಿಲ್ಲ..’ ಎಂಬ ಸ್ಥಿತಿ.
ವಸಂತಕುಮಾರ್ ಕಲ್ಯಾಣಿ ಅವರ ಕಥಾಸಂಕಲನ “ಪರ್ಯಾಪ್ತ”ಕ್ಕೆ ಜಿಎಸ್ ಸುಶೀಲಾದೇವಿ ಆರ್ ರಾವ್ ಬರೆದ ಮುನ್ನುಡಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಲ್ಲೇಶ್‌ ಕುಂಬಾರ್ ಬರೆದ ಕತೆ

ಪೂಜೇರಿ ಸಂಗಪ್ಪನ ಸಾವಿನಿಂದಾಗಿ ಕಂಗೆಟ್ಟಿದ್ದ ಕಪಿಲೆ, ಚಪ್ಪರದಿಂದ ಎದ್ದು ಹೋಗಿ ಆತನ ಮನೆಯ ಮುಂದೆ ನಿಂತಿತು. ಆಗ, ಹೊರಗೆ ಮನೆ ಮುಂದೆ ಗದಕಟ್ಟು ಕಟ್ಟಿ ಕೂಡ್ರಿಸಿದ್ದ ಪೂಜೇರಿ ಸಂಗಪ್ಪನ ಹೆಣವನ್ನು ಕಂಡು, ದುಃಖ ತಡೆಯಲಾಗದೆ ನೆರೆದ ಜನರ ನಡುಕ ತೂರಿಕೊಂಡು ಮುಂದೆ ಹೋಗಿ ಆತನನ್ನು ಮೂಸಿ ನೋಡಿ ತನ್ನ ಮರುಕ ವ್ಯಕ್ತಪಡಿಸಿತು. ಆಮೇಲೆ, ಅದು ಹಂಗೇ ಹಿಂದೆ ಸರಿದು ಜನರತ್ತ ಬಂದು ನಿಂತಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಲ್ಲೇಶ್‌ ಕುಂಬಾರ ಬರೆದ ಕತೆ “ಕಪಿಲೆ” ನಿಮ್ಮ ಈ ಭಾನುವಾರದ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ