Advertisement

Tag: kendasampige

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿನಯಾ ಒಕ್ಕುಂದ ಕತೆ

ಲ್ಲಯ್ಯ, ನಮ್ಮ ಅಜ್ಜಿಮನೆಯ ಮಾವಿನ ಮರದ ಕೆಳಗೆ ಸೈಕಲ್ ನಿಲ್ಲಿಸಿ ಎಲ್ಲಿಗೆ ಹೋಗುತ್ತಿದ್ದೆ ಮಾರಾಯ? ನಾನು ಪಿಯುಸಿ ಓದುತ್ತಿದ್ದ ಒಂದು ಮೇ ರಜೆಯ ಮಧ್ಯಾಹ್ನ ಚಿಪ್ಪಿಕಲ್ಲಿನ ಸಾರು ಕುದಿಸ್ತಾ ಇರುವಾಗ- ಅಮ್ಮ ದಿಕ್ಕಬಳ್ಳಿ ಮೆಟ್ಟಿ ಬಂದವಳಂತೆ ಬಂದು ‘ಹಡಬೆ ಹೆಣ್ಣೆ! ಮರ್ಯಾದೆ ಕಳೀತಿಯೇನೇ?’ ಎಂದವಳೇ ಒಲೆಮೇಲಿನ ಸಾರೆತ್ತಿ ತೊಡೆ ಮೇಲೆ ಸುರಿದುಬಿಟ್ಟಳು! ನನ್ನ ನೋವುಗಳೇ ಹೀಗೆ. ಇಲ್ಲಿದೆ ಅಂತ ತೋರಿಸಿಕೊಳ್ಳಲು ಆಗದೆ ಹಾಗೆ! ಹೇಳು, ನಾ ಮಾಡಿದ ತಪ್ಪೇನು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿನಯಾ ಒಕ್ಕುಂದ ಕತೆ “ಒಂದು ಖಾಸಗಿ ಪತ್ರ” ನಿಮ್ಮ ಈ ಭಾನುವಾರದ ಓದಿಗೆ

Read More

ದೊಡ್ಡ ಜಿಜ್ಞಾಸೆಗಳು, ಸಣ್ಣ ನಿರ್ಧಾರಗಳು: ವಿನತೆ ಶರ್ಮಾ ಅಂಕಣ

ಶುಮಾಶೆರ್ ಹೇಳುವುದೇನೆಂದರೆ, ನಾವು ಮನುಷ್ಯರು ಪ್ರತಿಯೊಬ್ಬ ವ್ಯಕ್ತಿಗೂ ಸುಲಭವಾಗುವಂತೆ ಅವರ ಜೀವನ ಗುಣಮಟ್ಟ ವೃದ್ಧಿಸುವುದಕ್ಕೆ ಅನೂಕೂಲವಾಗುವಂತೆ ತಳಮಟ್ಟದಲ್ಲಿ ಪುಟ್ಟಪುಟ್ಟ ಮತ್ತು ಅನೇಕ ಬಹುತ್ವಗಳನ್ನು ಒಳಗೊಂಡ ತಾಂತ್ರಿಕತೆಗಳನ್ನು, ಕ್ರಮಗಳನ್ನು ಒಗ್ಗಿಸಿಕೊಳ್ಳಬೇಕು. ‘ದೊಡ್ಡದು’ ಅಥವಾ ಹಿರಿದು ಮುಖ್ಯ ಎನ್ನುವ ಆಲೋಚನಾಪರಿಯನ್ನು ಬದಲಿಸಿಕೊಳ್ಳಬೇಕು. ಅಂದರೆ ದೊಡ್ಡಮಟ್ಟದ ಅಭಿವೃದ್ಧಿಗಿಂತಲೂ ಸಣ್ಣ ಮಟ್ಟದ ಸ್ಥಳೀಯ ಅಭಿವೃದ್ಧಿ ಯೋಜನೆಗಳು ಜನರಿಗೆ ಹೆಚ್ಚು ಪ್ರಯೋಜನಕಾರಿ. ಇದೇ ಮಾತನ್ನು ಮಹಾತ್ಮ ಗಾಂಧಿ ಅವರೂ ಹೇಳಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮಳೆ, ಮಂಜು ಮತ್ತು ಚಾರಣ: ಮುನವ್ವರ್, ಜೋಗಿಬೆಟ್ಟು ಬರಹ

ಒಂದು ಶಾಂತ ಬಯಲಿನಲ್ಲಿ ಮರಗಳ ನೆರಳಲ್ಲಿ ಪ್ರತಿಷ್ಠಾಪಿಸಿದಂತಿದ್ದ ಆ ಪ್ರದೇಶ ಸೂಫಿ ಅನುಭಾವಕ್ಕೆ ನಮ್ಮನ್ನು ಬರಮಾಡಿಕೊಳ್ಳತೊಡಗಿತು. ಅದು ಹಾಸನದ ಮುಸ್ಲಿಮರ ಪಾಲಿಗೆ ವಿಶೇಷ ಸ್ಥಳ. ಅದೇ‌ ಊರಿನವರಾಗಿದ್ದ ಹಝ್ರತ್ ಖಲಂದರ್ ಶಾ ವಲಿಯುಲ್ಲಾಹಿರವರು ಆಧ್ಯಾತ್ಮಿಕವಾಗಿ ಒಂದು ತಲೆಮಾರನ್ನೇ ಮುನ್ನಡೆಸಿದವರು. ಸೂಫಿ ನೆರಳಿನಂತೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸಲಹೆ ಸೂಚನೆಗಳನ್ನು ಕೊಟ್ಟು ಅವರಿಗೆ ಮನಶ್ಶಾಂತಿಯನ್ನು ಕರುಣಿಸುತ್ತಿದ್ದವರು. ಅವರ ಶಾಂತ ಚಿತ್ತ ಮಾತುಗಳನ್ನು ಆಲಿಸಲು ಅವರ ಹರಸುವಿಕೆಯ ಅನುಗ್ರಹವನ್ನು ಸ್ವೀಕರಿಸಲು ದೇಶದ ನಾನಾ ಭಾಗಗಳಿಂದ ಜನರು ಬರುವುದುಂಟು. ನಾವು ಬಾಬರು ಕುಳಿತುಕೊಳ್ಳುತ್ತಿದ್ದ ಸ್ಥಳವನ್ನೂ ಅವರ ಬಳಸುತ್ತಿದ್ದ ಅನುಗ್ರಹೀತ ವಸ್ತುಗಳನ್ನು ನೋಡಿ‌ ಕಣ್ತುಂಬಿಕೊಂಡು- ಅಲ್ಲಿ ಯಾತ್ರಾರ್ಥಿಗಳಿಗಾಗಿ ನೀಡುವ ಚಹಾವನ್ನು ಸವಿದೆವು.
ಮುನವ್ವರ್, ಜೋಗಿಬೆಟ್ಟು ಬರೆದ ಪ್ರವಾಸ ಕಥನ ನಿಮ್ಮ ಓದಿಗೆ

Read More

ಇಂದಿನ ಕನ್ನಡ ಅಧ್ಯಾಪಕರು ಮತ್ತು ಇಂಗ್ಲಿಷ್ ಭಾಷೆ: ಎಲ್.ಜಿ.ಮೀರಾ ಅಂಕಣ

ಬರಬರುತ್ತಾ ಓದು, ವ್ಯುತ್ಪತ್ತಿ, ಭಾಷಾ ಪ್ರೌಢಿಮೆಗಳ ಬಗೆಗಿನ ಆಸ್ಥೆ ಕಡಿಮೆಯಾಗಿ `ಹಾಗೂ ಹೀಗೂ ಒಂದಿಷ್ಟು ಪಾಠ ಮಾಡೋದು, ಸಂತೆ ಹೊತ್ತಿಗೆ ಮೂರು ಮೊಳ ಆದ್ರೆ ಸಾಕು’ ಎಂಬ ಮನಃಸ್ಥಿತಿ ಮೂಡಿತು. ಇದೊಂದು ರೀತಿಯ ಸುಲಭೀಕರಣ. ಇದಕ್ಕೆ ಕನ್ನಡ ಅಧ್ಯಾಪಕರು ಮಾತ್ರ ಕಾರಣ ಅಲ್ಲ. ಜಾಗತೀಕರಣದ ನಂತರ, ಭಾರತ ದೇಶದ ಬದುಕು ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಬಹಳವಾಗಿ ಬದಲಾಯಿತು. ಉಪಗ್ರಹ ಪ್ರಸಾರದ ಅಂತಾರಾಷ್ಟ್ರೀಯ ಚಲನಚಿತ್ರ ವಾಹಿನಿಗಳು, ಅಂತರ್ಜಾಲ, ಮುಂದೆ ಸರ್ವವ್ಯಾಪಿಯಾದ ಚಲನವಾಣಿಗಳ ಬಳಕೆ ಇವುಗಳಿಂದಾಗಿ ಓದುಸಂಸ್ಕೃತಿ ಹಿಂದೆ ಸರಿದು ನೋಡುಸಂಸ್ಕೃತಿ ಮುನ್ನೆಲೆಗೆ ಬಂದಿತಲ್ಲವೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಗೃಹಪ್ರವೇಶದ ಸೀನುಗಳು….: ಎಚ್. ಗೋಪಾಲಕೃಷ್ಣ ಸರಣಿ

ಬೆಳಕಿಗೆ ಅಂತ ಲಾಟೀನು, ಮೊಂಬತ್ತಿ ಬೆಂಕಿ ಪೆಟ್ಟಿಗೆ ತಂದಿಟ್ಟು ಪೆಟ್ರೋಮಾಕ್ಸ್‌ಗೆ ಹೊರಟೆ. ಅದು ಮೂರುನಾಲ್ಕು ಕಿಮೀ ದೂರದಲ್ಲಿ ನೋಡಿದ್ದೆ. ಆದರೆ ಅದನ್ನ ಯಾವತ್ತೂ ಹಚ್ಚಿ ಉಪಯೋಗಿಸಿರಲಿಲ್ಲ. ಅಂಗಡಿಗೆ ಹೋಗಿ ನಾಲ್ಕು ಪೆಟ್ರೋಮಾಕ್ಸ್ ಬಾಡಿಗೆ ತಗೊಂಡೆ. ಹೇಗೆ ಹಚ್ಚೋದು ಅಂತ ಅವನು ಅಂದರೆ ಅಂಗಡಿ ಓನರ್ ತೋರಿಸಿಕೊಟ್ಟ. ನಾಲ್ಕೂ ತಗೊಂಡು ಎರಡು ಶೌರಿ ನಮ್ಮ ವಾಚ್ಮನ್ನು, ಎರಡು ಸೈಕಲ್ ಹ್ಯಾಂಡಲ್‌ಗೆ ನೇತು ಹಾಕಿ ಮನೆ ಸೇರಿದೇವಾ? ಅವತ್ತು ರಾತ್ರಿ ಎಂಟಕ್ಕೆ ಎಲ್ಲರೂ ಸೇರಿ ನಮ್ಮ ಕಲಿತ ವಿದ್ಯೆ ಎಲ್ಲವನ್ನೂ ಖರ್ಚು ಮಾಡಿದರೂ ಒಂದೇ ಒಂದು ಪೆಟ್ರೋಮಾಕ್ಸ್ ಹತ್ತಲಿಲ್ಲ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ