Advertisement

Tag: ಕೆಂಡಸಂಪಿಗೆ

ಗೋಹರ್‌ಬಾಯಿ ಕತೆ ಹೇಳಿದ ‘ಪ್ರತಿಗಂಧರ್ವʼ: ಚಿತ್ರಾ ವೆಂಕಟರಾಜು ಸರಣಿ

‘ಪ್ರತಿಗಂಧರ್ವʼ ದಂತಹ ನಾಟಕದ ಅಭಿನಯ ಬಹಳ ಸವಾಲಿನದು. ಏಕೆಂದರೆ ಹೆಚ್ಚಿನ ಪಾತ್ರಗಳು ಕಲಾವಿದರದ್ದು. ಗೋಹರ್‌ ಬಾಯಿ ಪಾತ್ರ ಮಾಡುವ ಕಲಾವಿದೆ, ನಾಟಕದ ಪಾತ್ರ ಮಾಡುವುದರ ಜತೆಗೆ ನಾಟಕದೊಳಗಿರುವ ರಂಗಸ್ಥಳದಲ್ಲಿ ಅಭಿನಯ ಮಾಡಬೇಕಾಗುತ್ತದೆ. ಅಂದರೆ ನಾವು ನೋಡುತ್ತಿರುವ ಪಾತ್ರ ಗೋಹರ್‌ ಬಾಯಿ. ಗೋಹರ್‌ ಬಾಯಿ ನಾಟಕದೊಳಗೆ ಮಾಡಿದ ಪಾತ್ರ ಗೂಢಾಚಾರಿಣಿಯದು. ಗೂಢಾಚಾರಿಣಿಯ ಪಾತ್ರ ಮಾಡಿದ ಗೋಹರ್‌ ಬಾಯಿ ಪಾತ್ರಧಾರಿ, ಅದು ಮುಗಿದ ಮೇಲೆ ಮತ್ತೆ ಗೋಹರ್‌ ಆಗಬೇಕು. ಆಗ ಅಲ್ಲಿನ ಅಭಿನಯಗಳೆರಡೂ ಬೇರೆಯಾಗಬೇಕಾಗುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಪೋಸ್ಟರ್ ಬಳಿಯೋ ಕೆಲಸದಾಗಿನ ಕೆಲ ಅನುಭವಗಳು… ಬಸವನಗೌಡ ಹೆಬ್ಬಳಗೆರೆ ಸರಣಿ

ನಾವು ಪೋಸ್ಟರನ್ನು ಅಂಟಿಸುತ್ತಾ ಲಕ್ಷ್ಮೀ ಮೆಕ್ಕೆಜೋಳದ ಬೀಜಗಳ ಬಗ್ಗೆ ಪ್ರಚಾರ ಮಾಡುತ್ತಾ ಹೋಗುತ್ತಿದ್ದಾಗ ಒಂದು ಹಳ್ಳಿಯವರು ನಮ್ಮನ್ನು ಸುತ್ತುವರೆದು “ಕಳೆದ ವರ್ಷ ಇದೇ ಬೀಜಗಳನ್ನು ಬಿತ್ತಿದ್ದೆವು. ನಮಗೆ ಬೆಳೆ ಲಾಸ್ ಆಗಿದೆ. ಅವು ಸರಿಯಾಗಿ ಹುಟ್ಟಿಲ್ಲ. ಆದ್ದರಿಂದ ಆ ನಷ್ಟವನ್ನು ನೀವೇ ಭರಿಸಬೇಕು” ಎಂದು ನಮ್ಮನ್ನು ಕೇಳಲು ಶುರು ಮಾಡಿದರು. ಅದೇನೋ ಹೇಳ್ತಾರಲ್ಲಾ. ‘ಮದುವೆ ಆಗೋ ತಿಮ್ಮ ಅಂದ್ರೆ ನೀನೇ ನನ್ನ ಹೆಂಡ್ತಿ ಆಗೋ ಅಂದ್ನಂತೆ’ ಅನ್ನೋ ಹಾಗಾಯ್ತು ನಮ್ಮ ಪರಿಸ್ಥಿತಿ. ನಮ್ಮನ್ನು ಹಳ್ಳಿಯವರು ಹಾಗೇ ಕೇಳಿದಾಗ ನಾವು ನಮ್ಮ “ಮ್ಯಾನೇಜರ್‌ನ ಕರೆದುಕೊಂಡು ಬರ್ತೀವಿ” ಎಂದು ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಓಡಿದೆವು!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಕರ್ಮನಿಷ್ಟೆಯಲ್ಲಿ ಜಯಕಂಡವನ ಕಥನ: ನಾರಾಯಣ ಯಾಜಿ ಬರಹ

ಮೊದಲು ಪ್ರಥಮ ಪುರುಷದಲ್ಲಿ ಪ್ರಾರಂಭಮಾಡಿದ ಹೆಗಡೆಯವರು ಇದ್ದಕ್ಕಿದ್ದಂತೆ ಅದನ್ನು ತೃತೀಯ ಪುರುಷದಲ್ಲಿ ಬರೆಯಲು ಪ್ರಾರಂಭಿಸುವುದು ಕುತೂಹಲಕಾರಿ. ಶೀರ್ಷಿಕೆಯಲ್ಲಿ ಹೇಳಿರುವಂತೆ ಇದು ಜಯರಾಮ ಹೆಗಡೆಯ ಜೀವನಕಥನ ಎನ್ನುವಾಗ ತನ್ನನ್ನು ತಾನು ಹೊರಗಡೆ ನಿಂತು ‘ಜಯರಾಮ’ ಎನ್ನುವ ಮೂಲಕ ಕಥನವನ್ನು ಹೇಳುವಾಗ ಮನಸ್ಸಿನ ಅನೇಕ ವಿಷಯಗಳನ್ನು ತೆರೆದಿಡಬಹುದು ಎನ್ನುವುದು ಅವರ ಅನಿಸಿಕೆಯಾಗಿರಬಹುದು. ಅದೂ ಅಲ್ಲದೇ ಲೇಖನನ್ನೂ ಸಹ ವಿಮರ್ಶೆಗೊಳಿಸಲು ಈ ರೀತಿಯ ಬರಹದಿಂದ ಸಾಧ್ಯ.
ಜಯರಾಮ ಹೆಗಡೆ ಜೀವನ ಕಥನ ‘ಬೀದಿಯ ಬದುಕು’ ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

Read More

ಸ. ಹರೀಶ್‌ ಬರೆದ ಈ ಭಾನುವಾರದ ಕತೆ

ಎಲ್ಲವನ್ನು ಕೇಳಿಸಿಕೊಂಡಿದ್ದ ಅವಿನಾಶ್ ಡಾಕ್ಟರಿಗೆ ಕೈ ಮುಗಿದ. ಅಲ್ಲಿ ಮಾಧವಿಗೆ ಮನಸ್ಸು ತೀರಾ ತಲ್ಲಣಿಸಿ ಹೋಯಿತು. ಯಾವಾಗ ಕೇರ್ ಟೇಕರ್ ತನ್ನ ಸುತ್ತಾಟ ಮುಗಿಸಿ ಮನೆ ಒಳಗೆ ಕಾಲಿಟ್ಟಳೊ, ಅವಳಿಗೆ ಮನುಷ್ಯರ ಬಗ್ಗೆ ನಂಬಿಕೆಯೇ ಹೊರಟು ಹೋಯಿತು. ಅವಳ ಮುಖದ ಮೇಲೆ ದುಡ್ಡು ಬಿಸಾಕಿ, `ಮುಖ ತೋರಿಸಬೇಡ, ನಿನಗೆ ಪೊಲೀಸಿಗೆ ಕೊಡದೇ ಬಿಟ್ಟಿದ್ದೀನಿ, ಗೆಟ್ ಲಾಸ್ಟ್’ ಅಂತ ನರನಾಡಿ ಕಿತ್ತುಬರುವಂತೆ ಅರಚಿದಳು.
ಸ. ಹರೀಶ್‌ ಕಥಾ ಸಂಕಲನ “ಅಮ್ಮ ಅಂದ್ರೆ ಭೂಮಿ”ಯ ಶೀರ್ಷಿಕೆ ಕತೆ, ನಿಮ್ಮ ಈ ಭಾನುವಾರದ ಓದಿಗೆ

Read More

ಭಾರತಕ್ಕೆ ಬಂದ ಕಾಫಿ: ದರ್ಶನ್‌ ಜಯಣ್ಣ ಸರಣಿ

ಮೊದಮೊದಲು ಇದನ್ನು ಶೈತಾನನ ಪೇಯವೆಂದು ನಿರ್ಬಂಧಿಸಿದ್ದ ಒಟ್ಟೋಮನ್ ಸುಲ್ತಾನ ನಂತರದ ದಿನಗಳಲ್ಲಿ ಇದು ಮದ್ಯ ಅಥವಾ ಮದಿರೆಯಂತಲ್ಲ ಎಂದು ಮನಗಂಡು ಸ್ವತಃ ತಾನೇ ಅದನ್ನು ಕುಡಿದು ಪರೀಕ್ಷಿಸಿ ಆ ನಿರ್ಬಂಧವನ್ನು ಸಡಿಲಿಸುತ್ತಾನೆ. ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಎಲ್ಲಕಾಲಕ್ಕೂ ಇದು ಸಿಗುವಂತಿರಲಿಲ್ಲ. ಸೂಫಿಗಳು, ಸೈನಿಕರು, ಸಮಾಜದ ಗಣ್ಯರು, ಆಸ್ಥಾನ ವಿದ್ವಾಂಸರು, ಅಧಿಕಾರಿಗಳಿಗೆ ಮತ್ತು ಸಮರಕ್ಕೆ ಹೊರಟವರಿಗೆ ಮಾತ್ರ ಇದು ಸೀಮಿತವಾಗಿತ್ತು ಎಂದರೆ ಇವತ್ತಿಗೆ ನಂಬಲು ಕಷ್ಟವಾಗಬಹುದೇನೋ! ಇದರ ಕಾರಣವೇ ಇಂದು ನಾವು “ಟರ್ಕಿಶ್ ಕಾಫಿಯ” ಬಗ್ಗೆ ಆಗಾಗ ಕೇಳುತ್ತಿರುತ್ತೇವೆ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಹದಿಮೂರನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ