Advertisement

Tag: ಕೆಂಡಸಂಪಿಗೆ

ಮನುಷ್ಯ ಬದುಕಿನೊಂದಿಗೆ ಮುಖಾಮುಖಿಯಾಗುವ ಪದ್ಯಗಳು: ಕಲ್ಲೇಶ್ ಕುಂಬಾರ್ ಬರಹ

ಕವಿಯಾಗಿ ಮಾಲತಿಯವರಿಗೆ ಕತ್ತಲು ಮತ್ತು ಬೆಳಕಿನ ಕುರಿತಾಗಿ ವಿಶಿಷ್ಟವಾದ ಆಕರ್ಷಣೆಯಿದೆ ಎನ್ನಬಹುದು. ಈ ಮಾತಿಗೆ ಸಾಕ್ಷಿಯಾಗಿ ಈ ಕವನಸಂಕಲನದಲ್ಲಿ ‘ಅಜ್ಜಿ ಮತ್ತು..’ ಎಂಬ ಪದ್ಯವೊಂದಿದೆ. ಇಲ್ಲಿ, ಕತ್ತಲು–ಬೆಳಕಿನ ಆಟವನ್ನು ಕೇಂದ್ರವಾಗಿರಿಸಿಕೊಂಡು ಮನುಷ್ಯ ಬದುಕಿನ ಕ್ರಿಯೆಗಳನ್ನು ಅವರು ಶೋಧಿ‌ಸಲು ಪ್ರಯತ್ನಿಸಿದ್ದಾರೆ.‌ ಈ ಪದ್ಯದ ಶೀರ್ಷಿಕೆಯಲ್ಲಿರುವ ‘ಅಜ್ಜಿ’ ಬೇರಾರೂ ಆಗಿರದೇ ನಮ್ಮೊಳಗಿನ ಅರಿವಿನ ಕೇಡು ಕಳೆಯಲೆಂದು ನಮ್ಮ ಎದೆಯಂಗಳದಲ್ಲಿ ಮುಡಿಸಿಟ್ಟ ಅರಿವಿನ ದೀವಿಗೆಯೇ ಆಗಿದ್ದಾಳೆ!
ಮಾಲತಿ ಗೋರೆಬೈಲ್ ಬರೆದ “ಗುಬ್ಬಿ ಲಾಟೀನು” ಕವನ ಸಂಕಲನದ ಕುರಿತು ಕಲ್ಲೇಶ್‌ ಕುಂಬಾರ್‌ ಬರಹ

Read More

ಅಚ್ಚರಿಯ “ಅಭಯಾ” ತೊಟ್ಟ ಮನಸ್ಸು: ದರ್ಶನ್‌ ಜಯಣ್ಣ ಸರಣಿ

ಮನಸಿನಲ್ಲಿ ಯಾಕೋ ತಳಮಳ ಶುರುವಾಯಿತು. ಇವರಾರೋ ಫೋನ್ ನಂಬರ್ ಶೇರ್ ಮಾಡುತ್ತಿಲ್ಲ, ಐಡೆಂಟಿಟಿ ಶೇರ್ ಮಾಡುತ್ತಿಲ್ಲ, ಕೇವಲ ನನ್ನ ವಿವರ ಪಡೆದು, ಇಲ್ಲಿಗೆ ಕರೆಸಿಕೊಂಡಿದ್ದಾರೆ, ಈಗಲೂ ಕಾಯಿಸುತ್ತಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಯಾರೋ ಪುಸ್ತಕಗಳನ್ನು ಹೊತ್ತು ಬರುತ್ತಿರುವುದು ಕಾಣಿಸಿತು. “ಓಹ್, ಇವರೋ ಅಭಯಾ ತೊಟ್ಟ ಮಹಿಳೆ!” ತಮ್ಮ ಮುಖವೊಂದನ್ನ ಕಾಣುವಹಾಗೆ ಬಿಟ್ಟು ಇಡೀ ದೇಹಕ್ಕೆ ಅಭಯಾ ತೊಟ್ಟಿದ್ದಾರೆ. ಕಾರಿನಿಂದ ಹೊರಗಡೆ ಇಳಿದೆ. “ಬುಕ್ಸ್?” ಎಂದು ಕೇಳಿದರು. “ಎಸ್” ಎಂದೆ. ನಲವತ್ತು ರಿಯಾಲ್ ಕೊಡಲು ಹೇಳಿದರು, ಕೊಟ್ಟೆ. ಹಣಪಡೆದು ಪುಸ್ತಕಗಳನ್ನು ಕೊಟ್ಟು ಹೊರಟುಬಿಟ್ಟರು!
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಐದನೆಯ ಕಂತು

Read More

ಮಾತು ಹೆಪ್ಪುಗಟ್ಟಿ ಕಾವ್ಯವಾದ ಬಗೆ: ಡಾ.ಎ.ರಘುರಾಂ ಬರಹ

ಮಂಜುನಾಥ್ ಪಾಳ್ಯ ಅವರ ಎಲ್ಲ ಕವಿತೆಗಳನ್ನು ಓದಿದಾಗ ಅಲ್ಲಿನ ಭಾಷೆ, ವಸ್ತು, ನಿರ್ವಹಣೆಯ ಬಗ್ಗೆ ನೋಡಬೇಕು. ವಸ್ತು ಸಾಮಾಜಿಕವೇ ಆದರೂ ಕೂಡ ನಿರ್ವಹಣೆಯ ಸಂದರ್ಭದಲ್ಲಿ ಅದು ಭಿನ್ನ ಪಾತಳಿಗಳನ್ನು ಕಾಣುತ್ತದೆ. ಕವಿ ಪ್ರತಿಭಟಿಸುವಲ್ಲಿ ಕಾವ್ಯ ಬಂಡಾಯದ ಚಾಟಿ ಬೀಸುತ್ತದೆ. ಮೌನವಾಗಿ ಪ್ರೇಮಕ್ಕೆ ಮರುಳಾದಾಗ ಅಲ್ಲಿನ ಭಾಷೆ ತೀರ ಕೋಮಲವಾಗಿಬಿಡುತ್ತದೆ. ಭ್ರಷ್ಠತೆ, ಅತ್ಯಾಚಾರ, ಶೋಷಣೆ ವಿಚಾರಗಳು ಬಂದರೆ ಭಾಷೆ ಸ್ವಲ್ಪ ಒರಟಾಗಿಬಿಡುತ್ತದೆ. ಕಾವ್ಯ ಹೀಗೆ ಭಿನ್ನ ಪಾತಳಿಗೆ ಒಳಗಾಗುವುದು ಕವಿಯ ಸಂವೇದನಾಶೀಲ ಗುಣವನ್ನು ತೋರುತ್ತದೆ.
ಡಾ. ಮಂಜುನಾಥ ಪಾಳ್ಯ ಬರೆದ ‘ಹೆಪ್ಪುಗಟ್ಟಿದ ಮಾತುಗಳು’ ಕವನ ಸಂಕಲನದ ಕುರಿತು ಡಾ. ಎ. ರಘುರಾಂ ಬರಹ

Read More

ನಮ್ಮ ಕಾಲದ ಕೃಷಿ….: ರೂಪಾ ರವೀಂದ್ರ ಜೋಶಿ ಸರಣಿ

ಈ ಗದ್ದೆ ಕೆಲಸ ನಡೆಯುವಾಗ ನಾನಂತೂ ಮಧ್ಯಾಹ್ನ ಶಾಲೆ ಬಿಟ್ಟೊಡನೆ ಗದ್ದೆಗೆ ಓಡುತ್ತಿದ್ದೆ. ಅವೆಲ್ಲವನ್ನೂ ಕಣ್ಣು ತುಂಬಿಕೊಳ್ಳುತ್ತ, ಅವರ ಮಾತು, ಗಲಗಲ ನಗೆಗೆ ನಾನೂ ಹಲ್ಲು ಕಿಸಿಯುತ್ತ ಮೈ ಮರೆತು ನಿಂತು ಬಿಡುತ್ತಿದ್ದೆ. ತಿರುಗಾ ಆಯಿ ಜೋರಾಗಿ ಕರೆದು, “ಯೇ ಬಾರೇ. ಊಟ ಮಾಡಿ ಶಾಲೆಗೆ ಹೊರಡು” ಎಂದು ಗದರಿದಾಗ, “ಥೋ… ಇದೊಂದು ಮಳ್ಳು ಶಾಲೆ” ಎಂದು ನನ್ನೊಳಗೇ ಗೊಣಗುತ್ತ, ಅಲ್ಲಿಂದ ಕಾಲು ಕೀಳುತ್ತಿದ್ದೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಆರಿಸಬಹುದು ಕಿಚ್ಚು; ಆರಿಸುವುದ್ಹೇಗೆ ಇದ್ದರೆ ಹೊಟ್ಟೆಕಿಚ್ಚು?!: ಬಸವನಗೌಡ ಹೆಬ್ಬಳಗೆರೆ ಸರಣಿ

ರೈತ ‘ನಾನು ಬಿತ್ತುವ ಬೀಜಗಳನ್ನೇ ನನ್ನ ನೆರೆಹೊರೆಯ ಹೊಲದ ರೈತರಿಗೂ ನೀಡುತ್ತೇನೆ’ ಎಂದು ಹೇಳಿದನಂತೆ! ಆಗ ಅವರಿಗೆ ಇನ್ನೂ ಅಚ್ಚರಿಯಾಗಿ ‘ನೀವು ನಿಮ್ಮ ಸ್ಪರ್ಧಾಳುಗಳಿಗೆ ಕೊಟ್ಟರೆ ನೀವೇ ನಿಮ್ಮ ಸ್ಪರ್ಧಿಯನ್ನು ಬೆಳೆಸಿದಂತಾಗುವುದಿಲ್ಲವೇ?’ ಎಂದಾಗ ಆ ರೈತ ‘ನಾನು ಬಿತ್ತುವ ಬೀಜಗಳನ್ನೇ ಅಕ್ಕಪಕ್ಕದವರಿಗೂ ಕೊಟ್ಟರೆ ಫಲ ಬಿಡುವ ಸಮಯದಲ್ಲಿ ಪರಾಗಸ್ಪರ್ಶದಿಂದಾಗಿ ನನ್ನ ಹೊಲದ ಫಲವು ಉತ್ತಮವಾಗುತ್ತದೆ. ಒಂದೊಮ್ಮೆ ಅಕ್ಕಪಕ್ಕದ ಹೊಲದವರು ಕಮ್ಮಿ ಗುಣಮಟ್ಟವಿರುವ ಬೀಜಗಳನ್ನು ಬಿತ್ತಿದರೆ ಫಲ ಬಿಡುವ ಸಮಯದಲ್ಲಿ ಆ ಹೊಲದ ಪರಾಗರೇಣುಗಳಿಂದ ನನ್ನ ಹೊಲದ ಫಲವೂ ಕಮ್ಮಿಯಾಗುತ್ತದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ